ಅನ್ನದಾತರಿಗೆ ಅಧಿಕಾರಿಗಳಿಂದ ಕಿರಿಕಿರಿ: ಮಧ್ಯರಾತ್ರಿ ರೈತರ ಸಮಸ್ಯೆ ಆಲಿಸಿದ ಡಿ.ಕೆ.ಶಿವಕುಮಾರ್, BSY ಸರ್ಕಾರ ವಿರುದ್ಧ ಆಕ್ರೋಶ
ಬೆಂಗಳೂರು(ಮೇ.02): ತರಕಾರಿ ಹೊತ್ತು ತಂದ 50 ಕ್ಕೂ ಹೆಚ್ಚು ರೈತರ ವಾಹನಗಳ ತಡೆದ ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ(ಶುಕ್ರವಾರ) ನಗರದ ಕೆ.ಆರ್. ಪುರಂ ಮಾರುಕಟ್ಟೆ ಹತ್ತಿರ ನಡೆದಿದೆ. ಮಧ್ಯರಾತ್ರಿ ಭೇಟಿ ನೀಡಿ ರೈತರ ಸಮಸ್ಯೆಗಳನ್ನ ಆಲಿಸಿದ್ದಾರೆ.
ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತಿತರ ಕಡೆಯಿಂದ ಆಗಮಿಸಿದ್ದ ರೈತರು
ರೈತರು ತರಕಾರಿ, ಹಣ್ಣು, ಹೂವು ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ಅವಕಾಶ ನೀಡದ ಅಧಿಕಾರಿಗಳು
ರೈತರ ವಾಹನಗಳನ್ನು ತಡೆದು ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್
ಕೆ.ಆರ್. ಪುರಂ ಮಾರುಕಟ್ಟೆ ಸಮೀಪ ಮಧ್ಯರಾತ್ರಿ 12.15 ಗಂಟೆ ಭೇಟಿ ನೀಡಿ ರೈತರು ಸಮಸ್ಯೆ ಆಲಿಸಿದ ಡಿ.ಕೆ. ಶಿವಕುಮಾರ್
ರೈತರ ಸಮಸ್ಯೆ ಆಲಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಡಿಕೆಶಿ
ಲಾಕ್ಡೌನ್ ಸಂದರ್ಭದಲ್ಲೂ ಸರ್ಕಾರದ ಅಧಿಕಾರಿಗಳು ಸಚಿವರು ರೈತರ ನೆರವಿಗೆ ಯಾರು ಬರುತ್ತಿಲ್ಲ: ಡಿಕೆಶಿ
ಇದೇ ವೇಳೆ ಫೋನ್ ಮಾಡಿದ್ರೂ ಕರೆ ಸ್ವೀಕರಿಸಿದ ಸಹಕಾರ ಸಚಿವ ಎಸ್. ಟಿ.ಸೋಮಶೇಖರ್ ಮತ್ತು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ
ಪ್ರತಿಪಕ್ಷಗಳು ಸಹಕರಿಸುತ್ತಿದ್ದರೂ ಸರ್ಕಾರ ಮಾತ್ರ ರೈತರ ನೆರವಿಗೆ ಬರುತ್ತಿಲ್ಲ
ರೈತರ ರಕ್ಷಣೆ ಮಾಡುವವರು ಯಾರು? ನಿಮ್ಮ ಒಬ್ಬ ಅಧಿಕಾರಿಗಳ ಸಹ ರೈತನ ಬಳಿ ಹೋಗಿಲ್ಲ ಎಂದು ಡಿಕೆಶಿ ಆಕ್ರೋಶ
ನಿಮ್ದು ಕೇವಲ ಪೇಪರ್ ಹಾಗೂ ಘೋಷಣೆಗಳ ಸರ್ಕಾರ ಅಷ್ಟೇ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