ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಲಿಕಾಪ್ಟರ್ ನಿಗದಿತ ಸ್ಥಳ ಬಿಟ್ಟು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ಗಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡಿನಲ್ಲಿ ಲ್ಯಾಂಡಿಂಗ್ ಆಗಿ ಅಧಿಕಾರಿಗಳನ್ನು ಗಲಿಬಿಲಿ ಮಾಡಿದ ಘಟನೆ ಭಾನುವಾರ ಲಿಂಗಸುಗೂರಿನಲ್ಲಿ ಸಂಭವಿಸಿದೆ.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಸಿಎಂ ಪ್ರಯಾಣಕ್ಕೆ ವಿಟಿ ಕಂಪನಿ ಹೆಲಿಕಾಪ್ಟರ್ ಕಾಯ್ದಿರಿಸಲಾಗಿತ್ತು. ಸಚಿವ ಸತೀಶ ಜಾರಕಿಹೊಳಿಗೂ ಇದೇ ಕಂಪನಿಯ ಒಂದೇ ಮಾದರಿಯ ಎರಡು ಪ್ರತ್ಯೇಕ ಹೆಲಿಕಾಪ್ಟರ್ಗಳನ್ನು ಕಾಯ್ದಿರಿಸಲಾಗಿತ್ತು. ಪಟ್ಟಣದ ಲಿಂಗಸುಗೂರು-ರಾಯಚೂರು ಮುಖ್ಯರಸ್ತೆ ಬದಿಯ ಖಾಸಗಿ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ನಿರೀಕ್ಷಿಸಿದಂತೆ ಹೆಲಿಕಾಪ್ಟರ್ ಬಂದಿಳಿಯಿತು. ಆದರೆ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರಲಿಲ್ಲ. ಬದಲಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು. ಇದರಿಂದ ಅಧಿಕಾರಿಗಳು ಗಲಿಬಿಲಿಗೊಂಡರು
11:00 PM (IST) Feb 09
10:41 PM (IST) Feb 09
ಆಯುರ್ವೇದವು ಕೇವಲ ಮನೆಮದ್ದಲ್ಲ, ಅದೊಂದು ವೈಜ್ಞಾನಿಕ ವೈದ್ಯಕೀಯ ಶಾಸ್ತ್ರ. ಸೋಶಿಯಲ್ ಮೀಡಿಯಾದಲ್ಲಿನ ತಪ್ಪು ಮಾಹಿತಿ ನಂಬಿ ಸ್ವಯಂ-ಚಿಕಿತ್ಸೆ ಮಾಡಿಕೊಳ್ಳುವ ಬದಲು, ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪದವಿ ಪಡೆದ ನೋಂದಾಯಿತ ಆಯುರ್ವೇದ ವೈದ್ಯರಿಂದಲೇ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
10:25 PM (IST) Feb 09
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೋರಿಕೆಯಂತೆ, ಮಂಡ್ಯದಲ್ಲಿ ದೇಶದ ಮೊದಲ ನಿರ್ಮಾಣ ಕಾಮಗಾರಿ ಪರೀಕ್ಷಾ ಸ್ಥಾವರ ಸ್ಥಾಪನೆಗೆ 105 ಎಕರೆ ಜಮೀನು ಲಭ್ಯವಿದೆ ಎಂದು ಸಚಿವ ಎಂ.ಬಿ. ಪಾಟೀಲರು ಪತ್ರದ ಮೂಲಕ ತಿಳಿಸಿದ್ದಾರೆ. ಭೂಮಿ ಪರಿಶೀಲಿಸಿ, ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದಿದ್ದಾರೆ.
10:00 PM (IST) Feb 09
10:00 PM (IST) Feb 09
09:25 PM (IST) Feb 09
ಕರ್ನಾಟಕದ ಹೆಮ್ಮೆಯ 'ಮೈಸೂರು ಸ್ಯಾಂಡಲ್ ಸೋಪ್'ಗೆ ನಟಿ ತಮನ್ನಾ ಭಾಟಿಯಾ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕೆ.ಎಸ್.ಡಿ.ಎಲ್ ಸಂಸ್ಥೆಯು ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ 2 ವರ್ಷಗಳವರೆಗೆ ರಾಯಭಾರಿ ಮಾಡಿದೆ. ಈ ಮೂಲಕ ಶತಮಾನದ ಪರಂಪರೆಯು ಬ್ರ್ಯಾಂಡ್ಗೆ ಹೊಸ ಗ್ಲಾಮರ್ ಸ್ಪರ್ಶ ನೀಡಲಾಗಿದೆ.
