ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಅತೀ ದೊಡ್ಡ 3 ತಪ್ಪು ಬಹಿರಂಗ ಪಡಿಸಿದ MSK ಪ್ರಸಾದ್!
ಟೀಂ ಇಂಡಿಯಾ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅವಧಿಯಲ್ಲಿ ಟೀಂ ಇಂಡಿಯಾ ಹಲವು ಐತಿಹಾಸಿಕ ಪ್ರಶಸ್ತಿ ಗೆದ್ದಿಕೊಂಡಿದೆ. ಇಷ್ಟೇ ಅಲ್ಲ ಹಲವು ಮಹತ್ವದ ಪ್ರಶಸ್ತಿಯಿಂದ ವಂಚಿತವಾಗಿದೆ. ಇದರ ಜೊತೆಗೆ ಅತೀ ಹೆಚ್ಚು ಟೀಕೆಗಳಿಗೂ ಆಯ್ಕೆ ಸಮಿತಿ ಗುರಿಯಾಗಿತ್ತು. ಆಯ್ಕೆ ಸಮಿತಿಯಲ್ಲಿ ಮಾಡಿದ ಎಡವಟ್ಟುಗಳಿಗೆ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟಿಗರೂ ಗರಂ ಆಗಿದ್ದರು. ಇದೀಗ MSK ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಮೂರು ಪ್ರಮುಖ ತಪ್ಪುಗಳನ್ನು ಬಹಿರಂಗ ಪಡಿಸಿದ್ದಾರೆ.

<p>2016ರಿಂದ 2020ರ ವರಗೆ ಸುದೀರ್ಘ ಕಾಲ ಟೀಂ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಕ್ರಿಟಿಗ ಎಂ.ಎಸ್.ಕೆ.ಪ್ರಸಾದ್</p>
2016ರಿಂದ 2020ರ ವರಗೆ ಸುದೀರ್ಘ ಕಾಲ ಟೀಂ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಕ್ರಿಟಿಗ ಎಂ.ಎಸ್.ಕೆ.ಪ್ರಸಾದ್
<p>MSK ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಹಲವು ಸವಾಲುಗಳನ್ನು ಎದುರಿಸಿದೆ. ಅಷ್ಟೇ ಟೀಕೆಗಳಿಗೂ ಗುರಿಯಾಗಿದೆ. ಕೆಲ ನಿರ್ಧಾರಗಳಿಗೆ ಸ್ವತಃ ಕ್ರಿಕೆಟಿಗರೇ ವಿರೋಧ ವ್ಯಕ್ತಪಡಿಸಿದ್ದರು</p>
MSK ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಹಲವು ಸವಾಲುಗಳನ್ನು ಎದುರಿಸಿದೆ. ಅಷ್ಟೇ ಟೀಕೆಗಳಿಗೂ ಗುರಿಯಾಗಿದೆ. ಕೆಲ ನಿರ್ಧಾರಗಳಿಗೆ ಸ್ವತಃ ಕ್ರಿಕೆಟಿಗರೇ ವಿರೋಧ ವ್ಯಕ್ತಪಡಿಸಿದ್ದರು
<p>ತನ್ನ ಅವಧಿಯಲ್ಲಿ ಮಾಡಿದ ಪ್ರಮುಖ 3 ತಪ್ಪುಗಳನ್ನು ಬಹಿರಂಗ ಪಡಿಸಿದ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ MSK ಪ್ರಸಾದ್</p>
ತನ್ನ ಅವಧಿಯಲ್ಲಿ ಮಾಡಿದ ಪ್ರಮುಖ 3 ತಪ್ಪುಗಳನ್ನು ಬಹಿರಂಗ ಪಡಿಸಿದ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ MSK ಪ್ರಸಾದ್
<p>ತ್ರಿಶತಕ ಸಿಡಿಸಿದ ಕನ್ನಡಿ ಕರುಣ್ ನಾಯರ್ಗೆ ಇಂಗ್ಲೆಂಡ್ ಪ್ರವಾಸದ ಬಳಿಕ ಅವಕಾಶವೇ ನೀಡಲಿಲ್ಲ. ಕರುಣ್ ಕಮ್ಬ್ಯಾಕ್ಗೆ ಹಲವು ಪ್ರಯತ್ನ ಮಾಡಿದರೂ ಆಯ್ಕೆ ಸಮಿತಿ ಕಣ್ಣೆತ್ತಿ ನೋಡಲೇ ಇಲ್ಲ. ಇದು ತನ್ನ ಅವಧಿಯಲ್ಲಿ ಮಾಡಿದ ಮೊದಲ ಹಾಗೂ ಬಹುದೊಡ್ಡ ತಪ್ಪು ಎಂದಿರುವ MSK</p>
ತ್ರಿಶತಕ ಸಿಡಿಸಿದ ಕನ್ನಡಿ ಕರುಣ್ ನಾಯರ್ಗೆ ಇಂಗ್ಲೆಂಡ್ ಪ್ರವಾಸದ ಬಳಿಕ ಅವಕಾಶವೇ ನೀಡಲಿಲ್ಲ. ಕರುಣ್ ಕಮ್ಬ್ಯಾಕ್ಗೆ ಹಲವು ಪ್ರಯತ್ನ ಮಾಡಿದರೂ ಆಯ್ಕೆ ಸಮಿತಿ ಕಣ್ಣೆತ್ತಿ ನೋಡಲೇ ಇಲ್ಲ. ಇದು ತನ್ನ ಅವಧಿಯಲ್ಲಿ ಮಾಡಿದ ಮೊದಲ ಹಾಗೂ ಬಹುದೊಡ್ಡ ತಪ್ಪು ಎಂದಿರುವ MSK
<p>ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಅನ್ನೋ ಹೆಗ್ಗಳಿಕೆಗೆ ಕರುಣ್ ನಾಯರ್ ಪಾತ್ರರಾಗಿದ್ದರು. ಮೊದಲ ಭಾರತೀಯನೆಂಬ ಹೆಗ್ಗಳಿಗೆಗೆ ವಿರೇಂದ್ರ ಸೆಹ್ವಾಗ್ ಪಾತ್ರರಾಗಿದ್ದಾರೆ.</p>
ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಅನ್ನೋ ಹೆಗ್ಗಳಿಕೆಗೆ ಕರುಣ್ ನಾಯರ್ ಪಾತ್ರರಾಗಿದ್ದರು. ಮೊದಲ ಭಾರತೀಯನೆಂಬ ಹೆಗ್ಗಳಿಗೆಗೆ ವಿರೇಂದ್ರ ಸೆಹ್ವಾಗ್ ಪಾತ್ರರಾಗಿದ್ದಾರೆ.
<p>2019ರ ವಿಶ್ವಕಪ್ ಸಂಭಾವ್ಯ ತಂಡದಲ್ಲಿದ್ದ ಅಂಬಾಟಿ ರಾಯುಡುವನ್ನು ಕೈಬಿಟ್ಟ ನಿರ್ಧಾರ 2ನೇ ತಪ್ಪು ಎಂದಿರುವ MSK</p>
2019ರ ವಿಶ್ವಕಪ್ ಸಂಭಾವ್ಯ ತಂಡದಲ್ಲಿದ್ದ ಅಂಬಾಟಿ ರಾಯುಡುವನ್ನು ಕೈಬಿಟ್ಟ ನಿರ್ಧಾರ 2ನೇ ತಪ್ಪು ಎಂದಿರುವ MSK
<p>ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಅಂಬಾಟಿ ರಾಯಡು ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಪಡಿಸಿದ್ದರು. ಬಳಿಕ ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.</p>
ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಅಂಬಾಟಿ ರಾಯಡು ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಪಡಿಸಿದ್ದರು. ಬಳಿಕ ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
<p>ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕಡೆಗಣಿಸಿರುವುದು MSK ಮಾಡಿದ 3ನೇ ತಪ್ಪು ಎಂದಿದ್ದಾರೆ. ಅಶ್ವಿನ್ ಹಾಗೂ ಜಡೇಜಾರನ್ನು ಆಯ್ಕೆ ಸಮಿತಿ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತಿಗೊಳಿಸಿತ್ತು</p>
ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕಡೆಗಣಿಸಿರುವುದು MSK ಮಾಡಿದ 3ನೇ ತಪ್ಪು ಎಂದಿದ್ದಾರೆ. ಅಶ್ವಿನ್ ಹಾಗೂ ಜಡೇಜಾರನ್ನು ಆಯ್ಕೆ ಸಮಿತಿ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತಿಗೊಳಿಸಿತ್ತು
<p>ಅಶ್ವಿನ್ ಹಾಗೂ ಜಡೇಜಾ ಬದಲು ನಿಗದಿತ ಓವರ್ ಕ್ರಿಕೆಟ್ಗೆ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ಗೆ ಅವಕಾಶ ನೀಡಲಾಯಿತು. ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದ ಅಶ್ವಿನ್ ಹಾಗೂ ಜಡೇಜಾ ಜೋಡಿಯನ್ನು ಕಡೆಗಣಿಸಲಾಯಿತು.</p>
ಅಶ್ವಿನ್ ಹಾಗೂ ಜಡೇಜಾ ಬದಲು ನಿಗದಿತ ಓವರ್ ಕ್ರಿಕೆಟ್ಗೆ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ಗೆ ಅವಕಾಶ ನೀಡಲಾಯಿತು. ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದ ಅಶ್ವಿನ್ ಹಾಗೂ ಜಡೇಜಾ ಜೋಡಿಯನ್ನು ಕಡೆಗಣಿಸಲಾಯಿತು.
<p>ಜಡೇಜಾ ನಿಗದಿತ ಓವರ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ ಆರ್ ಅಶ್ವಿನ್ ಈಗಲೂ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ</p>
ಜಡೇಜಾ ನಿಗದಿತ ಓವರ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ ಆರ್ ಅಶ್ವಿನ್ ಈಗಲೂ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.