ಕೆಲವರು NCA ಕಾಯಂ ನಿವಾಸಿಗಳಾಗಿದ್ದಾರೆ: ಟೀಂ ಇಂಡಿಯಾ ಆಟಗಾರರ ವಿರುದ್ದ ರವಿಶಾಸ್ತ್ರಿ ಕಿಡಿ
ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದರ ಬಗ್ಗೆ ರವಿಶಾಸ್ತ್ರಿ ಆಕ್ರೋಶ
ಕೆಲ ಆಟಗಾರರು ಮೂರ್ನಾಲ್ಕು ವರ್ಷದಿಂದ ಎನ್ಸಿಎನಲ್ಲೇ ಕಾಲ ಕಳೆಯುವಂತಾಗಿದೆ
ಸತತವಾಗಿ 4 ಪಂದ್ಯಗಳನ್ನು ಆಡಲು ಅವರಿಗೆ ಸಾಧ್ಯವಾಗುತ್ತಿಲ್ಲ
ನವದೆಹಲಿ(ಏ.13): ಭಾರತದ ತಾರಾ ಬೌಲರ್ಗಳು ಸತತವಾಗಿ ಗಾಯಗೊಳ್ಳುತ್ತಿರುವ ಬಗ್ಗೆ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಕಿಡಿಕಾರಿದ್ದು, ಕೆಲ ಆಟಗಾರರು ಎನ್ಸಿಎನ ಕಾಯಂ ನಿವಾಸಿಗಳಾಗಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಕಳೆದ 3-4 ವರ್ಷಗಳಿಂದ ಕೆಲ ಆಟಗಾರರು ಎನ್ಸಿಎನಲ್ಲೇ ಕಾಲ ಕಳೆಯುವಂತಾಗಿದೆ. ಸತತವಾಗಿ 4 ಪಂದ್ಯಗಳನ್ನು ಆಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲಿಂದ ಮರಳಿ ಬಂದು ಮತ್ತೆ ಗಾಯಗೊಳ್ಳುತ್ತಿದ್ದಾರೆ. ಹಾಗಿದ್ದರೆ ಎನ್ಸಿಎಗೆ ಏಕೆ ಹೋಗಬೇಕು. ಸಂಪೂರ್ಣ ಗುಣಮುಖವಾದ ಬಳಿಕವೇ ಆಡಬೇಕು’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಸಿಸಿಐ, ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿದ್ದು, ಇಲ್ಲಿ ಕೇಂದ್ರೀಯ ಗುತ್ತಿಗೆ ಪಡೆದ ಆಟಗಾರರ ಗಾಯಗೊಂಡಾಗ ತಜ್ಞ ವೈದ್ಯಕೀಯ ಸಿಬ್ಬಂದಿಗಳು, ಆಟಗಾರರು ಚೇತರಿಸಿಕೊಳ್ಳಲು ನೆರವು ನೀಡುತ್ತಾ ಬಂದಿದ್ದಾರೆ.
ಟಿ20 ರ್ಯಾಂಕಿಂಗ್: ನಂ.1 ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಭದ್ರ
ದುಬೈ: ಭಾರತದ ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಅವರು 906 ರೇಟಿಂಗ್ ಅಂಕಗಳನ್ನು ಸಂಪಾದಿಸಿದ್ದಾರೆ. ವಿರಾಟ್ ಕೊಹ್ಲಿ 15ನೇ ಸ್ಥಾನ ಕಾಯ್ದುಕೊಂಡಿದ್ದು, ಪಾಕಿಸ್ತಾನದ ಮೊಹಮದ್ ರಿಜ್ವಾನ್, ಬಾಬರ್ ಆಜಂ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿದ್ದಾರೆ. ಆದರೆ ಬೌಲರ್ಗಳ ಪಟ್ಟಿಯಲ್ಲಿ ಯಾವುದೇ ಭಾರತೀಯ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಆಲ್ರೌಂಡ್ ವಿಭಾಗದಲ್ಲಿ ಹಾರ್ದಿಕ್ 2ನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ಗೆ ಬಿಸಿಸಿಐನಿಂದ 5 ಕ್ರೀಡಾಂಗಣ ನವೀಕರಣ
ನವದೆಹಲಿ: ಭಾರತದ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪದೇ ಪದೇ ದೂರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ಗೂ ಮುನ್ನ 5 ಪ್ರಮುಖ ಕ್ರೀಡಾಂಗಣಗಳನ್ನು ನವೀಕರಣಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
IPL 2023: ಸಿಎಸ್ಕೆ ಸೋಲಿಗೆ ಬ್ಯಾಟರ್ಗಳೇ ಕಾರಣ: ಕ್ಯಾಪ್ಟನ್ ಕೂಲ್ ಧೋನಿ ಗರಂ
ವರದಿಗಳ ಪ್ರಕಾರ ನವದೆಹಲಿ, ಹೈದರಾಬಾದ್, ಕೋಲ್ಕತಾ, ಮೊಹಾಲಿ ಹಾಗೂ ಮುಂಬೈ ಕ್ರೀಡಾಂಗಣಗಳನ್ನು ನವೀಕರಣಗೊಳಿಸಲಿದ್ದು, ಇದಕ್ಕೆ ಸುಮಾರು 500 ಕೋಟಿ ರುಪಾಯಿಗೂ ಹೆಚ್ಚು ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ. ಕ್ರೀಡಾಂಗಣಗಳ ಶೌಚಾಲಯ, ಶುದ್ಧ ಕುಡಿಯುವ ನೀರು, ಆಸನ ವ್ಯವಸ್ಥೆಗಳ ಸುಧಾರಣೆಗೆ ಬಿಸಿಸಿಐ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಏಷ್ಯಾಕಪ್ ಹಕ್ಕು ಕೈತಪ್ಪಿದ್ರೆ ಪಾಕ್ಗೆ 25 ಕೋಟಿ ರುಪಾಯಿ ನಷ್ಟ!
ಕರಾಚಿ: ಏಷ್ಯಾಕಪ್ ಆತಿಥ್ಯ ಹಕ್ಕು ಬಿಟ್ಟುಕೊಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಂ ಸೇಠಿ ಪುನರುಚ್ಚರಿಸಿದ್ದು, ಟೂರ್ನಿಯಿಂದ ಹಿಂದೆ ಸರಿದರೆ 3 ಮಿಲಿಯನ್ ಡಾಲರ್(ಅಂದಾಜು 25 ಕೋಟಿ ರು.) ನಷ್ಟವಾಗಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಟೂರ್ನಿಯನ್ನು ಪಾಕಿಸ್ತಾನದಲ್ಲೇ ಆಯೋಜಿಸಿ, ಭಾರತದ ಪಂದ್ಯಗಳನ್ನಷ್ಟೇ ಬೇರೆಡೆ ನಡೆಸಲು ಪ್ರಸ್ತಾಪಿಸಿದ್ದೇವೆ. ಈ ಪ್ರಸ್ತಾಪವನ್ನು ಹೊರತುಪಡಿಸಿ ಬೇರಾರಯವುದಕ್ಕೂ ನಾವು ಒಪ್ಪುವುದಿಲ್ಲ ಎಂದು ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ)ಗೆ ಸ್ಪಷ್ಟವಾಗಿ ತಿಳಿಸಿದ್ದೇವೆ’ ಎಂದಿದ್ದಾರೆ.
ಅಂಧ ಮಹಿಳಾ ಕ್ರಿಕೆಟ್ ಟೀಂಗೆ ರಾಜ್ಯದ ಮೂವರು
ಬೆಂಗಳೂರು: ಇದೇ ಮೊದಲ ಬಾರಿಗೆ ಭಾರತ ಅಂಧ ಮಹಿಳೆಯರ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ ಗಂಗವ್ವ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಏ.25ರಿಂದ 30ರ ವರೆಗೂ ನೇಪಾಳದಲ್ಲಿ ನಡೆಯಲಿರುವ ದ್ವಿಪಕ್ಷೀಯ ಸರಣಿಗೆ 17 ಸದಸ್ಯೆಯರ ತಂಡವನ್ನು ಮಂಗಳವಾರ ಪ್ರಕಟಿಸಲಾಯಿತು. ತಂಡವನ್ನು ಸುಷ್ಮಾ ಪಟೇಲ್ ಮುನ್ನಡೆದಲಿದ್ದು, ರಾಜ್ಯದ ವರ್ಷಾ, ದೀಪಿಕಾ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಂಧರ ತಂಡವು ಅಂತಾರಾಷ್ಟ್ರೀಯ ಸರಣಿ ಆಡಲು ಸಜ್ಜಾಗುತ್ತಿರುವುದಕ್ಕೆ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಟ್ವೀಟರಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.