ಕನ್ನಡ ದಿನಪತ್ರಿಕೆಗಳು ಕಂಡಂತೆ ಮಿಷನ್ ಕಾಶ್ಮೀರ!
ಕೇಂದ್ರ ಸರ್ಕಾರ ಆ.5 ರಂದು ಚಾರಿತ್ರಿಕ ತೀರ್ಮಾನ ತೆಗೆದುಕೊಂಡು ನಮ್ಮ ಭಾರತದ ಪ್ರತ್ಯೇಕವಾದ ಸ್ಥಾನಮಾನ ಉಳಿಸಿಕೊಂಡಿದ್ದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಪಡಿಸುವ ಮಹತ್ತರ ನಿರ್ಧಾರ ತೆಗೆದುಕೊಂಡಿದೆ. ಈ ಐತಿಹಾಸಿಕ ನಿರ್ಧಾರವನ್ನು ಕನ್ನಡ ದಿನಪತ್ರಿಕೆಗಳು ಹೇಗೆ ಕವರ್ ಮಾಡಿವೆ? ಇಲ್ಲಿದೆ ಒಂದು ಪಕ್ಷಿನೋಟ
ಕನ್ನಡಪ್ರಭ: ಅಖಂಡ ಭಾರತ, ಐತಿಹಾಸಿಕ ನಿರ್ಧಾರ: ಮಿಷನ್ ಕಾಶ್ಮೀರ
ವಿಶ್ವವಾಣಿ: ದೇಶದಲ್ಲೊಂದಾದ ಭಾರತದ ಮುಕುಟ: 370ನೇ 'ವಿಧಿ'ವಶ
ಉದಯವಾಣಿ: ಭಾರತ ಸಿಂಧೂರ ನಮ್ಮ ಕಾಶ್ಮೀರ
ವಿಜಯ ಕರ್ನಾಟಕ: ಕಾಶ್ಮೀರದ 'ವಿಧಿ' ಬದಲಿಸಿದ ಮೋದಿ
ಹೊಸ ದಿಗಂತ: ಕಾಶ್ಮೀರಕ್ಕೆ ಕರತಾಡನ
ವಿಜಯವಾಣಿ: ಮೋದಿ ಕಾಶ್ಮೀರ ಕ್ರಾಂತಿ
ಸಂಯುಕ್ತ ಕರ್ನಾಟಕ: ಕಾಶ್ಮೀರ ಶಾಪ ವಿಮೋಚನೆ
ವಾರ್ತಾ ಬಾರತಿ: 370ನೇ ವಿಧಿ ರದ್ದು
ಪ್ರಜಾವಾಣಿ: ಕಾಶ್ಮೀರ: ಇನ್ನಿಲ್ಲ ವಿಶೇಷಾಧಿಕಾರ