ದಕ್ಷ IPS ಅಧಿಕಾರಿ ಚನ್ನಣ್ಣನವರ್ಗೆ ಹ್ಯಾಪಿ ಬರ್ತಡೆ, ರವಿ ಮೂಡಿದ ಹಾದಿ
ಇವರು ಕರ್ನಾಟಕ ರಾಜ್ಯ ಕಂಡ ದಕ್ಷ ,ಪ್ರಾಮಾಣಿಕ ಮತ್ತು ನಿಸ್ವಾರ್ಥ ಐಪಿಎಸ್ ಅಧಿಕಾರಿ. ಬಡ ಕೃಷಿ ಕುಟುಂಬದ ಕಠಿಣ ಹಾದಿಯಲ್ಲಿ ಬೆಳೆದು ಬಂದು ಇಂದು ಇಡೀ ದೇಶವೇ ಮೆಚ್ಚುವ ರೀತಿಯಲ್ಲಿ ತನ್ನ ವ್ಯಾಪ್ತಿಗೂ ಮೀರಿ ಸಾರ್ವಜನಿಕ ಸೇವೆ ಸಲ್ಲಿಸುತ್ತಾ ಸುತ್ತಲಿನ ಸಮಾಜದಲ್ಲಿ ಶಾಂತಿ ,ನೆಮ್ಮದಿ ನೆಲೆಸುವಂತೆ ಮಾಡಲು ಹಗಲಿರುಳು ದುಡಿಯುತ್ತಿರುವ ರವಿ ಡಿ. ಚನ್ನಣ್ಣನವರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

<p>ರವಿ ಧ್ಯಾಮಪ್ಪ ಚನ್ನಣ್ಣನವರ್ ಕರ್ನಾಟಕದ ಒಬ್ಬ ಭಾರತೀಯ ನಾಗರೀಕ ಸೇವಕ. ಇವರು 2008 ರ ತಂಡದಲ್ಲಿ ತರಬೇತಿ ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿ.</p>
ರವಿ ಧ್ಯಾಮಪ್ಪ ಚನ್ನಣ್ಣನವರ್ ಕರ್ನಾಟಕದ ಒಬ್ಬ ಭಾರತೀಯ ನಾಗರೀಕ ಸೇವಕ. ಇವರು 2008 ರ ತಂಡದಲ್ಲಿ ತರಬೇತಿ ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿ.
<p>ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದ ಬಡ ಕೃಷಿ ಕುಟುಂಬದಲ್ಲಿ 23 ಜುಲೈ 1985 ರಂದು ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು.</p>
ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದ ಬಡ ಕೃಷಿ ಕುಟುಂಬದಲ್ಲಿ 23 ಜುಲೈ 1985 ರಂದು ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು.
<p>ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಮುಗಿಸಿ ನಂತರ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.</p>
ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಮುಗಿಸಿ ನಂತರ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.
<p>ಮೇ 2007 ರಲ್ಲಿ, ಐಎಎಸ್ ಪರೀಕ್ಷೆಯ ತರಬೇತಿಯನ್ನು ಹೈದರಾಬಾದ್ ನಲ್ಲಿ ಪಡೆದ ಇವರು 2008ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ 703 ನೇ ಸ್ಥಾನ ಪಡೆದರು.</p>
ಮೇ 2007 ರಲ್ಲಿ, ಐಎಎಸ್ ಪರೀಕ್ಷೆಯ ತರಬೇತಿಯನ್ನು ಹೈದರಾಬಾದ್ ನಲ್ಲಿ ಪಡೆದ ಇವರು 2008ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ 703 ನೇ ಸ್ಥಾನ ಪಡೆದರು.
