ಹುಬ್ಬಳ್ಳಿ: ಥಾಯ್ಲೆಂಡ್ನಲ್ಲಿ ಮಿಂಚುತ್ತಿರುವ ಕನ್ನಡದ ಯೋಗಪಟುಗಳು!
ಹುಬ್ಬಳ್ಳಿ(ಜೂ.21): ನಲವತ್ತು ಯುವಕರು ಥಾಯ್ಲೆಂಡ್ನಲ್ಲಿ ಯೋಗ ತರಬೇತಿ ನೀಡುತ್ತ ಭಾರತೀಯ ವಿದ್ಯೆ, ಪರಂಪರೆಯನ್ನು ಅಲ್ಲಿ ಪಸರಿಸಿ, ಪ್ರಚಾರ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಹೆಸರನ್ನು ಥಾಯ್ಲೆಂಡ್ನಲ್ಲಿ ಮಿಂಚುವಂತೆ ಮಾಡುತ್ತಿದ್ದಾರೆ.
ಇಂತಹ ಅಪೂರ್ವ ಸಾಧನೆ ಮಾಡಿದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯುವಕರು
ಇವರ ಸಾಧನೆಗೆ ಕಾರಣರಾದವರು ಮಂಜುನಾಥ ಕಲ್ಮಠ ಎಂಬ ಯುವಕ
ಕುಂದಗೋಳ ತಾಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ ಕಲ್ಮಠ, ಶಿವಾನಂದ ಮಠದ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು
ಈ ವೇಳೆ ಯೋಗ ತರಬೇತಿ ಪಡೆದ ಇವರು ಬಳಿಕ ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರು ವಿವಿಯಲ್ಲಿ ‘ಡಿಪ್ಲೊಮಾ ಸ್ಟಡೀಸ್ ಇನ್ ಯೋಗ’ ಸರ್ಟಿಫಿಕೇಟ್ ಕೋರ್ಸ್ ಮಾಡಿ, ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.
ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದ ಯೋಗಪಟುಗಳು
ಈ ವೇಳೆ ಸ್ನೇಹಿತರೊಬ್ಬರಿಂದ ಥಾಯ್ಲೆಂಡ್ನಲ್ಲಿ ಅವಕಾಶಗಳಿರುವ ಬಗ್ಗೆ ಮಾಹಿತಿ ಪಡೆದ ಯೋಗಪಟುಗಳು
2010ರಲ್ಲಿ ಅಲ್ಲಿಗೆ ತೆರಳಿದ ಇವರು 5 ವರ್ಷದ ಬಳಿಕ 2015ರಲ್ಲಿ ತಾವೇ ‘ಶುಭಯೋಗ’ ಸಂಸ್ಥೆಯೊಂದನ್ನ ಹುಟ್ಟು ಹಾಕಿದ್ದಾರೆ.
ಶಿವಾನಂದ ಮಠದಲ್ಲಿ ಯೋಗ ತರಬೇತಿ ಪಡೆದ 40 ವಿದ್ಯಾರ್ಥಿಗಳು
ಕುಂದಗೋಳ ಸುತ್ತಮುತ್ತಲಿನ ಗ್ರಾಮೀಣ ಭಾಗದ 40 ವಿದ್ಯಾರ್ಥಿಗಳನ್ನು ಥ್ಲಾಯ್ಲೆಂಡ್ಗೆ ಕರೆಸಿಕೊಂಡು ಬೇರೆ ಸಂಸ್ಥೆಗಳಲ್ಲಿ ಯೋಗ ತರಬೇತಿದಾರರನ್ನಾಗಿ ಮಾಡಿದ ಯುವಕರು
ಮಂಜುನಾಥ ಕಲ್ಮಠ ಸೇರಿದಂತೆ ಅಲ್ಲಿರುವ 40 ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಯೋಗ ಕಲಿಸಿದವರು ಗದಗ ಜಿಲ್ಲೆಯ ಶಿರೋಳ ಗ್ರಾಮದ ಕಾಶಪ್ಪ ಹಡಗಲಿ ಎಂಬ ಯೋಗ ಶಿಕ್ಷಕರಾಗಿದ್ದಾರೆ.