ನಿಖಿಲ್ಗೂ ಮುನ್ನ ಗ್ಯಾಂಗ್ ರೇಪ್ ಆರೋಪಿ ಪ್ರೀತಿಯಲ್ಲಿ ಬಿದ್ದಿದ್ದ ನುಸ್ರತ್!
ಬಂಗಾಳಿ ನಟಿ ಹಾಗೂ ಟಿಎಂಸಿ ಸಂಸದೆ ಇತ್ತೀಚೆಗೆ ತಮ್ಮ ಪ್ರೆಗ್ನೆನ್ಸಿ ಹಾಗೂ ಗಂಡ ನಿಖಿಲ್ ಜೈನ್ರಿಂದ ದೂರ ಸರಿಯುವ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. 2019 ರಲ್ಲಿ ನುಸ್ರತ್ ನಿಖಿಲ್ರವರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಕೆಂಪು ಬಣ್ಣದ ಸೀರೆ ಹಾಗೂ ಹಣೆಗೆ ಕುಂಕುಮವಿಟ್ಟು ಸಂಸತ್ತಿಗೆ ತಲುಪಿದಾಗ ಅವರನ್ನು ನೊಡಿದ ಜನ ಅಚ್ಚರಿಗೀಡಾಗಿದ್ದರು. ಆದರೀಗ ಅವರು ತಾನು ಪತಿಯೊಂದಿಗಿಲ್ಲ ಹಾಗೂ ತಮ್ಮ ಮದುವೆ ಮಾನ್ಯವಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಎಲ್ಲಾ ವಿಚಾರಗಳ ಮಧ್ಯೆ ಇದೀಗ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದೆ. ಹೌದು ಮಾಧ್ಯಮಗಳಲ್ಲಿ ನುಸ್ರತ್ಗೆ ಮದುವೆಗೂ ಮೊದಲು ನುಸ್ರತ್ಗೆ ಗ್ಯಾಂಗ್ ರೇಪ್ ಆರೋಪಿ ಜೊತೆ ಸಂಬಂಧವಿತ್ತು ಎಂಬ ವರದಿಗಳು ಹರಿದಾಡುತ್ತಿವೆ. ಇಬ್ಬರೂ ಮದುವೆಯಾಗುವ ಪ್ಲಾನ್ ಕೂಡಾ ಮಾಡಿದ್ದರು ಎನ್ನಲಾಗಿದೆ.
2012ರಲ್ಲಿ ನುಸ್ರತ್ ಹೆಸರು ಪ್ರಕರಣವೊಂದರಲ್ಲಿ ತಳುಕು ಹಾಕಿತ್ತು. ಪಾರ್ಕ್ ಸ್ಟ್ರೀಟ್ನಲ್ಲಿ ಚಲಿಸುತ್ತಿದ್ದ ವಾಹನದಲ್ಲಿ ಆಂಗ್ಲೋ ಇಂಡಿಯನ್ ಮಹಿಳೆಯೊಬ್ಬಳ ಅತ್ಯಾಚಾರ ನಡೆಸಿತ್ತು. ಈ ಪ್ರಕರಣದಲ್ಲಿ ಕಾದರ್ ಖಾನ್ ಜೊತೆ ಇತರ ಐದು ಆರೋಪಿಗಳ ಹೆಸರು ಕೇಳಿ ಬಂದಿತ್ತು. ಅಂದು ನುಸ್ರತ್ ಕಾದರ್ ಖಾನ್ ಗರ್ಲ್ಫ್ರೆಂಡ್ ಆಗಿದ್ದರು. ಈ ಘಟನೆ ನಡೆಯುವ ಕೆಲ ದಿನಗಳ ಹಿಂದಷ್ಟೇ ಇಬ್ಬರೂ ಭೇಟಿಯಾಗಿದ್ದರು ಹಾಗೂ ಇವರ ಸಂಬಂಧ ಮುಂದುವರೆದಿತ್ತು.
ಇನ್ನು ನುಸ್ರತ್ ಕಾದರ್ ಖಾನ್ ಜೊತೆ ಮದುವೆಯಾಗಲೂ ಸಿದ್ಧತೆ ನಡೆಸಿದ್ದರೆಂದು ವರದಿಗಳು ಹೇಳಿವೆ. ಆದರೆ ಈ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು. ಈ ಒಪ್ರಕರಣ ಸಂಬಂಧ ಪೊಲೀಸರು ನುಸ್ರತ್ರನ್ನೂ ವಿಚಾರಣೆಗೊಳಪಡಿಸಿದ್ದರು. ಘಟನೆ ಬಳಿಕ ಅವರು ಕಾದರ್ ಖಾನ್ರನ್ನು ಯಾವತ್ತೂ ಭೇಟಿಯಾಗಿಲ್ಲ ಎನ್ನಲಾಗಿದೆ. ಆದರೆ ಪೊಲೀಸ್ ತನಿಖೆಯಲ್ಲಿ ಇವರಿಬ್ಬರೂ ಮುಂಬೈನಲ್ಲಿ ರುಂ ಒಂದನ್ನು ಬಾಡಿಗೆ ಪಡೆದಿದ್ದರೆನ್ನಲಾಗಿದೆ.
ಈ ಘಟನೆ ಬಳಿಕ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನುಸ್ರತ್ ಇದು ತನ್ನ ಜೀವನದ ಅತ್ಯಂತ ಕೆಟ್ಟ ಘಳಿಗೆ ಎಂದು ಹೇಳಿದ್ದರು. ಅಂದು ಮಾನಸಿಕವಾಗಿ ನನ್ನ ಅತ್ಯಾಚಾರವಾದಂತೆ ಭಾಸವಾಗುತ್ತಿದೆ ಎಂದು ಹೇಳಿದ್ದರು. ಇನ್ನು ಈ ಘಟನೆ ಬಳಿಕ ನುಸ್ರತ್ರನ್ನು ಬಂಧಿಸಬೇಕೆಂಬ ಕೂಗೆದ್ದಿತ್ತು.
ನುಸ್ರತ್ ಜಹಾಂ ಹೆಸರು ಅನೇಕ ವಿವಾದಗಳಲ್ಲಿ ಕೇಳಿ ಬಂದಿದೆ. ರಾಜಕೀಯಕ್ಕೆ ಬಂದ ಬಳಿಕವೂ ಅವರು ಅನೇಕ ಬೋಲ್ಡ್ ಹಾಗೂ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದರಿಂದ ವಿವಾದಗಳು ಕೇಳಿ ಬಂದಿದ್ದವು. ನೀವು ಸಂಸದೆ ಎನ್ನುವುದಕ್ಕೆ ನಾಚಿಕೆಯಾಗಬೇಕು ಎನ್ನುವ ಜೊತೆ ಅನೇಕ ಕಮೆಂಟ್ಗಳು ಬಂದಿಇದ್ದವು.
ಇನ್ನು ವರ್ಷದ ಹಿಂದೆ ನುಸ್ರತ್ ಸೋಶಿಯಲ್ ಮೀಡಿಯಾದಲ್ಲಿ ದುರ್ಗೆಯ ಅವತಾರದಲ್ಲಿ ತೆಗೆಸಿಕೊಂಡಿದ್ದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ವಿಚಾರವಾಗಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಜೀವ ಬೆದರಿಕೆಯೂ ಹಾಕಲಾಗಿತ್ತು. ಈ ಬಗ್ಗೆ ದೂರು ಕೂಡಾ ದಾಖಲಿಸಿದ್ದರು. ಅಂತರ್ ಧರ್ಮೀಯ ವಿವಾಹವಾಗಿದ್ದ ನುಸ್ರತ್ ಭಾರೀ ಟ್ರೋಲ್ ಆಗಿದ್ದರು.
ಸದ್ಯ ಅವರ ವೈವಾಹಿಕ ಬದುಕು ಅಪಾಯದ ಹಂತದಲ್ಲಿದೆ. ನುಸ್ರತ್ ಗರ್ಭಿಣಿಯಾಗಿದ್ದಾರೆ. ಆದರೆ ಅವರ ಗಂಡ ನಿಖಿಲ್ ಜೈನ್ ಮಾತ್ರ ನಾವು ಆರು ತಿಂಗಳಿನಿಂದ ಒಟ್ಟಿಗೆ ಇಲ್ಲ. ಹೀಗಿರುವಾಗ ಮಗು ನನ್ನದು ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನುಸ್ರತ್ ವಿರುದ್ಧ ದೂರು ದಾಖಲಿಸಿದ್ದು, ಜುಲೈನಲ್ಲಿ ವಿಚಾರಣೆ ನಡೆಯಲಿದೆ.
ಯಾವಾಗಿನಿಂದ ನುಸ್ರತ್ಗೆ ನಾನೆಂದರೆ ಇಷ್ಟವಿಲ್ಲ, ಬೇರೆಯವರೊಂದಿಗೆ ಇರಲು ಇಷ್ಟ ಪಡುತ್ತಾರೆಂದು ತಿಳಿಯಿತೋ ಆಗಲೇ ದೂರವಾದೆ. ಇನ್ಮುಂದೆ ನುಸ್ರತ್ ಜೊತೆ ಯಾವುದೇ ಸಂಬಂಧ ಇಟ್ಟಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.
