ಉಡುಪಿ: ಸಂಪ್ರದಾಯಕ್ಕೆ ಸೀಮಿತವಾಗಿ ನಡೆದ ಕೃಷ್ಣ ಜನ್ಮಾಷ್ಟಮಿ
ಉಡುಪಿ(ಸೆ.11): ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರ ಭಾಗವಹಿಸುವಿಕೆಯಲ್ಲಿ ನಡೆಯುವ ಉಡುಪಿ ಕೃಷ್ಣಮಠದ ಶ್ರೀಕೃಷ್ಣ ಜನ್ಮಾಷ್ಟಮಿ ವೈಭವಕ್ಕೆ ಈ ಬಾರಿ ಕೊರೋನಾ ಮಾಹಾಮಾರಿ ಅಡ್ಡಿಯಾಗಿದೆ. ಸೋಂಕು ಹರಡುವ ಆತಂಕದ ಹಿನ್ನೆಲೆಯಲ್ಲಿ, ಕೃಷ್ಣ ಮಠದಲ್ಲಿ ಸೀಮಿತ ಜನರ ಉಪಸ್ಥಿತಿಯಲ್ಲಿ ಕೃಷ್ಣಾಷ್ಟಮಿಯ ಧಾರ್ಮಿಕ ಆಚರಣೆಗಳನ್ನು ಸಂಪ್ರದಾಯಬದ್ಧವಾಗಿ ನಡೆಸಲಾಗಿದೆ.

<p>ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಗುರುವಾರ ಕೃಷ್ಣನಿಗೆ ಹುಟ್ಟುಹಬ್ಬದ ಪ್ರಯುಕ್ತ ಆಕರ್ಷಕವಾದ ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣನ ಅಲಂಕಾರ ಮಾಡಲಾಗಿತ್ತು. </p>
ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಗುರುವಾರ ಕೃಷ್ಣನಿಗೆ ಹುಟ್ಟುಹಬ್ಬದ ಪ್ರಯುಕ್ತ ಆಕರ್ಷಕವಾದ ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣನ ಅಲಂಕಾರ ಮಾಡಲಾಗಿತ್ತು.
<p>ಬಾಲಕೃಷ್ಣನಿಗೆ ಒಂದು ಲಕ್ಷ ದಷ್ಟು ಲಡ್ಡು, ಚಕ್ಕುಲಿಗಳ ನೈವೇದ್ಯ ಸಮರ್ಪಿಸಿ, ಮಹಾಪೂಜೆಯನ್ನು ನೆರವೇರಿಸಿದ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು </p>
ಬಾಲಕೃಷ್ಣನಿಗೆ ಒಂದು ಲಕ್ಷ ದಷ್ಟು ಲಡ್ಡು, ಚಕ್ಕುಲಿಗಳ ನೈವೇದ್ಯ ಸಮರ್ಪಿಸಿ, ಮಹಾಪೂಜೆಯನ್ನು ನೆರವೇರಿಸಿದ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು
<p>ಇದಕ್ಕೂ ಮೊದಲು ಸಂಪ್ರದಾಯದಂತೆ ಪರ್ಯಾಯ ಶ್ರೀಗಳು, ಪಲಿಮಾರು ಮಠದ ಶ್ರೀವಿದ್ಯಾದೀಶ ತೀರ್ಥರು ಮತ್ತು ವಿದ್ಯಾರಾಜೇಶ್ವರ ತೀರ್ಥರು ಹಾಗೂ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಕೃಷ್ಣನಿಗೆ ನೈವೇದ್ಯ ಮಾಡುವ ಲಡ್ಡುಗಳನ್ನು ಸ್ವತಃ ತಾವೇ ತಯಾರಿಸುವ ಮೂಲಕ ಲಡ್ಡು ಮುಹೂರ್ತ ನೆರವೇರಿಸಿದರು.</p>
ಇದಕ್ಕೂ ಮೊದಲು ಸಂಪ್ರದಾಯದಂತೆ ಪರ್ಯಾಯ ಶ್ರೀಗಳು, ಪಲಿಮಾರು ಮಠದ ಶ್ರೀವಿದ್ಯಾದೀಶ ತೀರ್ಥರು ಮತ್ತು ವಿದ್ಯಾರಾಜೇಶ್ವರ ತೀರ್ಥರು ಹಾಗೂ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಕೃಷ್ಣನಿಗೆ ನೈವೇದ್ಯ ಮಾಡುವ ಲಡ್ಡುಗಳನ್ನು ಸ್ವತಃ ತಾವೇ ತಯಾರಿಸುವ ಮೂಲಕ ಲಡ್ಡು ಮುಹೂರ್ತ ನೆರವೇರಿಸಿದರು.
