ಮೋದಿ ಜಾತಿ-ಮತ ಮೀರಿದ ವಿಶ್ವ ನಾಯಕ: ಡಿಸಿಎಂ ಅಶ್ವತ್ಥ್ ನಾರಾಯಣ್
ಬೆಂಗಳೂರು(ಸೆ.18):ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ-ಮತ ಎಲ್ಲವನ್ನೂ ಮೀರಿದ ವಿಶ್ವ ನಾಯಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುವುದು ಹೆಮ್ಮೆಯ ಸಂಗತಿ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.

<p>ಗುರುವಾರ ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಹಾಗೂ ಮೋದಿ ಬ್ರಿಗೇಡ್ ಪ್ರತಿಷ್ಠಾನ, ಮೋದಿ ಅವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>
ಗುರುವಾರ ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಹಾಗೂ ಮೋದಿ ಬ್ರಿಗೇಡ್ ಪ್ರತಿಷ್ಠಾನ, ಮೋದಿ ಅವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
<p>ಇಂದು ಭಾರತ ಜಗತ್ತಿನಲ್ಲಿಯೇ ಅತ್ಯಂತ ಪ್ರಬಲ ದೇಶವಾಗಿ ಹೊರಹೊಮ್ಮಿದ್ದು, ಇಡೀ ಜಗತ್ತನ್ನು ಭಾರತದ ನೆಲದಲ್ಲಿ ನಿಂತು ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮೋದಿ ಅವರ ದೂರದೃಷ್ಟಿಯೇ ಕಾರಣ. ಈ ದಿಕ್ಕಿನಲ್ಲಿ ದೇಶವನ್ನು ಬಲವಾಗಿ ಕಟ್ಟಿದ ಹೆಗ್ಗಳಿಕೆ ನಮ್ಮ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.</p>
ಇಂದು ಭಾರತ ಜಗತ್ತಿನಲ್ಲಿಯೇ ಅತ್ಯಂತ ಪ್ರಬಲ ದೇಶವಾಗಿ ಹೊರಹೊಮ್ಮಿದ್ದು, ಇಡೀ ಜಗತ್ತನ್ನು ಭಾರತದ ನೆಲದಲ್ಲಿ ನಿಂತು ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮೋದಿ ಅವರ ದೂರದೃಷ್ಟಿಯೇ ಕಾರಣ. ಈ ದಿಕ್ಕಿನಲ್ಲಿ ದೇಶವನ್ನು ಬಲವಾಗಿ ಕಟ್ಟಿದ ಹೆಗ್ಗಳಿಕೆ ನಮ್ಮ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.
<p>ಭಾರತ ಕೋವಿಡ್ ನಿರ್ವಹಿಸಿದ ರೀತಿ ಇಡೀ ಜಗತ್ತಿಗೆ ದಾರಿ ತೋರುವಂತೆ ಮಾಡಿದೆ. ಅಮೆರಿಕದಂತಹ ಬಲಷ್ಠ ದೇಶಗಳೇ ಕೋವಿಡ್ ನಿರ್ವಹಣೆಯಲ್ಲಿ ಸೋತಿವೆ. ಆದರೆ ಭಾರತ ಗೆದ್ದಿದೆ ಎಂದರು.</p>
ಭಾರತ ಕೋವಿಡ್ ನಿರ್ವಹಿಸಿದ ರೀತಿ ಇಡೀ ಜಗತ್ತಿಗೆ ದಾರಿ ತೋರುವಂತೆ ಮಾಡಿದೆ. ಅಮೆರಿಕದಂತಹ ಬಲಷ್ಠ ದೇಶಗಳೇ ಕೋವಿಡ್ ನಿರ್ವಹಣೆಯಲ್ಲಿ ಸೋತಿವೆ. ಆದರೆ ಭಾರತ ಗೆದ್ದಿದೆ ಎಂದರು.
<p>ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಸೇರಿ ಕೊರೋನಾ ವಾರಿಯರ್ಸ್ಗಳಿಗೆ ಆಹಾರ ಕಿಟ್ ಹಾಗೂ ಕೊರೋನಾ ಕಿಟ್ ವಿತರಿಸಿ, ಅಭಿನಂದಿಸಲಾಯಿತು. ಪ್ರತಿಭಾವಂತ, ಅಂಗವಿಕಲ ವಿದ್ಯಾರ್ಥಿಗಳನ್ನು ಇದೇ ವೇಳೆ ಅಭಿನಂದಿಸಲಾಯಿತು. ಪೌರ ಕಾರ್ಮಿಕರ ಪಾದಪೂಜೆ ಮಾಡಲಾಯಿತು. ಮಾಜಿ ಶಾಸಕ ಎಸ್.ಮುನಿರಾಜು ಇನ್ನಿತರರಿದ್ದರು.</p>
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಸೇರಿ ಕೊರೋನಾ ವಾರಿಯರ್ಸ್ಗಳಿಗೆ ಆಹಾರ ಕಿಟ್ ಹಾಗೂ ಕೊರೋನಾ ಕಿಟ್ ವಿತರಿಸಿ, ಅಭಿನಂದಿಸಲಾಯಿತು. ಪ್ರತಿಭಾವಂತ, ಅಂಗವಿಕಲ ವಿದ್ಯಾರ್ಥಿಗಳನ್ನು ಇದೇ ವೇಳೆ ಅಭಿನಂದಿಸಲಾಯಿತು. ಪೌರ ಕಾರ್ಮಿಕರ ಪಾದಪೂಜೆ ಮಾಡಲಾಯಿತು. ಮಾಜಿ ಶಾಸಕ ಎಸ್.ಮುನಿರಾಜು ಇನ್ನಿತರರಿದ್ದರು.