ವಿಜಯ್ ದಿವಸ್ ಸಂಭ್ರಮ; ಕಾರ್ಗಿಲ್ ಹೀರೋಗಳಿವರು!
ಜುಲೈ 26 ಭಾರತೀಯರೆಲ್ಲರೂ ಹೆಮ್ಮೆಪಡುವ ದಿನ. ಇಂದಿಗೆ 20 ವರ್ಷದ ಹಿಂದೆ 1999 ರ ಜುಲೈ 26 ರಂದು ಕಾರ್ಗಿಲ್ ಯುದ್ಧ ಬೀಗಿದ ದಿನ. ಕಾರ್ಗಿಲ್ ಯುದ್ಧಕ್ಕೆ 20 ತುಂಬುತ್ತಿರುವ ಈ ಹೊತ್ತಿನಲ್ಲಿ ಹೆಮ್ಮೆಯ ಕಲಿಗಳ ಸ್ಫೂರ್ತಿಯ ಕಥಾನಕ ಇಲ್ಲಿದೆ ನೋಡಿ .
ಜಾರ್ಜ್ ಫರ್ನಾಂಡಿಸ್ ಯುದ್ಧದ ವೇಳೆ ರಕ್ಷಣಾ ಮಂತ್ರಿಯಾಗಿದ್ದರು. ಕಾರ್ಗಿಲ್ ಸಮರದ ಕಾರ್ಯತಂತ್ರ ಹಾಗೂ ಸೇನೆಯ ನಿಯೋಜನೆಯ ರಣತಂತ್ರ ಹೆಣೆದಿದ್ದು ಇವರೇ.
ಕಾರ್ಗಿಲ್ ಯುದ್ಧದ ವೇಳೆ ಸೈನ್ಯವನ್ನು ಮುನ್ನಡೆಸುತ್ತಿದ್ದ ನುಂಗ್ರುಮ್ ಏಕಾಂಗಿಯಾಗಿ ಪಾಕ್ ಬಂಕರನ್ನು ನಾಶ ಮಾಡಿ ನಂತರ ಯುದ್ಧಭೂಮಿಯಲ್ಲೇ ಮೃತರಾದರು
ಕ್ಯಾಪ್ಟನ್ ಎನ್ ಕೆಂಗುರಸೆ ತನ್ನ ಜೊತೆಗಿದ್ದ ಸೈನಿರನ್ನು ರಕ್ಷಿಸಲೆಂದು ತಾವೇ ಪಾಕ್ ಸೈನಿಕರ ಗುಂಡೇಟಿಗೆ ಬಲಿಯಾದರು.
ಮನೋಜ್ ಕುಮಾರ್ ಪಾಂಡೆ ಪರಮವೀರ ಚಕ್ರ ಪಾಕಿಗಳ ಗುಂಡು ತಮ್ಮ ದೇಹವನ್ನು ಸೀಳುತ್ತಿದ್ದರೂ ಲೆಕ್ಕಿಸದೆ ಅವರ ಬಂಕರ್ಗಳನ್ನು ನಾಶಪಡಿಸಿ ಯುದ್ಧ ಭೂಮಿಯಲ್ಲಿಯೇ ಮಡಿದರು.
ಸಂಜಯ್ ಕುಮಾರ್ ರೈಫಲ್ ಮ್ಯಾನ್ ಪರಮವೀರ ಚಕ್ರ ಇವರ ತಂಡಲ್ಲಿದ್ದ ಸೈನಿಕರೆಲ್ಲಾ ನೆಲಕ್ಕುಳಿದ್ದರು. ಸ್ವತಃ ಇವರಿಗೆ ಕಾಲು, ಸೊಂಟಕ್ಕೆ ಗುಂಡೇಟು ಬಿದ್ದಿತ್ತು. ಆದರೂ ಪಾಕ್ನ ಬಂಕರನ್ನು ಹೊಡೆದಿದ್ದರು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದರು. ಇವರ ರಾಜತಾಂತ್ರಿಕ ನಡೆ ಹಾಗೂ ದಿಟ್ಟ ನಿರ್ಧಾರಗಳು ಭಾರತದ ಗೆಲುವಿಗೆ ಕಾರಣವಾದವು.
ಜ| ವೇದಪ್ರಕಾಶ್ ಮಲಿಕ್ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ಸೇನಾಪಡೆಯ ಮುಖ್ಯಸ್ಥರಾಗಿದ್ದರು. ಇವರ ಜೊತೆ ವಾಯುಪಡೆ ಹಾಗೂ ನೌಕಾಪಡೆ ಮುಖ್ಯಸ್ಥರ ಪಾತ್ರವೂ ಮಹತ್ವದ್ದಾಗಿತ್ತು.
ವಿಕ್ರಮ್ ಬಾತ್ರಾ ಕ್ಯಾಪ್ಟನ್ ಪರಮವೀರ ಚಕ್ರ ಪಾಕಿಸ್ತಾನಿ ಸೈನಿಕರು ಇವರ ಮೇಲೆ ಸತತ ದಾಳಿ ನಡೆಸಿದ್ದರು. ಆದರೂ ಜಗ್ಗದೆ ಪ್ರತಿದಾಳಿ ನಡೆಸಿ ಯುದ್ಧ ಭೂಮಿಯಲ್ಲೇ ವೀರ ಮರಣ ಹೊಂದಿದರು.
ಯೋಗೇಂದ್ರ ಯಾದವ್ ಗ್ರೆನೇಡಿಯರ್ ಪರಮವೀರ ಚಕ್ರ ಟೈಗರ್ ಹಿಲ್ ಪ್ರದೇಶಕ್ಕೆ ತೆರಳಿದ್ದ ಇವರ ತಂಡದ 6 ಜನ ಸೈನಿಕರು ಹುತಾತ್ಮರಾಗಿದ್ದರು. ಏಕಾಂಗಿಯಾದ ಇವರು ಪಾಕ್ನ 2 ಬಂಕರ್ಗಳನ್ನು ಹೊಡೆದುರುಳಿಸಿದ್ದರು