ಹಿರೇಕೆರೂರು: 4ನೇ ದಿನಕ್ಕೆ ಕಾಲಿಟ್ಟ ಬಿ.ಡಿ ಹಿರೇಮಠ ಉಪವಾಸ ಸತ್ಯಾಗ್ರಹ
ಹಾವೇರಿ(ಡಿ.06): ಉಡುಗಣಿ-ತಾಳಗುಂದ-ಹೊಸೂರು ನೀರಾವರಿ ಯೋಜನೆಗಾಗಿ ಭೂ ಸ್ವಾಧೀನ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ ಅವರು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
14

<p>ಜಿಲ್ಲೆಯ ಹಿರೇಕೆರೂರು ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡಡೆಸುತ್ತಿರುವ ಬಿ.ಡಿ. ಹಿರೇಮಠ </p>
ಜಿಲ್ಲೆಯ ಹಿರೇಕೆರೂರು ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡಡೆಸುತ್ತಿರುವ ಬಿ.ಡಿ. ಹಿರೇಮಠ
24
<p>ಧರಣಿ ನಿರತರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಾಜಿ ಯೋಧ ರಂಗಪ್ಪ ಬಡಪ್ಪಳವರ ಅಸ್ಪಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. </p>
ಧರಣಿ ನಿರತರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಾಜಿ ಯೋಧ ರಂಗಪ್ಪ ಬಡಪ್ಪಳವರ ಅಸ್ಪಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
34
<p>ನೀರಾವರಿ ಯೋಜನೆ 33ರ ಅಡಿಯಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ನೀರಾವರಿ ಯೋಜನೆಗಾಗಿ ಭೂ ಸ್ವಾಧೀನ ಸ್ಥಗಿತಗೊಳಿಸಬೇಕು. ಯೋಜನೆಗೆ ನಮ್ಮ ವಿರೋಧವಿಲ್ಲ. ರೈತರ ಜಮೀನು ಸ್ವಾಧೀನ ವಿಚಾರಕ್ಕಾಗಿ ವಿರೋಧವಿದೆ ಎಂದು ರೈತರು ಹೇಳಿದ್ದಾರೆ. </p>
ನೀರಾವರಿ ಯೋಜನೆ 33ರ ಅಡಿಯಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ನೀರಾವರಿ ಯೋಜನೆಗಾಗಿ ಭೂ ಸ್ವಾಧೀನ ಸ್ಥಗಿತಗೊಳಿಸಬೇಕು. ಯೋಜನೆಗೆ ನಮ್ಮ ವಿರೋಧವಿಲ್ಲ. ರೈತರ ಜಮೀನು ಸ್ವಾಧೀನ ವಿಚಾರಕ್ಕಾಗಿ ವಿರೋಧವಿದೆ ಎಂದು ರೈತರು ಹೇಳಿದ್ದಾರೆ.
44
<p>ನಾಳೆ ಅಥವಾ ನಾಡಿದ್ದರಿಂದ ಇನ್ನು ಅನೇಕ ರೈತರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ. ಯೋಜನೆ ಕೈಬಿಡದಿದ್ದ ಪಕ್ಷದಲ್ಲಿ ನಾನು ವಿಷ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಆ ವಿಷ ಸರ್ಕಾರದ ಸಾವಿನ ತೀರ್ಥವೆಂದು ಭಾವಿಸಿ ತೆಗೆದುಕೊಳ್ಳುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಬಿ.ಡಿ ಹಿರೇಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. </p>
ನಾಳೆ ಅಥವಾ ನಾಡಿದ್ದರಿಂದ ಇನ್ನು ಅನೇಕ ರೈತರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ. ಯೋಜನೆ ಕೈಬಿಡದಿದ್ದ ಪಕ್ಷದಲ್ಲಿ ನಾನು ವಿಷ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಆ ವಿಷ ಸರ್ಕಾರದ ಸಾವಿನ ತೀರ್ಥವೆಂದು ಭಾವಿಸಿ ತೆಗೆದುಕೊಳ್ಳುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಬಿ.ಡಿ ಹಿರೇಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Latest Videos