'ಯಾರೂ ಕೊರೋನಾ ವಾರಿಯರ್ಸ್ ಅಂತ ಅವಾರ್ಡ್ ಕೊಡ್ತಿಲ್ಲ', ವೈರಲ್ ಆಯ್ತು ಗಗನಸಖಿಯ ವಿಡಿಯೋ
ವಂದೇ ಭಾರತ್ ಮಿಷನ್ನಲ್ಲಿ ಪಾಲ್ಗೊಂಡ ಮಂಗಳೂರು ಮೂಲದ ಗಗನಸಖಿಯ ಮಾತು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಏನಂದ್ರ ಗಗನಸಖಿ ಅಶ್ವಿನಿ..? ಇಲ್ಲಿವೆ ಫೋಟೋಸ್
ವಂದೇ ಭಾರತ್ ಮಿಷನ್ನಲ್ಲಿ ಭಾಗಿಯಾದ ಮೂಲತಃ ಮಂಗಳೂರಿನವರಾದ ಗಗನ ಸಖಿಯೊಬ್ಬರ ವಿಡಿಯೋ ವೈರಲ್ ಆಗಿದೆ.
ಅಶ್ವಿನಿ ವಂದೇ ಭಾರತ್ ಮಿಷನ್ ನಲ್ಲಿ ಪಾಲ್ಗೊಂಡಿದ್ದು ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಕೆಲವರು ಅದು ಅವರ ಕೆಲಸ ಎಂದು ಸಾಮಾಜಿಕ ತಾಣಗಳಲ್ಲಿ ಟೀಕಿಸಿದ್ದರು. ಈ ಬಗ್ಗೆ ಅಶ್ವಿನಿ ವಿಡಿಯೋ ಮೂಲಕ ಮಾತನಾಡಿದ್ದ
ಏರ್ ಇಂಡಿಯಾ ವಂದೇ ಭಾರತ್ ಮಿಷನ್ ನಲ್ಲಿ ನಮ್ಮ ಸ್ವ ಇಚ್ಛೆಯಿಂದ ಭಾಗವಹಿಸಿದ್ದೆ. ಅಲ್ಲಿ ನಮ್ಮ ಜೀವಕ್ಕೆ ಏನೇ ಆದರೂ ನಾವೇ ಜವಾಬ್ದಾರರು. ವಿಮಾನ ಹೊರಡೋ ಮುನ್ನ ಮತ್ತು ಬಂದ ನಂತರ ಹೀಗೆ ಮೂರ್ನಾಲ್ಕು ಬಾರಿ ಟೆಸ್ಟ್ ಇತ್ತು ಎಂದಿದ್ದಾರೆ
ಬೆಳಗ್ಗೆ 8 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಪಿಪಿಇ ಕಿಟ್ ಹಾಕಿಕೊಂಡೇ ಇದ್ದೆವು. ಊಟ, ನೀರು ಯಾವುದೂ ಇಲ್ಲದೇ ಸುದೀರ್ಘ ಅವಧಿಯ ಪ್ರಯಾಣ ಎಂದು ತಿಳಿಸಿದ್ದಾರೆ.
ವಾಶ್ ರೂಂಗೆ ಹೋಗೋಕು ಅವಕಾಶ ಇಲ್ಲದ ಸ್ಥಿತಿಯಲ್ಲಿರುತ್ತೇವೆ. ಆದರೂ ಅಲ್ಲಿನ ನಮ್ಮವರಿಗಾಗಿ ಕೆಲಸ ಮಾಡುತ್ತೇವೆ. ಇದಕ್ಕೆ ನಮಗೆ ಏರ್ ಇಂಡಿಯಾ ಹೆಚ್ಚು ಸಂಬಳ ಏನೂ ಕೊಡಲ್ಲ ಎಂದು ಹೇಳಿದ್ದಾರೆ.
ಇದೀಗ ಟೀಕಾಕಾರರಿಗೆ ತಿರುಗೇಟು ಕೊಟ್ಟ ಅಶ್ವಿನಿ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.