Crime News: ವಿದ್ಯಾಭ್ಯಾಸದ ಕಡೆ ನಿರ್ಲಕ್ಷ್ಯ: ಅಣ್ಣನಿಂದ ಬಿಎಡ್ ವಿದ್ಯಾರ್ಥಿ ಹತ್ಯೆ
Crime News: ಅಧ್ಯಯನವನ್ನು ನಿರ್ಲಕ್ಷಿಸಿದ ಕಾರಣಕ್ಕೆ ಯುವಕನೊಬ್ಬ ತನ್ನ ಸಹೋದರನನ್ನು ಕೊಂದಿರುವ ಘಟನೆ ಓಡಿಶಾದ ಭುವನೇಶ್ವರದಲ್ಲಿ ನಡೆದಿದೆ
ಭುವನೇಶ್ವರ (ಸೆ. 22): ಅಧ್ಯಯನವನ್ನು ನಿರ್ಲಕ್ಷಿಸಿದ ಕಾರಣಕ್ಕೆ 25 ವರ್ಷದ ಯುವಕನೊಬ್ಬ ತನ್ನ 21 ವರ್ಷದ ಸಹೋದರನನ್ನು ಕೊಂದಿರುವ ಘಟನೆ ಭುವನೇಶ್ವರದ ಸಾಲಿಯಾ ಸಾಹಿ ಪ್ರದೇಶದಲ್ಲಿ ನಡೆದಿದೆ. ಎಂಬಿಎ (MBA) ಪದವೀಧರನಾಗಿರುವ ಆರೋಪಿ ಬಿಸ್ವಮೋಹನ್ ಸೇನಾಪತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮೃತ ವಿದ್ಯಾರ್ಥಿಯನ್ನು ರಾಜಮೋಹನ್ ಸೇನಾಪತಿ ಎಂದು ಗುರುತಿಸಲಾಗಿದ್ದು, ಬಿಎಡ್ ವಿದ್ಯಾರ್ಥಿಯಾಗಿದ್ದ. ಇಬ್ಬರೂ ಸಹೋದರರು ತಮ್ಮ ಉನ್ನತ ವ್ಯಾಸಂಗಕ್ಕಾಗಿ ಭುವನೇಶ್ವರಕ್ಕೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ.
ಕಿರಿಯ ಸಹೋದರ ಬಾರಾಮುಂಡಾದಲ್ಲಿ ತನ್ನ ಸ್ನೇಹಿತರೊಂದಿಗೆ ವಾಸಿಸಲು ತೆರಳುವ ಮೊದಲು ರಾಜ್ಮೋಹನ್ ಮತ್ತು ಬಿಸ್ವಾಮೊಹಮ್ ಸಾಲಿಯಾ ಸಾಹಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಬಳಿಕ ಬಿಸ್ವಾಮೊಹಮ್ ಹಳೆಯ ಮನೆಯಲ್ಲೇ ಉಳಿದುಕೊಂಡು ಬ್ಯಾಂಕ್ ಪರೀಕ್ಷೆಗೆ ತಯಾರಿ ಮುಂದುವರೆಸಿದ್ದರು.
ತರಗತಿಗಳನ್ನು ಮಿಸ್ ಮಾಡಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದಕ್ಕಾಗಿ ರಾಜ್ಮೋಹನ್ ಮೇಲೆ ಬಿಸ್ವಮೊಹಮ್ ಕೋಪಗೊಂಡಿದ್ದರು ಎನ್ನಲಾಗಿದೆ. ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಕೊಡದಿದ್ದಕ್ಕಾಗಿ ಬಿಸ್ವಮೊಹಮ್ಗೆ ಬೇಸರವಾಗಿತ್ತು. ಇತ್ತ ರಾಜ್ಮೋಹನ್ ತಮ್ಮ ತಂದೆಯಿಂದ ಹಣ ಪಡೆಯಲು ತಮ್ಮ ಗ್ರಾಮಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರೇಯಸಿಯನ್ನ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ: 4 ವರ್ಷದ ಪ್ರೀತಿ ಜಗಳದಲ್ಲಿ ಅಂತ್ಯ?
ಶಾಲಾ ಶಿಕ್ಷಕನಾಗಿರುವ ಅವರ ತಂದೆ ತಮ್ಮ ಪದೇ ಪದೇ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಬಗ್ಗೆ ಬಿಸ್ವಾಮೊಹಮ್ಗೆ ತಿಳಿಸಿದ್ದಾರೆ. ಹೀಗಾಗಿ ಸೋಮವಾರ ರಾತ್ರಿ ಸಾಲಿಯಾ ಸಾಹಿಯಲ್ಲಿರುವ ತಮ್ಮ ನಿವಾಸಕ್ಕೆ ರಾಜ್ಮೋಹನ್ನನು ಕರೆಸಿದ್ದಾರೆ. ರಾಜ್ಮೋಹನ್ ತನ್ನ ಸಹೋದರನನ್ನು ಗದರಿಸಿದ್ದರಿಂದ ಇಬ್ಬರ ನಡುವೆ ಜಗಳವಾಗಿದೆ. ಕೋಪದ ಭರದಲ್ಲಿ ಬಿಸ್ವಮೋಹನ್ ಮರದ ಹಲಗೆಯಿಂದ ರಾಜಮೋಹನ್ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಘಟನೆಯಲ್ಲಿ ಯುವಕನಿಗೆ ಆಂತರಿಕ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ಬಿಸ್ವಮೋಹನ್ ರಾಜ್ಮೋಹನ್ನ ರೂಮ್ಮೇಟ್ಗಳನ್ನು ರೂಮಿಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ರಾತ್ರಿ ತಮ್ಮ ಕೋಣೆಯನ್ನು ತಲುಪಿದ ನಂತರ, ರಾಜ್ಮೋಹನ್ ವಾಂತಿ ಮಾಡಲು ಪ್ರಾರಂಭಿಸಿದ್ದ. ಈ ಬಳಿಕ ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಆಂತರಿಕ ರಕ್ತಸ್ರಾವದಿಂದ ರಾಜಮೋಹನ್ ಕೊನೆಯುಸಿರೆಳೆದಿದ್ದಾರೆ.