ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ
ಕೊಪ್ಪಳ(ಜ.27): ಕೋವಿಡ್ ಸಂಕಷ್ಟದ ವೇಳೆಯಲ್ಲಿ ಅಳೆದು, ತೂಗಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲು ಗವಿಮಠ ಹಾಗೂ ಜಿಲ್ಲಾಡಳಿತ ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿಯೇ ಜಾತ್ರಾ ಮಹೋತ್ಸವ ಮಂಗಳವಾರ ವಿದ್ಯುಕ್ತವಾಗಿ ಚಾಲನೆಗೊಂಡಿದೆ.

<p>ಕಳಸಾರೋಹಣ ಮತ್ತು ಬಸವಪಟ ಆರೋಹಣದ ಮೂಲಕವೇ ಗವಿಮಠದಲ್ಲಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಪ್ರಾರಭವಾಯಿತು. ಯಾವುದೇ ವಾದ್ಯ, ವೃಂದ ಮೆರವಣಿಗೆಯ ಅಬ್ಬರ ಇಲ್ಲದ ಸರಳವಾಗಿ ಧಾರ್ಮಿಕ ಆಚರಣೆಯನ್ನು ಮಾಡಲಾಯಿತು.</p>
ಕಳಸಾರೋಹಣ ಮತ್ತು ಬಸವಪಟ ಆರೋಹಣದ ಮೂಲಕವೇ ಗವಿಮಠದಲ್ಲಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಪ್ರಾರಭವಾಯಿತು. ಯಾವುದೇ ವಾದ್ಯ, ವೃಂದ ಮೆರವಣಿಗೆಯ ಅಬ್ಬರ ಇಲ್ಲದ ಸರಳವಾಗಿ ಧಾರ್ಮಿಕ ಆಚರಣೆಯನ್ನು ಮಾಡಲಾಯಿತು.
<p>ಭಕ್ತರು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ 5 ಸುತ್ತ ಪ್ರದಕ್ಷಿಣೆ ಹಾಕಿ ಶ್ರೀಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃಗದ್ದುಗೆಯ ದ್ವಾರದ ಎದುರಿಗಿರುವ ಶಿಲಾಸ್ತಂಭಕ್ಕೆ ಬಸವ ಪಟಕಟ್ಟುವುದರ ಮೂಲಕ ಪ್ರತಿ ವರ್ಷದ ಸಂಪ್ರದಾಯ ಮಾಡಲಾಯಿತು.</p>
ಭಕ್ತರು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ 5 ಸುತ್ತ ಪ್ರದಕ್ಷಿಣೆ ಹಾಕಿ ಶ್ರೀಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃಗದ್ದುಗೆಯ ದ್ವಾರದ ಎದುರಿಗಿರುವ ಶಿಲಾಸ್ತಂಭಕ್ಕೆ ಬಸವ ಪಟಕಟ್ಟುವುದರ ಮೂಲಕ ಪ್ರತಿ ವರ್ಷದ ಸಂಪ್ರದಾಯ ಮಾಡಲಾಯಿತು.
<p>ಪ್ರತಿವರ್ಷವೂ ಜಾತ್ರೆಯಲ್ಲಿ ತಾಯಂದಿರ ಕಾರ್ಯಕ್ರಮದ ಬಳಿಕವೇ ಉಳಿದೆಲ್ಲಾ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಸಂಪ್ರದಾಯದಂತೆ ತಾಯಿ ಅನ್ನಪೂರ್ಣೇಶ್ವರ ತಾಯಿಗೆ ಉಡಿ ತುಂಬಲಾಯಿತು.</p>
ಪ್ರತಿವರ್ಷವೂ ಜಾತ್ರೆಯಲ್ಲಿ ತಾಯಂದಿರ ಕಾರ್ಯಕ್ರಮದ ಬಳಿಕವೇ ಉಳಿದೆಲ್ಲಾ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಸಂಪ್ರದಾಯದಂತೆ ತಾಯಿ ಅನ್ನಪೂರ್ಣೇಶ್ವರ ತಾಯಿಗೆ ಉಡಿ ತುಂಬಲಾಯಿತು.
<p>ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆ ಕಂಬ, ತೆಂಗಿನ ಗರಿ, ಕಬ್ಬಿನ ಗಳ, ತಳಿರು ತೋರಣಗಳಿಂದ ಹಂದರವನ್ನು ನಿರ್ಮಿಸಿ, ಉಡಿ ತುಂಬಲಾಯಿತು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ತಾಯಿ ಅನ್ನಪೂರ್ಣೇಶ್ವರಿಗೆ ಉಡಿ ತುಂಬುತ್ತಾರೆ. ಇದಲ್ಲದೆ ತಮ್ಮ ತಮ್ಮಲ್ಲಿಯೂ ಉಡಿತುಂಬಿಕೊಳ್ಳುವ ಸಂಪ್ರದಾಯ ಮಾಡಲಾಯಿತು.</p>
ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆ ಕಂಬ, ತೆಂಗಿನ ಗರಿ, ಕಬ್ಬಿನ ಗಳ, ತಳಿರು ತೋರಣಗಳಿಂದ ಹಂದರವನ್ನು ನಿರ್ಮಿಸಿ, ಉಡಿ ತುಂಬಲಾಯಿತು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ತಾಯಿ ಅನ್ನಪೂರ್ಣೇಶ್ವರಿಗೆ ಉಡಿ ತುಂಬುತ್ತಾರೆ. ಇದಲ್ಲದೆ ತಮ್ಮ ತಮ್ಮಲ್ಲಿಯೂ ಉಡಿತುಂಬಿಕೊಳ್ಳುವ ಸಂಪ್ರದಾಯ ಮಾಡಲಾಯಿತು.
<p>ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ 4.20ಕ್ಕೆ ಪಂಚ ಕಳಸೋತ್ಸವ ನಡೆಯಿತು.</p>
ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ 4.20ಕ್ಕೆ ಪಂಚ ಕಳಸೋತ್ಸವ ನಡೆಯಿತು.
<p>ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜ. 30ರಿಂದ ಮೂರು ದಿನಗಳ ಕಾಲ ಬೃಹತ್ ರಕ್ತದಾನ ಶಿಬಿರ ನಡೆಯುತ್ತದೆ. ಮಹಾವಿದ್ಯಾಲಯದಲ್ಲಿ ಶಿಬಿರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಹಮ್ಮಿಕೊಳ್ಳಲಾಗಿದೆ.</p>
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜ. 30ರಿಂದ ಮೂರು ದಿನಗಳ ಕಾಲ ಬೃಹತ್ ರಕ್ತದಾನ ಶಿಬಿರ ನಡೆಯುತ್ತದೆ. ಮಹಾವಿದ್ಯಾಲಯದಲ್ಲಿ ಶಿಬಿರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಹಮ್ಮಿಕೊಳ್ಳಲಾಗಿದೆ.
<p>ಕಳೆದ ವರ್ಷದ ಜಾತ್ರಾಮಹೋತ್ವದಲ್ಲಿ 602 ಜನರು ರಕ್ತದಾನ ಮಾಡಿದ್ದು, ಈ ವರ್ಷವೂ ಕೋವಿಡ್ಇರುವುದರಿಂದ ರಕ್ತದ ಬೇಡಿಕೆ ಅಧಿಕವಾಗಿರುವುದರಿಂದ ಅರ್ಹರು ಅಧಿಕ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕೋರಲಾಗಿದೆ.</p>
ಕಳೆದ ವರ್ಷದ ಜಾತ್ರಾಮಹೋತ್ವದಲ್ಲಿ 602 ಜನರು ರಕ್ತದಾನ ಮಾಡಿದ್ದು, ಈ ವರ್ಷವೂ ಕೋವಿಡ್ಇರುವುದರಿಂದ ರಕ್ತದ ಬೇಡಿಕೆ ಅಧಿಕವಾಗಿರುವುದರಿಂದ ಅರ್ಹರು ಅಧಿಕ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕೋರಲಾಗಿದೆ.
<p>ಗವಿಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಕಳೆಗಟ್ಟಿಲ್ಲವಾದರೂ ವಿದ್ಯುದ್ದೀಪಾಲಂಕಾರ ಕಂಗೊಳಿಸುವಂತೆ ಆಗಿದೆ. ಮೈದಾನವನ್ನು ಸ್ವಚ್ಛ ಮಾಡಲಾಗಿದ್ದು, ದಾಸೋಹಕ್ಕೂ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.</p>
ಗವಿಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಕಳೆಗಟ್ಟಿಲ್ಲವಾದರೂ ವಿದ್ಯುದ್ದೀಪಾಲಂಕಾರ ಕಂಗೊಳಿಸುವಂತೆ ಆಗಿದೆ. ಮೈದಾನವನ್ನು ಸ್ವಚ್ಛ ಮಾಡಲಾಗಿದ್ದು, ದಾಸೋಹಕ್ಕೂ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
<p>ಕಳಾಸರೋಹಣ, ಬಸವಪಟ ಹಾರಿಸುವ ಮೂಲಕ ಚಾಲನೆ</p>
ಕಳಾಸರೋಹಣ, ಬಸವಪಟ ಹಾರಿಸುವ ಮೂಲಕ ಚಾಲನೆ