ಗಾಯದ ಸಮಸ್ಯೆಯ ಹೊರತಾಗಿಯೂ ಭರ್ಜರಿ ಬ್ಯಾಟ್ ಬೀಸುತ್ತಿರುವ ಧೋನಿಸಿಎಸ್‌ಕೆ ತಂಡಕ್ಕೆ ಶುರುವಾಗಿದೆ ಗಾಯದ ಸಮಸ್ಯೆಧೋನಿ ಗಾಯದ ಬಗ್ಗೆ ತುಟಿಬಿಚ್ಚಿದ ಹೆಡ್‌ಕೋಚ್ ಸ್ಟಿಫನ್‌ ಫ್ಲೆಮಿಂಗ್

ಚೆನ್ನೈ(ಏ.13): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 3 ರನ್ ರೋಚಕ ಸೋಲು ಅನುಭವಿಸಿದೆ. ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಹೊರತಾಗಿಯೂ, ಸಿಎಸ್‌ಕೆ ವಿರೋಚಿತ ಸೋಲು ಅನುಭವಿಸಿದೆ. ಮೊದಲೇ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ಸ್ವತಃ ನಾಯಕ ಮಹೇಂದ್ರ ಸಿಂಗ್ ಧೋನಿ, ಮೊಣಕಾಲಿನ ನೋವಿನ ಶುಶ್ರೂಷೆಯಲ್ಲಿದ್ದಾರೆ ಎಂದು ಸಿಎಸ್‌ಕೆ ತಂಡದ ಹೆಡ್‌ಕೋಚ್ ಸ್ಟಿಫೆನ್ ಫ್ಲೆಮಿಂಗ್ ಹೇಳಿದ್ದಾರೆ. 

16ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಮಹೇಂದ್ರ ಸಿಂಗ್ ಧೋನಿ ಮೊಣಕಾಲಿನ ನೋವಿನ ಸಮಸ್ಯೆ ಎದುರಿಸುತ್ತಿದ್ದರು. ಇನ್ನು ವೇಗಿ ದೀಪಕ್ ಚಹರ್‌ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ತಂಡದ ಆಯ್ಕೆಗೆ ಅಲಭ್ಯರಾಗಿದ್ದಾರೆ. ಇನ್ನು ಕೈಲ್ ಜೇಮಿಸನ್ ಬದಲಿಗೆ ತಂಡ ಕೂಡಿಕೊಂಡಿದ್ದ ದಕ್ಷಿಣ ಆಫ್ರಿಕಾ ವೇಗಿ ಸಿಸಾಂಡ ಮಗಲಾ ಕೂಡಾ ರಾಜಸ್ಥಾನ ರಾಯಲ್ಸ್‌ ಎದುರಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವಾಗ ಗಾಯಗೊಂಡಿದ್ದು, ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ಗಾಯದ ಸಮಸ್ಯೆಯ ಹೊರತಾಗಿಯೂ, ಧೋನಿ ರಾಜಸ್ಥಾನ ರಾಯಲ್ಸ್‌ ಎದುರಿನ ಪಂದ್ಯದ ವೇಳೆ ಅಕ್ಷರಶಃ ಅಬ್ಬರಿಸಿದ್ದಾರೆ.

ಐಪಿಎಲ್‌ ಹೊರತಾಗಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡದ ಬಳಿಕವೂ 41 ವರ್ಷದ ಧೋನಿ, ಫಿಟ್ ಆಗಿರುವುದು ಅವರಿಗೆ ಕ್ರಿಕೆಟ್‌ ಮೇಲಿರುವ ಬದ್ದತೆಯನ್ನು ತೋರಿಸುತ್ತದೆ ಎಂದು ಸ್ಟಿಫನ್ ಫ್ಲೆಮಿಂಗ್ ಗುಣಗಾನ ಮಾಡಿದ್ದಾರೆ. " ಧೋನಿ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದು, ಶುಶ್ರೂಷೆಯಲ್ಲಿದ್ದಾರೆ. ಓಡುವಾಗ ಅವರಿಗೆ ಇದು ಅಡ್ಡಿಯಾಗುತ್ತಿದೆ. ಆದರೆ ಅವರ ಫಿಟ್ನೆಸ್ ವೃತ್ತಿಪರವಾದದ್ದು. ಅವರು ಟೂರ್ನಿ ಆರಂಭಕ್ಕೆ ಒಂದು ತಿಂಗಳು ಮುಂಚಿತವಾಗಿಯೇ ಅವರು ಇಲ್ಲಿಗೆ ಬಂದಿದ್ದರು. ಇದಕ್ಕೂ ಮೊದಲು ರಾಂಚಿಯ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು. ಆದರೆ ಮುಖ್ಯ ಸಿದ್ದತೆಯನ್ನು ಚೆನ್ನೈನಲ್ಲಿಯೇ ನಡೆಸಿದ್ದಾರೆ. ಅವರ ತಯಾರಿಯ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಫ್ಲೆಮಿಂಗ್ ಹೇಳಿದ್ದಾರೆ 

