Asianet Suvarna News Asianet Suvarna News

ಟ್ರಕ್ ಚಾಲಕರು, ರೈತರ ಆರೋಗ್ಯ ಕಾಳಜಿ; ಸಮೀಕ್ಷೆಯಿಂದ ಬಹಿರಂಗ!

ಟ್ರಕ್ ಚಾಲಕರು, ರೈತರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ವೈರಸ್ ಸಮಯದಲ್ಲೂ ಈ ಎರಡು ಕ್ಷೇತ್ರಗಳು ವಿಶ್ರಾಂತಿ ಪಡೆದಿಲ್ಲ. ಆರೋಗ್ಯ ಲೆಕ್ಕಿಸಿದೆ ದುಡಿದಿದ್ದಾರೆ. ಇದೀಗ ಟ್ರಕ್ಕರ್‌ ಹಾಗೂ ರೈತರ ಆರೋಗ್ಯ ಕುರಿತು ಕ್ಯಾಸ್ಟ್ರಾಲ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಹಲವು ಮಾಹಿತಿ ಬಹಿರಂಗವಾಗಿದೆ. 

Few Truckers Farmers in India Priorities Healthy Lifestyle Castrol India Study
Author
Bengaluru, First Published Jun 20, 2020, 8:17 PM IST

ನವದದೆಹಲಿ(ಜೂ.20): ಟ್ರಕ್ಕರ್ ಮತ್ತು ರೈತ ಸಮುದಾಯಗಳು ತಲೆಮಾರುಗಳಿಂದ ಭಾರತದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ಕೊರೋನಾ ವೈರಸ್ ಸಮಯದಲ್ಲಂತೂ ಈ ಸಮುದಾಯಗಳು ದಣಿವರಿಯಿಲ್ಲದೆ ಕೆಲಸ ಮಾಡುತ್ತಾ ತಮ್ಮ ಆರೋಗ್ಯವನ್ನು ಕಡೆಗಣಿಸಿದೆ.  ಕ್ಯಾಸ್ಟ್ರೋಲ್ ಇಂಡಿಯಾ ನಡೆಸಿದ ಇತ್ತೀಚಿನ ಅಧ್ಯಯನವು - 3 ರಲ್ಲಿ 1 ಟ್ರಕ್ಕರ್‌ಗಳು ಮತ್ತು ರೈತರು ಬೆನ್ನು ನೋವು, ನಿದ್ರಾಹೀನತೆ, ದಣಿವು ಮತ್ತು ಕೀಲು ನೋವು ಸೇರಿದಂತೆ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದಾರೆಂದು ಒಪ್ಪಿಕೊಂಡಿದ್ದಾರೆ.  ಅವರಲ್ಲಿ ಕೇವಲ 11% ಜನರು ಆರೋಗ್ಯಕರ ಮತ್ತು ರಕ್ಷಣಾತ್ಮಕ  ಜೀವನಶೈಲಿಯನ್ನು  ಹೊಂದಲು ಒಲವು ತೋರಿದ್ದಾರೆ, ಇದು ಈ ಸಮುದಾಯಗಳಲ್ಲಿ ಅತಿ ಕಡಿಮೆ ಆದ್ಯತೆಯನ್ನು ಪಡೆದಿದೆ ಎಂದು ತಿಳಿಸುತ್ತದೆ.

ಪ್ರತಿಕ್ರಿಯಿಸಿದವರಲ್ಲಿ ಮೂರನೇ ಎರಡರಷ್ಟು (68%) ಜನರು ತಮ್ಮ ಕುಟುಂಬಗಳ ಆರೋಗ್ಯದ ಬಗ್ಗೆ ಮತ್ತು ತಮ್ಮ ಬಗ್ಗೆಯೂ ಕಾಳಜಿ ವಹಿಸಿದ್ದರು ಎಂದು ಅಧ್ಯಯನವು ಬೆಳಕಿಗೆ ತರುತ್ತದೆ. ಆದರೆ, ಸಂಶೋಧನೆಯು ಆರೋಗ್ಯಕರ ಜೀವನಶೈಲಿ ಮತ್ತು ಯೋಗಕ್ಷೇಮದ ಕಡೆಗೆ ನಿರುತ್ಸಾಹಿತರಾಗಿದ್ದಾರೆಂದು ಒತ್ತಿಹೇಳುತ್ತದೆ, ಏಕೆಂದರೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಮೂರನೇ ಎರಡರಷ್ಟು (65%) ಜನರು ಆಸಕ್ತಿ ಮತ್ತು ಸಮಯದ ಕೊರತೆಯಿಂದಾಗಿ ಯಾವುದೇ ರೀತಿಯ ಫಿಟ್‍ನೆಸ್‍ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಮೇಲೆ ತಿಳಿಸಿದ ಆರೋಗ್ಯ ಕಾಳಜಿಗಳ ಹೊರತಾಗಿಯೂ, 3 ರಲ್ಲಿ 1 ಟ್ರಕ್ಕರ್‌ಗಳು ಮತ್ತು ರೈತರು ಆರೋಗ್ಯಕರ ಜೀವನವನ್ನು ನಡೆಸಲು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ ಎಂದು ಒಪ್ಪಿಕೊಂಡರು.

ಆರೋಗ್ಯಕರ ಜೀವನಶೈಲಿ ಮತ್ತು ಯೋಗಕ್ಷೇಮಕ್ಕಾಗಿ ಯೋಗದ ಮಹತ್ವವನ್ನು ಪುನರುಚ್ಚರಿಸುತ್ತಾ, ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು, ಕ್ಯಾಸ್ಟ್ರೋಲ್ ಇಂಡಿಯಾ ಕಳೆದ ಎರಡು ವರ್ಷಗಳಂತೆ ಮುಂಬೈನ ಯೋಗ ಸಂಸ್ಥೆಯೊಂದಿಗಿನ ಸಹಭಾಗಿತ್ವದೊಂದಿಗೆ ಟ್ರಕ್ಕರ್‍ಗಳು ಮತ್ತು ರೈತರಿಗೆ ಅವರ ಯೋಗಕ್ಷೇಮವನ್ನು ಬಲಪಡಿಸಲು ಮತ್ತು ತಮ್ಮ ದೈನಂದಿನ ದಿನಚರಿಯಲ್ಲಿ ಆರೋಗ್ಯಕರ ಜೀವನಶೈಲಿಯ ನೀತಿಗಳನ್ನು ಸಜ್ಜುಗೊಳಿಸಲಾದ ಆಸನಗಳ ಪರಿಚಯಿಸಲು ಆರೋಗ್ಯ ಕಾರ್ಯಕ್ರಮವನ್ನು ಪುನಃ ನಡೆಸುತ್ತಿದೆ.

ಉಪಕ್ರಮದ ಕುರಿತು ಮಾತನಾಡುತ್ತಾ, ಕ್ಯಾಸ್ಟ್ರೋಲ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಾಂಗ್ವಾನ್ ಹೇಳಿದರು, ``ಈ ವಿಶಿಷ್ಟ ಸಮಯದಲ್ಲಿ ನಮ್ಮ ಜೀವನವು ಅಡೆತಡೆಯಿಲ್ಲದೆ ನಡೆಯಲು ನಮ್ಮ ಟ್ರಕ್ಕರ್‍ಗಳು ಮತ್ತು ರೈತರು ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಭಾರತವನ್ನು ಮುನ್ನಡೆಸುತ್ತಲೇ ಇರುವುದಕ್ಕಾಗಿ ನಾವು ಅವರಿಗೆ ನಮಸ್ಕರಿಸುತ್ತೇವೆ. ನಮ್ಮ ಟ್ರಕ್ಕರ್‍ಗಳು ಮತ್ತು ರೈತರಿಗಾಗಿ ಕ್ಯಾಸ್ಟ್ರೋಲ್ ಸಿಆರ್‍ಬಿ ಟ್ರಕ್ ಆಸನ ಮತ್ತು ಖೇತ್ ಆಸನ ಕಾರ್ಯಕ್ರಮಗಳ ಮೂಲಕ ಫಿಟ್‍ನೆಸ್ ಸಂಸ್ಕೃತಿಯನ್ನು ಅನುಸರಿಸಿ ಸಮುದಾಯಗಳನ್ನು ಬೆಂಬಲಿಸುವಲ್ಲಿ ಕ್ಯಾಸ್ಟ್ರೋಲ್ ಜವಾಬ್ದಾರಿಯುತ ಬ್ರ್ಯಾಂಡ್  ಆಗಿ ತನ್ನ ಪಾತ್ರವನ್ನು ಮುಂದುವರಿಸಿದೆ. ''

ಆರೋಗ್ಯ ಕಾರ್ಯಕ್ರಮದ ಭಾಗವಾಗಿ, ಕ್ಯಾಸ್ಟ್ರೋಲ್ ಇಂಡಿಯಾ ಹೆಚ್ಚುವರಿಯಾಗಿ ಈ ಸಮುದಾಯಗಳಿಗೆ ವಿಶೇಷವಾದ ಕ್ಯುರೇಟೆಡ್ ಆಸನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಲ್ಲಿ ಸಹಾಯ ಮಾಡಲು ವಿಶೇಷ ಸಹಾಯವಾಣಿಯನ್ನು ಪ್ರಾರಂಭಿಸುತ್ತದೆ.

ಅವರ ನಿಸ್ವಾರ್ಥ ಸೇವೆಗಾಗಿ ಸಮುದಾಯಗಳಿಗೆ ಗೌರವ ಸಲ್ಲಿಸಲು ಮತ್ತು ಅವರ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಮನವೊಲಿಸಲು ಈ ಉಪಕ್ರಮದಲ್ಲಿ ಬಾಲಿವುಡ್ ನಟ ರಣದೀಪ್ ಹೂಡಾ ಭಾಗವಹಿಸುತ್ತಾರೆ.

ಈ ಸಮುದಾಯಗಳ ದೃಷ್ಟಿಕೋನವನ್ನು ನಾವು ಬದಲಾಯಿಸುತ್ತೇವೆ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಅವರಿಗೆ ಸಹಾಯ ಮಾಡುತ್ತೇವೆ ಎಂಬುದು ನಿರ್ಣಾಯಕ. ನಾವು ವಾಸಿಸುತ್ತಿರುವ ಈ ಕಠಿಣ ಸಮಯದಲ್ಲಿ ಇದನ್ನು ಪರಿಗಣಿಸುವುದು ಬಹಳ ಮುಖ್ಯ. ಈ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು, ಕ್ಯಾಸ್ಟ್ರೋಲ್ ಸಿಆರ್‍ಬಿ ಮತ್ತು ನಾನು, ದೇಶಾದ್ಯಂತದ ಟ್ರಕ್ಕರ್‍ಗಳು ಮತ್ತು ರೈತರನ್ನು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಮತ್ತು ತಮ್ಮನ್ನು ಒಳಗಿನಿಂದ ಬಲಶಾಲಿಗಳನ್ನಾಗಿ ಮಾಡುವಂತೆ ಪ್ರೋತ್ಸಾಹಿಸಲು ಆಶಿಸುತ್ತೇವೆ, '' ಎಂದು ರಣದೀಪ್ ಹೂಡಾ ಹೇಳಿದರು.

"ಈ ಕಾರ್ಯಕ್ರಮವು, ಯೋಗವು  ಒಂದು ಜೀವನ ವಿಧಾನ ಮತ್ತು ಪ್ರತಿ ಮನೆಯನ್ನೂ ತಲುಪಲಿ ಎಂಬ ಭಾರತ ಸರ್ಕಾರ ಮತ್ತು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯ ದೃಷ್ಟಿಕೋನಕ್ಕೆ ಅನುಗುಣವಾಗಿದೆ . ನಮ್ಮ ಟ್ರಕ್ ಚಾಲಕರು ಮತ್ತು ರೈತರು ಆರೋಗ್ಯವಾಗಿರಲಿ ಮತ್ತು ನಮ್ಮ ದೇಶವನ್ನು ನಿರಂತರವಾಗಿ ಬೆಂಬಲಿಸಲಿ ಎಂದು ಆಶಿಸುವ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ ಕ್ಯಾಸ್ಟ್ರೋಲ್ ಇಂಡಿಯಾಗೆ ಅಭಿನಂದನೆಗಳು'' ಎಂದು ಭಾರತ ಸರ್ಕಾರದ ಆಯುಷ್ ಸಚಿವಾಲಯದ ಗೌರವಾನ್ವಿತ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಶ್ರೀಪಾದ್ ನಾಯಕ್ ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ, ಕ್ಯಾಸ್ಟ್ರೋಲ್ ಇಂಡಿಯಾ ಕ್ಯಾಸ್ಟ್ರೋಲ್ ಸಿಆರ್‍ಬಿ ಟರ್ಬೊಮ್ಯಾಕ್ಸ್ ಟ್ರಕ್ ಆಸನ ಮತ್ತು ಸಿಆರ್‍ಬಿ ಪ್ಲಸ್ ಖೇತ್ ಆಸನಗಳ ಮೂಲಕ 50 ಕ್ಕೂ ಹೆಚ್ಚು ನಗರಗಳು ಮತ್ತು 2,000 ಹಳ್ಳಿಗಳಲ್ಲಿ 3,25,000 ಕ್ಕೂ ಹೆಚ್ಚು ಟ್ರಕ್ಕರ್ ಮತ್ತು ರೈತರ ಜೀವನವನ್ನು ತಲುಪಿದೆ, ಹಾಗೂ ಅವರ ಜೀವನಶೈಲಿಯನ್ನು ಸುಧಾರಿಸಲು ಈ ಆಸನಗಳ ಪಾತ್ರವನ್ನು ಪ್ರತಿಪಾದಿಸಿದೆ.

Follow Us:
Download App:
  • android
  • ios