Asianet Suvarna News Asianet Suvarna News

ಮೈಸೂರು: ರೌಡಿಶೀಟರ್‌ ಚಂದ್ರು ಕೊಲೆ, ಮತ್ತೆ ಐವರ ಬಂಧನ

ಪಡುವಾರಹಳ್ಳಿಯ ವರುಣ್‌, ದರ್ಶನ್‌, ಕುವೆಂಪುನಗರದ ಅನಿಲ್‌, ಸಚಿನ್‌ ಮತ್ತು ಕಾರಿನ ಚಾಲಕ ವೆಂಕಟೇಶ್‌ ಎಂಬವರೇ ಬಂಧಿತ ಆರೋಪಿಗಳು. ಎಚ್‌.ಡಿ. ಕೋಟೆ ತಾಲೂಕು ಹ್ಯಾಂಡ್‌ಪೋಸ್ಟ್‌ ಬಳಿ ಆರೋಪಿಗಳನ್ನು ವಶಕ್ಕೆ ಪಡೆದಿದ ಪೊಲೀಸರು 

Five More Arrested on Rowdysheeter Chandru Murder Case in Mysuru grg
Author
First Published May 24, 2023, 4:00 AM IST

ಮೈಸೂರು(ಮೇ.24): ರೌಡಿಶೀಟರ್‌ ಚಂದ್ರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳು ಮತ್ತು ಕಾರಿನ ಚಾಲಕ ಸೇರಿದಂತೆ ಐವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪಡುವಾರಹಳ್ಳಿಯ ವರುಣ್‌, ದರ್ಶನ್‌, ಕುವೆಂಪುನಗರದ ಅನಿಲ್‌, ಸಚಿನ್‌ ಮತ್ತು ಕಾರಿನ ಚಾಲಕ ವೆಂಕಟೇಶ್‌ ಎಂಬವರೇ ಬಂಧಿತ ಆರೋಪಿಗಳು. ಎಚ್‌.ಡಿ. ಕೋಟೆ ತಾಲೂಕು ಹ್ಯಾಂಡ್‌ಪೋಸ್ಟ್‌ ಬಳಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೇ 18 ರಂದು ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯಲ್ಲಿ ಟೈಲರ್‌ ಅಂಗಡಿಯ ಬಳಿ ಚಂದ್ರು ಹತ್ಯೆಯಾಗಿತ್ತು. 4 ದ್ವಿಚಕ್ರ ವಾಹನಗಳಲ್ಲಿ 11 ಮಂದಿ ಬಂದು ಅಂಗಡಿಯ ಮುಂದೆ ನಿಂತಿದ್ದ ಚಂದುನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು. ಈ ಸಂಬಂಧ ವಿವಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೈಸೂರು: ರೌಡಿಶೀಟರ್‌ ಚಂದ್ರು ಕೊಲೆ, 7 ಮಂದಿ ಬಂಧನ

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರ ತಂಡ 7 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇವರಿಗಾಗಿ ಶೋಧ ಮುಂದುವರಿಸಿದ್ದ ಪೊಲೀಸರು ಮಂಗಳವಾರ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ತಲೆಮರೆಸಿಕೊಂಡು ಎಚ್‌.ಡಿ. ಕೋಟೆ ಸುತ್ತಮುತ್ತಾ ಓಡಾಡಲು ಬಾಡಿಗೆ ಕಾರೊಂದನ್ನು ಬಳಸಿದ್ದರು. ವೆಂಕಟೇಶ್‌ ಆ ಕಾರನ್ನು ಬೇರೊಬ್ಬರಿಂದ ಬಾಡಿಗೆ ಪಡೆದು ಸಹಕರಿಸಿದ್ದ. ಹೀಗಾಗಿ, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

Follow Us:
Download App:
  • android
  • ios