ನಾರಾಯಣ ಗೌಡ ಪ್ರತಿಕೃತಿ ದಹಿಸಿ ಪ್ರತಿಭಟನೆ, ಇಲ್ಲಿವೆ ಫೋಟೋಸ್
ಸಚಿವ ನಾರಾಯಣ ಗೌಡ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಾರಾಯಣ ಗೌಡ ಅವರನ್ನು ಸಚಿವ, ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಲ್ಲಿವೆ ಫೋಟೋಸ್
ಕೆ. ಆರ್. ಪೇಟೆ ಶಾಸಕ, ಸಚಿವ ಕೆ. ಸಿ. ನಾರಾಯಣ ಗೌಡ ವಿರುದ್ಧ ಮಂಡ್ಯ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪೋಸ್ಟರ್ ಹಿಡಿದು, ಪ್ರತಿಕೃತಿಯನ್ನು ಹಿಡಿದು ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ಸಚಿವ ನಾರಾಯಣ ಗೌಡ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಕೃತಿಗೆ ಚಪ್ಪಲಿ ಹಾರವನ್ನೂ ಹಾಕಲಾಗಿತ್ತು.
ಪ್ರತಿಕೃತಿಗೆ ಪೆಟ್ರೋಲ್ ಸುರಿಯುತ್ತಿರುವ ಕರವೇ ಕಾರ್ಯಕರ್ತ
ಸಚಿವರ ಪ್ರತಿಕೃತಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚುತ್ತಿರುವುದು
ಮಹಾರಾಷ್ಟ್ರ ಪರ ಸಚಿವ ನಾರಾಯಣಗೌಡ ಘೋಷಣೆ ಹಿನ್ನೆಲೆ ಪ್ರತಿಭಟನೆ ನಡೆಸಲಾಯಿತು.
ಮಂಡ್ಯದ ಮಹಾವೀರ ವೃತ್ತದಲ್ಲಿ ಕರವೇ ಪ್ರತಿಭಟನೆ ನಡೆಯಿತು.
ಸಚಿವ ನಾರಾಯಣಗೌಡರ ಪ್ರತಿಕೃತಿ ದಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರಾಯಣಗೌಡರನ್ನ ಸಚಿವ, ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.