ಮಸೂದೆ ಹಿಂಪಡೆಯಲ್ಲ, ಸುಪ್ರೀಂ ಕೋರ್ಟ್ಗೆ ಹೋಗಿ; ಈ ಮಾತಿನಿಂದ ವಿಫಲವಾಯ್ತಾ ಸಂಧಾನ?
ಕೇಂದ್ರ ಸರ್ಕಾರ ಮತ್ತು ರೈತರ ಜೊತೆಗಿನ 7ನೇ ಸುತ್ತಿನ ಸಂಧಾನ ವಿಫಲಗೊಂಡಿದೆ. ಈ ಮೂಲಕ ರೈತ ಪ್ರತಿಭಟನೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕೇಂದ್ರ ಸಚಿವರು ಹಾಗೂ 41 ರೈತ ಸಂಘಟನೆಗಳ ಮುಖಂಡರ ನಡೆಸಿದ ಮಾತುಕತೆ ವಿಫಲಕ್ಕೆ ಕಾರಣವಾದ ಪ್ರಮುಖ ಅಂಶ ಏನು ? ಇಲ್ಲಿದೆ ವಿವರ.

<p>ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ 7ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಇದಕ್ಕೆ ಕಾರಣವೇನು ಅನ್ನೋ ಕುತೂಹಲ ಸಭೆಯ ಪ್ರಮುಖಾಂಶಗಳು ಉತ್ತರ ನೀಡುತ್ತಿದೆ.</p>
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ 7ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಇದಕ್ಕೆ ಕಾರಣವೇನು ಅನ್ನೋ ಕುತೂಹಲ ಸಭೆಯ ಪ್ರಮುಖಾಂಶಗಳು ಉತ್ತರ ನೀಡುತ್ತಿದೆ.
<p>ರೈತರು ಕೇಂದ್ರದ 3 ಕೃಷಿ ಮಸೂದೆ ಹಿಂಪಡೆಯಲೇಬೇಕು. ಅಲ್ಲಿವರೆಗೆ ಹೋರಾಟ ಮುಂದುವರಿಯಲಿದೆ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದಿದೆ.</p>
ರೈತರು ಕೇಂದ್ರದ 3 ಕೃಷಿ ಮಸೂದೆ ಹಿಂಪಡೆಯಲೇಬೇಕು. ಅಲ್ಲಿವರೆಗೆ ಹೋರಾಟ ಮುಂದುವರಿಯಲಿದೆ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದಿದೆ.
<p>ಸಾಕಷ್ಟು ಚರ್ಚಿಸಿ, ತಜ್ಞರು, ಕೃಷಿ ಸಾಧಕರು ಸೇರಿದಂತೆ ಸಮಿತಿ ರಚಿಸಿದ ವರದಿ ಆಧರಿಸಿ ಮಸೂದೆ ತಂದಿದ್ದೇವೆ. ಇದರಲ್ಲಿನ ತಪ್ಪುಗಳನ್ನು ಹೇಳಿ, ತಿದ್ದುಪಡಿ ಮಾಡಲು ಕೇಂದ್ರ ತಯಾರಿದೆ. ಇದರ ಬದಲು ಸಂಪೂರ್ಣ ಮಸೂದೆ ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.</p>
ಸಾಕಷ್ಟು ಚರ್ಚಿಸಿ, ತಜ್ಞರು, ಕೃಷಿ ಸಾಧಕರು ಸೇರಿದಂತೆ ಸಮಿತಿ ರಚಿಸಿದ ವರದಿ ಆಧರಿಸಿ ಮಸೂದೆ ತಂದಿದ್ದೇವೆ. ಇದರಲ್ಲಿನ ತಪ್ಪುಗಳನ್ನು ಹೇಳಿ, ತಿದ್ದುಪಡಿ ಮಾಡಲು ಕೇಂದ್ರ ತಯಾರಿದೆ. ಇದರ ಬದಲು ಸಂಪೂರ್ಣ ಮಸೂದೆ ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.
<p>ಮಸೂದೆ ಹಿಂಪಡೆಯುವುದೇ ನಿಮ್ಮ ಬೇಡಿಕೆಯಾಗಿದ್ದರೆ ಸುಪ್ರೀಂ ಕೋರ್ಟ್ಗೆ ಹೋಗಿ ಎಂದು ಕೃಷಿ ಸಚಿ ನರೇಂದ್ರ ಸಿಂಗ್ ತೋಮರ್ ಸಭೆಯಲ್ಲಿ ಹೇಳಿದ್ದಾರೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮುಖಂಡ ಸರ್ವಾನ್ ಸಿಂಗ್ ಪಂದೆರ್ ಹೇಳಿದ್ದಾರೆ.</p>
ಮಸೂದೆ ಹಿಂಪಡೆಯುವುದೇ ನಿಮ್ಮ ಬೇಡಿಕೆಯಾಗಿದ್ದರೆ ಸುಪ್ರೀಂ ಕೋರ್ಟ್ಗೆ ಹೋಗಿ ಎಂದು ಕೃಷಿ ಸಚಿ ನರೇಂದ್ರ ಸಿಂಗ್ ತೋಮರ್ ಸಭೆಯಲ್ಲಿ ಹೇಳಿದ್ದಾರೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮುಖಂಡ ಸರ್ವಾನ್ ಸಿಂಗ್ ಪಂದೆರ್ ಹೇಳಿದ್ದಾರೆ.
<p>ಸಭೆ ನಡುವೆ ಭೋಜನಕ್ಕೆ ರೈತ ಮುಖಂಡರನ್ನು ಆಹ್ವಾನಿಸಲಾಯಿತು. ಆದರೆ ರೈತರು ನಿಮ್ಮ ಊಟ ನಿಮಗೆ, ನಾವು ತಂದಿರುವ ಊಟ ನಮಗೆ ಎಂದು ಸಚಿವರ ಜೊತೆ ಭೋಜನ ಸವಿಯಲು ನಿರಾಕರಿಸಿದ್ದಾರೆ.</p>
ಸಭೆ ನಡುವೆ ಭೋಜನಕ್ಕೆ ರೈತ ಮುಖಂಡರನ್ನು ಆಹ್ವಾನಿಸಲಾಯಿತು. ಆದರೆ ರೈತರು ನಿಮ್ಮ ಊಟ ನಿಮಗೆ, ನಾವು ತಂದಿರುವ ಊಟ ನಮಗೆ ಎಂದು ಸಚಿವರ ಜೊತೆ ಭೋಜನ ಸವಿಯಲು ನಿರಾಕರಿಸಿದ್ದಾರೆ.
<p>ಸಭೆ ವಿಫಲಗೊಂಡ ಕಾರಣ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಕಿಸಾನ್ ಪರೇಡ್ ಮತ್ತಷ್ಟು ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿದೆ. ಇದಕ್ಕಾಗಿ ಯುವಕರಿಗೆ ಕರೆ ನೀಡಿದೆ.</p>
ಸಭೆ ವಿಫಲಗೊಂಡ ಕಾರಣ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಕಿಸಾನ್ ಪರೇಡ್ ಮತ್ತಷ್ಟು ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿದೆ. ಇದಕ್ಕಾಗಿ ಯುವಕರಿಗೆ ಕರೆ ನೀಡಿದೆ.
<p>3 ಕೃಷಿ ಮಸೂದೆಗಳಲ್ಲಿರುವ ತಪ್ಪುಗಳನ್ನು ಹೇಳಲು ರೈತರು ಮುಂದಾಗುತ್ತಿಲ್ಲ. ಬದಲಾಗಿ ಸಂಪೂರ್ಣ ಮಸೂದೆ ವಾಪಸ್ ಬೇಡಿಕೆ ಮುಂದಿಡುತ್ತಿದ್ದಾರೆ. ಇತ್ತ ಕೇಂದ್ರ ಮಸೂದೆ ವಾಪಸ್ ಪಡೆಯಲು ಸಾಧ್ಯವೇ ಇಲ್ಲ ಎಂದಿದೆ. ಹೀಗಾಗಿ ಸಂಧಾನ ವಿಫಲಗೊಂಡಿದೆ.</p>
3 ಕೃಷಿ ಮಸೂದೆಗಳಲ್ಲಿರುವ ತಪ್ಪುಗಳನ್ನು ಹೇಳಲು ರೈತರು ಮುಂದಾಗುತ್ತಿಲ್ಲ. ಬದಲಾಗಿ ಸಂಪೂರ್ಣ ಮಸೂದೆ ವಾಪಸ್ ಬೇಡಿಕೆ ಮುಂದಿಡುತ್ತಿದ್ದಾರೆ. ಇತ್ತ ಕೇಂದ್ರ ಮಸೂದೆ ವಾಪಸ್ ಪಡೆಯಲು ಸಾಧ್ಯವೇ ಇಲ್ಲ ಎಂದಿದೆ. ಹೀಗಾಗಿ ಸಂಧಾನ ವಿಫಲಗೊಂಡಿದೆ.
<p>ನವೆಂಬರ್ 26 ರಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.</p>
ನವೆಂಬರ್ 26 ರಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.