09:17 PM (IST) Feb 09
Why Bengaluru Namma Metro is the Most Expensive in India ನಮ್ಮ ಮೆಟ್ರೋವನ್ನು ಭಾರತದ ಪ್ರಯಾಣ ದರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಳ್ಳಿದ ಹಣಕಾಸು, ಕಾರ್ಯಾಚರಣೆ ಮತ್ತು ನೀತಿ ಅಂಶಗಳ ವಿವರ ಇಲ್ಲಿದೆ.
07:50 PM (IST) Feb 09
07:01 PM (IST) Feb 09
ಬೆಂಗಳೂರಿನ ಕೋರಮಂಗಲ ಫೋರಂ ಮಾಲ್ನ ಸಂಗೀತ ಕಾರ್ಯಕ್ರಮದಲ್ಲಿ ಕೇವಲ ತಮಿಳು ಹಾಡುಗಳನ್ನು ಹಾಕಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡ ಕಡೆಗಣನೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ನಂತರ, ಆಯೋಜಕರು ಕ್ಷಮೆಯಾಚಿಸಿ ಡಾ. ರಾಜ್ಕುಮಾರ್ ಸಿನಿಮಾಗಳ ಹಾಡುಗಳನ್ನು ಹಾಕಿದರು.
06:24 PM (IST) Feb 09
ಪ್ರೇಮಿಗಳ ದಿನದ ಸನಿಹದಲ್ಲಿ, ಕನ್ನಡದ ಜನಪ್ರಿಯ ಸೀರಿಯಲ್ಗಳ ನಾಯಕಿಯರು ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತೋರಿಸಲಾಗಿದೆ. ಅಮೃತಧಾರೆ , ಬ್ರಹ್ಮಗಂಟು ಮುಂತಾದ ಧಾರಾವಾಹಿಗಳಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರುವ ವಿಭಿನ್ನ ಶೈಲಿಗಳನ್ನು ಇಲ್ಲಿ ವಿವರಿಸಲಾಗಿದೆ.
05:34 PM (IST) Feb 09
05:04 PM (IST) Feb 09
ಸಿದ್ದಾಪುರದ ಆರೋಪಿಗಳಾದ ಕಮಲಾಕರ ಭಟ್ ಮತ್ತು ಸುಚಿತ್ರಾಳ ಸಂಬಂಧವು ಬ್ಲ್ಯಾಕ್ಮೇಲ್ ಮತ್ತು ಹನಿಟ್ರ್ಯಾಪ್ ಜಾಲವಾಗಿತ್ತು ಎಂದು ಸುಚಿತ್ರಾಳ ಪತಿ ಬಹಿರಂಗಪಡಿಸಿದ್ದಾರೆ. ಹಣಕ್ಕಾಗಿ ದೈಹಿಕ ಸಂಬಂಧ ಬೆಳೆಸಿ, ಗುಪ್ತವಾಗಿ ವಿಡಿಯೋ ಮಾಡಿದ್ದಳು.
05:02 PM (IST) Feb 09
Bigg Boss Sonu Gowda: ಬಿಗ್ ಬಾಸ್ ಕನ್ನಡ ಒಟಿಟಿ ಸ್ಪರ್ಧಿ ಸೋನು ಗೌಡ ಅವರು ಬಾಯ್ಫ್ರೆಂಡ್ ಯಾರು? ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಯುಟ್ಯೂಬ್ ಚಾನೆಲ್ನಲ್ಲಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
04:26 PM (IST) Feb 09
04:10 PM (IST) Feb 09
03:42 PM (IST) Feb 09
Deepika Tc News: ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಅಂಧರ ಕ್ರಿಕೆಟ್ ತಂಡದ ಕ್ಯಾಪ್ಟನ್ ದೀಪಿಕಾ ಟಿಸಿ ಅವರು ಡಿಸಿಎಂ ಬಳಿ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೀಗೆ ಹೇಳಿ ಐದು ನಿಮಿಷಕ್ಕೆ ರಸ್ತೆ ಜಾರಿಯಾಗಿದೆ.
