Asianet Suvarna News Asianet Suvarna News

ಹಾಲೋಕಳಿ ಜಾತ್ರೆ: 60 ಅಡಿ ಎತ್ತರದ ಕಂಬವೇರಿ ಸಾಹಸ ಮೆರೆದ ಯುವಕರು!

  • ಸಂಭ್ರಮದಿಂದ ಜರುಗಿದ ಹಾಲೋಕಳಿ ಜಾತ್ರೆ
  • 60 ಅಡಿ ಎತ್ತರದ ಕಂಬವೇರಿ ಸಾಹಸ ಮೇರೆದ ಯುವಕರು..!
  • ಸುರಪುರದ ವೇಣುಗೋಪಾಲ ಸ್ವಾಮಿ ಜಾತ್ರೆಗೆ ಬಂದ ಜನಸಾಗರ
  • ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
The Holokali fair was held with great enthusiasm at surapur yadgiri rav
Author
Bangalore, First Published Aug 22, 2022, 10:11 AM IST

ಯಾದಗಿರಿ (ಆ.22): ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಂತ ಜನಪ್ರೀಯ ಜಾತ್ರೆಯಾದ ಸುರಪುರ ಹಾಲೋಕುಳಿ ಜಾತ್ರೆಯಲ್ಲಿ ಯುವಕರ ಸಾಹಸ  ಮೈ ರೋಮಾಂಚನಗೊಳಿಸುತ್ತದೆ. 60 ಅಡಿ ಎತ್ತರದ ಕಂಬಗಳನ್ನು ಹತ್ತಿ ಕಂಬದ ಮಂಟಪದ ಮೇಲೆ  ಕಟ್ಟಲಾದ ಬಾಳೆ ಹಣ್ಣುಗಳ ಹೋಳುಗಳನ್ನು ಹರಿಯಲು ಯುವಕರು  ಕಂಬ ಏರುತ್ತಿದ್ದರೆ ಮತ್ತೊಂದು ಗುಂಪು   ಏರುತ್ತಿರುವರ ಮೇಲೆ  ನೀರು ಸುರಿಸಿ ಏರದಂತೆ ಅಡ್ಡಿ ಪಡಿಸುತ್ತಾರೆ. ಇಷ್ಟಾದ್ರು,  ಕಂಬಗಳನ್ನು ಹತ್ತಿ(ಏರಿ) ಬಾಳೆ ಹಣ್ಣುಗಳ ಹೋಳು ಹರಿದು  ಸಾಹಸ ಪ್ರದರ್ಶಿಸಲಾಗುತ್ತದೆ.

ಸುರಪುರ: ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಸಂಭ್ರಮ..!

ಸುರಪುರ ಸಂಸ್ಥಾನದ ಅರಸ ರಾಜಾ ಕೃಷ್ಣಪ್ಪ ನಾಯಕನಿಂದ ವಿಶೇಷ ಪೂಜೆ: ಯಾದಗಿರಿ(Yadagiri) ಜಿಲ್ಲೆಯ  ಸುರಪುರ(Surapura) ನಗರದ  ವೇಣುಗೋಪಾಲಸ್ವಾಮಿ(Venugopalaswamy)ಯ  ಹಾಲೋಕಳಿ ಜಾತ್ರೆಯಲ್ಲಿ ಇಂತಹ ಸನ್ನಿವೇಶ ಕಂಡುಬರುತ್ತದೆ. ಸುರಪುರ ಸಂಸ್ಥಾನದ ರಾಜಮನೆತನದವರು 300 ವರ್ಷಗಳಿಂದ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸುರಪುರದ ಅರಸರು ಗೋಸಲ ವಂಶಸ್ಥ ಅರಸ ಮನೆತನದವರಾಗಿದ್ದು ಹಾಲೋಕಳಿ ಜಾತ್ರೆಯನ್ನು ಸಂಭ್ರಮದಿಂದ ನಡೆಸಿಕೊಂಡು ಬರುತ್ತಿದ್ದು, ಸುರಪುರ ಸಂಸ್ಥಾನದ ಅರಸ ರಾಜಾ ಕೃಷ್ಣಪ್ಪ(Raja Krishnappa Shetty) ನಾಯಕ ಅವರ ನೇತೃತ್ವದಲ್ಲಿ ಅರಸು ಮನೆತನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತಿರುಪತಿಗೆ ಅರಸು ಪ್ರತಿನಿಧಿ ಮೂಲಕ ತಿರುಪತಿ ವೆಂಕಟೇಶ್ವರನಿಗೆ ಮೂಡುಪು ಸಲ್ಲಿಸಿದರು. 

ರಾಜಾ ಕೃಷ್ಣಪ್ಪ ನಾಯಕ ಅವರು ತಮ್ಮ ದರ್ಬಾರ್ ಹಾಲ್ ನಿಂದ ಹೊರಗಡೆ ಭಾಜಾ ಭಜಂತ್ರಿ ಮೇರವಣಿಗೆಯೊಂದಿಗೆ ಮುಡುಪನ್ನು ಅರಸು ಪ್ರತಿನಿಧಿ ಮೂಲಕ ತಿರುಪತಿಗೆ ಕಳುಹಿಸಿಕೊಟ್ಟರು. ಮುಡುಪು ದೇವರಿಗೆ ಸಲ್ಲಿಸಿದ ನಂತರ ನಂತರ ಅರಸು ಮನೆತನದವರು ಹಾಗೂ ವತನದಾರರು ಅರಸು ಮನೆತನದ ದರ್ಬಾರ್ ಹಾಲ್ ನಿಂದ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಆಗಮಿಸಿ ದೇವರಿಗೆ ಪೂಜೆ ಮಾಡಿದರು. ಸಂಸ್ಥಾನದ ಅರಸ ರಾಜಾಕೃಷ್ಣಪ್ಪ ನಾಯಕ ಹಾಗೂ ಅರಸು ಮನೆತನದವರು ರಾಜಾಪೋಷಾಕಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಸಂಸ್ಥಾನದ ರಾಜಾ ರಾಜಾಕೃಷ್ಣಪ್ಪ ನಾಯಕ ಅವರು  ನಾಣ್ಯಗಳನ್ನು ಜನರತ್ತ ತೂರುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು. 

60 ಅಡಿ ಎತ್ತರದ ಕಂಬಗನ್ನೇರಿ ಸಾಹಸ ಮೆರೆದ ಯುವಕರು..!

ನಂತರ 60 ಅಡಿ ಎತ್ತರದ 5 ದೇವರಗಂಬಗಳಿಗೆ ಅರದಾಳ, (ಜಾರುವ ಪದಾರ್ಥ) ಬೆಣ್ಣೆ ಸವರಲಾಗಿದ್ದ ಕಂಬಗಳನ್ನು ಏರಿ ಮಂಟಪದ ಮೇಲೆ ಕಟ್ಟಲಾದ ಬಾಳೆಹಣ್ಣು ಹೋಳುಗಳನ್ನು ಕಿತ್ತೆಸೆಯುವ ಸಾಹಸಮಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತವೆ. ನಿರ್ದಿಷ್ಟ ಗ್ರಾಮದ ಜನರಿಗೆ ಮಾತ್ರ ಸ್ತಂಭಾರೋಹಣ ಮಾಡಲು ಅವಕಾಶವಿರುವ ಈ ಸಾಹಸಮಯ ಜಾತ್ರೆಗೆ, ಅವರು ಭಾಜಾ ಭಜಂತ್ರಿಗಳ ಮೂಲಕ ಚರ್ಮದ ನೀರಿನ ಪಿಚಕಾರಿಯಿಂದ ಜನರಿಗೆ ನೀರು ಚಿಮ್ಮಿಸುತ್ತಾ ದೇವಸ್ಥಾನದ ದೇವರಗಂಬಗಳ ಬಳಿ ಸೇರುತ್ತಾರೆ. ನಿರ್ಧಿಷ್ಟಪಡಿಸಿದ ಯುವಕರು 60 ಅಡಿ ಎತ್ತರದ ಬೃಹತ್ ಕಂಬ ಹತ್ತಿ ಇಳಿಬಿಟ್ಟ ಬಾಳೆ ಹಣ್ಣು ಹೋಳುಗಳನ್ನು ಹರಿಯುವುದು ಸಾಹಸವಾದ್ರೆ, ಅದನ್ನು ಹರಿಯಲು ಬಿಡದಂತೆ ಕೆಳಗಿನಿಂದ ಪಿಚಕಾರಿಯಿಂದ ನೀರು ಚಿಮ್ಮಿಸುತ್ತಿದ್ದರೆ, ಮೇಲಿನಿಂದ ಬಾಳೆ ಹಣ್ಣು, ಎಣ್ಣೆ ಮಿಶ್ರಿತ ನೀರು ಸುರಿದು ಕಂಬ ಹತ್ತಲು ಅಡಚಣೆ ಮಾಡಲಾಗುತ್ತದೆ. ಸಾಹಸ ತೋರುವ ಯುವಕರು ಕೊನೆಗೂ ಹೋಳು ಹರಿದು ಕಿತ್ತೆಸೆಯುವ ದೃಶ್ಯವಂತೂ ನೋಡುಗರಿಗೆ ರೋಮಾಂಚನಗೊಳಿಸುತ್ತದೆ.  

ಯಾದಗಿರಿಯಲ್ಲಿ ರಸ್ತೆಯಲ್ಲೇ ಮೀನು ಮಾರಾಟ: ವರದಿ ಬಳಿಕ ಸ್ಥಳಕ್ಕೆ ಅಧಿಕಾರಿಗಳ ದೌಡು

ಜಾತ್ರೆಯಲ್ಲಿ ಶಾಸಕ ರಾಜುಗೌಡ ಹಾಗೂ ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಭಾಗಿ :

ಸುರಪುರದ ಹಾಲೋಕಳಿ ಜಾತ್ರೆಗೆ ಬೇರೆ ಬೇರೆ ಭಾಗಗಳಿಂದ ಹಲವಾರು ಭಕ್ತರು ಆಗಮಿಸುತ್ತಾರೆ. ಸುರಪುರೆ ಪ್ರಸಿದ್ಧ ಜಾತ್ರೆಯಲ್ಲಿ ಶಾಸಕ ರಾಜೂಗೌಡ(MLA Raju Gowda) ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ (Former MLA Raja Venkatappa Nayak)ರಾಜಾಪೋಷಾಕಿನ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ್ದರು. ಸ್ತಂಭಾರೋಹಣ ಸಂಭ್ರಮದ ನಂತರ ವೇಣುಗೋಪಾಲ ಸ್ವಾಮಿಯ ಪಲ್ಲಕ್ಕಿ ಉತ್ಸವ  ನಡೆಸಲಾಗುತ್ತದೆ. ಸುರಪುರ ಸಂಸ್ಥಾನದಲ್ಲಿ  1687 ರಲ್ಲಿ ಅಧಿಕಾರಕ್ಕೆ ಬಂದ ಪಿತಾಂಬರ ಬಹರಿ ಪಿಡ್ಡನಾಯಕ ಈ ವೇಣುಗೋಪಾಲ ದೇವಸ್ಥಾನವನ್ನು 1712ರ ಅವಧಿಯಲ್ಲಿ ನಿರ್ಮಿಸಿದ್ದಾನೆ. ಅಂದಿನಿಂದ ಇಲ್ಲಿಯವರೆಗೆ ಅರಸು ಮನೆತನದವರು ವೇಣುಗೋಪಾಲ ಸ್ವಾಮಿಯ ಜಾತ್ರೆ ಹಾಗೂ ವಿವಿಧ ಸಂಸ್ಕೃತಿ  ಕಾರ್ಯಕ್ರಮವನ್ನು ಉಳಿಸಿಕೊಂಡು ಸಂಪ್ರದಾಯ ಪಾಲನೆ ಮಾಡುತ್ತಿದ್ದು ಹೆಮ್ಮಯ ಸಂಗತಿಯಾಗಿದೆ.

Follow Us:
Download App:
  • android
  • ios