ಶ್ರೀಶಾಂತ್ ಮೇಲಿನ ನಿಷೇಧ ಅಂತ್ಯ; ನಾಳೆಯಿಂದ ಕ್ರಿಕೆಟ್ ಆಡಲು ಮುಕ್ತ!
ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮೇಲಿದ್ದ ನಿಷೇಧ ಅಂತ್ಯಗೊಂಡಿದೆ. 2013ರ ಐಪಿಎಲ್ ಟೂರ್ನಿಯಲ್ಲಿನ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐ ವಿಧಿಸಿದ್ದ ನಿಷೇಧ ಅಂತ್ಯಗೊಂಡಿದೆ. ನಾಳೆಯಿಂದ(ಸೆ.14) ಶ್ರೀಶಾಂತ್ ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ. ಈ ಕುರಿತು ಶ್ರೀಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

<p>ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐ ವೇಗಿ ಶ್ರೀಶಾಂತ್ ಮೇಲೆ ವಿಧಿಸಿದ್ದ 7 ವರ್ಷಗಳ ನಿಷೇಧ ಶಿಕ್ಷೆ ಅಂತ್ಯಗೊಂಡಿದೆ. ಇಂದು (ಸೆಪ್ಟೆಂಬರ್ 13) ಶ್ರೀಶಾಂತ್ ಮೇಲಿನ ನಿಷೇಧ ಅಂತ್ಯಗೊಂಡಿದೆ.</p>
ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐ ವೇಗಿ ಶ್ರೀಶಾಂತ್ ಮೇಲೆ ವಿಧಿಸಿದ್ದ 7 ವರ್ಷಗಳ ನಿಷೇಧ ಶಿಕ್ಷೆ ಅಂತ್ಯಗೊಂಡಿದೆ. ಇಂದು (ಸೆಪ್ಟೆಂಬರ್ 13) ಶ್ರೀಶಾಂತ್ ಮೇಲಿನ ನಿಷೇಧ ಅಂತ್ಯಗೊಂಡಿದೆ.
<p><strong>ಸತತ 7 ವರ್ಷ ಕ್ರಿಕೆಟ್ನಿಂದ ದೂರ ಉಳಿದ ಕೇರಳ ಎಕ್ಸ್ಪ್ರೆಸ್ ಶ್ರೀಶಾಂತ್ ನಾಳೆಯಿಂದ(ಸೆಪ್ಟೆಂಬರ್ 14) ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಕಮ್ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದಾರೆ.</strong></p>
ಸತತ 7 ವರ್ಷ ಕ್ರಿಕೆಟ್ನಿಂದ ದೂರ ಉಳಿದ ಕೇರಳ ಎಕ್ಸ್ಪ್ರೆಸ್ ಶ್ರೀಶಾಂತ್ ನಾಳೆಯಿಂದ(ಸೆಪ್ಟೆಂಬರ್ 14) ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಕಮ್ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದಾರೆ.
<p>ನಿಷೇಧ ಅಂತ್ಯಗೊಂಡ ಬೆನ್ನಲ್ಲೇ ಶ್ರೀಶಾಂತ್ ಸಂತಸ ಹಂಚಿಕೊಂಡಿದ್ದಾರೆ. ಇಂದಿನಿಂದ ನಾನು ಸ್ವತಂತ್ರನಾಗಿದ್ದೇನೆ. ನನಗೆ ಸಿಕ್ಕ ಅತೀ ದೊಡ್ಡ ರಿಲೀಫ್ ಇದು. ಇತರರಿಗೆ ಎಷ್ಟು ಅರ್ಥವಾಗುತ್ತೋ ಗೊತ್ತಿಲ್ಲ, ಆದರೆ ನನಗೆ ಸಿಕ್ಕ ಅತಿ ದೊಡ್ಡ ಗೆಲುವಿದು ಎಂದು ಶ್ರೀಶಾಂತ್ ಹೇಳಿದ್ದಾರೆ.</p>
ನಿಷೇಧ ಅಂತ್ಯಗೊಂಡ ಬೆನ್ನಲ್ಲೇ ಶ್ರೀಶಾಂತ್ ಸಂತಸ ಹಂಚಿಕೊಂಡಿದ್ದಾರೆ. ಇಂದಿನಿಂದ ನಾನು ಸ್ವತಂತ್ರನಾಗಿದ್ದೇನೆ. ನನಗೆ ಸಿಕ್ಕ ಅತೀ ದೊಡ್ಡ ರಿಲೀಫ್ ಇದು. ಇತರರಿಗೆ ಎಷ್ಟು ಅರ್ಥವಾಗುತ್ತೋ ಗೊತ್ತಿಲ್ಲ, ಆದರೆ ನನಗೆ ಸಿಕ್ಕ ಅತಿ ದೊಡ್ಡ ಗೆಲುವಿದು ಎಂದು ಶ್ರೀಶಾಂತ್ ಹೇಳಿದ್ದಾರೆ.
