ನಿದ್ದೆಯಲ್ಲಿದ್ದ ಚಾಲಕನ ಗಮನ ಬೇರೆಡೆ ಸೆಳೆದು ಕಾರು ಕದ್ದ ಖದೀಮರು | ಓಲಾ-ಊಬರ್ ಚಾಲಕರಾಗಿದ್ದ ಲೋಕೇಶ್ ಎಂಬವರಿಗೆ ಮೋಸ
ಬೆಂಗಳೂರು(ಜ.12): ನಿದ್ದೆಯಲ್ಲಿದ್ದ ಚಾಲಕನ ಗಮನ ಬೇರೆಡೆ ಸೆಳೆದ ನಾಲ್ವರು ಕಳ್ಳರು ಕಾರು ಸಮೇತ ಪರಾರಿಯಾಗಿರುವ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾವರೆಕೆರೆ ನಿವಾಸಿ ಲೋಕೇಶ್ (45) ಕಾರು ಕಳೆದುಕೊಂಡವರು. ಓಲಾ-ಊಬರ್ ಚಾಲಕರಾಗಿದ್ದ ಲೋಕೇಶ್ ಜ.8ರಂದು ತಡರಾತ್ರಿ 2.30ರಲ್ಲಿ ಕೆ.ಆರ್.ಪುರದಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಮನೆಗೆ ಹೋಗುತ್ತಿದ್ದರು. ಮಂಪರು ನಿದ್ರೆ ಹಿನ್ನೆಲೆಯಲ್ಲಿ ಇಂದಿರಾನಗರದ ಬೇಕರಿಯೊಂದರ ಮುಂದೆ ಕಾರು ನಿಲ್ಲಿಸಿ ಕಾರಿನೊಳಗೆ ನಿದ್ರೆಗೆ ಜಾರಿದ್ದರು.
ಕಾರು ಅಪಘಾತ: ಸಚಿವರಿಗೆ ಗಂಭೀರ ಗಾಯ, ಪತ್ನಿ ಸೇರಿ ಇಬ್ಬರು ಸಾವು
ಮುಂಜಾನೆ 5ರ ವೇಳೆಗೆ ಅಪರಿಚಿತನೊಬ್ಬ ಚಾಲಕನನ್ನು ನಿದ್ರೆಯಿಂದ ಎಬ್ಬಿಸಿ ನಿಮ್ಮ ಕಾರಿನ ಕೀಯನ್ನು ಯಾರೋ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದು, ಲೋಕೇಶ್ನನ್ನು ಎಬ್ಬಿಸಿದ ವ್ಯಕ್ತಿ ಸಮೀಪದಲ್ಲಿದ್ದ ಕಟ್ಟಡವೊಂದರ ಬಳಿ ಕೀ ಹುಡುಕಲು ಕರೆದೊಯ್ದಿದ್ದಾನೆ. ಈ ವೇಳೆ ಆರೋಪಿ ಲೋಕೇಶ್ರ ಗಮನ ಬೇರೆಡೆ ಸೆಳೆದು ತನ್ನ ಸಹಚರರ ಜತೆ ಕಾರು ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 12, 2021, 7:21 AM IST