ಪಾಕಿಸ್ತಾನದಲ್ಲಿ ಬದುಕುವುದು ಜೈಲಿನಲ್ಲಿ ಬದುಕಿದಂತೆ: ಕರಾಳ ಕ್ಷಣ ಮೆಲುಕುಹಾಕಿದ ಕಿವೀಸ್ ಮಾಜಿ ಕ್ರಿಕೆಟಿಗ

ಮೊದಲು ಬ್ಯಾಟ್‌ ಮಾಡಿದ ರಾಜ​ಸ್ಥಾನ 20 ಓವ​ರಲ್ಲಿ 8 ವಿಕೆ​ಟ್‌ಗೆ 175 ರನ್‌ ಕಲೆ​ಹಾ​ಕಿತು. ಚೆನ್ನೈ ತನ್ನ ಎಂದಿನ ಶೈಲಿ​ಯಂತೆ ಪಂದ್ಯ​ವನ್ನು ಕೊನೆ ಎಸೆ​ತ​ದವರೆಗೆ ಕೊಂಡೊಯ್ದರೂ ಅಲ್ಪ​ದ​ರಲ್ಲೇ ಗೆಲುವು ಕೈತ​ಪ್ಪಿತು. 20 ಓವ​ರಲ್ಲಿ 6 ವಿಕೆ​ಟ್‌ಗೆ 172 ರನ್‌ ಗಳಿ​ಸಿ ಸೋಲೊ​ಪ್ಪಿ​ಕೊಂಡಿತು.

9 ಓವರ್‌ಗೆ ಮುಕ್ತಾ​ಯಕ್ಕೆ 1 ವಿಕೆ​ಟ್‌ಗೆ 76 ರನ್‌ ಗಳಿ​ಸಿದ್ದ ಚೆನ್ನೈ ಬಳಿಕ ಮಂಕಾ​ಯಿತು. ನಂತ​ರದ 7 ಓವ​ರ್‌​ಗ​ಳಲ್ಲಿ 41 ರನ್‌ ಗಳಿಸಿ ಪ್ರಮುಖ ಐವ​ರನ್ನು ಕಳೆ​ದು​ಕೊಂಡಿತು. ಕಾನ್‌​ವೇ​(50) ಏಕಾಂಗಿ ಹೋರಾಟ ಪ್ರದ​ರ್ಶಿ​ಸಿ​ದರೆ, ಅಜಿಂಕ್ಯಾ ರಹಾನೆ 19 ಎಸೆ​ತ​ಗ​ಳಲ್ಲಿ 31 ರನ್‌ ಸಿಡಿಸಿ ಮತ್ತೊಮ್ಮೆ ತಂಡಕ್ಕೆ ಆಸ​ರೆ​ಯಾ​ದರು. ಆದರೆ ಉಳಿ​ದ​ವ​ರಿಂದ ಸೂಕ್ತ ಬೆಂಬಲ ಸಿಗ​ಲಿಲ್ಲ. ಕೊನೆ 3 ಓವ​ರಲ್ಲಿ 54 ರನ್‌ ಬೇಕಿ​ದ್ದಾಗ ಧೋನಿ-ಜಡೇಜಾ 18ನೇ ಓವ​ರಲ್ಲಿ 14, 19ನೇ ಓವ​ರ​ಲ್ಲಿ 19 ರನ್‌ ಸಿಡಿ​ಸಿ​ದರು. ಕೊನೆ 6 ಎಸೆ​ತ​ಗ​ಳಲ್ಲಿ 61 ರನ್‌ ಅಗ​ತ್ಯ​ವಿತ್ತು. 2 ಮತ್ತು 3ನೇ ಎಸೆ​ತ​ದಲ್ಲಿ ಧೋನಿ ಸಿಕ್ಸರ್‌ ಸಿಡಿ​ಸಿ​ದರೂ ಕೊನೆ ಎಸೆ​ತ​ದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿ​ಸಲು ವಿಫ​ಲ​ರಾ​ದರು. ಧೋನಿ 17 ಎಸೆ​ತ​ಗ​ಳಲ್ಲಿ 32, ಜಡೇಜಾ 15 ಎಸೆ​ತ​ಗ​ಳಲ್ಲಿ 25 ರನ್‌ ಸಿಡಿ​ಸಿ​ದರು.

