MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಆರೋಗ್ಯವಾಗಿರಲು ಇವಿಷ್ಟನ್ನು ಮಾಡಿದರೆ ಸಾಕು

ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಆರೋಗ್ಯವಾಗಿರಲು ಇವಿಷ್ಟನ್ನು ಮಾಡಿದರೆ ಸಾಕು

ಬೇಸಿಗೆ (Summer) ಕಾಲವು ಮಧುಮೇಹ (Diabetes) ರೋಗಿಗಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಸಂಶೋಧನೆಯು ಸೂಚಿಸುತ್ತದೆ. ಈ ದಿನಗಳಲ್ಲಿ, ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟ (Sugar Level)ವನ್ನು ನಿಯಂತ್ರಣದಲ್ಲಿಡಲು ಕಷ್ಟಪಡಬಹುದು. ಹೀಗಾದಾಗಮ ಏನು ಮಾಡಬಹುದು  ?

2 Min read
Suvarna News
Published : Apr 14 2022, 02:13 PM IST| Updated : Apr 14 2022, 02:14 PM IST
Share this Photo Gallery
  • FB
  • TW
  • Linkdin
  • Whatsapp
18

ಬಿಸಿ ಹವಾಮಾನದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಸಂಭಾವ್ಯ ರೋಗಲಕ್ಷಣಗಳ ಬಗ್ಗೆ ಗಮನ ಹರಿಸುವುದು ಮುಖ್ಯ ಎಂದು ತಜ್ಞರು ನಂಬುತ್ತಾರೆ. ಈ ದಿನಗಳಲ್ಲಿ ಸಕ್ಕರೆ ರೋಗಿಗಳು ಸಾಮಾನ್ಯ ಜನರಿಗಿಂತ ವೇಗವಾಗಿ ನಿರ್ಜಲೀಕರಣಕ್ಕೆ(Dehydration) ಒಳಗಾಗುವ ಹೆಚ್ಚಿನ ಅಪಾಯದಲ್ಲಿದ್ದಾರೆ.

28

ಮಧುಮೇಹ ರೋಗಿಗಳಲ್ಲಿ, ನಿರ್ಜಲೀಕರಣದ ಸಮಸ್ಯೆ ಇದ್ದಾಗ ರೋಗಲಕ್ಷಣಗಳ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ, ಅವುಗಳಲ್ಲಿ ಆಯಾಸ, ಮೂತ್ರವಿಸರ್ಜನೆಯಲ್ಲಿ ಇಳಿಕೆ, ಗಾಢ ಬಣ್ಣದ ಮೂತ್ರವಿಸರ್ಜನೆ, ಕಡಿಮೆ ರಕ್ತದೊತ್ತಡ(Low BP), ಹೆಚ್ಚಿದ ಹೃದಯಬಡಿತ, ಅತಿಯಾದ ಬಾಯಾರಿಕೆ, ತಲೆತಿರುಗುವಿಕೆ ಅಥವಾ ಸೌಮ್ಯ ತಲೆನೋವು, ಒಣಗಿದ ಬಾಯಿ ಮತ್ತು ಕಣ್ಣುಗಳು, ಇತ್ಯಾದಿಗಳು ಸೇರಿವೆ. 

38

ಹಾಗಾದ್ರೆ ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಆರೋಗ್ಯದ ಕಡೆಗೆ ಹೇಗೆ ಗಮನ ಹರಿಸಬೇಕು? ನೀವು ಇದರ ಬಗ್ಗೆ ಯೋಚನೆ ಮಾಡುತ್ತಿದ್ದರೆ ಬೇಸಿಗೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು(Blood Sugar) ನಿಯಂತ್ರಣದಲ್ಲಿಡಲು, ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬೇಕು. 

48

ಮಧುಮೇಹಕ್ಕೆ ಉತ್ತಮ ಚಿಕಿತ್ಸೆಯೆಂದರೆ ಮೆಂತ್ಯ ಬೀಜಗಳು.(Fenugreek seeds )
ಬೇಸಿಗೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು, ಸಕ್ಕರೆ ರೋಗಿಗಳು ರಾತ್ರಿ ಮಲಗುವ ಮೊದಲು ಒಂದು ಕಪ್ ನೀರಿನಲ್ಲಿ ಒಂದು ಚಮಚ ಮೆಂತ್ಯ ಬೀಜಗಳನ್ನು ಸೇರಿಸಿ ನೆನೆಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ರಕ್ತದ ಸಕ್ಕರೆಯನ್ನು ದಿನವಿಡೀ ನಿಯಂತ್ರಣದಲ್ಲಿಡುತ್ತದೆ.

