MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ನಂಬುವುದು ಹೇಗೆ ಸಾಧ್ಯ? ಅವರಿಬ್ಬರಿಂದಲೇ ರಕ್ಷಣೆ: ಶಾಸಕ ಜನಾರ್ದನ್ ರೆಡ್ಡಿಗಂಭೀರ ಆರೋಪ

ನಂಬುವುದು ಹೇಗೆ ಸಾಧ್ಯ? ಅವರಿಬ್ಬರಿಂದಲೇ ರಕ್ಷಣೆ: ಶಾಸಕ ಜನಾರ್ದನ್ ರೆಡ್ಡಿಗಂಭೀರ ಆರೋಪ

ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ನಾರಾ ಭರತ್ ರೆಡ್ಡಿ ಕೈವಾಡವಿದೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ನಡೆದ ಕಳ್ಳತನ ಪ್ರಕರಣದಲ್ಲೂ ಭರತ್ ರೆಡ್ಡಿ ದುಷ್ಕರ್ಮಿಗಳನ್ನು ರಕ್ಷಿಸಿದ್ದರು. ಬ್ಯಾನರ್ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.

1 Min read
Author : Kannadaprabha News
Published : Jan 25 2026, 08:06 AM IST
Share this Photo Gallery
  • FB
  • TW
  • Linkdin
  • Whatsapp
14
ಜಿ ಸ್ಕ್ವೇರ್ ಲೇಔಟ್‌ನ ಮಾಡೆಲ್ ಹೌಸ್‌ ಬೆಂಕಿ ಅವಘಡ ಪ್ರಕರಣ
Image Credit : Gali Janardhan Reddy fb

ಜಿ-ಸ್ಕ್ವೇರ್ ಲೇಔಟ್‌ನ ಮಾಡೆಲ್ ಹೌಸ್‌ ಬೆಂಕಿ ಅವಘಡ ಪ್ರಕರಣ

ನಗರ ಹೊರವಲಯದ ಜಿ-ಸ್ಕ್ವೇರ್ ಲೇಔಟ್‌ನ ಮಾಡೆಲ್ ಹೌಸ್‌ ಬೆಂಕಿ ಅವಘಡ ಪ್ರಕರಣದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕೈವಾಡವಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಜಿ-ಸ್ಕ್ವೇರ್ ಲೇಔಟ್‌ ಮೇಲೆ ಶಾಸಕ ಭರತ್ ರೆಡ್ಡಿ ಕಣ್ಣು ಹಾಕಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪ್ರಕರಣದ ಹಿಂದೆ ಭರತ್ ರೆಡ್ಡಿಯ ಕೈವಾರವಿದೆ ಎಂದು ದೂರಿದರು.

24
ಬೆಂಕಿಯನ್ನು ಏಕೆ ಹಚ್ಚುತ್ತಾರೆ?
Image Credit : Gali Janardhan Reddy fb

ಬೆಂಕಿಯನ್ನು ಏಕೆ ಹಚ್ಚುತ್ತಾರೆ?

ಶನಿವಾರ ಘಟನಾ ಸ್ಥಳಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ರೀಲ್ಸ್ ಮಾಡುವ ಹುಡುಗರು ಕೃತ್ಯ ಎಸಗಿದ್ದಾರೆ, ಮಾಡೆಲ್ ಹೌಸ್ ಪಾಳು ಬಿದ್ದಿತ್ತು. ಯಾವುದೇ ಸೆಕ್ಯೂರಿಟಿ ಇರಲಿಲ್ಲ’ ಎಂದು ಎಸ್ಪಿಯವರು ಹೇಳಿದ್ದಾರೆ. ಆದರೆ, ಮಾಡೆಲ್ ಹೌಸ್‌ಗೆ ನಾವು ಸೆಕ್ಯೂರಿಟಿ ನಿಯೋಜಿಸಿದ್ದೇವೆ. ರೀಲ್ಸ್ ಮಾಡುವ ಹುಡುಗರು ಈ ಕೃತ್ಯ ಎಸಗಿದ್ದಾರೆ ಎಂದರೆ ನಂಬುವುದು ಹೇಗೆ ಸಾಧ್ಯ? ರೀಲ್ಸ್ ಮಾಡುವವರು ಬೆಂಕಿಯನ್ನು ಏಕೆ ಹಚ್ಚುತ್ತಾರೆ? ಎಂದು ಪ್ರಶ್ನಿಸಿದರು.