03:18 PM (IST) Feb 09
ಬೆಂಗಳೂರಿನಲ್ಲಿರುವ ಜಪಾನ್ ಮತ್ತು ಡಚ್ ರಾಯಭಾರ ಕಚೇರಿಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.
03:16 PM (IST) Feb 09
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಭವಾನಿ ದೇಗುಲದ ಹಿಂಭಾಗದಲ್ಲಿ ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಈ ಹಿಂದೆ ಕೂಡ ಇಲ್ಲಿ ವಿಗ್ರಹಗಳು ಸಿಕ್ಕಿವೆ.
02:54 PM (IST) Feb 09
Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ಭಾಗ್ಯ ಮನೆಗೆ ಬಂದ ತಾಂಡವ್ ಧರಣಿ ಕೂತಿದ್ದಾನೆ. ಅವನಿಗೆ ಭಾಗ್ಯ ಒಪ್ಪುತ್ತಾಳಾ? ಇಲ್ಲವಾ ಎನ್ನುವ ಚಿಂತೆ ಶುರುವಾಗಿದೆ. ಈಗ ಸಕಲೇಶಪುರದಲ್ಲಿ ಕೊನೆಯ ಸಂಚಿಕೆ ಶೂಟಿಂಗ್ ನಡೆದಿದೆಯಾ ಎಂಬ ಪ್ರಶ್ನೆ ಶುರುವಾಗಿದೆ.
02:39 PM (IST) Feb 09
ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ಕಮಲಾಕರ ಭಟ್, ಸಹ ಆರೋಪಿ ಸುಚಿತ್ರಾಳಿಗಿಂತ ಮುಂಚೆಯೇ ಹಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸತ್ಯ ಬಯಲಾಗಿದೆ. ಹಳೆಯ ಪ್ರಿಯತಮೆಯೊಂದಿಗೆ ಜಗಳವಾಡುವ ಆಡಿಯೋ ವೈರಲ್ ಆಗಿದೆ.
02:32 PM (IST) Feb 09
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ, ಮದುವೆ ಸಿದ್ಧತೆಯಲ್ಲಿದ್ದ ಪ್ರಿಯಾಂಕ (19) ಮತ್ತು ಆಕೆಯ ತಾಯಿ ಶಕುಂತಲಾದೇವಿ (46) ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತನೊಂದಿಗಿನ ಮಗಳ ಪ್ರೀತಿಯ ವಿಷಯ ತಿಳಿದು, ಮರ್ಯಾದೆಗೆ ಹೆದರಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
02:29 PM (IST) Feb 09
ತುಮಕೂರು: ಕಾನೂನುಬದ್ದವಾಗಿ ಡಿವೋರ್ಸ್ ಪಡೆಯದೇ ಎರಡನೇ ಮದುವೆಯಾಗಲು ರೆಡಿಯಾಗಿದ್ದ ದೈಹಿಕ ಶಿಕ್ಷಕ ಹರಿಪ್ರಸಾದ್ಗೆ ಭಾನುವಾರ ಮೊದಲ ಪತ್ನಿ ಕಲ್ಯಾಣ ಮಂಟಪದಲ್ಲಿ ಹೈಡ್ರಾಮಾ ಮಾಡಿದ್ದರು. ಇದೀಗ ಮಂಡ್ಯ ಮೂಲದ ಯುವತಿ ಕೂಡಾ ಹರಿಪ್ರಸಾದನಿಗೆ ಶಾಕ್ ನೀಡಿದ್ದಾಳೆ. ಏನಿದು ಪ್ರಕರಣ? ನೋಡೋಣ ಬನ್ನಿ
02:27 PM (IST) Feb 09
Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ವಿಜೇತ ಗಿಲ್ಲಿ ನಟ ಅವರು ಸೂಪರ್ ಹಿಟ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜಮೀನು ತಗೊಂಡಿದ್ದು, ತ್ರಿಕೊನ ಪ್ರೇಮಕಥೆ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.
01:57 PM (IST) Feb 09
01:28 PM (IST) Feb 09
Bigg Boss Kannada Season 12 ವಿಜೇತ ಗಿಲ್ಲಿ ನಟನ ಬಗ್ಗೆ ಫಿಲ್ಮ್ ಛೇಂಬರ್ಗೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗ ಗಿಲ್ಲಿ ನಟ ಅವರು ಮಾತನಾಡಿದ್ದಾರೆ. ಸೂಪರ್ ಹಿಟ್ ಎನ್ನುವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
01:25 PM (IST) Feb 09
ಬಿಗ್ಬಾಸ್ 12ರ ವಿಜೇತ ಗಿಲ್ಲಿ ನಟ, ಖ್ಯಾತಿಯಿಂದಾಗಿ ಅಭಿಮಾನಿಗಳ ಒತ್ತಡವನ್ನು ಎದುರಿಸುತ್ತಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ನಂತರದ ಮಾನಸಿಕ ಹೊಂದಾಣಿಕೆಯ ಬಗ್ಗೆ ಸಾಧು ಕೋಕಿಲ ವಿವರಿಸಿದ್ದು, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಗಿಲ್ಲಿ ನಟ ಕೂಡ ಕ್ಷಮೆಯಾಚಿಸಿದ್ದಾರೆ.
12:51 PM (IST) Feb 09
Actress Mansa Manohar: 'ಲಕ್ಷ್ಮೀ ನಿವಾಸ' ಮತ್ತು 'ಶಾಂಭವಿ' ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಸೀಮಂತರ ಮಾಡಿಕೊಂಡಿದ್ದಾರೆ. ಇವರ ಪತಿ ಪ್ರೀತಂ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
12:21 PM (IST) Feb 09
Nanda Gokula Serial Priya: ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅರ್ಪಿತಾ ಗೌಡ ಅವರು ಸ್ಲೀವ್ಲೆಸ್ ಬ್ಲೌಸ್, ಸೀರೆ ಉಟ್ಟು ಮಿಂಚಿದ್ದಾರೆ. ಈ ಫೋಟೋಗಳನ್ನು ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
12:16 PM (IST) Feb 09
11:56 AM (IST) Feb 09
11:53 AM (IST) Feb 09
ವಸಂತನಾಯ್ಕ ಕೊ*ಲೆ ಪ್ರಕರಣದ ಆರೋಪಿ ಸುಚಿತ್ರಾ, ತನ್ನ ನಿಜವಾದ ಹೆಸರು ಸುರೇಖಾ ಎಂಬುದನ್ನು ಮುಚ್ಚಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರಿಗೆ ಬಲೆ ಬೀಸುತ್ತಿದ್ದಳು. ತಾನು ಅವಿವಾಹಿತೆ ಎಂದು ನಂಬಿಸಿ, ಅವರ ಆರ್ಥಿಕ ಸ್ಥಿತಿಗತಿ ಅರಿತು ಹಣ ಮತ್ತು ಆಸ್ತಿ ಪೀಕುತ್ತಿದ್ದ ವಿಚಾರ ಬಯಲಾಗಿದೆ.
11:49 AM (IST) Feb 09
Bigg Boss Gilli Nata: ಬಿಗ್ ಬಾಸ್ ಮನೆಯಲ್ಲಿ ಐದರಿಂದ ಆರು ವಾರ ಇದ್ದರೆ ಸಾಕು ಎಂದುಕೊಳ್ಳುತ್ತಿದ್ದ ಗಿಲ್ಲಿ ನಟ ಅವರು 12 ಸೀಸನ್ ಗೆದ್ದಿದ್ದಲ್ಲದೆ, ದೊಡ್ಡ ಕ್ರೇಜ್ ಸೃಷ್ಟಿ ಮಾಡಿದರು. ಈಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
11:26 AM (IST) Feb 09
ಯಶ್ ನಟನೆ, ನಿರ್ಮಾಣದ ‘ರಾಮಾಯಣ’ ಚಿತ್ರಕ್ಕೆ ಖ್ಯಾತ ನಟ ರಾಘವ್ ಜುಯಲ್ ಹೊಸದಾಗಿ ಸೇರಿಕೊಂಡಿದ್ದಾರೆ. ರಾವಣ ಪಾತ್ರಧಾರಿ ಯಶ್ ಮಗನಾಗಿ ರಾಘವ್ ಜುಯಲ್ ನಟಿಸಲಿದ್ದಾರೆ. ‘ರಾಮಾಯಣ’ದಲ್ಲಿ ಬರುವ ಮೇಘನಾಥನ ಪಾತ್ರದಲ್ಲಿ ರಾಘವ್ ಮಿಂಚಲಿದ್ದಾರೆ.