<p>ರವಿ ಅವರು 2011 ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು, ದಾವಣಗೆರೆ. ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದರು ಸದ್ಯ 2019 ರಿಂದ ಬೆಂಗಳೂರು ಗ್ರಾಮಾಂತರ ಎಸ್ ಪಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.</p>
ರವಿ ಅವರು 2011 ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು, ದಾವಣಗೆರೆ. ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದರು ಸದ್ಯ 2019 ರಿಂದ ಬೆಂಗಳೂರು ಗ್ರಾಮಾಂತರ ಎಸ್ ಪಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
<p>ಮಹಿಳಾ ಸುರಕ್ಷತೆಯನ್ನು ಉತ್ತೇಜಿಸಲು 'ಒನಕೆ ಓಬವ್ವ ಪಡೆ' ರಚಸಿದಲ್ಲದೇ ಸ್ವಯಂ ಸುರಕ್ಷತೆ ತರಬೇತಿ, ಜನ ಸ್ನೇಹಿ ಪೊಲೀಸ್ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.</p>
ಮಹಿಳಾ ಸುರಕ್ಷತೆಯನ್ನು ಉತ್ತೇಜಿಸಲು 'ಒನಕೆ ಓಬವ್ವ ಪಡೆ' ರಚಸಿದಲ್ಲದೇ ಸ್ವಯಂ ಸುರಕ್ಷತೆ ತರಬೇತಿ, ಜನ ಸ್ನೇಹಿ ಪೊಲೀಸ್ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.
<p>ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪೊಲೀಸ್ ಕ್ಯಾಂಟೀನ್ ಮತ್ತು ಪೊಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಲಹೆ ನೀಡಿದ್ದಲ್ಲದೆ ರೈತರಿಗೆ ಸಹಾಯವಾಗಲೆಂದು "ನಮ್ಮೂರಲೊಬ್ಬ ಸಾಧಕ" ಯೋಜನೆಯನ್ನು ಕೂಡ ಜಾರಿಗೆ ತಂದರು.</p>
ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪೊಲೀಸ್ ಕ್ಯಾಂಟೀನ್ ಮತ್ತು ಪೊಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಲಹೆ ನೀಡಿದ್ದಲ್ಲದೆ ರೈತರಿಗೆ ಸಹಾಯವಾಗಲೆಂದು "ನಮ್ಮೂರಲೊಬ್ಬ ಸಾಧಕ" ಯೋಜನೆಯನ್ನು ಕೂಡ ಜಾರಿಗೆ ತಂದರು.
<p>ತಾವು ನಡೆದು ಬಂದ ಹಾದಿಯನ್ನು ಎಂದೂ ಮರೆಯದ ರವಿ ಅವರು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆ ತರಬೇತಿ ನೀಡಲು ಪ್ರಾರಂಭಿಸಿದರು.</p>
ತಾವು ನಡೆದು ಬಂದ ಹಾದಿಯನ್ನು ಎಂದೂ ಮರೆಯದ ರವಿ ಅವರು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆ ತರಬೇತಿ ನೀಡಲು ಪ್ರಾರಂಭಿಸಿದರು.
<p>ರವಿ ಅವರ ಪತ್ನಿ ವೃತ್ತಿಯಲ್ಲಿ ವೈದ್ಯರಾಗಿದ್ದು ಈ ದಂಪತಿಗೆ ಭೂಮಿ ಎಂಬ ಮುದ್ದಾದ ಮಗಳಿದ್ದಾಳೆ.</p>
ರವಿ ಅವರ ಪತ್ನಿ ವೃತ್ತಿಯಲ್ಲಿ ವೈದ್ಯರಾಗಿದ್ದು ಈ ದಂಪತಿಗೆ ಭೂಮಿ ಎಂಬ ಮುದ್ದಾದ ಮಗಳಿದ್ದಾಳೆ.
<p>ಕರ್ನಾಟಕ ಕಂಡ ಈ ಅಪರೂಪದ ಪ್ರಾಮಾಣಿಕ ,ದಕ್ಷ ವ್ಯಕ್ತಿತ್ವಕ್ಕೆ ಹುಟ್ಟು ಹಬ್ಬದ ಶುಭಾಶಯಗಳು .</p>
ಕರ್ನಾಟಕ ಕಂಡ ಈ ಅಪರೂಪದ ಪ್ರಾಮಾಣಿಕ ,ದಕ್ಷ ವ್ಯಕ್ತಿತ್ವಕ್ಕೆ ಹುಟ್ಟು ಹಬ್ಬದ ಶುಭಾಶಯಗಳು .