IPL 2022: ಆ ಲಕ್ಕಿ ಪ್ಲೇಯರ್ ಕೈಬಿಟ್ಟು ತಪ್ಪು ಮಾಡ್ತಾ ಸಿಎಸ್ಕೆ..?
* ಪ್ಲೇ ಆಫ್ಗೇರಲು ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್
* ಹಾಲಿ ಚಾಂಪಿಯನ್ ತಂಡಕ್ಕೆ ಕಾಡಿದ ಸುರೇಶ್ ರೈನಾ
* ಚೆನ್ನೈ ತಂಡ ಹಿಂದೆಂದೂ ಕಾಣದಷ್ಟು ಘನಘೋರ ವೈಫಲ್ಯ ಅನುಭವಿಸಿದೆ
ಬೆಂಗಳೂರು(ಮೇ.14): ಸಿಎಸ್ಕೆ (CSK), ಈ ಹೆಸರನ್ನ ಕೇಳಿದ್ರೆ ಎದುರಾಳಿ ತಂಡಗಳು ಬೆಚ್ಚಿ ಬೀಳುವ ಕಾಲವೊಂದಿತ್ತು. ಎಂತಹ ತಂಡವಾದ್ರು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹೆಸರು ಕೇಳಿದ್ರೆ ಸಾಕು ಥಂಡಾ ಹೊಡಿತಿತ್ತು. ಅಂತಹ ಬಲಿಷ್ಠ ಮತ್ತು ಡೇಂಜರಸ್ ತಂಡವೆನಿಸಿಕೊಂಡಿತ್ತು ಚೆನ್ನೈ. ಧೋನಿ & ಟೀಮ್ ಒಮ್ಮೆ ಅಂಗಳಕ್ಕಿಳಿದ್ರೆ ಪ್ಲೇ ಆಫ್ ಟಿಕೆಟ್ ಫಿಕ್ಸ್ ಅನ್ನೋ ಮಾತಿತ್ತು. ಆದ್ರೆ ಇಂತಹ ತಂಡಕ್ಕೆ ಈಗ ಅದೇನಾಗಿಯೋ ಗೊತ್ತಿಲ್ಲ. ಐಪಿಎಲ್ ಆರಂಭವಾದಾಗಿನಿಂದ ಕಾಯಂ ಆಗಿ ಪ್ಲೇ ಆಫ್ಗೆ ಎಂಟ್ರಿಕೊಡ್ತಿದ್ದ ಚೆನ್ನೈ, ಗ್ರೂಪ್ ಸ್ಟೇಜ್ನಲ್ಲೇ ಹೊರಬಿದ್ದು ನಿರಾಸೆ ಅನುಭವಿಸ್ತಿದೆ.
ಪ್ರಸಕ್ತ ಐಪಿಎಲ್ನಲ್ಲಿ ಚೆನ್ನೈ ತಂಡ ಹಿಂದೆಂದೂ ಕಾಣದಷ್ಟು ಘನಘೋರ ವೈಫಲ್ಯ ಅನುಭವಿಸಿದೆ. 4 ಬಾರಿ ಚಾಂಪಿಯನ್ ಟೀಂ, ಮುಂಬೈ ವಿರುದ್ಧದ ಸೋಲಿನೊಂದಿಗೆ ಪ್ರಸಕ್ತ ಆವೃತ್ತಿಯಿಂದ ಎಲಿಮಿನೇಟ್ ಆಗಿದೆ. ಅದು ಲೀಗ್ ಹಂತದ ಇನ್ನೂ ಎರಡು ಪಂದ್ಯ ಬಾಕಿ ಇರುವಂತೆಯೇ. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾದ ದೊಡ್ಡ ಮುಖಭಂಗ ಮತ್ತು ದೊಡ್ಡ ಪಾಠ. ಸಿಎಸ್ಕೆ ಕಳಪೆ ಪರ್ಫಾಮೆನ್ಸ್ಗೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ. ಅದ್ರೆ ಆ ಮ್ಯಾಚ್ ವಿನ್ನರ್ ತಂಡದಲ್ಲಿ ಇಲ್ಲದಿರೋದೆ ಅಸಲಿಗೆ ಚೆನ್ನೈಗೆ ಈ ದುಸ್ಥಿತಿ ಬಂದೊಂದಗಿದೆ. ಆತ ನಿಜಕ್ಕೂ ಸಿಎಸ್ಕೆಗೆ ಲಕ್ಕಿ ಪ್ಲೇಯರ್. ಆತ ಇಲ್ಲದಿದ್ದಾಗಲೆಲ್ಲಾ ಧೋನಿ ಪಡೆ ಗ್ರೂಪ್ ಸ್ಟೇಜ್ನಲ್ಲಿ ಪ್ರಯಾಣ ಅಂತ್ಯಗೊಳಿಸಿದೆ.
2020-22ನೇ IPLನಿಂದ ರೈನಾ ಔಟ್, ಚೆನ್ನೈಗೆ ಶಾಕ್:
ವೀಕ್ಷಕರೇ, ಇದು ಕಾಕತಾಳೀಯಾವೋ ಅಥವಾ ಸಂದರ್ಭನೋ ಗೊತ್ತಿಲ್ಲ. ಯಾವಗೆಲ್ಲಾ ಚೆನ್ನೈ ತಂಡ ಪವರ್ ಹಿಟ್ಟರ್ ಸುರೇಶ್ ರೈನಾರನ್ನ ಬಿಟ್ಟು ಐಪಿಎಲ್ ಆಡಿದೆಯೋ ಆವಾಗೆಲ್ಲಾ ಚಾಂಪಿಯನ್ ತಂಡಕ್ಕೆ ಬ್ಯಾಡ್ಲಕ್ ವಕ್ಕರಿಸಿದೆ. ಮ್ಯಾಚ್ ವಿನ್ನರ್ ರೈನಾ ಅಲಭ್ಯರಾದಾಗ ಚೆನ್ನೈ ತಂಡ ಐಪಿಎಲ್ ಟೂರ್ನಿಯಲ್ಲಿ ಗ್ರೂಪ್ ಸ್ಟೇಜ್ನಲ್ಲೇ ಕಿಕೌಟಾಗಿ ತೀವ್ರ ಮುಖಭಂಗ ಅನುಭವಿಸಿದೆ.
2020ನೇ ಐಪಿಎಲ್ ಆರಂಭಕ್ಕೂ ಮುನ್ನ ರೈನಾ ವೈಯಕ್ತಿಕ ಕಾರಣವೊಡ್ಡಿ ಟೂರ್ನಿಯಿಂದ ಹಿಂದೆ ಸರಿದ್ರು. ಪವರ್ ಹಿಟ್ಟರ್ ಟೂರ್ನಿಯಿಂದ ಹೊರಬಿದ್ದಿದ್ದೆ ತಡ ಚೆನ್ನೈಗೆ ಶಾಕ್ ಕಾದಿತ್ತು. ಟೂರ್ನಿ ಪೂರ್ತಿ ಕಳಪೆ ಆಟವಾಡಿದ ಮಹಿ ಸೈನ್ಯ, ಐಪಿಎಲ್ ಹಿಸ್ಟರಿಯಲ್ಲಿ ಫಸ್ಟ್ ಟೈಮ್ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಆಡಿದ 14 ಪಂದ್ಯಗಳಲ್ಲಿ ಬರೀ ಆರು ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನ ಸಂಪಾದಿಸಿತ್ತು.
IPL 2022: ವೃದ್ದ ಅಭಿಮಾನಿಯ ತಲೆಗೆ ಅಪ್ಪಳಿಸಿದ ಪಾಟೀದಾರ್ ಬಾರಿಸಿದ ಸಿಕ್ಸ್..! ವಿಡಿಯೋ ವೈರಲ್
ಇನ್ನು ಈ ಸಲ ಟೂರ್ನಿ ಆರಂಭಕ್ಕೂ ಮುನ್ನ ಚಿನ್ನ ತಲಾರನ್ನ ಚೆನ್ನೈಕೈಬಿಡ್ತು. ರಿಟೆನ್ಷನ್ ವೇಳೆ ಸೀನಿಯರ್ ಆಟಗಾರರನ್ನ ತಂಡ ಉಳಿಸಿಕೊಳ್ಳಲಿಲ್ಲ. ಆಕ್ಷನ್ ವೇಳೆಯೂ ಖರೀದಿಸೋ ಮನಸ್ಸು ಮಾಡ್ಲಿಲ್ಲ. ಹೀಗೆ ರೈನಾರನ್ನ ಕೈಬಿಟ್ಟು ಕಣಕ್ಕಿಳಿದ ಚೆನ್ನೈಗೆ 2020 ಪರಿಸ್ಥಿತಿ ಬಂದಿದೆ. ಈಗಲೇ ಧೋನಿ ಪಡೆ ಈ ಸೀಸನ್ನಿಂದ ಹೊರಬಿದ್ದಿದ್ದು, 5ನೇ ಬಾರಿ ಟ್ರೋಫಿ ಎತ್ತಿಹಿಡಿಯುವ ಕನಸು ನುಚ್ಚುನೂರಾಗಿದೆ. ಜೊತೆಗೆ ಪವರ್ ಹಿಟ್ಟರ್ ಇಲ್ಲದೇ ಚೆನ್ನೈ ಬಡವಾಗಿದೆ.