58

ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು(Fruits & Vegetables) ಸೇವಿಸಿ
ತಜ್ಞರ ಪ್ರಕಾರ, ನೀವು ಮಧುಮೇಹ ರೋಗಿಯಾಗಿದ್ದರೆ, ಬೇಸಿಗೆಯಲ್ಲಿ ಸಿಹಿತಿಂಡಿಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಡೈರಿ ಉತ್ಪನ್ನಗಳ ಅತಿಯಾದ ಸೇವನೆಯನ್ನು ತಪ್ಪಿಸಬೇಕು. ಬದಲಾಗಿ, ಹೆಚ್ಚು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

68

ಮಾವಿನ ಎಲೆಗಳು ಮಧುಮೇಹಕ್ಕೆ ಔಷಧಿಯಾಗಿದೆ
ಒಂದು ಲೋಟ ನೀರಿನಲ್ಲಿ 15 ಮಾವಿನ ಎಲೆಗಳನ್ನು ಕುದಿಸಿ ಮತ್ತು ರಾತ್ರಿಯಿಡೀ ಹಾಗೆ ಬಿಡಿ, ಈ ನೀರನ್ನು ಸೋಸಿ ಬೆಳಿಗ್ಗೆ ಮೊದಲು ಕುಡಿಯಿರಿ. ನೀವು ದಿನಕ್ಕೆ ಒಮ್ಮೆ ಬೇವಿನ ಪುಡಿಯನ್ನು ಸಹ ಸೇವಿಸಬಹುದು. ಇದರಿಂದ ಮಧುಮೇಹ ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ. 

78

ಹರ್ಬಲ್ ಚಹಾವು(Herbal Tea) ಮಧುಮೇಹವನ್ನು ನಿಯಂತ್ರಿಸುವ ಒಂದು ಮಾರ್ಗವಾಗಿದೆ. ಬೇಸಿಗೆಯಲ್ಲಿ ಚಹಾ ಕುಡಿಯುವುದು ಸರಿಯಾದ ಆಲೋಚನೆಯಲ್ಲ ಆದರೆ ನೀವು ಮಧುಮೇಹ ರೋಗಿಯಾಗಿದ್ದರೆ, ನೀವು ಸಾದಾ ಚಹಾದ ಬದಲು ಗಿಡಮೂಲಿಕೆ ಚಹಾವನ್ನು ಸೇವಿಸಬೇಕು. ನೀವು ಬೆಳಿಗ್ಗೆ ಶುಂಠಿ, ಅರಿಶಿನ, ದಾಲ್ಚಿನ್ನಿ ಪುಡಿಯಿಂದ ಮಾಡಿದ ಗಿಡಮೂಲಿಕೆ ಚಹಾವನ್ನು ಸೇವಿಸಬಹುದು.

88

ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ನಿದ್ರೆ ಮತ್ತು ಯೋಗ(Yoga) ಕೂಡ ಉತ್ತಮವಾಗಿದೆ. ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಮಂಡುಕಾಸನ, ವಜ್ರಾಸನ ಮತ್ತು ಅರ್ಧ ಮತ್ಸ್ಯೇಂದ್ರಾಸನದಂತಹ ಯೋಗಾಸನಗಳನ್ನು ಅಭ್ಯಾಸ ಮಾಡಬೇಕು. ನೀವು ಕಪಾಲಭಾತಿ ಮತ್ತು ಉಜ್ಜಯಿಯಂತಹ ಪ್ರಾಣಾಯಾಮಗಳನ್ನು ಸಹ ಮಾಡಬಹುದು. ಅಲ್ಲದೆ, ಪ್ರತಿದಿನ 7-8 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಮಧುಮೇಹ
ಹಣ್ಣುಗಳು
ಆರೋಗ್ಯ
ಬೇಸಿಗೆ
ತರಕಾರಿಗಳು

Latest Videos
Recommended Stories
Recommended image1
BP control tips: ಪ್ರತಿದಿನ ಈ ರೀತಿ ಮಾಡಿದ್ರೆ ನಿಮ್ಮ ಬಿಪಿ ಕಂಟ್ರೋಲ್‌ನಲ್ಲಿರುತ್ತೆ
Recommended image2
ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ; 200ಕ್ಕೂ ಹೆಚ್ಚು ಸ್ಯಾಂಪಲ್ ಪರೀಕ್ಷೆಗೆ ರವಾನೆ- ಸಚಿವ ಗುಂಡೂರಾವ್
Recommended image3
COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved