Asianet Suvarna News Asianet Suvarna News

Chikkamagaluru; ನೀರಿನ ತೊಟ್ಟಿಯಲ್ಲಿ ಬಿದ್ದು 11 ತಿಂಗಳ ಮಗು ಸಾವು

ಮನೆಯಂಗಳದ ತೊಟ್ಟಿಯಲ್ಲಿ 11 ತಿಂಗಳ ಮಗುವೊಂದು ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶಿಕಾರಿಪುರ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

An 11-month-old baby died after falling into a water tank in Chikkamagaluru gow
Author
First Published Sep 25, 2022, 6:45 PM IST

ಚಿಕ್ಕಮಗಳೂರು (ಸೆ.25): ಹನ್ನೊಂದು ತಿಂಗಳ ಮಗು ತೊಟ್ಟಿಯಲ್ಲಿ ಬಿದ್ದು ಸಾವು ಕಂಡ ಹೃದಯ ವಿದ್ರಾವಕ ಘಟನೆ ಶಿಕಾರಿಪುರ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ಮುದ್ದಿನ ಮಗನಾದ ಅಕ್ಷಯ್ (11 ತಿಂಗಳು ) ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಮುಂದಿನ ವಾರ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಮಗುವಿನ ಜನ್ಮ  ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಯೋಚಿಸಿದ್ದರು. ಮಗುವಿನ ಸಾವಿನಿಂದ  ಮನೆಯಲ್ಲಿಗ ಸಂಭ್ರಮದ ಬದಲಾಗಿ ಸೂತಕದ ವಾತಾವರಣ ನಿರ್ಮಾಣವಾಗಿ ಸ್ಮಶಾನ ಮೌನ ಆವರಿಸಿದೆ. ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ  ಕುಟುಂಬಸ್ಥರು ವಾಹನ ತೊಳೆಯಲು ಪೂಜೆ ಪುನಸ್ಕಾರದ ಕಡೆ ಗಮನ ಕೊಟ್ಟಿದ್ದರು. ಈ  ಸಂದರ್ಭದಲ್ಲಿ ಅಂಬೆಗಾಲು ಇಡುತ್ತಾ ಒಡಾಡುತ್ತಿದ್ದ ಮಗು ತನಗರಿವಿಲ್ಲದಂತೆ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ. ಸ್ವಲ್ಪ ಹೊತ್ತಿನ ನಂತರ  ಮಗುವಿನ ತಾತ ವಾಹನ ತೊಳೆಯಲು  ತೊಟ್ಟಿಯಲ್ಲಿ ಬಗ್ಗಿದಾಗ ಮಗುವನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ. ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯಾಧಿಕಾರಿಗಳ ತಂಡ  ಮಗುವಿನ ಕಳೆಬರಹವನ್ನು ಪೋಷಕರಿಗೆ  ನೀಡುವಾಗ ಅಲ್ಲಿ ಸೇರಿದ್ದ ಜನಸ್ತೋಮ ಹಾಗೂ ಕುಟುಂಬಸ್ಥರ ಆಕ್ರಂದನ ನೆರೆದಿದ್ದ ಜನರ ಹೃದಯ ಹಿಂಡುತ್ತಿತ್ತು.

ಮೃತ ಮಗುವಿನ  ಮೂರು ವರ್ಷದ  ಅಕ್ಕ ನಕ್ಷತ್ರ   ಹಾಗೂ ತಂದೆ ತಾಯಿಯ ದುಃಖದ ಪಾಡು ಹೇಳತೀರದು. ಇಂದು ಸಂಜೆಯೇ ಗ್ರಾಮದ  ಹಿಂದೂ ರುದ್ರಭೂಮಿಯಲ್ಲಿ  ಭಗವಂತನಿಗೆ ಹಿಡಿಶಾಪ ಹಾಕುತ್ತಾ  ಊರಿನ  ಗ್ರಾಮಸ್ಥರ ನಡುವೆಯೇ ಆ ಪುಟ್ಟ ಮಗುವಿನ ಶವ ಸಂಸ್ಕಾರ ನಡೆಯಿತು. ಇಡೀ ಊರಿಗೆ ಊರೇ ಶವಸಂಸ್ಕಾರದಲ್ಲಿ  ಭಾಗಿಯಾಗಿದ್ದು ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ  ಸಂಪೂರ್ಣ ಮೌನ ಆವರಿಸಿತ್ತು.

ಅಪಘಾತದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ ಸಾವು; ನೇತ್ರದಾನ
ತುರುವೇಕೆರೆ: ತುಮಕೂರು ವಿಶ್ವವಿದ್ಯಾಲಯದ ಅಂತಿಮ ಪತ್ರಿಕೋದ್ಯಮದಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ಅಪಘಾತದಲ್ಲಿ ಕೊನೆಯುಸಿರೆಳೆದಿರುವ ಘಟನೆ ವರದಿಯಾಗಿದೆ.

ತಾಲೂಕಿನ ನರೀಗೇಹಳ್ಳಿಯ ಪ್ರಕಾಶ್‌ ಮತ್ತು ಮಂಜುಳಾ ದಂಪತಿ ಮಗ ದರ್ಶನ್‌ (21) ತೋಟಕ್ಕೆ ಹೋಗಿ ರಸ್ತೆ ಬದಿ ದ್ವಿ ಚಕ್ರ ವಾಹನದ ಬಳಿ ನಿಂತಿದ್ದ. ಯಡಿಯೂರಿನಿಂದ ಕಲ್ಲೂರು ಕ್ರಾಸ್‌ ಕಡೆಗೆ ತೆರಳುತ್ತಿದ್ದ ಟಾಟಾ ಎಸಿ ವಾಹನವು ದರ್ಶನ್‌ಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ತಲೆಗೆ ತೀವ್ರ ಪೆಟ್ಟುಬಿದ್ದಿದೆ. ಕೂಡಲೇ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಸಹ ದರ್ಶನ್‌ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ.

ಬೂದಿಗೊಪ್ಪ ಕ್ರಾಸ್ ಬಳಿ ಭೀಕರ ಅಪಘಾತ, ಕುಡುಚಿ ಠಾಣೆ ASI ಪತ್ನಿ, ಪುತ್ರಿ ಸೇರಿ ಮೂವರ ಸಾವು!

ದರ್ಶನ್‌ ಆಸೆಯಂತೆ ಅವನ ಪೋಷಕರು ಮತ್ತು ಸ್ನೇಹಿತರು ಅವನ ಅಂಗಾಂಗಗಳನ್ನು ದಾನ ಮಾಡಲು ಬಯಸಿದರು. ಆದರೆ ಅಪಘಾತದಲ್ಲಿ ಮೆದುಳಿಗೆ ತೀವ್ರಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಹಲವಾರು ಅಂಗಾಗಗಳು ನಿಷ್ಕಿ್ರಯವಾಗಿದ್ದರಿಂದ ಬೇರೆ ಯಾವುದೇ ಅಂಗಗಳನ್ನು ಕಸಿ ಮಾಡಲು ಸಾಧ್ಯವಿಲ್ಲವೆಂದು, ನೇತ್ರವನ್ನು ಮಾತ್ರ ತೆಗೆದುಕೊಳ್ಳಲು ಮಾತ್ರ ಸಾಧ್ಯ ಎಂದು ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯರು ತಿಳಿಸಿದರು. ಮೃತ ದರ್ಶನ್‌ನ ಆಸೆಯಂತೆ ಅವನ ಪೋಷಕರು ನೇತ್ರದಾನಕ್ಕೆ ಒಪ್ಪಿದರು.

CHITRADURGA: ಚುನಾವಣೆ ದ್ವೇಷ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಂಗಾರಪ್ಪ, ಕಾಟಪ್ಪ ಬೆಂಬಲಿಗರು

ಅತಿ ಚಿಕ್ಕ ವಯಸ್ಸಿನಲ್ಲಿ ಅಕ್ಕಪಕ್ಕದ ಗ್ರಾಮಗಳ ಜನರ ಪ್ರೀತಿ ಗಳಿಸಿದ್ದ ದರ್ಶನ್‌ನ ಅಂತ್ಯ ಸಂಸ್ಕಾರಕ್ಕೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕುಟುಂಬದವರ ಹಾಗೂ ಬಂಧು ಮಿತ್ರರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕ ಮಸಾಲಾ ಜಯರಾಮ್‌, ಹಳ್ಳಿಕಾರ್‌ ಸಮುದಾಯದ ಮುಖಂಡರಾದ ವಕೀಲ ನಾಗಯ್ಯ, ಪುಟ್ಟೇಗೌಡ, ಸೀಗೇಹಳ್ಳಿ ವಿಎಸ್‌ಎಸ್‌ಎನ್‌ನ ನಿರ್ದೇಶಕ ಜಿ.ಎಸ್‌.ತಮ್ಮಣ್ಣಗೌಡ ಸೇರಿದಂತೆ ಹಲವಾರು ಮಂದಿ ದರ್ಶನ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Follow Us:
Download App:
  • android
  • ios