ಮದುವೆ, ಹುಟ್ಟುಹಬ್ಬ ಹಾಗೂ ಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪ್ರೀತಿ ಪಾತ್ರರಿಗೆ ಉಡುಗೊರೆ (gift) ಗಳನ್ನು ನೀಡುತ್ತಾರೆ. ಉಡುಗೊರೆಯನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವು ಉಡುಗೊರೆಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಮದುವೆ, ಹುಟ್ಟುಹಬ್ಬ ಹಾಗೂ ಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪ್ರೀತಿ ಪಾತ್ರರಿಗೆ ಉಡುಗೊರೆ (gift) ಗಳನ್ನು ನೀಡುತ್ತಾರೆ. ಉಡುಗೊರೆಯನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವು ಉಡುಗೊರೆಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವು ಉಡುಗೊರೆಗಳನ್ನು ಮಂಗಳಕರ (auspicious) ವೆಂದು ಪರಿಗಣಿಸಲಾಗುವುದಿಲ್ಲ. ಈ ಉಡುಗೊರೆಗಳು ಮನೆಯಲ್ಲಿ ಬಡತನದ ಜೊತೆಗೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅವುಗಳ ಮಾಹಿತಿ ಇಲ್ಲಿದೆ.

Add Asianetnews Kannada as a Preferred SourcegooglePreferred

ಹಬ್ಬ, ಮದುವೆ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಉಡುಗೊರೆ ನೀಡುವುದು ಸಾಮಾನ್ಯ. ಸಾಮಾನ್ಯವಾಗಿ ನಾವು ಉಡುಗೊರೆಗಳನ್ನು ನೋಡಿ ಸಂತೋಷ (happiness) ಪಡುತ್ತೇವೆ, ಆದರೆ ಕೆಲವು ಉಡುಗೊರೆಗಳನ್ನು ಮನೆಗೆ ತರುವುದು ಅಮಂಗಳಕರ. ಇದರಿಂದ ಸಮಸ್ಯೆ (problem) ಎದುರಾಗುತ್ತದೆ.

ವಾಸ್ತು ಶಾಸ್ತ್ರ (Vastu Shastra0 ದ ಪ್ರಕಾರ, ಸಿಂಹ, ಹುಲಿ, ಚಿರತೆ ಮುಂತಾದ ಪ್ರಾಣಿ (animal) ಗಳ ಚಿತ್ರಗಳನ್ನು ಅಥವಾ ವಿಗ್ರಹಗಳನ್ನು ನೀಡುವುದು ಮತ್ತು ಸ್ವೀಕರಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಮನೆಯಲ್ಲಿನ ಜನರ ನಡುವೆ ವೈಮನಸ್ಸು (Animosity) ಉಂಟಾಗುತ್ತದೆ. ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನಾಶವಾಗಬಹುದು.

ಸೂರ್ಯಾಸ್ತಮಾನದ ಚಿತ್ರ

ವಾಸ್ತು ಶಾಸ್ತ್ರದ ಪ್ರಕಾರ, ಯಾರಾದರೂ ನಿಮಗೆ ಸೂರ್ಯಾಸ್ತಮಾನದ ಚಿತ್ರವನ್ನು ಉಡುಗೊರೆಯಾಗಿ ನೀಡಿದರೆ, ಅದನ್ನು ಸ್ವೀಕರಿಸಬೇಡಿ. ಏಕೆಂದರೆ ಇದು ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆ (Financial problem) ಗಳನ್ನು ಉಂಟು ಮಾಡಬಹುದು.

