ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಮನೆಗಳವು ಪ್ರಕರಣ ಸಂಬಂಧ ಆರೋಪಿ ರಘುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರ ತಿಳಿದು ಗಿರಿನಗರ ಠಾಣೆ ಪೊಲೀಸರು, ನ್ಯಾಯಾಲಯ ದಲ್ಲಿ ಬಾಡಿ ವಾರೆಂಟ್ ಪಡೆದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಆರೋಪಿ ರಘುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ದ್ವಿಚಕ್ರ ವಾಹನ ಕಳವು ತಾನೇ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ. 

ಬೆಂಗಳೂರು(ಆ.25): ಮನೆಗಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಕನಕಪುರ ಮುಖ್ಯ ರಸ್ತೆಯ ಬಾಲಾಜಿ ಲೇಔಟ್ ನಿವಾಸಿ ಕುಖ್ಯಾತ ಕಳ್ಳ ರಘು ಅಲಿಯಾಸ್ ಪೆಪ್ಪಿ ರಘು (26) ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 4.10 ಲಕ್ಷ ರು. ವಾಹನಗಳನ್ನು ಗಿರಿನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೌಲ್ಯದ 4 ದ್ವಿಚಕ್ರ ಬನಶಂಕರಿ 3ನೇ ಹಂತದ ವಾಟರ್ ಟ್ಯಾಂಕ್ ರಸ್ತೆಯ ನಿವಾಸಿಯೊಬ್ಬರು ಜು.15ರಂದು ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳದ ಸುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವಿನ ಮೇರೆಗೆ ಆರೋಪಿ ರಘುವಿನ ಪತ್ತೆಗೆ ಮುಂದಾಗಿದ್ದರು.

ಮಂಡ್ಯದಿಂದ ಬಂದು ಬೆಂಗ್ಳೂರಲ್ಲಿ ಬೈಕ್‌ ಕಳ್ಳತನ: 46 ಬೈಕ್‌ ಜಪ್ತಿ

ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಮನೆಗಳವು ಪ್ರಕರಣ ಸಂಬಂಧ ಆರೋಪಿ ರಘುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರ ತಿಳಿದು ಗಿರಿನಗರ ಠಾಣೆ ಪೊಲೀಸರು, ನ್ಯಾಯಾಲಯ ದಲ್ಲಿ ಬಾಡಿ ವಾರೆಂಟ್ ಪಡೆದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಆರೋಪಿ ರಘುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ದ್ವಿಚಕ್ರ ವಾಹನ ಕಳವು ತಾನೇ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ. 

ವೃತ್ತಿಪರ ಕಳ್ಳ: 

ಆರೋಪಿ ರಘು ವೃತ್ತಿಪರ ಕಳ್ಳ ನಾಗಿದ್ದು, ಈತನ ವಿರುದ್ದ ಈ ಹಿಂದೆ ಬೆಂಗ ಳೂರು ನಗರದ ವಿವಿಧ ಪೊಲೀಸ್ ಠಾಣೆಗಳು, ಹಾಸನ, ಮೈಸೂರು ನಗರ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮನೆಗಳವು, ರಾಬರಿ, ಕೊಲೆಗೆ ಯತ್ನ, ದ್ವಿಚಕ್ರ ವಾಹನ ಕಳವು ಸೇರಿದಂತೆ 15 ಅಪರಾಧ ಪ್ರಕರಣಗಳು ದಾಖ ಲಾಗಿವೆ. ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೂ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.

ಮೋರಿ, ರಾಜ ಕಾಲುವೆ ಬಳಿ 4 ಬೈಕ್ ಜಪ್ತಿ 

ವಿಚಾರಣೆ ವೇಳೆ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಹೊಸಕೆರೆಹಳ್ಳಿ ಕ್ರಾಸ್ ಸಮೀಪದ ಮೋರಿ ಬಳಿ ಎರಡು ದ್ವಿಚಕ್ರವಾಹನಹಾಗೂಚಾಮುಂಡಿನಗರ ಸಮೀಪದ ರಾಜಕಾಲುವೆ ಬಳಿ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಆರೋಪಿಯ ವಿಚಾರಣೆಯಿಂದ ಆಡುಗೋಡಿ ಠಾಣೆ ಒಂದು ಮತ್ತು ಗಿರಿನಗರ ಠಾಣೆಯಲ್ಲಿ ದಾಖಲಾಗಿದ್ದ ಮೂರು ಸೇರಿ ಒಟ್ಟು 4 ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ.