ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಮಾಜಿ ಸಚಿವ ವರ್ತೂರ್ ಪ್ರಕಾಶ್/ ನನ್ನ ಮೇಲೆ 8 ಜನರಿಂದ ಹಲ್ಲೆಯಾಗಿದೆ/ ಇದೇ ತಿಂಗಳು 25 ರಂದು ಹಲ್ಲೆ ಮಾಡಿದ್ದಾರೆ‌/ ಕೋಲಾರದ ಬೇಗ್ಲೀ ಹೊಸಹಳ್ಳಿಯಲ್ಲಿ ಹಲ್ಲೆ ಮಾಡಿದ್ದಾರೆ‌/ ಮೂರದಿನಗಳ ಕಾಲ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ/ 

ಬೆಂಗಳೂರು(ಡಿ. 01) ಮಾಜಿ ಸಚಿವರನ್ನೇ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಇದು ಕರ್ನಾಟಕದ ಕೋಲಾರದ್ದೇ ಪ್ರಕರಣ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಅಪಹರ ಮಾಡಿ ಹಲ್ಲೆ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಹಲ್ಲೆ ಮಾಡಿ ನನ್ನ ಬಳಿ 30 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನನ್ನ ಡೈವರ್ ಮೇಲೂ ಹಲ್ಲೆಯಾಗಿದೆ. ನಮ್ಮ ಡ್ರೈವರ್ ಸುನೀಲ್ ಘಟನೆ ನಡೆದ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಅವನ ಮೇಲು ಕೂಡ ಹಲ್ಲೆಯಾಗಿದೆ. ಮೂರು ದಿನಗಳ ಬಳಿಕ ಹೊಸಕೋಟೆಯಲ್ಲಿ ನನನ್ನು‌ ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ವರ್ತೂರು ಹೇಳಿದ್ದಾರೆ.

ಕೊನೆಗೂ ಬಯಲಾಯ್ತು ಬಾಲಕನ ಕಿಡ್ನಾಪ್ ಕಹಾನಿ.. ಸಿನಿಮಾ ಅಲ್ಲ

ಕೋಲಾರದ ಚೌಡೇಶ್ವರಿ ಆಸ್ಪತ್ರೆಯಲ್ಲಿ ಆ್ಯಕ್ಸಿಡೆಂಟ್ ಆಗಿದೆ ಎಂದು ವರ್ತೂರು ಚಿಕಿತ್ಸೆ ಪಡೆದುಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಯತ್ನ ಮಾಡಿದ್ದರೆ ಪ್ರಕಾಶ್? ಎಂಬುದು ತನಿಖೆ ನಂತರವೇ ಗೊತ್ತಾಗಲಿದೆ.