ಶರವಣ ಮಗಳ ಸರಳ ಮದುವೆ, ದೊಡ್ಡವರೆಲ್ಲಾ ಬಂದಿದ್ರು; ಪೋಟೋಸ್
ಬೆಂಗಳೂರು(ಜೂ. 10) ಲಾಕ್ ಡೌನ್ ನಡುವೆ ಜೆಡಿಎಸ್ ನಾಯಕರೊಬ್ಬರು ತಮ್ಮ ಮಗಳ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಿದ್ದಾರೆ. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.17ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸಿದ್ದಾರೆ.
ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶರವಣ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೂಲಕ ಹೆಸರು ಮಾಡಿದವರು.
ಅಪ್ಪಾಜಿ ಕ್ಯಾಂಟೀನ್ ಆರಂಭಿಸಿ ಕಡಿಮೆ ದರದಲ್ಲಿ ಊಟ ನೀಡುವ ಕೆಲಸವನ್ನು ಶರವಣ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ಹೊಸ ಜೋಡಿಯನ್ನು ಹಾರೈಸಿದರು.
ಶರವಣ ಪುತ್ರಿಯ ಮದುವೆ ಸಂಭ್ರಮ
ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಗೆ ಸಿದ್ಧತೆ
ಆಗಮಿಸುವವರಿಗೆ ಸಾನಿಟೈಸ್
ಸಾಮಾಜಿಕ ಅಂತರಕ್ಕೆ ವ್ಯವಸ್ಥೆ
ಮಾಂಗಲ್ಯ ಧಾರಣೆ
ಮಾಸ್ಕ್ ಧರಿಸಿದ ವಧು ವರರು
ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ
ಶುಭ ಹಾರೈಸಿದ ಸಿದ್ದರಾಮಯ್ಯ
ಮಾಜಿ ಪ್ರಧಾನಿ ದೇವೇಗೌಡರ ಉಪಸ್ಥಿತಿ
ಶುಭಕೋರಿದ ಎಚ್.ಡಿ.ಕುಮಾರಸ್ವಾಮಿ
ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಉಪಸ್ಥಿತಿ
ಮದುವೆಗೆ ಆಗಮಿಸಿದ ಜಯದೇವ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್
ಸಿದ್ದರಾಮಯ್ಯ ಮತ್ತು ಐವಾನ್ ಡಿಸೋಜಾ
ಗಣ್ಯರೊಂದಿಗೆ ನವಜೋಡಿ
ಸಚಿವ ವಿ ಸೋಮಣ್ಣ, ವಿನಯ್ ಗುರೂಜಿ