MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಆರೋಗ್ಯವಾಗಿರಲು ಇವಿಷ್ಟನ್ನು ಮಾಡಿದರೆ ಸಾಕು

ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಆರೋಗ್ಯವಾಗಿರಲು ಇವಿಷ್ಟನ್ನು ಮಾಡಿದರೆ ಸಾಕು

ಬೇಸಿಗೆ (Summer) ಕಾಲವು ಮಧುಮೇಹ (Diabetes) ರೋಗಿಗಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಸಂಶೋಧನೆಯು ಸೂಚಿಸುತ್ತದೆ. ಈ ದಿನಗಳಲ್ಲಿ, ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟ (Sugar Level)ವನ್ನು ನಿಯಂತ್ರಣದಲ್ಲಿಡಲು ಕಷ್ಟಪಡಬಹುದು. ಹೀಗಾದಾಗಮ ಏನು ಮಾಡಬಹುದು  ?

2 Min read
Suvarna News
Published : Apr 14 2022, 02:13 PM IST| Updated : Apr 14 2022, 02:14 PM IST
Share this Photo Gallery
  • FB
  • TW
  • Linkdin
  • Whatsapp
18

ಬಿಸಿ ಹವಾಮಾನದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಸಂಭಾವ್ಯ ರೋಗಲಕ್ಷಣಗಳ ಬಗ್ಗೆ ಗಮನ ಹರಿಸುವುದು ಮುಖ್ಯ ಎಂದು ತಜ್ಞರು ನಂಬುತ್ತಾರೆ. ಈ ದಿನಗಳಲ್ಲಿ ಸಕ್ಕರೆ ರೋಗಿಗಳು ಸಾಮಾನ್ಯ ಜನರಿಗಿಂತ ವೇಗವಾಗಿ ನಿರ್ಜಲೀಕರಣಕ್ಕೆ(Dehydration) ಒಳಗಾಗುವ ಹೆಚ್ಚಿನ ಅಪಾಯದಲ್ಲಿದ್ದಾರೆ.

28

ಮಧುಮೇಹ ರೋಗಿಗಳಲ್ಲಿ, ನಿರ್ಜಲೀಕರಣದ ಸಮಸ್ಯೆ ಇದ್ದಾಗ ರೋಗಲಕ್ಷಣಗಳ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ, ಅವುಗಳಲ್ಲಿ ಆಯಾಸ, ಮೂತ್ರವಿಸರ್ಜನೆಯಲ್ಲಿ ಇಳಿಕೆ, ಗಾಢ ಬಣ್ಣದ ಮೂತ್ರವಿಸರ್ಜನೆ, ಕಡಿಮೆ ರಕ್ತದೊತ್ತಡ(Low BP), ಹೆಚ್ಚಿದ ಹೃದಯಬಡಿತ, ಅತಿಯಾದ ಬಾಯಾರಿಕೆ, ತಲೆತಿರುಗುವಿಕೆ ಅಥವಾ ಸೌಮ್ಯ ತಲೆನೋವು, ಒಣಗಿದ ಬಾಯಿ ಮತ್ತು ಕಣ್ಣುಗಳು, ಇತ್ಯಾದಿಗಳು ಸೇರಿವೆ. 

38

ಹಾಗಾದ್ರೆ ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಆರೋಗ್ಯದ ಕಡೆಗೆ ಹೇಗೆ ಗಮನ ಹರಿಸಬೇಕು? ನೀವು ಇದರ ಬಗ್ಗೆ ಯೋಚನೆ ಮಾಡುತ್ತಿದ್ದರೆ ಬೇಸಿಗೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು(Blood Sugar) ನಿಯಂತ್ರಣದಲ್ಲಿಡಲು, ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬೇಕು. 

48

ಮಧುಮೇಹಕ್ಕೆ ಉತ್ತಮ ಚಿಕಿತ್ಸೆಯೆಂದರೆ ಮೆಂತ್ಯ ಬೀಜಗಳು.(Fenugreek seeds )
ಬೇಸಿಗೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು, ಸಕ್ಕರೆ ರೋಗಿಗಳು ರಾತ್ರಿ ಮಲಗುವ ಮೊದಲು ಒಂದು ಕಪ್ ನೀರಿನಲ್ಲಿ ಒಂದು ಚಮಚ ಮೆಂತ್ಯ ಬೀಜಗಳನ್ನು ಸೇರಿಸಿ ನೆನೆಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ರಕ್ತದ ಸಕ್ಕರೆಯನ್ನು ದಿನವಿಡೀ ನಿಯಂತ್ರಣದಲ್ಲಿಡುತ್ತದೆ.

58

ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು(Fruits & Vegetables) ಸೇವಿಸಿ
ತಜ್ಞರ ಪ್ರಕಾರ, ನೀವು ಮಧುಮೇಹ ರೋಗಿಯಾಗಿದ್ದರೆ, ಬೇಸಿಗೆಯಲ್ಲಿ ಸಿಹಿತಿಂಡಿಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಡೈರಿ ಉತ್ಪನ್ನಗಳ ಅತಿಯಾದ ಸೇವನೆಯನ್ನು ತಪ್ಪಿಸಬೇಕು. ಬದಲಾಗಿ, ಹೆಚ್ಚು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

68

ಮಾವಿನ ಎಲೆಗಳು ಮಧುಮೇಹಕ್ಕೆ ಔಷಧಿಯಾಗಿದೆ
ಒಂದು ಲೋಟ ನೀರಿನಲ್ಲಿ 15 ಮಾವಿನ ಎಲೆಗಳನ್ನು ಕುದಿಸಿ ಮತ್ತು ರಾತ್ರಿಯಿಡೀ ಹಾಗೆ ಬಿಡಿ, ಈ ನೀರನ್ನು ಸೋಸಿ ಬೆಳಿಗ್ಗೆ ಮೊದಲು ಕುಡಿಯಿರಿ. ನೀವು ದಿನಕ್ಕೆ ಒಮ್ಮೆ ಬೇವಿನ ಪುಡಿಯನ್ನು ಸಹ ಸೇವಿಸಬಹುದು. ಇದರಿಂದ ಮಧುಮೇಹ ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ. 

78

ಹರ್ಬಲ್ ಚಹಾವು(Herbal Tea) ಮಧುಮೇಹವನ್ನು ನಿಯಂತ್ರಿಸುವ ಒಂದು ಮಾರ್ಗವಾಗಿದೆ. ಬೇಸಿಗೆಯಲ್ಲಿ ಚಹಾ ಕುಡಿಯುವುದು ಸರಿಯಾದ ಆಲೋಚನೆಯಲ್ಲ ಆದರೆ ನೀವು ಮಧುಮೇಹ ರೋಗಿಯಾಗಿದ್ದರೆ, ನೀವು ಸಾದಾ ಚಹಾದ ಬದಲು ಗಿಡಮೂಲಿಕೆ ಚಹಾವನ್ನು ಸೇವಿಸಬೇಕು. ನೀವು ಬೆಳಿಗ್ಗೆ ಶುಂಠಿ, ಅರಿಶಿನ, ದಾಲ್ಚಿನ್ನಿ ಪುಡಿಯಿಂದ ಮಾಡಿದ ಗಿಡಮೂಲಿಕೆ ಚಹಾವನ್ನು ಸೇವಿಸಬಹುದು.

88

ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ನಿದ್ರೆ ಮತ್ತು ಯೋಗ(Yoga) ಕೂಡ ಉತ್ತಮವಾಗಿದೆ. ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಮಂಡುಕಾಸನ, ವಜ್ರಾಸನ ಮತ್ತು ಅರ್ಧ ಮತ್ಸ್ಯೇಂದ್ರಾಸನದಂತಹ ಯೋಗಾಸನಗಳನ್ನು ಅಭ್ಯಾಸ ಮಾಡಬೇಕು. ನೀವು ಕಪಾಲಭಾತಿ ಮತ್ತು ಉಜ್ಜಯಿಯಂತಹ ಪ್ರಾಣಾಯಾಮಗಳನ್ನು ಸಹ ಮಾಡಬಹುದು. ಅಲ್ಲದೆ, ಪ್ರತಿದಿನ 7-8 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಿ.

About the Author

SN
Suvarna News
ಮಧುಮೇಹ
ಹಣ್ಣುಗಳು
ಆರೋಗ್ಯ
ಬೇಸಿಗೆ
ತರಕಾರಿಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved