ಸಂಗೀತ ಚಿಕಿತ್ಸೆ : ಮಾನಸಿಕ ಖಿನ್ನತೆ, ಚಿಂತೆ, ಒತ್ತಡಕ್ಕೆ ದಿವ್ಯೌಷಧ
ಕೊರೋನಾ ಎಂಬ ಸಾಂಕ್ರಾಮಿಕ ರೋಗವು ಜನರ ಮಧ್ಯೆ ಭಯ ಹುಟ್ಟಿಸಿದೆ . ಈ ಭಯ ಮನುಷ್ಯ ಮನುಷ್ಯರ ನಡುವೆ ಒಂದು ಬೇಲಿ ಹಾಕುವಂತೆ ಮಾಡಿದರ ಪರಿಣಾಮ ಮನುಷ್ಯನ ಆರೋಗ್ಯದ ಮೇಲೆ ಮನಸ್ಸಿನ ಮೇಲು ಬಹಳ ಪರಿಣಾಮ ಉಂಟುಮಾಡಿದೆ . ಹೀಗಾಗಿ ಅನೇಕ ಕಡೆ ಕೇಳಿ ಬರುತ್ತಿರುವುದು ಕೊರೊನಾದಿಂದಾಗಿ ನಾವು ಮಾನಸಿಕ ಖಿನ್ನತೆ ಗೆ ಒಳಗಾಗಿದ್ದೇವೆ ಎಂದು .
ಇದು ಐಟಿ ಕಂಪೆನಿ ಗಳಲ್ಲಿ ಕೆಲಸ ಮಾಡುವವರಲ್ಲದೆ , ಮಕ್ಕಳಲ್ಲಿ , ಹೆಂಗಸರಲ್ಲಿ , ಗಂಡಸರಲ್ಲಿ , ಹೆಚ್ಚಾಗಿ ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತಿದೆ . ಮಾನಸಿಕ ಖಿನ್ನತೆಗೆ ಹಲವು ಕಾರಣಗಳು ಇವೆ . ಅದರಲ್ಲಿ ಸಂಸಾರದಲ್ಲಿ ನೆಮ್ಮೆದಿ ಇಲ್ಲದಿರುವುದು , ಆಫೀಸ್ ಕೆಲಸದ ಒತ್ತಡ ,ಆರ್ಥಿಕ ಒತ್ತಡ ಇದರಿಂದಾಗಿ ಕೋಪ, ಉದ್ವೇಗ , ಮೌನವಾಗಿ ಇರುವುದು , ಮಾಡಿದ ಕೆಲಸ ಮಾಡುತ್ತಲೇ ಇರುವುದು ಹೀಗೆ....
ಹತ್ತು ಹಲವು ಕಾರಣಗಳು ಮನುಷ್ಯನ ಮನಸ್ಸಿನ ಮೇಲೆ ಒತ್ತಡ ಉಂಟುಮಾಡಿ ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡುತ್ತದೆ . ಇದರಿಂದ ಹೊರಬರಲು ಅನೇಕ ಮಾರ್ಗಗಳಿವೆ . ಅತ್ಯಂತ ಸರಳ ಮಾರ್ಗ ಸಂಗೀತ ಕೇಳುವುದು. ಇದು ಸರಳವೂ ಹೌದು , ಈಗ ಹೆಚ್ಚು ಪ್ರಚಲಿತದಲ್ಲಿರುವ ಚಿಕಿತ್ಸೆ ಕೂಡ ಹೌದು . ಈ ಚಿಕಿತ್ಸೆ ಗೆ ಒಳಪಡುವುದು ಎಂದರೆ ಸಂಗೀತ ಕೇಳುವುದು .
ಇದು ಕರ್ನಾಟಕ ಶಾಸ್ತ್ರಿಯ ಸಂಗೀತ ವಿರಬಹುದು, ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ವಿರಬಹುದು . ಇದರ ಜೊತೆ ಯೋಗ ಕೂಡ ಸಂಗೀತ ಚಿಕಿತ್ಸೆಯ ಒಂದು ಭಾಗವಾಗಿದೆ .
ಉದಾಹರಣೆಗೆ ಅಕ್ಬರ್ ನ ದರ್ಬಾರ್ ನಲ್ಲಿ ಕೆಲಸಗಳು ಬಹಳ ಹೊತ್ತಿನವರೆಗೂ ಇರುತಿತ್ತಂತೆ ಹೀಗಾಗಿ ಕೆಲಸದ ಒತ್ತಡ ಕಡಿಮೆ ಮಾಡಲು ತಾನ್ಸೇನ್ ರಾತ್ರಿ ಹೊತ್ತು ಕೆಲಸ ಮುಗಿದ ಬಳಿಕ ತಾನೇ ರಚಿಸಿದ ಧರ್ಬಾರ್ ಕಾನಡ ರಾಗ ಹಾಡುತಿದ್ದನಂತೆ . ಇದು ಮನಸ್ಸಿನ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ವಿಶ್ರಾಂತಿ ನೀಡುತ್ತಿತ್ತಂತೆ.
ಇತೀಚೆಗೆ ಫೇಸ್ಬುಕ್ ನಲ್ಲಿ ನೋಡಿದ ವೀಡಿಯೊದಲ್ಲಿ ನಟಿ ಶಿಲ್ಪ ಶೆಟ್ಟಿ ಅವರು ವೇದಗಳನ್ನು ಹಾಕಿ ಯೋಗ ಅಭ್ಯಾಸ ಮಾಡುತ್ತಿದ್ದರು .ಇದು ನನ್ನಲ್ಲಿ ಧನಾತ್ಮಕ ಶಕ್ತಿ ಯನ್ನು ಉಂಟು ಮಾಡುತ್ತಿದೆ ಎಂದಿದ್ಧಾರೆ .ಹೀಗೆ ನಾವು ಕೂಡ ನಮ್ಮ ಮನಸ್ಸಿಗೆ ಧನಾತ್ಮಕ ಆಹಾರ ಕೊಡುತ್ತಿದ್ದರೆ ಖಂಡಿತ ವಾಗಿಯೂ ನಾವು ಮಾನಸಿಕ ಖಿನ್ನತೆ ಯಿಂದ ಹೊರ ಬರಬಹುದು .
ಮಾನಸಿಕ ಸದೃಢತೆಗೆ ಸರಳ ಸುಲಭ ಉಪಾಯಗಳು ,
ಯಾವುದೇ ಶಾಸ್ತ್ರೀಯ ಸಂಗೀತ ಆಲಿಸಿ , ಹಾಡಿ , ಕೇಳುತ್ತ ಧ್ಯಾನ ಮಾಡಿ , ನೃತ್ಯ ಮಾಡಿ , ಇವೆಲ್ಲ ಮನಸ್ಸಿಗೆ ಮುದ ನೀಡುತ್ತದೆ . ಮನಸಿನ ದುಗುಡ ದೂರವಾಗುತ್ತದೆ.
ಶಾಸ್ತ್ರೀಯ ಸಂಗೀತದಲ್ಲಿ ರಾಗಗಳಿಗೆ ಬಹಳ ಪ್ರಾಮುಖ್ಯತೆ ಇದೆ .ಬೆಳಗ್ಗೆ ಬಿಲಹರಿ ಬೈರವಿ ತೋಡಿ ಹಾಡಿದರೆ ಸಂಜೆ ಯಮನ್ , ಕಲ್ಯಾಣಿ , ಕಾನಡ ಹಾಡಿ ಹೀಗೆ ಹಲವು ರಾಗಗಳು ರಕ್ತದ ಒತ್ತಡ , ಶ್ವಾಸಕೋಶ ಸಂಬಂಧಿ ಕಾಯಿಲೆ ಗಳಿಗೆ ಉತ್ತಮ ಎನ್ನುತ್ತಾರೆ .
ಮಕ್ಕಳ ಏಕಾಗ್ರತೆಗೆ ಹೆಚ್ಚಿಸಲು ಸಂಗೀತ ಬಹಳ ಉಪಕಾರಿ .ಹಾಗಾಗಿ ಮಕ್ಕಳಿಗೆ ಸಂಗೀತ ಕಲಿಸಿ ಕಲಿಯಲು ಉತ್ತೇಜಿಸಿ , ಇದರಲ್ಲಿ ವಾದ್ಯ ಸಂಗೀತ ಹಾಡುಗಾರಿಕೆ ಎರಡನ್ನು ಕಲಿಸಬಹುದು.
ನಿದ್ದೆ ಸಮಸ್ಯೆ ಇರುವವರು ಹಾಡು ಕೇಳಿ ನಿದ್ದೆ ತಾನಾಗಿ ಬರುತ್ತದೆ . ಇಂತಹ ಸರಳ ಉಪಾಯಗಳು ನಮ್ಮನ್ನ ಸದೃಢರನ್ನಾಗಿ ಆರೋಗ್ಯವಂತರನ್ನಾಗಿ ಇಡಲು ಬಹಳ ಸಹಕಾರಿ .
ಐಟಿ ಕಂಪನಿ ಗಳಲ್ಲಿ ಕೆಲಸ ಮಾಡುವವರು ಕೆಲಸಗಳ ಒತ್ತಡ ಕಡಿಮೆ ಮಾಡಲು ಕೆಲಸದ ನಡುವೆ ಐದರಿಂದ ಹತ್ತು ನಿಮಿಷಗಳ ಕಾಲ ವಿರಾಮ ಮಾಡಿಕೊಂಡು ಹಾಡು ಕೇಳಿ ಸ್ವಲ್ಪ ಮಟ್ಟಿಗಾದರು ಮಸ್ಸಿಗೆ ಒತ್ತಡ ಕಡಿಮೆ ಆಗುತ್ತದೆ.
ಗರ್ಭಿಣಿ ಹೆಣ್ಣು ಹೆಚ್ಚು ಸಂಗೀತ ಕೇಳಬೇಕು . ಇದು ಮಗುವಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು . ತಾಯಿಯ ಮನಸ್ಸು ಭಯದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ.