ಈ ರಾಶಿಯವರು ಎಚ್ಚರಿಕೆಯಿಂದಿರಿ..., ಇಲ್ಲಿದೆ ಇಂದಿನ ಭವಿಷ್ಯ
ಇಂದು ಯಾರಿಗೆ ಶುಭ? ಯಾರಿಗೆ ಯಾವ ಫಲ? ಇಲ್ಲಿದೆ ಇಂದಿನ ದಿನ ಭವಿಷ್ಯ
ಮೇಷ: ಕೆಟ್ಟ ಆಲೋಚನೆಗಳಿಂದ ದೂರ ಇದ್ದು ಬಿಡಿ. ಮನಸ್ಸಿನ ಶಾಂತಿಗಾಗಿ ದೂರದ ಪ್ರಯಾಣ ಕೈಗೊಳ್ಳಲಿದ್ದೀರಿ. ಗೆಲುವು ನಿಮ್ಮದೇ.
ವೃಷಭ: ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಮಿಥುನ: ನಿಮ್ಮದಲ್ಲದ ವಿಚಾರಕ್ಕೆ ನೀವು ತಲೆ ಹಾಕದೇ ಇದ್ದರೆ ಇಡೀ ದಿನ ಸಂತೋಷದಿಂದ ಕೂಡಿರಲಿದೆ. ಎಲ್ಲ ಬಲ್ಲೆ ಎನ್ನುವ ಹಮ್ಮು ಬೇಡ
ಕಟಕ: ಸಕಾಲದಲ್ಲಿ ಸ್ನೇಹಿತರು ನೆರವಾಗಲಿದ್ದಾರೆ. ಕಣ್ಣಿಗೆ ಕಂಡದ್ದಕ್ಕೆಲ್ಲಾ ಆಸೆ ಪಡುವುದು ಬೇಡ. ನಿಮ್ಮ ಶಕ್ತಿಯೇ ಇಂದು ನಿಮಗೆ ವರವಾಗಲಿದೆ
ಸಿಂಹ: ಮತ್ತೊಬ್ಬರಿಗೆ ನೆರವು ನೀಡಲು ಹೋಗಿ ನೀವು ತೊಂದರೆಗೆ ಸಿಲುಕುವ ಅಪಾಯವಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.
ಕನ್ಯಾ: ಮಾಡುವ ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡಿ ಮುಗಿಸಿ. ಮತ್ತೊಬ್ಬರ ಬೆಳವಣಿಗೆ ನಿಮ್ಮಲ್ಲಿ ಛಲ ತುಂಬಲಿದೆ. ಶುಭ ಫಲ.
ತುಲಾ : ಆತ್ಮೀಯರು ಎಂದು ಸೂಕ್ಷ್ಮ ವಿಚಾರಗಳನ್ನು ಎಲ್ಲರ ಮುಂದೆಯೂ ಹೇಳಿಕೊಳ್ಳುವುದು ತುಲಾ ಬೇಡ. ಸಮಾಧಾನದಿಂದ ಮುಂದೆ ಸಾಗಿ.
ವೃಶ್ಚಿಕ: ಚಿಕ್ಕ ತಪ್ಪು ಇಂದು ನಿಮ್ಮ ಸಂತೋಷವನ್ನೇ ಕಸಿಯುವ ಸಾಧ್ಯತೆ ಇದೆ. ಯಾರೊಂದಿಗೂ ವಿನಾಕಾರಣ ಮುನಿಸು ಬೇಡ. ಶುಭ ಫಲ
ಧನುಸ್ಸು: ನಂಬಿಕೆ ಇಟ್ಟು ಮಾಡಿದ ಕೆಲಸ ಇಂದು ಕೈಗೂಡಲಿದೆ. ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳಿತು. ಆರೋಗ್ಯದಲ್ಲಿ ವ್ಯತ್ಯಯ.
ಮಕರ: ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳದಿರಿ. ಹೊಸ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ. ದಿನವಿಡೀ ಸಂತೋಷ ಇರಲಿದೆ
ಕುಂಭ: ಹೆಚ್ಚು ಮಾತು ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಅದಕ್ಕೆ ಬದಲಾಗಿ ಕಾಯಕದಿಂದಲೇ ಲಾಭ ಎನ್ನುವುದು ತಿಳಿಯಲಿದೆ.
ಮೀನ : ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಮತ್ತೊಬ್ಬರ ಬಗ್ಗೆ ಟೀಕೆ ಮಾಡುದು ನಿಲ್ಲಿಸಿ. ಗೆಲುವು ನಿಮ್ಮದಾಗಲಿದೆ