Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ಆರೋಗ್ಯದ ಕಡೆ ಗಮನಹರಿಸಿ, ವಿಷ್ಣು ಕವಚ ಪಠಿಸಿ

23 ಅಕ್ಟೋಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 23 October 2020 in Kannada grg
Author
Bengaluru, First Published Oct 23, 2020, 7:15 AM IST

ಮೇಷ: ಮಕ್ಕಳಿಂದ ಸಮಾಧಾನ, ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ, ಪಿತೃದೇವತೆಗಳ ಜೊತೆಗೆ ಸಂಪದ್ಗೌರೀ ವ್ರತ ಮಾಡಿ

ವೃಷಭ: ಕೃಷಿಕರಿಗೆ ಅನುಕೂಲದ ದಿನ, ದ್ರವ ವ್ಯಾಪಾರಿಗಳಿಗೆ ಶುಭಫಲ, ಸಮಾಧಾನದ ದಿನ, ಗೌರಿ ಪ್ರಾರ್ಥನೆ ಮಾಡಿ

ಮಿಥುನ: ಸಹೋದರರಿಗೆ ಸಹಕಾರ, ಜಾಗ್ರತೆ ಬೇಕು, ಅನುಕೂಲವೂ ಇದೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ: ಹಣಕಾಸಿನ ಸಮೃದ್ಧಿ, ಕುಟುಂಬದಲ್ಲಿ ಪರಸ್ಪರ ಅನುಕೂಲವಿದೆ, ಸ್ತ್ರೀಯರಿಂದ ಸಹಕಾರ, ಸಂಪದ್ಗೌರೀ ವ್ರತ ಮಾಡಿ

ಸಿಂಹ:  ನಷ್ಟ ಸಂಭವವಾದರೂ ಸಮಾಧಾನ ಇರಲಿದೆ, ಆತಂಕ ಇರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಸಂಪದ್ಗೌರೀ ಪೂಜೆ ಮಾಡಿ

ಕನ್ಯಾ: ಆರೋಗ್ಯದ ಕಡೆ ಗಮನಬೇಕು, ಉಳಿದಂತೆ ಶುಭಫಲಗಳೇ ಇವೆ, ವಿಷ್ಣು ಕವಚ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ತುಲಾ:  ವ್ಯಾಪಾರಿಗಳಿಗೆ ಲಾಭ, ವೈದ್ಯರಿಗೆ ಅನುಕೂಲದ ದಿನ, ಸರ್ಕಾರಿ ನೌಕರರಿಗೆ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಕಾರಣವಿಲ್ಲದೇ ಕೋಪ ಮಾಡಿಕೊಳ್ಳುವುದು, ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಳ್ಳುವುದು ಬೇಡ. ನೆಮ್ಮದಿಯಿಂದ ಮುಂದೆ ಸಾಗಿ.

ಧನಸ್ಸು: ಸಿಗದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿ ಮುಗಿಸಿ.

ಮಕರ: ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರಲಿವೆ. ಆರ್ಥಿಕವಾಗಿ ಒಳ್ಳೆಯ ದಿನವಿದು.

ಕುಂಭ: ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ. ಸಣ್ಣ ಸಣ್ಣ ವಿಚಾರಗಳನ್ನು ಕಡೆಗಣನೆ ಮಾಡಬೇಡಿ.

ಮೀನ: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಬೇಡ. ಹೊಸ ವಸ್ತುಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಶುಭ ಫಲ.

Follow Us:
Download App:
  • android
  • ios