Asianet Suvarna News Asianet Suvarna News

Davanagere: ವೈಕುಂಠ ಏಕಾದಶಿ, ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜನಸಂದಣಿ

ದಾವಣಗೆರೆಯ ಎಂಸಿಸಿ ಬಿ ಬ್ಲಾಕಿನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸನ ದರ್ಶನ ಮಾಡಲು ಜನಸಂದಣಿ ಹೆಚ್ಚಾಗಿತ್ತು. ಸಾಲುಸಾಲಾಗಿ ಜನರು ದೇವರ ದರ್ಶನಕ್ಕಾಗಿ ಕಾದು ನಿಂತಿದ್ದರು. ಏಕಾದಶಿ ನಿಮಿತ್ತ ದೇವಸ್ಥಾನದ ಆಡಳಿತ ಮಂಡಳಿ ಎಲ್ಲಾ ‌ಏರ್ಪಾಡು ಮಾಡಿತ್ತು.

Vaikuntha Ekadashi Crowd at Sri Venkateswara Temple davangere gow
Author
First Published Jan 2, 2023, 4:33 PM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜ.2) ವೈಕುಂಠ ಏಕಾದಶಿ ವರ್ಷದಲ್ಲಿ ಬರುವ ಎಲ್ಲಾ‌ ಏಕಾದಶಿಗಳಿಗಿಂತಲೂ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಶ್ರೀವೆಂಕಟೇಶ್ವರ, ಶ್ರೀನಿವಾಸ,‌ ವಿಷ್ಣು ದೇವರ ಅವಾಸ ಸ್ಥಾನವಾದ ವೈಕುಂಠದ ಬಾಗಿಲು ತೆರೆದಿರುತ್ತದೆ ಎನ್ನುವ ನಂಬಿಕೆ ಇದೆ. ಅಂತೆಯೇ ದಾವಣಗೆರೆಯ ಎಂಸಿಸಿ ಬಿ ಬ್ಲಾಕಿನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸನ ದರ್ಶನ ಮಾಡಲು ಜನಸಂದಣಿ ಹೆಚ್ಚಾಗಿತ್ತು. ಸಾಲುಸಾಲಾಗಿ ಜನರು ದೇವರ ದರ್ಶನಕ್ಕಾಗಿ ಕಾದು ನಿಂತಿದ್ದರು. ಏಕಾದಶಿ ನಿಮಿತ್ತ ದೇವಸ್ಥಾನದ ಆಡಳಿತ ಮಂಡಳಿ ಎಲ್ಲಾ ‌ಏರ್ಪಾಡು ಮಾಡಿತ್ತು. ಅದರೂ ಜನತೆ ನಾ ಮುಂದು ತಾ ಮುಂದು ಎನ್ನುವಂತೆ ಮುಗಿಬಿದ್ದು ದೇವರ ದರ್ಶನ ಮಾಡಿದರು.  ಈ ವೇಳೆ ಕೆಲವರಿಗೆ ದೇವರ ದರ್ಶನವಾದರೆ, ಇನ್ನೂ ಕೆಲವರು ಅವಸರದಲ್ಲಿ ದೇವರ ದರ್ಶನ ಅಗಲಿಲ್ಲ ಎಂದು ಗೊಣಗುತ್ತಲೇ ವಾಪಸ್ಸಾದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಲಡ್ಡು ಪ್ರಸಾದ, ತುಳಸಿ, ಹೂವು ವಿತರಿಸಿದರು. ಇದನ್ನು ಸ್ವೀಕರಿಸಿದ ಜನತೆ ಧನ್ಯತಾ ಭಾವ ಮೆರೆದರು.

ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ  ದ್ವಾರವನ್ನು ಪ್ರವೇಶಿಸಿದರೆ ಅಂದರೆ ದೇವಾಲಯದ ಹೊರ ಭಾಗದಿಂದ ಒಳ ಭಾಗಕ್ಕೆ ದ್ವಾರದ ಮೂಲಕ ಪ್ರವೇಶಿಸಿದರೆ ಸಾಕ್ಷಾತ್ ವೈಕುಂಠಕ್ಕೆ ಪ್ರವೇಶ ಮಾಡಿದಂತೆ, ಈ ರೀತಿ ಪ್ರವೇಶ ಮಾಡಿದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ. 

Vaikuntha Ekadashi 2023: ವೈಕುಂಠ ಏಕಾದಶಿ ಸಂಭ್ರಮ: ಏಳು ಬಾಗಿಲುಗಳ ಮಹತ್ವ ಏನು?

ವೈಕುಂಠ ಏಕಾದಶಿಯ ದಿನ ವೈಕುಂಠದ ಸ್ವರ್ಗದ ಅಥವಾ ವಿಷ್ಣುಲೋಕದ ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಏಕಾದಶಿಯಂದು ವೆಂಕಟೇಶ್ವರ,‌ ಶ್ರೀನಿವಾಸ, ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಹಿಂದೂ ಧರ್ಮಿಯರಲ್ಲಿ ಇದೆ.

ಇಂದು ವೈಕುಂಠ ಏಕಾದಶಿ ಸಡಗರ: ವೈಯಾಲಿಕಾವಲ್ ದೇಗುಲದಲ್ಲಿ ತಿಮ್ಮಪ್ಪನಿಗೆ ವಿಶೇಷ ಪೂಜೆ

ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ,ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ.

Follow Us:
Download App:
  • android
  • ios