ಬರಿಗಾಲಲ್ಲಿ 265 ಕಿ.ಮೀ ನಡೆದು ತಿಮ್ಮಪ್ಪನ ದರ್ಶನ ಪಡೆದ ಅಂಜಲಿ ನಿಂಬಾಳ್ಕರ್
ಬೆಳಗಾವಿಯ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಬರಿಗಾಲಿನಲ್ಲಿಯೇ ನೂರಾರು ಕಿಲೋ ಮೀಟರ್ ಪಾದಯಾತ್ರೆ ಮಾಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವೆಂಕಟಾದ್ರಿ ಗಿರಿಶ್ರೇಣಿಯ 2388 ಮೆಟ್ಟಿಲುಗಳನ್ನು ಏರಿ
ಪ್ರಾತಃಕಾಲದಲ್ಲಿ ತಿರುಮಲ ವೆಂಕಟರಮಣನ ದರ್ಶನ ಪಡೆದಿದ್ದಾರೆ. ಈ ದರ್ಶನ ನನ್ನಲ್ಲಿ ಹುಟ್ಟಿಸಿದ ಆಧ್ಯಾತ್ಮಿಕ ಅನುಭೂತಿ, ಮನದಲ್ಲಿ ಸ್ಫುರಿಸಿದ ಭಾವಗಳು ಪದಗಳ ಮೂಲಕ ಬಣ್ಣನೆಗೆ ನಿಲುಕುತ್ತಿಲ್ಲ ಎಂದಿದ್ದಾರೆ.
ಖಾನಾಪುರ ಕಲ್ಯಾಣಕ್ಕಾಗಿ ತಿಮ್ಮಪ್ಪನ ಸನ್ನಿಧಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ‘ಪ್ರಾರ್ಥನಾ ಪಾದಯಾತ್ರೆ’
265 ಕಿ.ಮೀ. ದೂರ ನಡೆದು, ವೆಂಕಟಾದ್ರಿ ಗಿರಿಶ್ರೇಣಿ ಏರಿದ ಕಾಂಗ್ರೆಸ್ ಶಾಸಕಿ ಅಂಜಲಿ
2388 ಮೆಟ್ಟಿಲುಗಳನ್ನು ಏರಿ ಪ್ರಾತಃಕಾಲದಲ್ಲಿ ವೆಂಕಟರಮಣನ ಅಪೂರ್ವ ದರ್ಶನ
ಅಪೂರ್ವ ಅನುಭವವನ್ನು ಹೇಳಿಕೊಂಡ ಶಾಸಕಿ ಅಂಜಲಿ
ಕುಟುಂಬ ಸಮೇತರಾಗಿ ತಿಮ್ಮಪ್ಪನ ದರ್ಶನ
ಬೆಳಗಾವಿ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್
ಕ್ಷೇತ್ರದ ಒಳಿತಿಗಾಗಿ ಬರಿಗಾಲಲ್ಲಿ ತೆರಳಿ ತಿಮ್ಮಪ್ಪನ ದರ್ಶನ