<p>ಗುರುವಾರ ಮಧ್ಯರಾತ್ರಿ 12.16 ಗಂಟೆಗೆ ಸರಿಯಾಗಿ ಕೃಷ್ಣಾವತಾರದ ಗಳಿಗೆಯಲ್ಲಿ ಪರ್ಯಾಯ ಮತ್ತು ಇತರ ಮಠಾಧೀಶರು ಕೃಷ್ಣನಿಗೆ ಕೃತಜ್ಞತಾಪೂರ್ವಕ ಜಲ ಅಘ್ರ್ಯ ಮತ್ತು ಕೃಷ್ಣನಿಗೆ ಹಾಲಿನ ಅಘ್ರ್ಯಗಳನ್ನು ಪ್ರಧಾನ ಮಾಡಿದರು.</p>
ಗುರುವಾರ ಮಧ್ಯರಾತ್ರಿ 12.16 ಗಂಟೆಗೆ ಸರಿಯಾಗಿ ಕೃಷ್ಣಾವತಾರದ ಗಳಿಗೆಯಲ್ಲಿ ಪರ್ಯಾಯ ಮತ್ತು ಇತರ ಮಠಾಧೀಶರು ಕೃಷ್ಣನಿಗೆ ಕೃತಜ್ಞತಾಪೂರ್ವಕ ಜಲ ಅಘ್ರ್ಯ ಮತ್ತು ಕೃಷ್ಣನಿಗೆ ಹಾಲಿನ ಅಘ್ರ್ಯಗಳನ್ನು ಪ್ರಧಾನ ಮಾಡಿದರು.
<p>ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜಾಂಗಣದಲ್ಲಿ ಪ್ರಸಿದ್ಧ ಕಲಾವಿದರುಗಳಿಂದ ಸ್ಯಾಕ್ಸೋಫೋನ್ ವಾದನ, ವೀಣಾವಾದನ, ಕೊಳಲುವಾದನ ಕಚೇರಿಗಳು ನಡೆದವು. </p>
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜಾಂಗಣದಲ್ಲಿ ಪ್ರಸಿದ್ಧ ಕಲಾವಿದರುಗಳಿಂದ ಸ್ಯಾಕ್ಸೋಫೋನ್ ವಾದನ, ವೀಣಾವಾದನ, ಕೊಳಲುವಾದನ ಕಚೇರಿಗಳು ನಡೆದವು.
<p>ಸಂಗೀತ ಕಛೇರಿ ಆಲಿಸುವುದಕ್ಕೆ ಭಕ್ತರಿಗೆ ಅವಕಾಶ ಇಲ್ಲದಿದ್ದುದರಿಂದ, ಮಠದ ಫೇಸ್ಬುಕ್ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಯಿತು.</p>
ಸಂಗೀತ ಕಛೇರಿ ಆಲಿಸುವುದಕ್ಕೆ ಭಕ್ತರಿಗೆ ಅವಕಾಶ ಇಲ್ಲದಿದ್ದುದರಿಂದ, ಮಠದ ಫೇಸ್ಬುಕ್ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಯಿತು.
<p>ಬಳಿಕ ಕೆಲವೇ ಕೆಲವು ಭಕ್ತಾದಿಗಳಿಂದ ಅರ್ಘ್ಯಪ್ರಧಾನ ನಡೆಯಿತು</p>
ಬಳಿಕ ಕೆಲವೇ ಕೆಲವು ಭಕ್ತಾದಿಗಳಿಂದ ಅರ್ಘ್ಯಪ್ರಧಾನ ನಡೆಯಿತು
<p>ಇಂದು (ಶುಕ್ರವಾರ) ಮಧ್ಯಾಹ್ನ 3 ಗಂಟೆಗೆ ರಥಬೀದಿಯಲ್ಲಿ ಕೃಷ್ಣನ ಲೀಲೋತ್ಸವ - ಗೊಲ್ಲ ವೇಷಧಾರಿಗಳಿಂದ ಮೊಸರುಕುಡಿಕೆ ಒಡೆಯುವ ಆಚರಣೆಗಳು ನಡೆಯಲಿವೆ. </p>
ಇಂದು (ಶುಕ್ರವಾರ) ಮಧ್ಯಾಹ್ನ 3 ಗಂಟೆಗೆ ರಥಬೀದಿಯಲ್ಲಿ ಕೃಷ್ಣನ ಲೀಲೋತ್ಸವ - ಗೊಲ್ಲ ವೇಷಧಾರಿಗಳಿಂದ ಮೊಸರುಕುಡಿಕೆ ಒಡೆಯುವ ಆಚರಣೆಗಳು ನಡೆಯಲಿವೆ.
