ಕೊಪ್ಪಳ: ಬೇವಿನ ಮರದಲ್ಲಿ ಮೂಡಿದ ಅವಧೂತ ಶುಕಮುನಿ ಸ್ವಾಮಿ ಮುಖ: ನೋಡಲು ಜನವೋ ಜನ..!
ದೋಟಿಹಾಳ(ಸೆ.04): ಕೊಪ್ಪಳ ಜಿಲ್ಲೆಯ ದೋಟಿಹಾಳ ಸಮೀಪದ ಕೇಸೂರ ಸೀಮಾದ ಹೊಲವೊಂದರಲ್ಲಿ ಬೇವಿನ ಮರದಲ್ಲಿ ಶ್ರೀ ಅವಧೂತ ಶುಕಮುನಿ ಸ್ವಾಮಿ ಮುಖ (ಸಿಂಹದ ಮುಖದ) ಮೂಡಿದೆ ಎಂದು ಭಾವಿಸಿ ಜನ ತಂಡೋಪತಂಡವಾಗಿ ಬಂದು ವೀಕ್ಷಿಸುತ್ತಿದ್ದಾರೆ.

<p>ದೋಟಿಹಾಳ ಕೇಸೂರ ಗ್ರಾಮದಿಂದ ಇಲಕಲ್ಲಗೆ ತೆರಳುವ ಮಾರ್ಗದಲ್ಲಿ ಸುಮಾರು 1 ಕಿಮೀ ದೂರದಲ್ಲಿರುವ ಮಾಜಿ ಶಾಸಕ ಹಸನಸಾಬ ದೋಟಿಹಾಳ ಅವರ ತೋಟದ ಪಕ್ಕದಲ್ಲಿರುವ ನೀಲಮ್ಮ ಗುರುಪಾದಪ್ಪ ಗಡಾದ (ಕಡೆಕೊಪ್ಪ) ಅವರ ಹೊಲದ ಬದುವಿನ ಮೇಲಿರುವ ಬೇವಿನ ಮರದಲ್ಲಿ ಶ್ರೀ ಅವಧೂತ ಶುಕಮುನಿ ಸ್ವಾಮಿ ಮುಖ (ಸಿಂಹದ ಮುಖದ) ಮೂಡಿದೆ.</p>
ದೋಟಿಹಾಳ ಕೇಸೂರ ಗ್ರಾಮದಿಂದ ಇಲಕಲ್ಲಗೆ ತೆರಳುವ ಮಾರ್ಗದಲ್ಲಿ ಸುಮಾರು 1 ಕಿಮೀ ದೂರದಲ್ಲಿರುವ ಮಾಜಿ ಶಾಸಕ ಹಸನಸಾಬ ದೋಟಿಹಾಳ ಅವರ ತೋಟದ ಪಕ್ಕದಲ್ಲಿರುವ ನೀಲಮ್ಮ ಗುರುಪಾದಪ್ಪ ಗಡಾದ (ಕಡೆಕೊಪ್ಪ) ಅವರ ಹೊಲದ ಬದುವಿನ ಮೇಲಿರುವ ಬೇವಿನ ಮರದಲ್ಲಿ ಶ್ರೀ ಅವಧೂತ ಶುಕಮುನಿ ಸ್ವಾಮಿ ಮುಖ (ಸಿಂಹದ ಮುಖದ) ಮೂಡಿದೆ.
