Ramanashree Awards; ಗುರುರಾಜ ಕರಜಗಿ ಸೇರಿ ಸಾಧಕರಿಗೆ ರಮಣಶ್ರೀ ಗೌರವ
ಬೆಂಗಳೂರು(ನ.17) ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು 16ನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿಯನ್ನು (Ramanashree Awards) ಸಾಧಕರಿಗೆ ಪ್ರದಾನ ಮಾಡಿದರು.
ರಮಣಶ್ರೀ ಶರಣ ಉತ್ತೇಜನ ಶ್ರೇಣಿ ಪ್ರಶಸ್ತಿ ವಿಭಾಗದಲ್ಲಿ ಶರಣ ಸಾಹಿತ್ಯ ಸಂಶೋಧನೆ - ಡಾ. ಜಿ ಭಾಗ್ಯಮ್ಮ, ವಚನ ಸಂಗೀತ - ಸ್ಮಿತಾರಾವ್ ಬೆಳ್ಳೂರ್..ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ - ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಗೆ ನೀಡಿ ಗೌರವಿಸಲಾಯಿತು.
.ಯೋಗ್ಯರನ್ನ ಆಯ್ಕೆ ಮಾಡಿ ಪ್ರಶಸ್ತಿ ನೀಡಿದ್ದಾರೆ.. ಈ ಪ್ರಶಸ್ತಿ ಬಹಳ ಶ್ರೇಷ್ಠವಾದ ಪ್ರಶಸ್ತಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ, ಎಸ್.ಷಡಕ್ಷರಿ, ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಸಾಹಿತಿ ಮನು ಬಳಿಗಾರ ಉಪಸ್ಥಿತರಿದ್ದರು .
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು 16ನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿಯನ್ನು (Ramanashree Awards) ಸಾಧಕರಿಗೆ ಪ್ರದಾನ ಮಾಡಿದರು.
ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿಯನ್ನು ಡಾ. ಗುರುರಾಜ ಕರಜಗಿ (Dr Gururaj Karajagi) ಅವರಿಗೆ, ಶರಣ ಸಾಹಿತ್ಯ ಸಂಶೋಧನೆ - ಡಾ. ಶಾಂತಾ ಇಮ್ರಾಪುರ.. ಆಧುನಿಕ ವಚನ ರಚನೆ - ಡಾ. ಪ್ರದೀಪ್ ಕುಮಾರ್ ಹೆಬ್ರಿ.. ವಚನ ಸಂಗೀತ - ಡಾ. ನಂದಾ ಪಾಟೀಲ್ . ಶರಣ ಸಂಸ್ಕೃತ ಪ್ರಸಾರ ಸೇವ ಸಂಸ್ಥೆ - ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ನೀಡಿ ಗೌರವಿಸಲಾಯಿತು.