Related Articles

Related image1
Ballari: ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಇಟ್ಟವರು ಯಾರು ಪ್ರಶ್ನೆಗೆ ಸಿಕ್ತು ಉತ್ತರ
Related image2
ಬಳ್ಳಾರಿಯ ಮಾಡೆಲ್ ಹೌಸ್‌ಗೆ ಬೆಂಕಿ:ಆರು ಅಪ್ರಾಪ್ತರು ಸೇರಿದಂತೆ ಎಂಟು ಜನರು ಪೊಲೀಸರ ವಶಕ್ಕೆ
34
 ದುಷ್ಕರ್ಮಿಗಳನ್ನು ಈ ಇಬ್ಬರೇ ರಕ್ಷಣೆ ಮಾಡಿದರು
Image Credit : Gali Janardhan Reddy fb

ದುಷ್ಕರ್ಮಿಗಳನ್ನು ಈ ಇಬ್ಬರೇ ರಕ್ಷಣೆ ಮಾಡಿದರು

ಕಳೆದ ಆಗಸ್ಟ್‌ ನಲ್ಲಿ ಮಾಡೆಲ್ ಹೌಸ್‌ನ ಗೇಟ್‌ಗಳನ್ನು ಮುರಿದು ಕೆಲವು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಈ ಸಂಬಂಧ ಗ್ರಾಮೀಣ ಠಾಣೆಗೆ ದೂರು ನೀಡಿದ್ದೇವೆ. ಗ್ರಾಮೀಣ ಸಿಪಿಐ ಆಗಿದ್ದ ಸತೀಶ್ ಅವರು ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಎಎಸ್ಪಿ ರವಿಕುಮಾರ್ ಅವರು ಸಿಪಿಐ ಸತೀಶ್ ಅವರಿಗೆ ಯುವಕರನ್ನು ಬಂಧಿಸದಂತೆ ಒತ್ತಡ ಹೇರಿ, ಬಿಡುಗಡೆ ಮಾಡಿಸಿದರು. ದುಷ್ಕರ್ಮಿಗಳನ್ನು ಈ ಇಬ್ಬರೇ ರಕ್ಷಣೆ ಮಾಡಿದರು ಎಂದು ಆರೋಪಿಸಿದರು.

44
ಬ್ಯಾನರ್ ಗಲಭೆ ಪ್ರಕರಣ
Image Credit : Gali Janardhan Reddy fb

ಬ್ಯಾನರ್ ಗಲಭೆ ಪ್ರಕರಣ

ಬ್ಯಾನರ್ ಗಲಭೆ ಪ್ರಕರಣದಲ್ಲಿ ಈವರೆಗೆ ಆರೋಪಿಗಳಾದ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿಯನ್ನು ಬಂಧಿಸಲಾಗಿಲ್ಲ. ಭರತ್ ರೆಡ್ಡಿಯಂತಹ ಕ್ರಿಮಿನಲ್‌ಗಳನ್ನು ಸಿಎಂ ರಕ್ಷಣೆ ಮಾಡುತ್ತಿದ್ದಾರೆ. ಇವರು ಮುಂದೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಸಿಎಂ ಸಿದ್ಧರಾಮಯ್ಯ ನಿಜಕ್ಕೂ ಪ್ರಾಮಾಣಿಕ ರಾಜಕಾರಣಿಯಾಗಿದ್ದರೆ ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಬಳ್ಳಾರಿ
ಜಿ. ಜನಾರ್ದನ ರೆಡ್ಡಿ
ಕಾಂಗ್ರೆಸ್
ಬಿಜೆಪಿ

Latest Videos
Recommended Stories
Recommended image1
2026ರ ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಮಾಣೆಕ್‌ ಷಾ ಮೈದಾನ ಸಜ್ಜು; ಈ ಬಾರಿ ಏನು ಹೊಸತು?
Recommended image2
Ballari: ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಇಟ್ಟವರು ಯಾರು ಪ್ರಶ್ನೆಗೆ ಸಿಕ್ತು ಉತ್ತರ
Recommended image3
ನಂಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌: ವೇದಿಕೆಯಲ್ಲಿ ಭಾವುಕರಾದ ಮಾಜಿ ಪ್ರಧಾನಿ ದೇವೇಗೌಡ
Related Stories
Recommended image1
Ballari: ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಇಟ್ಟವರು ಯಾರು ಪ್ರಶ್ನೆಗೆ ಸಿಕ್ತು ಉತ್ತರ
Recommended image2
ಬಳ್ಳಾರಿಯ ಮಾಡೆಲ್ ಹೌಸ್‌ಗೆ ಬೆಂಕಿ:ಆರು ಅಪ್ರಾಪ್ತರು ಸೇರಿದಂತೆ ಎಂಟು ಜನರು ಪೊಲೀಸರ ವಶಕ್ಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved