ನಗದು ನೀಡಿದರೆ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ ಖಾಸಗಿ ಕಂಪನಿ ನೌಕರನಿಗೆ ₹50 ಸಾವಿರ ಪಡೆದು ಕಿಡಿಗೇಡಿಯೊಬ್ಬ ವಂಚಿಸಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಡಿ.8) :  ನಗದು ನೀಡಿದರೆ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ ಖಾಸಗಿ ಕಂಪನಿ ನೌಕರನಿಗೆ ₹50 ಸಾವಿರ ಪಡೆದು ಕಿಡಿಗೇಡಿಯೊಬ್ಬ ವಂಚಿಸಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಾಲ್‌ಬಾಗ್ ರಸ್ತೆಯ ಸುಧಾನಗರದ ನಿವಾಸಿ ಬಿ.ಚಂದ್ರೇಗೌಡ ಮೋಸ ಹೋಗಿದ್ದು, ಎರಡು ದಿನಗಳ ಹಿಂದೆ ಎಟಿಎಂಗೆ ಹಣ ಜಮೆ ಮಾಡಲು ಅವರು ತೆರಳಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿ ಇದೀಗ ಹೀರೋ ಆಗಲು ಹೋಗಿ ಜೈಲು ಸೇರಿದ ನಟ!

ತುರ್ತು ಕಷ್ಟದ ಹೇಳಿ ಹಣ ಲಪಾಟಿಯಿಸಿದ:

ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿರುವ ಚಂದ್ರೇಗೌಡ, ಸುಧಾಮನಗರದಲ್ಲಿ ನೆಲೆಸಿದ್ದಾರೆ. ಡಿ.5ರಂದು ಶಾಂತಿನಗರದ ಖಾಸಗಿ ಬ್ಯಾಂಕ್‌ ಖಾತೆಗೆ ತಮ್ಮ ಕಂಪನಿ ಖಾತೆಗೆ ₹50 ಸಾವಿರ ಜಮೆ ಮಾಡಲು ಚಂದ್ರೇಗೌಡ ತೆರಳಿದ್ದರು. ಆ ವೇಳೆ ಎಟಿಎಂ ಘಟಕದ ಬಳಿ ಎದುರಾದ ಅಪರಿಚಿತ, ‘ಸರ್ ನನಗೆ ತುರ್ತಾಗಿ ₹50 ಸಾವಿರ ನಗದು ಬೇಕಿದೆ. ಆದರೆ ತಾಂತ್ರಿಕ ತೊಂದರೆಯಿಂದ ನನ್ನ ಖಾತೆಯಿಂದ ಎಟಿಎಂ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.

ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಅರೆಸ್ಟ್

ನೀವು ನಗದು ನೀಡಿದರೆ ತಕ್ಷಣವೇ ನಾನು ಆನ್‌ಲೈನ್‌ನಲ್ಲಿ ಆ ಹಣ ವರ್ಗಾಯಿಸುತ್ತೇನೆ’ ಎಂದು ಕೋರಿದ್ದಾನೆ. ಈ ಮಾತು ನಂಬಿದ ಚಂದ್ರೇಗೌಡ ಅ‍ವರು, ತಮ್ಮಲ್ಲಿದ್ದ ₹50 ಸಾವಿರವನ್ನು ಕೊಟ್ಟಿದ್ದಾರೆ. ಹೀಗೆ ಹಣ ಪಡೆದ ಬಳಿಕ ಆತ ನಾಪತ್ತೆಯಾಗಿದ್ದಾನೆ. ಕೊನೆಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿ ಅಶೋಕನಗರ ಠಾಣೆಗೆ ತೆರಳಿ ಚಂದ್ರೇಗೌಡ ದೂರು ದಾಖಲಿಸಿದ್ದಾರೆ.