ಐಪಿಎಲ್ 2021: ಸಿಎಸ್ಕೆ ತಂಡದಿಂದ ಸ್ಟಾರ್ ಆಟಗಾರನಿಗೆ ಗೇಟ್ಪಾಸ್..!
ನವದೆಹಲಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿದ್ದ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ತಂಡದಲ್ಲಿ ಮೇಜರ್ ಸರ್ಜರಿ ಸರ್ಜರಿಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಸಿಎಸ್ಕೆ ತಂಡದ ಸ್ಟಾರ್ ಆಟಗಾರನಿಗೆ ಗೇಟ್ಪಾಸ್ ನೀಡಲು ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

<p>ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿತ್ತು.</p>
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿತ್ತು.
<p style="text-align: justify;">ಯುಎಇನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸಿಎಸ್ಕೆ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.</p>
ಯುಎಇನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸಿಎಸ್ಕೆ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
<p>ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸಿಎಸ್ಕೆ ಪಾಳಯದಲ್ಲಿ ಮೇಜರ್ ಸರ್ಜರಿ ಮಾಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.</p>
ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸಿಎಸ್ಕೆ ಪಾಳಯದಲ್ಲಿ ಮೇಜರ್ ಸರ್ಜರಿ ಮಾಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.
<p>2021ರ ಐಪಿಎಲ್ ಟೂರ್ನಿಗೆ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. </p>
2021ರ ಐಪಿಎಲ್ ಟೂರ್ನಿಗೆ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
<p>ಸುರೇಶ್ ರೈನಾ ಲಯದ ಸಮಸ್ಯೆ ಎದುರಿಸುತ್ತಿರುವುದರಿಂದ ಅವರನ್ನು ಕೈಬಿಡಲು ತಂಡ ನಿರ್ಧರಿಸಬಹುದು ಎನ್ನಲಾಗಿದೆ. ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 4 ಪಂದ್ಯಗಳಿಂದ ರೈನಾ ಕೇವಲ 90 ರನ್ ಗಳಿಸಿದ್ದಾರೆ. </p>
ಸುರೇಶ್ ರೈನಾ ಲಯದ ಸಮಸ್ಯೆ ಎದುರಿಸುತ್ತಿರುವುದರಿಂದ ಅವರನ್ನು ಕೈಬಿಡಲು ತಂಡ ನಿರ್ಧರಿಸಬಹುದು ಎನ್ನಲಾಗಿದೆ. ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 4 ಪಂದ್ಯಗಳಿಂದ ರೈನಾ ಕೇವಲ 90 ರನ್ ಗಳಿಸಿದ್ದಾರೆ.
<p>ಸುರೇಶ್ ರೈನಾ ವೈಯುಕ್ತಿಕ ಕಾರಣ ನೀಡಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ದಿಢೀರ್ ಎನ್ನುವಂತೆ ಹಿಂದೆ ಸರಿದಿದ್ದರು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.</p>
ಸುರೇಶ್ ರೈನಾ ವೈಯುಕ್ತಿಕ ಕಾರಣ ನೀಡಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ದಿಢೀರ್ ಎನ್ನುವಂತೆ ಹಿಂದೆ ಸರಿದಿದ್ದರು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.
<p>2018ರ ಐಪಿಎಲ್ ಆಟಗಾರರ ಹರಾಜಿನ ನಿಯಮದಂತೆ ಮೊದಲು ರೀಟೈನ್ ಮಾಡಿಕೊಂಡ ಆಟಗಾರ ಎಂ ಎಸ್. ಧೋನಿ(15 ಕೋಟಿ ರುಪಾಯಿ), ಎರಡನೇ ರೀಟೈನ್ ಆಟಗಾರ ಸುರೇಶ್ ರೈನಾ(11 ಕೋಟಿ) ಹಾಗೂ ಮೂರನೇ ರೀಟೈನ್ ಆಟಗಾರ ರವೀಂದ್ರ ಜಡೇಜಾಗೆ(7 ಕೋಟಿ) ರುಪಾಯಿ ನೀಡಿತ್ತು. </p>
2018ರ ಐಪಿಎಲ್ ಆಟಗಾರರ ಹರಾಜಿನ ನಿಯಮದಂತೆ ಮೊದಲು ರೀಟೈನ್ ಮಾಡಿಕೊಂಡ ಆಟಗಾರ ಎಂ ಎಸ್. ಧೋನಿ(15 ಕೋಟಿ ರುಪಾಯಿ), ಎರಡನೇ ರೀಟೈನ್ ಆಟಗಾರ ಸುರೇಶ್ ರೈನಾ(11 ಕೋಟಿ) ಹಾಗೂ ಮೂರನೇ ರೀಟೈನ್ ಆಟಗಾರ ರವೀಂದ್ರ ಜಡೇಜಾಗೆ(7 ಕೋಟಿ) ರುಪಾಯಿ ನೀಡಿತ್ತು.
<p>ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಸಿಎಸ್ಕೆ ತಂಡಕ್ಕೆ ಹಣದ ಅಭಾವವಿದೆ. ಯಾವ ಆಟಗಾರರನ್ನು ಸಿಎಸ್ಕೆ ಕೈಬಿಡದೇ ಇದ್ದರೆ ತಂಡದ ಬಳಿ ಕೇವಲ 15 ಲಕ್ಷ ರುಪಾಯಿ ಬಾಕಿ ಉಳಿಯಲಿದೆ. </p>
ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಸಿಎಸ್ಕೆ ತಂಡಕ್ಕೆ ಹಣದ ಅಭಾವವಿದೆ. ಯಾವ ಆಟಗಾರರನ್ನು ಸಿಎಸ್ಕೆ ಕೈಬಿಡದೇ ಇದ್ದರೆ ತಂಡದ ಬಳಿ ಕೇವಲ 15 ಲಕ್ಷ ರುಪಾಯಿ ಬಾಕಿ ಉಳಿಯಲಿದೆ.
<p>ಹೀಗಾಗಿ ಕೆಲ ದುಬಾರಿ ಆಟಗಾರರನ್ನು ಕೈಬಿಡಲು ಸಿಎಸ್ಕೆ ಚಿಂತನೆ ನಡೆಸುತ್ತಿದೆ. ರೈನಾ ಕೈಬಿಟ್ಟರೆ ತಂಡಕ್ಕೆ 11 ಕೋಟಿ ರು. ಉಳಿಯಲಿದೆ.</p>
ಹೀಗಾಗಿ ಕೆಲ ದುಬಾರಿ ಆಟಗಾರರನ್ನು ಕೈಬಿಡಲು ಸಿಎಸ್ಕೆ ಚಿಂತನೆ ನಡೆಸುತ್ತಿದೆ. ರೈನಾ ಕೈಬಿಟ್ಟರೆ ತಂಡಕ್ಕೆ 11 ಕೋಟಿ ರು. ಉಳಿಯಲಿದೆ.
<p>ಸುರೇಶ್ ರೈನಾ ಜತೆಗೆ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕೇದಾರ್ ಜಾದವ್ಗೂ ತಂಡದಿಂದ ಗೇಟ್ಪಾಸ್ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.</p>
ಸುರೇಶ್ ರೈನಾ ಜತೆಗೆ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕೇದಾರ್ ಜಾದವ್ಗೂ ತಂಡದಿಂದ ಗೇಟ್ಪಾಸ್ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.