<p>ಫ್ರೆಂಡ್ಲಿ ಮ್ಯಾಚ್ನಲ್ಲೂ ನಾನು ಮೋಸ ಮಾಡಿಲ್ಲ. ಪ್ರತಿ ಎಸೆತದಲ್ಲಿ ರನ್ ಹೋಗಲಿ ಎಂದು ಹಾಕಿಲ್ಲ, ಸೋಲನ್ನು ಇಷ್ಟಪಡುವುದಿಲ್ಲ. ನಾನೀಗ ಎಲ್ಲಾ ಆರೋಪಗಳಿಂದ ಮುಕ್ತನಾಗಿದ್ದೇನೆ. ನಾನು ಅತೀ ಹೆಚ್ಚು ಇಷ್ಟಪಡುವ ಕ್ರಿಕೆಟ್ನ್ನು ಮತ್ತೆ ಪ್ರತಿನಿಧಿಸುತ್ತೇನೆ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.</p>
ಫ್ರೆಂಡ್ಲಿ ಮ್ಯಾಚ್ನಲ್ಲೂ ನಾನು ಮೋಸ ಮಾಡಿಲ್ಲ. ಪ್ರತಿ ಎಸೆತದಲ್ಲಿ ರನ್ ಹೋಗಲಿ ಎಂದು ಹಾಕಿಲ್ಲ, ಸೋಲನ್ನು ಇಷ್ಟಪಡುವುದಿಲ್ಲ. ನಾನೀಗ ಎಲ್ಲಾ ಆರೋಪಗಳಿಂದ ಮುಕ್ತನಾಗಿದ್ದೇನೆ. ನಾನು ಅತೀ ಹೆಚ್ಚು ಇಷ್ಟಪಡುವ ಕ್ರಿಕೆಟ್ನ್ನು ಮತ್ತೆ ಪ್ರತಿನಿಧಿಸುತ್ತೇನೆ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.
<p>2013ರಲ್ಲಿ ಶ್ರೀಶಾಂತ್ ಮೇಲೆ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪ ಕೇಳಿ ಬಂದಿತ್ತು. ಇತ್ತ ಬಿಸಿಸಿಐ ಶ್ರೀಶಾಂತ್ ಸೇರಿದಂತೆ ಮೂವರು ಕ್ರಿಕೆಟಿಗರ ಮೇಲೆ ಅಜೀವ ನಿಷೇದ ಶಿಕ್ಷೆ ವಿಧಿಸಿತು.</p>
2013ರಲ್ಲಿ ಶ್ರೀಶಾಂತ್ ಮೇಲೆ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪ ಕೇಳಿ ಬಂದಿತ್ತು. ಇತ್ತ ಬಿಸಿಸಿಐ ಶ್ರೀಶಾಂತ್ ಸೇರಿದಂತೆ ಮೂವರು ಕ್ರಿಕೆಟಿಗರ ಮೇಲೆ ಅಜೀವ ನಿಷೇದ ಶಿಕ್ಷೆ ವಿಧಿಸಿತು.
<p>ಸುದೀರ್ಘ ತನಿಖೆ ವಿಚಾರಣೆ ಬಳಿಕ ಕೋರ್ಟ್ ಶ್ರೀಶಾಂತ್ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಬಿಸಿಸಿಐ ನಿಷೇಧ ವಾಪಸ್ ಪಡೆಯಲಿಲ್ಲ. ಮತ್ತೆ ಶ್ರೀಶಾಂತ್ ಕಾನೂನು ಹೋರಾಟ ನಡೆಸಿದ್ದರು.</p>
ಸುದೀರ್ಘ ತನಿಖೆ ವಿಚಾರಣೆ ಬಳಿಕ ಕೋರ್ಟ್ ಶ್ರೀಶಾಂತ್ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಬಿಸಿಸಿಐ ನಿಷೇಧ ವಾಪಸ್ ಪಡೆಯಲಿಲ್ಲ. ಮತ್ತೆ ಶ್ರೀಶಾಂತ್ ಕಾನೂನು ಹೋರಾಟ ನಡೆಸಿದ್ದರು.
<p>ಶ್ರೀಶಾಂತ್ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಬಿಸಿಸಿಐ ಅಜೀವ ನಿಷೇಧ ಶಿಕ್ಷೆಯನ್ನು 7 ವರ್ಷಕ್ಕೆ ಕಡಿತಗೊಳಿಸಿತು. ಸದ್ಯ 37 ವರ್ಷದ ಶ್ರೀಶಾಂತ್ ಮತ್ತೆ ಕ್ರಿಕೆಟ್ ಆಡಲು ಬಯಸಿದ್ದಾರೆ. ಕೊರೋನಾ ಕಾರಣ ದೇಸಿ ಟೂರ್ನಿಗಳು ರದ್ದಾಗಿದೆ. ಹೀಗಾಗಿ ಮತ್ತೆ ಕಮ್ಬ್ಯಾಕ್ ಮತ್ತಷ್ಟು ಕಠಿಣವಾಗಿದೆ.</p>
ಶ್ರೀಶಾಂತ್ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಬಿಸಿಸಿಐ ಅಜೀವ ನಿಷೇಧ ಶಿಕ್ಷೆಯನ್ನು 7 ವರ್ಷಕ್ಕೆ ಕಡಿತಗೊಳಿಸಿತು. ಸದ್ಯ 37 ವರ್ಷದ ಶ್ರೀಶಾಂತ್ ಮತ್ತೆ ಕ್ರಿಕೆಟ್ ಆಡಲು ಬಯಸಿದ್ದಾರೆ. ಕೊರೋನಾ ಕಾರಣ ದೇಸಿ ಟೂರ್ನಿಗಳು ರದ್ದಾಗಿದೆ. ಹೀಗಾಗಿ ಮತ್ತೆ ಕಮ್ಬ್ಯಾಕ್ ಮತ್ತಷ್ಟು ಕಠಿಣವಾಗಿದೆ.
<p>ಮೇ ತಿಂಗಳಿನಿಂದ ಶ್ರೀಶಾಂತ್ ಅಭ್ಯಾಸ ಆರಂಭಿಸಿದ್ದಾರೆ. ಕೊರೋನಾ ಕಾರಣ ಶ್ರೀಶಾಂತ್ ದೇಸಿ ಅಥವಾ ಸ್ಥಳೀಯ ಟೂರ್ನಿ ಆಡಲು ಅವಕಾಶ ಇಲ್ಲದಾಗಿದೆ. ಹೀಗಾಗಿ ವಿದಾಯಕ್ಕೆ ಯೋಚಿಸಿದ್ದರು. ಮತ್ತೆ ನಿರ್ಧಾರ ಬದಲಿಸಿದ ಶ್ರೀ, ಕ್ರಿಕೆಟ್ ಆಡಿಯೇ ಸಿದ್ದ ಎಂದು ಅಚಲ ನಿರ್ಧಾರ ಮಾಡಿದ್ದಾರೆ.</p>
ಮೇ ತಿಂಗಳಿನಿಂದ ಶ್ರೀಶಾಂತ್ ಅಭ್ಯಾಸ ಆರಂಭಿಸಿದ್ದಾರೆ. ಕೊರೋನಾ ಕಾರಣ ಶ್ರೀಶಾಂತ್ ದೇಸಿ ಅಥವಾ ಸ್ಥಳೀಯ ಟೂರ್ನಿ ಆಡಲು ಅವಕಾಶ ಇಲ್ಲದಾಗಿದೆ. ಹೀಗಾಗಿ ವಿದಾಯಕ್ಕೆ ಯೋಚಿಸಿದ್ದರು. ಮತ್ತೆ ನಿರ್ಧಾರ ಬದಲಿಸಿದ ಶ್ರೀ, ಕ್ರಿಕೆಟ್ ಆಡಿಯೇ ಸಿದ್ದ ಎಂದು ಅಚಲ ನಿರ್ಧಾರ ಮಾಡಿದ್ದಾರೆ.
<p>ನಿಷೇಧದ ಬಳಿಕ ಶ್ರೀಶಾಂತ್ ನಟನಾಗಿ ಹೆಚ್ಚು ಸದ್ದು ಮಾಡಿದ್ದಾರೆ. ಮಲೆಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ.</p>
ನಿಷೇಧದ ಬಳಿಕ ಶ್ರೀಶಾಂತ್ ನಟನಾಗಿ ಹೆಚ್ಚು ಸದ್ದು ಮಾಡಿದ್ದಾರೆ. ಮಲೆಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ.
<p>2016ರ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀಶಾಂತ್ ಬಿಜೆಪಿ ಅಭ್ಯರ್ಥಿಯಾಗಿ ತಿರುವಂತನಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಶಿವಕುಮಾರ್ ವಿರುದ್ಧ 11,710 ಮತಗಳಿಂದ ಸೋಲು ಅನುಭವಿಸಿದರು.</p>
2016ರ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀಶಾಂತ್ ಬಿಜೆಪಿ ಅಭ್ಯರ್ಥಿಯಾಗಿ ತಿರುವಂತನಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಶಿವಕುಮಾರ್ ವಿರುದ್ಧ 11,710 ಮತಗಳಿಂದ ಸೋಲು ಅನುಭವಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.