<p>ಲಕ್ಷಾಂತರ ಮಂದಿ ಭಕ್ತರು ಸಂಭ್ರಮದಿಂದ ಭಾಗವಹಿಸುವ ಈ ಉತ್ಸವದಲ್ಲಿ ಈ ಬಾರಿ, ಕೊರೋನಾದ ಹಿನ್ನೆಲೆಯಲ್ಲಿ ಸಾರ್ವಜನರು ಭಾಗವಹಿಸುವುದಕ್ಕೆ ಅವಕಾಶ ಇಲ್ಲ. ಅಷ್ಟ ಮಠಾಧೀಶರು ಮತ್ತು ಮಠದ ಪರಿವಾರದವರಷ್ಟೇ ಭಾಗವಹಿಸಲಿದ್ದಾರೆ.</p>
ಲಕ್ಷಾಂತರ ಮಂದಿ ಭಕ್ತರು ಸಂಭ್ರಮದಿಂದ ಭಾಗವಹಿಸುವ ಈ ಉತ್ಸವದಲ್ಲಿ ಈ ಬಾರಿ, ಕೊರೋನಾದ ಹಿನ್ನೆಲೆಯಲ್ಲಿ ಸಾರ್ವಜನರು ಭಾಗವಹಿಸುವುದಕ್ಕೆ ಅವಕಾಶ ಇಲ್ಲ. ಅಷ್ಟ ಮಠಾಧೀಶರು ಮತ್ತು ಮಠದ ಪರಿವಾರದವರಷ್ಟೇ ಭಾಗವಹಿಸಲಿದ್ದಾರೆ.
<p>ಈ ಬಾರಿ ಕೃಷ್ಣಾಷ್ಟಮಿಯನ್ನು ಸರಳವಾಗಿ ಆಚರಿಸಬೇಕು, ಸಂಪ್ರದಾಯದಂತೆ ಈ ಬಾರಿ ಹುಲಿ ಇತ್ಯಾದಿ ವೇಷ ಧರಿಸುವಂತಿಲ್ಲ ಎಂದು ಜಿಲ್ಲಾಡಳಿತ ಹೇಳಿದ್ದರೂ, ಅಲ್ಲಲ್ಲಿ ಕೆಲವು ಮಂದಿ ವೇಷ ಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದುದು ಕಂಡುಬಂತು.</p>
ಈ ಬಾರಿ ಕೃಷ್ಣಾಷ್ಟಮಿಯನ್ನು ಸರಳವಾಗಿ ಆಚರಿಸಬೇಕು, ಸಂಪ್ರದಾಯದಂತೆ ಈ ಬಾರಿ ಹುಲಿ ಇತ್ಯಾದಿ ವೇಷ ಧರಿಸುವಂತಿಲ್ಲ ಎಂದು ಜಿಲ್ಲಾಡಳಿತ ಹೇಳಿದ್ದರೂ, ಅಲ್ಲಲ್ಲಿ ಕೆಲವು ಮಂದಿ ವೇಷ ಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದುದು ಕಂಡುಬಂತು.
<p>ಕೃಷ್ಣಾಷ್ಟಮಿಯ ಪ್ರಯುಕ್ತ ದೂರದೂರುಗಳಿಂದ ಹೂವು - ತರಕಾರಿ ವ್ಯಾಪಾರಿಗಳು ಉಡುಪಿಗೆ ಬಂದಿದ್ದಾರೆ. ಆದರೆ ಸರಳ ಆಚರಣೆಯ ಹಿನ್ನೆಲೆಯಲ್ಲಿ ಅವರಿಗೆ ವ್ಯಾಪಾರ ಅಷ್ಟೇನೂ ಇರಲಿಲ್ಲ.</p>
ಕೃಷ್ಣಾಷ್ಟಮಿಯ ಪ್ರಯುಕ್ತ ದೂರದೂರುಗಳಿಂದ ಹೂವು - ತರಕಾರಿ ವ್ಯಾಪಾರಿಗಳು ಉಡುಪಿಗೆ ಬಂದಿದ್ದಾರೆ. ಆದರೆ ಸರಳ ಆಚರಣೆಯ ಹಿನ್ನೆಲೆಯಲ್ಲಿ ಅವರಿಗೆ ವ್ಯಾಪಾರ ಅಷ್ಟೇನೂ ಇರಲಿಲ್ಲ.