ಲಾಕ್ಡೌನ್ ಮಧ್ಯೆ ಅಕ್ರಮ ಕಾಮಗಾರಿ: ಹಂಪಿ ಸ್ಮಾರಕಗಳಿಗೆ ಅಧಿಕಾರಿಗಳಿಂದಲೇ ಕುತ್ತು..?
ಬಳ್ಳಾರಿ(ಮೇ.15): ಲಾಕ್ಡೌನ್ ಮಧ್ಯೆ ಸದ್ದು ಗದ್ದಲವಿಲ್ಲದೇ ಅಕ್ರಮ ಕಾಮಗಾರಿ ನಡೆಸುವ ಮೂಲಕ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿಯ ಸ್ಮಾರಕ ರಕ್ಷಣೆ ಮಾಡಬೇಕಾಗಿರುವ ಅಧಿಕಾರಿಗಳೇ ಸ್ಮಾರಕಗಳಿಗೆ ಕುತ್ತು ತಂದಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಈ ಕಾಮಗಾರಿ ನಡೆಸಿ ಅಧಿಕಾರಿಗಳು ಹಣ ಉಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಗುತ್ತಿಗೆದಾರರಿಂದ ಬೇಕಾ ಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿದ್ದರೂ, ಕಣ್ಣು ಮುಚ್ಚಿ ಕುಳಿತಿರುವ ಭಾರತೀಯ ಪುರಾತತ್ವ ಇಲಾಖೆ
ವಿಜಯ ವಿಠ್ಠಲ ದೇವಸ್ಥಾನದ ಸಂಕೀರ್ಣದಲ್ಲಿ ಟ್ರಾಕ್ಟರ್ ಬಳಸಿ ಕಾಮಗಾರಿ ನಡೆಸಿರುವ ಗುತ್ತಿಗೆದಾರ
ನಿಯಮದ ಪ್ರಕಾರ ಸ್ಮಾರಕಗಳ ಮಧ್ಯೆ ಯಾವುದೇ ಯಂತ್ರೋಪಕರಣಗಳ ಬಳಕೆ ಮಾಡದಂತೆ ಕಾಮಗಾರಿ ನಡೆಸಬೇಕು. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಗುತ್ತಿಗೆದಾರ
ಭಾರಿ ಯಂತ್ರೋಪಕರಣಗಳನ್ನ ಬಳಕೆ ಮಾಡಿದರೆ ಸ್ಮಾರಕಗಳ ಮೂಲ ಸ್ವರೂಪಕ್ಕೆ ಧಕ್ಕೆ
ಹಣ ಉಳಿಸುವ ಉದ್ದೇಶದಿಂದ ಟ್ರಾಕ್ಟರ್ ಮೂಲಕ ಕಾಮಗಾರಿ ನಡೆಸಲು ಮುಂದಾಗಿರುವ ಗುತ್ತಿಗೆದಾರ?
ಛಾಯಾಗ್ರಹಣಕ್ಕೆ ಟ್ರೈಪಾಡ್ ಬಳಕೆ ಮಾಡಿದರೂ ಹಲವು ಕಾನೂನುಗಳನ್ನ ಮುಂದಿಡುವ ಅಧಿಕಾರಿಗಳು
ಅಪರೂಪದ ಸ್ಮಾರಕಗಳ ಒಳಗಡೆ ಟ್ರಾಕ್ಟರ್ ನುಗ್ಗಿರುವುದು ಕಣ್ಣಿಗೆ ಕಾಣುವುದಿಲ್ಲವೇ ಎನ್ನುವ ಆರೋಪ
ಲಾಕ್ಡೌನ್ ಮಧ್ಯೆ ಕದ್ದು ಮುಚ್ಚಿ ಟ್ರಾಕ್ಟರ್ ಸೇರಿದಂತೆ ಇತರೆ ವಾಹನ ಬಳಸಿ ಕಾಮಗಾರಿ
ಕಾಮಗಾರಿಗೆ ತುಂಗಭದ್ರಾ ನದಿಯಿಂದ ಅಕ್ರಮ ಮರಳು ಬಳಸುತ್ತಿರುವ ಆರೋಪ