ನುಸ್ರತ್ ಜಹಾಂ ಕೂಡಾ ಮದುವೆ ಬಗ್ಗೆ ಮಾತನಾಡುತ್ತಾ ವಿದೇಶೀ ನೆಲದಲ್ಲಿದ್ದ ಕಾರಣ, ಹಾಗೂ ಟರ್ಕಿ ಮ್ಯಾರೇಜ್ ರೆಗ್ಯುಲೇಷನ್ ಅನ್ವಯ ಈ ಮದುವೆ ಮಾನ್ಯವಲ್ಲ. ಅಲ್ಲದೇ ಇದೊಂದು ಅಪೂರ್ಣ(ಎರಡು ವಿಭಿನ್ನ ಧರ್ಮದವರ ನಡುವೆ ನಡೆದ) ಮದುವೆ. ಹೀಗಾಗಿ ಇದಕ್ಕೆ ಭಾರತದಲ್ಲಿ ಶಾಸನಬದ್ಧ ಮಾನ್ಯತೆ ನೀಡಬೇಕಾದ ಅಗತ್ಯವಿತ್ತು. ಆದರೆ ಹಾಗಾಗಲಿಲ್ಲ ಎಂದಿದ್ದಾರೆ.
ನುಸ್ರತ್ ಜಹಾಂ ಕೂಡಾ ಮದುವೆ ಬಗ್ಗೆ ಮಾತನಾಡುತ್ತಾ ವಿದೇಶೀ ನೆಲದಲ್ಲಿದ್ದ ಕಾರಣ, ಹಾಗೂ ಟರ್ಕಿ ಮ್ಯಾರೇಜ್ ರೆಗ್ಯುಲೇಷನ್ ಅನ್ವಯ ಈ ಮದುವೆ ಮಾನ್ಯವಲ್ಲ. ಅಲ್ಲದೇ ಇದೊಂದು ಅಪೂರ್ಣ(ಎರಡು ವಿಭಿನ್ನ ಧರ್ಮದವರ ನಡುವೆ ನಡೆದ) ಮದುವೆ. ಹೀಗಾಗಿ ಇದಕ್ಕೆ ಭಾರತದಲ್ಲಿ ಶಾಸನಬದ್ಧ ಮಾನ್ಯತೆ ನೀಡಬೇಕಾದ ಅಗತ್ಯವಿತ್ತು. ಆದರೆ ಹಾಗಾಗಲಿಲ್ಲ ಎಂದಿದ್ದಾರೆ.
ನುಸ್ರತ್ ಜಹಾಂ, ಬೋಡ್ರಮ್ ಟೌನ್ನ ಉದ್ಯಮಿ ನಿಖಿಲ್ ಜೈನ್ ಜೊತೆ 2019ರ ಜೂನ್ 19 ರಂದು ಮದುವೆಯಾಗಿದ್ದರು. ಇಬ್ಬರೂ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಈ ಮೂರೂ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದರು. ಅವರ ಗಂಡ ನಿಖಿಲ್ ಜೈನ್ ಕೋಲ್ಕತ್ತಾದ ಪ್ರಸಿದ್ಧ ಜವಳಿ ಉದ್ಯಮಿಯಾಗಿದ್ದಾರೆ. ಇನ್ನು ನುಸ್ರತ್ ಅವರ ಟೆಕ್ಸ್ಟೈಲ್ ಕಂಪನಿ 'ರಂಗೋಲಿ'ಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಬಂಗಾಳಿ ನಟಿಯಾಗಿರುವ ನುಸ್ರತ್ ಜಹಾಂ, 2019ರ ಲೊಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಂಗಾಳದ ಬಶೀರ್ಹಾಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನುಸ್ರತ್ ಸುಮಾರು 3.3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ನಟಿಯರಾಗಿ, ರಾಜಕೀಯಕ್ಕೆ ಕಾಲಿಟ್ಟಿದ್ದ ನುಸ್ರತ್ ಜಹಾಂ ಹಾಗೂ ಮಿಮಿ ಚಕ್ರವರ್ತಿ ಸಂಸತ್ತಿನಲ್ಲಿ ಬಂಗಾಳಿ ಭಾಷೆಯಲ್ಲಿ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಪ್ರತಿಜ್ಞಾ ವಿಧಿ ಬಳಿಕ ಜಯ್ ಹಿಂದ್, ವಂದೇ ಮಾತರಂ ಹಾಗೂ ಜಯ್ ಬೆಂಗಾಲ್ ಎಂದೂ ಹೇಳಿದ್ದರು.
2011 ರಲ್ಲಿ ನುಸ್ರತ್, ಬಂಗಾಲಿ ಫಿಲಂ 'ಶೋತ್ರು' ಮೂಲಕ ತಮ್ಮ ಸಿನಿ ವೃತ್ತಿ ಆರಂಭಿಸಿದ್ದರು. ಇದಾದ ಬಳಿಕ ಅವರು ಖೋಕಾ 420, ಖಿಲಾಡಿ, ಯೋದ್ಧಾ: ದ ವಾರಿಯರ್, ಜಮಾಯಿ 420, ಕೆಲೋರ್ ಕೀರ್ತಿ, ಲವ್ ಎಕ್ಸ್ಪ್ರೆಸ್ ಹಾಗೂ ನಕಾಬ್ನಂತಹ ಸಿನಿಮಾಗಳಲ್ಲಿ ನಟಿಸಿದ್ದರು.