<p>ಇದನ್ನು ದೈವಿ ಸ್ವರೂಪದ್ದೆಂದು ನಂಬಿ ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿರುವ ಗ್ರಾಮಸ್ಥರು </p>
ಇದನ್ನು ದೈವಿ ಸ್ವರೂಪದ್ದೆಂದು ನಂಬಿ ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿರುವ ಗ್ರಾಮಸ್ಥರು
<p>ಬೇವಿನ ಮರಗಳಲ್ಲಿ ನೈಸರ್ಗಿಕವಾಗಿ ಈ ರೀತಿ ಬದಲಾವಣೆಗಳು ನಡೆಯುವುದು ಸಹಜವಾಗಿಯೇ ಇದೆ. ಹಿಂದಿನಿಂದಲೂ ಇಂತಹ ವಿಷಯಗಳನ್ನು ಕೇಳಿಕೊಂಡು ಬರುತ್ತಿದ್ದರೂ ಗ್ರಾಮಸ್ಥರು ಇದನ್ನು ದೈವ ಸ್ವರೂಪ ಎಂದು ನಂಬಿದ್ದಾರೆ. ಕೆಲ ಪ್ರಜ್ಞಾವಂತ ಯುವಕರು, ವೈಜ್ಞಾನಿಕ ದೃಷ್ಟಿಯಿಂದ ಕಾಣುವ ಜನ ಅದು ಪ್ರಕೃತಿ ಸಹಜ ಗುಣವೆಂದು ಹೇಳುತ್ತಾರೆ.</p>
ಬೇವಿನ ಮರಗಳಲ್ಲಿ ನೈಸರ್ಗಿಕವಾಗಿ ಈ ರೀತಿ ಬದಲಾವಣೆಗಳು ನಡೆಯುವುದು ಸಹಜವಾಗಿಯೇ ಇದೆ. ಹಿಂದಿನಿಂದಲೂ ಇಂತಹ ವಿಷಯಗಳನ್ನು ಕೇಳಿಕೊಂಡು ಬರುತ್ತಿದ್ದರೂ ಗ್ರಾಮಸ್ಥರು ಇದನ್ನು ದೈವ ಸ್ವರೂಪ ಎಂದು ನಂಬಿದ್ದಾರೆ. ಕೆಲ ಪ್ರಜ್ಞಾವಂತ ಯುವಕರು, ವೈಜ್ಞಾನಿಕ ದೃಷ್ಟಿಯಿಂದ ಕಾಣುವ ಜನ ಅದು ಪ್ರಕೃತಿ ಸಹಜ ಗುಣವೆಂದು ಹೇಳುತ್ತಾರೆ.
<p>ಗ್ರಾಮಸ್ಥರು ಅದನ್ನು ನಂಬದೆ ದೈವಿ ಸೃಷ್ಟಿ ಇರಬೇಕು ಎಂದು ನಂಬಿ ಆ ಬೇವಿನ ಮರದಲ್ಲಿ ಮೂಡಿರುವ ಆಕೃತಿಗೆ ಹಾರ, ಊದುಬತ್ತಿ, ತೆಂಗಿನಕಾಯಿ ಅರ್ಪಿಸಿ ಪೂಜಿಸುವುದರಲ್ಲಿ ತೊಡಗಿದ್ದಾರೆ.</p>
ಗ್ರಾಮಸ್ಥರು ಅದನ್ನು ನಂಬದೆ ದೈವಿ ಸೃಷ್ಟಿ ಇರಬೇಕು ಎಂದು ನಂಬಿ ಆ ಬೇವಿನ ಮರದಲ್ಲಿ ಮೂಡಿರುವ ಆಕೃತಿಗೆ ಹಾರ, ಊದುಬತ್ತಿ, ತೆಂಗಿನಕಾಯಿ ಅರ್ಪಿಸಿ ಪೂಜಿಸುವುದರಲ್ಲಿ ತೊಡಗಿದ್ದಾರೆ.
<p>ಮಂಗಳವಾರ ಸಂಜೆ ಇದು ಬೆಳಕಿಗೆ ಬಂದಿದ್ದು, ಇದನ್ನು ನೋಡಲು ಗ್ರಾಮದ ಮಹಿಳೆಯರು, ಮಕ್ಕಳು, ಹಿರಿಯರು, ಕಿರಿಯರು ಸಹ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. </p>
ಮಂಗಳವಾರ ಸಂಜೆ ಇದು ಬೆಳಕಿಗೆ ಬಂದಿದ್ದು, ಇದನ್ನು ನೋಡಲು ಗ್ರಾಮದ ಮಹಿಳೆಯರು, ಮಕ್ಕಳು, ಹಿರಿಯರು, ಕಿರಿಯರು ಸಹ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
<p>ಊದುಬತ್ತಿ, ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಿರುವ ಜನರು</p>
ಊದುಬತ್ತಿ, ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಿರುವ ಜನರು