11:20 AM (IST) Feb 09
Bollywood Box Office Clash 2026: ಮಾರ್ಚ್ 19 ರಿಂದ ಮೇ 1ರ ನಡುವೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಲೆಕ್ಷನ್ ಸುನಾಮಿಯೇ ಆಗಲಿದೆ. ಒಂದೆರಡಲ್ಲ, ಬರೋಬ್ಬರಿ 6 ದೊಡ್ಡ ಸಿನಿಮಾಗಳು ತೆರೆ ಕಾಣಲಿವೆ. ಈ ಚಿತ್ರಗಳ ಮೇಲೆ 1020 ರಿಂದ 1550 ಕೋಟಿ ರೂಪಾಯಿವರೆಗೆ ಬಂಡವಾಳ ಹೂಡಲಾಗಿದೆ.
11:02 AM (IST) Feb 09
ಹಿರಿಯ ಸೊಸೆ ಪ್ರಿಯಾ, ನೆಚ್ಚಿನ ಸೊಸೆಯಾಗುವ ಹಠಕ್ಕೆ ಬಿದ್ದಿದ್ದಾಳೆ. ಮುಂಜಾನೆ ಎದ್ದು ಅಡುಗೆ ಮಾಡಿ ಅತ್ತೆಯ ಮನಗೆದ್ದ ಆಕೆ, ತನ್ನ ಓರಗಿತ್ತಿಯರಾದ ಮೀನಾ ಮತ್ತು ಅಮೂಲ್ಯಗೆ ಟಾಂಗ್ ನೀಡಿದ್ದಾಳೆ. ಪ್ರಿಯಾಳ ಈ ವರ್ತನೆಯನ್ನು ವೀಕ್ಷಕರು 'ವಿಲನ್ ಎಂಟ್ರಿ' ಎಂದು ಬಣ್ಣಿಸುತ್ತಿದ್ದಾರೆ.
10:54 AM (IST) Feb 09
OTT Release: ಫೆಬ್ರವರಿ 2026ರ 2ನೇ ವಾರ ಪ್ರೇಮಿಗಳ ದಿನಾಚರಣೆಯ ಸಂಭ್ರಮ ತರುತ್ತಿದೆ. ಇದೇ ಸಮಯದಲ್ಲಿ, OTT ಪ್ಲಾಟ್ಫಾರ್ಮ್ಗಳಲ್ಲಿ ಕೆಲವು ಅದ್ಭುತ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಹಾರರ್ ಕಾಮಿಡಿಯಿಂದ ಹಿಡಿದು ಆ್ಯಕ್ಷನ್ ಡ್ರಾಮಾವರೆಗೆ, ಈ ವಾರ OTTಯಲ್ಲಿ ಸ್ಟ್ರೀಮ್ ಆಗಲಿರುವ ಸಿನಿಮಾಗಳಿವು
10:16 AM (IST) Feb 09
ವಾಹನವನ್ನು ಅತಿ ವೇಗವಾಗಿ ಚಲಾಯಿಸಿದ ಮಾತ್ರಕ್ಕೆ ಚಾಲಕ ಅವಸರ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಎಂಬುದಾಗಿ ಹೇಳಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. ವಾಹನವನ್ನು ಅವಸರ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಅಪಘಾತ ಮಾಡಿದ ಪ್ರಕರಣದ ಶಿಕ್ಷೆ ರದ್ದು ಮಾಡಿ ಆದೇಶ
09:47 AM (IST) Feb 09
09:29 AM (IST) Feb 09
ಮಹಾರಾಷ್ಟ್ರದ ಹಿಂದೂ ಮೆಡಂಗಿ ಜೋಶಿ ಸಮಾಜದ ಭಕ್ತರು, ತಮ್ಮ ಸಂಪ್ರದಾಯದಂತೆ ಮೂರು ಬೃಹತ್ ಕಾಂಕ್ರೇಜ್ ಹೋರಿಗಳೊಂದಿಗೆ ಧರ್ಮಸ್ಥಳ ಸೇರಿದಂತೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದಾರೆ.
09:09 AM (IST) Feb 09