ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಂಚಿನ ಚನ್ನಮಲ್ಲೀಪುರ ಗ್ರಾಮದ ಜಾಕೋಬ್‌ ಫಾರಂನದಲ್ಲಿ ಇಬ್ಬರು ರುಂಡ ರಹಿತ ಪ್ರಾಣಿಯನ್ನು ಮಾಂಸಕ್ಕಾಗಿ ಸುಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಲಯ ಅರಣ್ಯಾಧಿ​ಕಾರಿ ಬಿ.ಎಂ. ಮಲ್ಲೇಶ್‌ ಮತ್ತವರ ಸಿಬ್ಬಂದಿ 

ಗುಂಡ್ಲುಪೇಟೆ(ಜು.11): ಬೆಳೆ ರಕ್ಷಣೆಗೆ ಅಕ್ರಮವಾಗಿ ವಿದ್ಯುತ್‌ ಹಾಯಿಸಿದ್ದ ತಂತಿಗೆ ಸಿಲುಕಿ ಮೃತಪಟ್ಟಿ​ದ್ದ ಕಾಡಂದಿಯನ್ನು ರೈತನೊಬ್ಬ ಕೇರಳಿಗರಿಗೆ ನೀಡಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಚನ್ನಮಲ್ಲೀಪುರ ಗ್ರಾಮದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ತಾಲೂಕಿನ ಚನ್ನಮಲ್ಲಿಪುರ ಗ್ರಾಮದ ಬಸಪ್ಪ ಆಲಿಯಾಸ್‌ ದೊಡ್ಡ ಬಸಪ್ಪಗೆ ಸೇರಿದ ಸ.ನಂ. 99 ರಲ್ಲಿ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್‌ಗೆ ಬಲಿಯಾಗಿತ್ತು. ಸತ್ತ ಕಾಡಂದಿಯನ್ನು ಬಸಪ್ಪ ಆಲಿಯಾಸ್‌ ದೊಡ್ಡಬಸಪ್ಪ ಮಾಂಸಕ್ಕಾಗಿ ನಮಗೆ ನೀಡಿದ್ದಾರೆ ಎಂದು ಬಂಧಿ​ತ ಕೇರಳ ಮೂಲದ ಆರೋಪಿಗಳು ಹೇಳಿದ್ದಾರೆ.

ಪ್ರೇಯಸಿಯ ಕಥೆ ಮುಗಿಸಿ ದೇಶ ಸುತ್ತಿದ ಕಿಲ್ಲರ್ ಪ್ರೇಮಿ: ಹೈದರಾಬಾದ್‌ ಟೆಕ್ಕಿಯನ್ನ ಡೆಲ್ಲಿ ಬಾಯ್ ಹೇಗೆಲ್ಲಾ ಕಾಡಿಬಿಟ್ಟ..?

ಈ ಸಂಬಂಧ ಮದ್ದೂರು ವಲಯ ಅರಣ್ಯಾ​ಧಿಕಾರಿ ಬಿ.ಎಂ. ಮಲ್ಲೇಶ್‌ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಸೆಕ್ಷನ್‌ 9,39,59 ಆರ್‌/ಡಬ್ಲೂತ್ರ್ಯ 2/16 ಸಿ,2/36,51,55 ತ ಪ್ರಕಾರ ಅಪರಾಧ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಂಚಿನ ಚನ್ನಮಲ್ಲೀಪುರ ಗ್ರಾಮದ ಜಾಕೋಬ್‌ ಫಾರಂನದಲ್ಲಿ ಇಬ್ಬರು ರುಂಡ ರಹಿತ ಪ್ರಾಣಿಯನ್ನು ಮಾಂಸಕ್ಕಾಗಿ ಸುಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿ​ಕಾರಿ ಬಿ.ಎಂ. ಮಲ್ಲೇಶ್‌ ಮತ್ತವರ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಕನಕಗಿರಿಯಲ್ಲಿ ಮತ್ತೆ ಅಶ್ಲೀಲ ಗೋಡೆ ಬರಹ; ಪೊಲೀಸ್ ಇಲಾಖೆಗೆ ತಲೆನೋವು

ಆರೋಪಿಗಳ ವಿಚಾರಣೆ ಸಮಯದಲ್ಲಿ ಸುಡುತ್ತಿರುವ ಮಾಂಸ ಕಾಡಂದಿಯದಾಗಿತ್ತು. ಮಾಂಸ ಸುಡುತ್ತಿದ್ದ ಕೇರಳ ಮೂಲದ ಎಂ.ವಿ. ಥಾಮಸ್‌, ಶಿಜು ಜಾಕೋಬ್‌ ಬಾಯಿ ಬಿಟ್ಟಿದ್ದಾರೆ. ಬಂ​ಧಿತ ಇಬ್ಬರು ಆರೋಪಿಗಳನ್ನು ವಿಚಾರಣೆಯ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಧಿ​ೕಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರೈತ ಬಸಪ್ಪ ಆಲಿಯಾಸ್‌ ದೊಡ್ಡ ಬಸಪ್ಪ ತಲೆಮರೆಸಿಕೊಂಡಿದ್ದು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿ​ಕಾರಿ ಜಿ.ರವೀಂದ್ರ ಮಾಹಿತಿ ಒದಗಿಸಿದ್ದಾರೆ.
ಎಸಿಎಫ್‌ ಜಿ.ರವೀಂದ್ರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಬಿ.ಎಂ. ಮಲ್ಲೇಶ್‌, ಉಪ ವಲಯ ಅರಣ್ಯಾ​ಕಾರಿ ಪ್ರವೀನ್‌ ಹಂಚಿನಾಳ್‌,ಗಸ್ತು ವನ ಪಾಲಕ ದೇವಿಂದ್ರ ಯರಗಲ್ಲ, ನವೀನ ಹಾಗೂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.