MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Mandya: ಲವ್ ಮ್ಯಾರೇಜ್‌ಗೆ ಸಹಾಯ; ಯುವತಿ ತಂದೆಯಿಂದ ಸೈಜ್ ಗಲ್ಲಿನಿಂದ ಕಾಲು ಜಜ್ಜಿ ಕ್ರೌರ್ಯ

Mandya: ಲವ್ ಮ್ಯಾರೇಜ್‌ಗೆ ಸಹಾಯ; ಯುವತಿ ತಂದೆಯಿಂದ ಸೈಜ್ ಗಲ್ಲಿನಿಂದ ಕಾಲು ಜಜ್ಜಿ ಕ್ರೌರ್ಯ

ಮಗಳ ಪ್ರೇಮ ವಿವಾಹಕ್ಕೆ ಸಹಾಯ ಮಾಡಿದ್ದಕ್ಕೆ ಯುವತಿಯ ತಂದೆ, ಯುವಕರ ಗುಂಪಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೊಮ್ಮಾಲಪುರದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

1 Min read
Author : Mahmad Rafik
Published : Feb 24 2026, 11:20 AM IST
Share this Photo Gallery
  • FB
  • TW
  • Linkdin
  • Whatsapp
15
ಲವ್ ಮ್ಯಾರೇಜ್‌ಗೆ ಸಹಾಯ
Image Credit : Asianet News

ಲವ್ ಮ್ಯಾರೇಜ್‌ಗೆ ಸಹಾಯ

ಮಗಳ ಲವ್ ಮ್ಯಾರೇಜ್‌ಗೆ ಸಹಾಯ ಮಾಡಿದ್ದ ಯುವಕರ ಗುಂಪಿನ ಮೇಲೆ ಯುವತಿಯ ತಂದೆಯಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಬೊಮ್ಮಾಲಪುರ ಎಂಬಲ್ಲಿ ನಡೆದಿದೆ. ಬೊಮ್ಮಲಾಪುರ ಗ್ರಾಮದ ಪ್ರಕಾಶ್ ಮತ್ತು ಆತನ ಬಾಮೈದ ನವೀನ್ ಎಂಬವರ ಮೇಲೆ ಪಾಂಡವಪುರದ ಕನಗನಹಳ್ಳಿ ಬಳಿ ಹಲ್ಲೆ ನಡೆದಿದೆ.

25
ಫೆಬ್ರವರಿ 21ರಂದು ಗಲಾಟೆ
Image Credit : Asianet News

ಫೆಬ್ರವರಿ 21ರಂದು ಗಲಾಟೆ

ಕೆಲ ದಿನಗಳ ಹಿಂದೆ ಬೊಮ್ಮಲಾಪುರ ಗ್ರಾಮದ ನಿಂಗಣ್ಣ ಎಂಬವರ ಮಗಳು ಪ್ರೀತಿಸಿ ಮದುವೆಯಾಗಿದ್ದರು. ಈ ಲವ್‌ ಮ್ಯಾರೇಜ್‌ಗೆ ಪ್ರಕಾಶ್ ಸಹಾಯ ಮಾಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಪ್ರಕಾಶ್ ಮೇಲೆ ಯುವತಿ ತಂದೆ ನಿಂಗಣ್ಣ ಮತ್ತು ಕುಟಂಬ ಮೇಲೆ ಸೇಡು ಹೊಂದಿದ್ದರು. ಇದೇ ವಿಚಾರವಾಗಿ ಫೆಬ್ರವರಿ 21ರಂದು ಗಲಾಟೆಯೂ ನಡೆದಿತ್ತು

Related Articles

Related image1
Mandya: ಎರಡು ಮಕ್ಕಳ ತಂದೆಯೊಂದಿಗೆ 19ರ ಯುವತಿ ಲವ್; ಮಗಳೊಂದಿಗೆ ನೇಣು ಬಿಗಿದುಕೊಂಡ ಅಮ್ಮ
Related image2
Mandya: ಪಂಚಾಯ್ತಿಗೆ ಬರುತ್ತಿದ್ದಂತೆ 3 ದಿನದಲ್ಲಿ 54 ಲಕ್ಷ ಮಾಯ ಮಾಡಿದ ಪಿಡಿಒ ಶ್ರೀನಿವಾಸಯ್ಯ
35
ಅಟ್ಟಾಡಿಸಿಕೊಂಡು ಹಲ್ಲೆ
Image Credit : Getty

