Asianet Suvarna News Asianet Suvarna News

ದಿನ ಭವಿಷ್ಯ: ಶಿವರಾತ್ರಿಯಂದು ಈ ರಾಶಿಯವರು ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ

21 ಫೆಬ್ರವರಿ 2020, ಶುಕ್ರವಾರದ ದಿನ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಒಳಿತು? ಇಲ್ಲಿದೆ ಇಂದಿನ ರಾಶಿಫಲ
 

Daily Horoscope of 21st February 2020 in Kannada
Author
Bengaluru, First Published Feb 21, 2020, 7:05 AM IST

ಮೇಷ: ನೀವು ಮಾಡಿದ ಯಡವಟ್ಟಿನಿಂದ ಮನೆ ಯವರು ಇಡೀ ದಿನ ಪರಿತಪಿಸಬೇಕಾದೀತು. ನಿಮ್ಮ ಮಾತುಗಳೇ ನಿಮಗೆ ವರವಾಗಲಿವೆ

ವೃಷಭ: ಕಂಡದ್ದನ್ನು ಕಂಡ ಹಾಗೆ ಹೇಳುವಿರಿ. ಹೊಸ ಕೆಲಸ ಕಾರ್ಯಗಳಲ್ಲಿ ದಿನವಿಡೀ ತೊಡಗಿಸಿ ಕೊಳ್ಳಲಿದ್ದೀರಿ. ಅಧಿಕಾರದ ಆಸೆ ಬೇಡ

ಮಿಥುನ: ನೀವು ವಾಸ ಮಾಡುವ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ದೂರದ ಪ್ರಯಾಣ ಸದ್ಯಕ್ಕೆ ಬೇಡ. ಮಿತವ್ಯಯಕ್ಕೆ ಆದ್ಯತೆ ನೀಡುವಿರಿ.

ಕಟಕ: ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದೀತು. ತಂದೆಯ ಪ್ರೋತ್ಸಾಹದ ಫಲವಾಗಿ ಹೊಸ ಕಾರ್ಯ ಕೈಗೂಡುತ್ತದೆ. ಲಾಭದಲ್ಲಿ ಹೆಚ್ಚಳ

ಸಿಂಹ: ಗೆಲ್ಲುತ್ತೇನೆ ಎಂದು ಹೊರಟಾಗ ಸೋಲು ವುದಕ್ಕೂ ಸಿದ್ಧವಿರಬೇಕು. ತಾರತಮ್ಯ ಎಣಿಸುವುದು ಬೇಡ. ಕಾರ್ಯ ಸಿದ್ಧಿಯಾಗಲಿ

ಕನ್ಯಾ: ವಿದ್ಯಾರ್ಥಿಗಳ ಪಾಲಿಗೆ ಇದು ಶುಭ ದಿನ. ನಿನ್ನೆಯ ಆತಂಕಗಳೆಲ್ಲಾ ದೂರಾಗಲಿವೆ. ಆತುರಕ್ಕೆ ಬಿದ್ದು ನಿರ್ಧಾರ ಮಾಡದಿರಿ.

ತುಲಾ: ನಿಮ್ಮ ಶಕ್ತಿಗೆ ತಕ್ಕಂತಹ ಅವಕಾಶಗಳು ಬರಲಿವೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಬಂಧುಗಳೊಂದಿಗೆ ಮನಸ್ತಾಪ ಉಂಟಾಗಲಿದೆ.

ವೃಶ್ಚಿಕ: ಇಡೀ ದಿನ ಆತ್ಮೀಯರೊಂದಿಗೆ ಕಳೆಯಲಿದ್ದೀರಿ. ನಿಮ್ಮ ಸ್ವಭಾವಕ್ಕೆ ಹೊಂದುವ ಹೊಸ ಸ್ನೇಹಿತರು ದೊರೆಯಲಿದ್ದಾರೆ. ಶುಭಫಲ.

ವಾರ ಭವಿಷ್ಯ : ಈ ರಾಶಿಯವರಿಗಿದೆ ಭರ್ಜರಿ ಯೋಗ

ಧನುಸ್ಸು: ತಂದೆ ತಾಯಿಯ ನಿರೀಕ್ಷೆಯಂತೆ ಕೆಲಸ ಮಾಡಲಿದ್ದೀರಿ. ಸಣ್ಣ ವ್ಯಾಪಾರಿಗಳಿಗೆ ಇದು ಶುಭ ದಿನ. ಅಂದುಕೊಂಡ ಕಾರ್ಯ ಆಗಲಿದೆ.

ಮಕರ: ದಿನದ ಆರಂಭದಲ್ಲಿಯೇ ಶುಭ ಸುದ್ದಿ ಕೇಳಲಿದ್ದೀರಿ. ಸಾಧ್ಯವಾದರೆ ಸಂತೋಷ ಹಂಚಿ. ದುಃಖವನ್ನಲ್ಲ. ಗೆಲುವಿಗೆ ಶ್ರಮ ಬೇಕು.

ಕುಂಭ: ನಡೆಯಬೇಕಾದ ದಾರಿ ಕಠಿಣ ಎಂದು ಸುಮ್ಮನೆ ಕೂರುವುದು ಬೇಡ. ಅನಗತ್ಯವಾದ ವಿಚಾರಗಳ ಬಗ್ಗೆ ಹೆಚ್ಚು ಚಿಂತೆ ಮಾಡದಿರಿ.

ಮೀನ: ಹೊಸ ವಿಚಾರಗಳ ಬಗ್ಗೆ ಚಿಂತನೆ ಮಾಡಲಿದ್ದೀರಿ. ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರೋಗ್ಯದಲ್ಲಿ ವೃದ್ಧಿ

Follow Us:
Download App:
  • android
  • ios