ಏ​ಕ​ಕಾ​ಲಕ್ಕೆ 2.2 ಕೋಟಿ ಮಂದಿ ವೀಕ್ಷ​ಣೆ: ದಾಖ​ಲೆ

ಧೋನಿ-ಜಡೇಜಾ ಬ್ಯಾಟಿಂಗ್‌ ವೇಳೆ ಜಿಯೋ ಸಿನಿ​ಮಾ​ದಲ್ಲಿ ಏಕ​ಕಾ​ಲಕ್ಕೆ 2.2 ಕೋಟಿ ಮಂದಿ ಪಂದ್ಯ ವೀಕ್ಷಿ​ಸಿ​ದರು. ಇದು ಹೊಸ ದಾಖಲೆ. ಸೋಮ​ವಾರ ಲಖನೌ ವಿರುದ್ಧ ಆರ್‌​ಸಿ​ಬಿಯ ಮ್ಯಾಕ್ಸ್‌​ವೆ​ಲ್‌-ಡು ಪ್ಲೆಸಿ ಬ್ಯಾಟಿಂಗ್‌ ಮಾಡು​ತ್ತಿ​ದ್ದಾಗ 1.8 ಕೋಟಿ ಮಂದಿ ಪಂದ್ಯ ವೀಕ್ಷಿ​ಸಿ​ದ್ದರು.

200 ಬಾರಿ ಚೆನ್ನೈ ನಾಯ​ಕತ್ವ: ಧೋನಿ ದಾಖ​ಲೆ

ಚೆ​ನ್ನೈ: ಐಪಿ​ಎ​ಲ್‌​ನಲ್ಲಿ ಎಂ.ಎ​ಸ್‌.​ಧೋನಿ 200 ಬಾರಿ ಚೆನ್ನೈ ಸೂಪರ್‌ ಕಿಂಗ್‌್ಸ ತಂಡಕ್ಕೆ ನಾಯ​ಕ​ತ್ವ ವಹಿ​ಸಿದ್ದು, ಹೊಸ ದಾಖಲೆ ಬರೆ​ದಿ​ದ್ದಾರೆ. ಬುಧ​ವಾರ ರಾಜ​ಸ್ಥಾನ ರಾಯಲ್ಸ್‌ ವಿರುದ್ಧ ಚೆನ್ನೈ ತಂಡ​ವನ್ನು ಮುನ್ನ​ಡೆ​ಸುವ ಮೂಲಕ ಅವರು ಈ ಹೆಗ್ಗ​ಳಿ​ಕೆಗೆ ಪಾತ್ರ​ರಾ​ದರು. ಪಂದ್ಯಕ್ಕೂ ಮುನ್ನ ಅವ​ರಿಗೆ ಸ್ಮರ​ಣಿಕೆ ನೀಡಿ ಸನ್ಮಾ​ನಿ​ಸ​ಲಾ​ಯಿತು. 

2008ರ ಮೊದಲ ಆವೃ​ತ್ತಿ​ಯಿಂದಲೂ ಧೋನಿ ಚೆನ್ನೈಗೆ ನಾಯಕತ್ವ ವಹಿ​ಸು​ತ್ತಿದ್ದು, ಈವ​ರೆ​ಗಿನ 199 ಪಂದ್ಯ​ಗ​ಳಲ್ಲಿ ಚೆನ್ನೈ 120ರಲ್ಲಿ ಜಯ​ಗ​ಳಿ​ಸಿ, 78ರಲ್ಲಿ ಸೋಲ​ನು​ಭ​ವಿ​ಸಿದೆ. 2016-17ರಲ್ಲಿ ಚೆನ್ನೈ ಐಪಿ​ಎ​ಲ್‌​ನಿಂದ ನಿಷೇ​ಧ​ಕ್ಕೊ​ಳ​ಗಾ​ದಾಗ ಧೋನಿ ಪುಣೆ ತಂಡ ಸೇರಿ 14 ಪಂದ್ಯ​ಗ​ಳಿಗೆ ನಾಯ​ಕತ್ವ ವಹಿ​ಸಿ​ದ್ದರು. ಒಟ್ಟಾರೆ ಈವ​ರೆಗೆ ಅವರು ಐಪಿ​ಎ​ಲ್‌​ನಲ್ಲಿ 213 ಪಂದ್ಯಗಳಿಗೆ ನಾಯ​ಕತ್ವ ವಹಿ​ಸಿ​ದ್ದಾರೆ. ರೋಹಿತ್‌ ಶರ್ಮಾ​(146 ಪಂದ್ಯ), ವಿರಾಟ್‌ ಕೊಹ್ಲಿ​(140) ಪಂದ್ಯ ನಂತ​ರದ ಸ್ಥಾನ​ಗ​ಳ​ಲ್ಲಿ​ದ್ದಾ​ರೆ.