ಚೂಪಾದ ವಸ್ತುಗಳು

ವಾಸ್ತು ಶಾಸ್ತ್ರದ ಪ್ರಕಾರ, ಚಾಕು (knife) ಗಳು, ಕತ್ತರಿಗಳಂತಹ ಉಡುಗೊರೆ ವಸ್ತುಗಳನ್ನು ಸ್ವೀಕರಿಸುವುದು ಮನೆಯ ಸದಸ್ಯರ ನಡುವೆ ವಿವಾದ (dispute) ಗಳಿಗೆ ಕಾರಣವಾಗಬಹುದು. ಅಲ್ಲದೆ ಹಣಕಾಸಿನ ತೊಂದರೆಗಳನ್ನು ಎದುರಿಸಬಹುದು. ಆದ್ದರಿಂದ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ಸ್ವೀಕರಿಸುವುದನ್ನು ತಪ್ಪಿಸಿ.

ಮದುವೆಯಲ್ಲಿ ಮೆಹೆಂದಿ, ಅರಿಶಿಣ ಹಚ್ಚುವುದೇಕೆ?; ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?

ಕೈ ಗಡಿಯಾರಗಳು ಮತ್ತು ಚರ್ಮದ ವಸ್ತುಗಳು

ವಾಸ್ತು ಶಾಸ್ತ್ರದ ಪ್ರಕಾರ, ಯಾರಾದರೂ ನಿಮಗೆ ವಾಚ್ (Watch). ಕರವಸ್ತ್ರ, ಬೆಲ್ಟ್, ಪರ್ಸ್ ಅಥವಾ ಚರ್ಮದ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ, ಅವುಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಇದು ಕುಟುಂಬದ ಸದಸ್ಯರಲ್ಲಿ ಅಸೂಯೆ (Jealousy) ಯ ಭಾವನೆಗಳನ್ನು ಉಂಟುಮಾಡುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯ (harmony) ವನ್ನು ಕಾಪಾಡಿಕೊಳ್ಳಲು ಅಂತಹ ಉಡುಗೊರೆಗಳನ್ನು ಸ್ವೀಕರಿಸುವುದನ್ನು ತಪ್ಪಿಸಿ.

ಈ ವಸ್ತುವನ್ನು ನಿಮ್ಮ ಕೈ ಚೀಲದಲ್ಲಿ ಇರಿಸಿ

ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಪರ್ಸ್‌ನಲ್ಲಿ ಕಾವಾಡಿ ಮತ್ತು ಗೋಮತಿ ಚಕ್ರವನ್ನು ಇಟ್ಟುಕೊಳ್ಳಿ. ನೀವು ಕಾಡಿ ಅಥವಾ ಗೋಮತಿ ಚಕ್ರವನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡರೆ, ಮಹಾಲಕ್ಷ್ಮಿ (Mahalakshmi) ಯ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ ಮತ್ತು ನಿಮಗೆ ಎಂದಿಗೂ ಹಣ (money) ದ ಕೊರತೆಯಾಗುವುದಿಲ್ಲ. ಆದ್ದರಿಂದ ಯಾವಾಗಲೂ ಕೈಚೀಲದಲ್ಲಿ ಪ್ರಯೋಜನಗಳನ್ನು ತರುವಂತಹ ವಸ್ತುಗಳನ್ನು ಮಾತ್ರ ಇರಿಸಿಕೊಳ್ಳಿ. ಯಾವಾಗಲೂ ಸಣ್ಣ ಚಿನ್ನ ಅಥವಾ ಹಿತ್ತಾಳೆ (Brass) ಯನ್ನು ಕೈಚೀಲದಲ್ಲಿ ಇರಿಸಿ. 

ಈ ರಾಶಿಯವರು ಮನದ ಮಾತು ಹೇಳಲು ಭಯ ಪಡುತ್ತಾರೆ..

ಶಾಸ್ತ್ರದ ಪ್ರಕಾರ ಯಾವುದೇ ಗುರುವಾರದಂದು ಗಂಗಾನದಿಯ ಪವಿತ್ರ ನೀರಿನಿಂದ ಕಾಯಿನ್’ನನ್ನು ತೊಳೆಯಿರಿ ಮತ್ತು ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ವ್ಯಾಲೆಟ್’ (Wallet) ನಲ್ಲಿ ಹಣ ಉಳಿತಾಯವಾಗುತ್ತದೆ.