ಅಟ್ಟಾಡಿಸಿಕೊಂಡು ಹಲ್ಲೆ

ಬೊಮ್ಮಲಾಪುರದ ಗಿರೀಶ್, ಸಂಜು, ಗಣೇಶ್, ಪುಟ್ಟರಾಜು ಎಂಬವರೊಂದಿಗೆ ಸೇರಿಕೊಂಡು ನಿಂಗಣ್ಣ ಫೆಬ್ರವರಿ 22ರಂದು ಪ್ರಕಾಶ್ ಮತ್ತು ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕಾಶ್ ಮತ್ತು ನವೀನ್ ಇಬ್ಬರನ್ನು ಅಟ್ಟಾಡಿಸಿಕೊಂಡು ಸೈಜುಗಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ವಿಡಿಯೋ ಮಾಡಿಕೊಂಡಿದ್ದಾರೆ.

45
ಪ್ರಕರಣ ದಾಖಲು
Image Credit : Getty

ಪ್ರಕರಣ ದಾಖಲು

ಹಲ್ಲೆಯ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧ ಪೊಲೀಸರು ಗಿರೀಶ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸಂಕೇತ್ ಪ್ರಕರಣ: ಸುಳೆಬೈಲಿನ ಪ್ರದೇಶದಲ್ಲಿ ನಡೆಯವ ಕರಾಳ ಘಟನೆಗಳನ್ನು ಬಿಚ್ಚಿಟ್ಟ ಸ್ಥಳೀಯರು

55
ಪ್ರಕಾಶ್ ಹೇಳಿದ್ದೇನು?
Image Credit : Freepik@macrovector

ಪ್ರಕಾಶ್ ಹೇಳಿದ್ದೇನು?

ಗಿರೀಶ್, ಜೀವನ್, ಡಿಂಕದವರು, ಛೇರ್ಮನ್‌ರು, ರವಿ, ನಿಂಗಣ್ಣ, ಸುಮಾರು ಮಂದಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಸಾಯುವ ರೀತಿ ನನಗೆ ಹೊಡೆದಿದ್ದಾರೆ‌. ನನ್ನ ಜೀವಕ್ಕೆ ಏನಾದರು ಆದ್ರೆ ಇವರೇ ಕಾರಣ. ನನ್ನ ಪ್ರಾಣ ಹೋದರೆ ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವನು ನನ್ನ ಹೆಂಡತಿ ಬಗ್ಗೆ ಬೈದಿದ್ದ. ಅದಕ್ಕೆ ನಾನು ಒಂದು ಏಟು ಹೊಡೆದಿದ್ದೆ. ಈಗ ಗುಂಪು ಬಂದು ನನಗೆ ಸಾಯುವ ರೀತಿ ಹೊಡೆದಿದ್ದಾರೆ ಎಂದು ಗಾಯಾಳು ಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: Shivamogga: ಬೆಳಗ್ಗೆ ದೇವರಿಗೆ ಕೈ ಮುಗಿದು ಹೋದವನು ಹಿಂತಿರುಗಲಿಲ್ಲ: ಸಂಕೇತ್ ಪೋಷಕರ ಕಣ್ಣೀರು

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮಂಡ್ಯ
ಪ್ರೇಮ ವಿವಾಹ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಸಂಕೇತ್ ಪ್ರಕರಣ: ಸುಳೆಬೈಲಿನ ಪ್ರದೇಶದಲ್ಲಿ ನಡೆಯವ ಕರಾಳ ಘಟನೆಗಳನ್ನು ಬಿಚ್ಚಿಟ್ಟ ಸ್ಥಳೀಯರು
Recommended image2
ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
Recommended image3
ಪಾಪ ಕಣ್ರೀ, ಅನ್ಯಾಯವಾಗಿ ಆ ಹುಡುಗನ ಸಾಯಿಸಿಬಿಟ್ರು: ಘಟನೆ ವಿವರ ಬಿಚ್ಚಿಟ್ಟ ಮುನ್ನಾ
Related Stories
Recommended image1
Mandya: ಎರಡು ಮಕ್ಕಳ ತಂದೆಯೊಂದಿಗೆ 19ರ ಯುವತಿ ಲವ್; ಮಗಳೊಂದಿಗೆ ನೇಣು ಬಿಗಿದುಕೊಂಡ ಅಮ್ಮ
Recommended image2
Mandya: ಪಂಚಾಯ್ತಿಗೆ ಬರುತ್ತಿದ್ದಂತೆ 3 ದಿನದಲ್ಲಿ 54 ಲಕ್ಷ ಮಾಯ ಮಾಡಿದ ಪಿಡಿಒ ಶ್ರೀನಿವಾಸಯ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved