LIVE NOW
Published : Feb 09, 2026, 06:48 AM ISTUpdated : Feb 09, 2026, 09:29 AM IST

Karnataka News Live: ಮೂರು ಬೃಹತ್ ಕಾಂಕ್ರೇಜ್ ಹೋರಿಗಳೊಂದಿಗೆ ಜೋಶಿ ಸಮಾಜದ ಭಕ್ತರಿಂದ ಪುಣ್ಯಕ್ಷೇತ್ರಗಳ ದರ್ಶನ

ಸಾರಾಂಶ

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಲಿಕಾಪ್ಟರ್ ನಿಗದಿತ ಸ್ಥಳ ಬಿಟ್ಟು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್‌ಗಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡಿನಲ್ಲಿ ಲ್ಯಾಂಡಿಂಗ್ ಆಗಿ ಅಧಿಕಾರಿಗಳನ್ನು ಗಲಿಬಿಲಿ ಮಾಡಿದ ಘಟನೆ ಭಾನುವಾರ ಲಿಂಗಸುಗೂರಿನಲ್ಲಿ ಸಂಭವಿಸಿದೆ.

ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಸಿಎಂ ಪ್ರಯಾಣಕ್ಕೆ ವಿಟಿ ಕಂಪನಿ ಹೆಲಿಕಾಪ್ಟರ್ ಕಾಯ್ದಿರಿಸಲಾಗಿತ್ತು. ಸಚಿವ ಸತೀಶ ಜಾರಕಿಹೊಳಿಗೂ ಇದೇ ಕಂಪನಿಯ ಒಂದೇ ಮಾದರಿಯ ಎರಡು ಪ್ರತ್ಯೇಕ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಲಾಗಿತ್ತು. ಪಟ್ಟಣದ ಲಿಂಗಸುಗೂರು-ರಾಯಚೂರು ಮುಖ್ಯರಸ್ತೆ ಬದಿಯ ಖಾಸಗಿ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ನಿರೀಕ್ಷಿಸಿದಂತೆ ಹೆಲಿಕಾಪ್ಟರ್ ಬಂದಿಳಿಯಿತು. ಆದರೆ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರಲಿಲ್ಲ. ಬದಲಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು. ಇದರಿಂದ ಅಧಿಕಾರಿಗಳು ಗಲಿಬಿಲಿಗೊಂಡರು

09:29 AM (IST) Feb 09

ಮೂರು ಬೃಹತ್ ಕಾಂಕ್ರೇಜ್ ಹೋರಿಗಳೊಂದಿಗೆ ಜೋಶಿ ಸಮಾಜದ ಭಕ್ತರಿಂದ ಪುಣ್ಯಕ್ಷೇತ್ರಗಳ ದರ್ಶನ

ಮಹಾರಾಷ್ಟ್ರದ ಹಿಂದೂ ಮೆಡಂಗಿ ಜೋಶಿ ಸಮಾಜದ ಭಕ್ತರು, ತಮ್ಮ ಸಂಪ್ರದಾಯದಂತೆ ಮೂರು ಬೃಹತ್ ಕಾಂಕ್ರೇಜ್ ಹೋರಿಗಳೊಂದಿಗೆ ಧರ್ಮಸ್ಥಳ ಸೇರಿದಂತೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದಾರೆ. 

Read Full Story

09:09 AM (IST) Feb 09

₹27.72 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ ಪಡೆದ ಬೆಂಗಳೂರು ನಗರ ಜಿಲ್ಲಾಡಳಿತ

ಬೆಂಗಳೂರು ನಗರ ಜಿಲ್ಲಾಡಳಿತವು ನಗರದಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿ, ಒತ್ತುವರಿಯಾಗಿದ್ದ 8.04 ಎಕರೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದಿದೆ. ಈ ಜಮೀನಿನ ಒಟ್ಟು ಮೌಲ್ಯ 27.72 ಕೋಟಿ ರೂಪಾಯಿಗಳಾಗಿದ್ದು, ಪೂರ್ವ, ಆನೇಕಲ್, ದಕ್ಷಿಣ, ಯಲಹಂಕ ಮತ್ತು ಉತ್ತರ ತಾಲೂಕುಗಳಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದೆ.
Read Full Story

08:51 AM (IST) Feb 09

Bengaluru - ಪ್ರೀತಿಯ ಹುಚ್ಚು - ತಾಯಿ, ಸಂಬಂಧಿಕರ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳಿಸಿದ ಮಗಳು

ಬೆಂಗಳೂರಿನಲ್ಲಿ 23 ವರ್ಷದ ಯುವತಿಯೊಬ್ಬಳು ತನ್ನ ತಾಯಿ ಮತ್ತು ಚಿಕ್ಕಮ್ಮನ ಖಾಸಗಿ ಫೋಟೋಗಳನ್ನು ತೆಗೆದು ಪ್ರಿಯಕರನಿಗೆ ಕಳುಹಿಸಿದ್ದಾಳೆ. ಈ ವಿಷಯ ಪೋಷಕರಿಗೆ ತಿಳಿದಾಗ, ಆಕೆ ಅವನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. 

Read Full Story

08:25 AM (IST) Feb 09

ಕಷ್ಟಪಟ್ಟು ಖರೀದಿಸಿದ್ದ ಮನೆಯಲ್ಲಿ ಮೋಸ; ಹೊಸ ಮನೆಗೆ ಕಾಲಿಟ್ಟ Brindavana Serial ನಟ ವರುಣ್‌ ಆರಾಧ್ಯ!

Youtuber Varun Araydya: ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ ಅವರಿಗೆ ಹಳೆ ಮನೆಯ ವಿಚಾರವಾಗಿ ಮೋಸ ಆಗಿತ್ತು, ಆಮೇಲೆ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

 

Read Full Story

08:24 AM (IST) Feb 09

ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿಯೇ 'ಆಸ್ಟಿಯೋಪೊರೊಸಿಸ್' ಸಮಸ್ಯೆ - ವಯಸ್ಸು 40 ಆಗಿದ್ರೆ ಎಚ್ಚರ!

ಮನುಷ್ಯನ ದೇಹಕ್ಕೆ ಆಧಾರವಾಗಿರುವ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಆಸ್ಟಿಯೋಪೊರೋಸಿಸ್ ಕಾಣಿಸಿಕೊಳ್ಳುತ್ತಿದೆ. ಏನಿದು  ಸಮಸ್ಯೆ? ಮುಂಜಾಗ್ರತ ಕ್ರಮಗಳೇನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

Read Full Story

08:02 AM (IST) Feb 09

ಈ ಬಾರಿ ಹಂಪಿ ಉತ್ಸವದಲ್ಲಿ 1000 ಡ್ರೋನ್‌ಗಳ ಬೆಳಕಿನ ಚಿತ್ತಾರ; ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿ

ವಿಶ್ವವಿಖ್ಯಾತ ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸಲು ಸಜ್ಜಾಗಿದೆ. ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ, ಒಂದು ಸಾವಿರ ಡ್ರೋನ್‌ಗಳನ್ನು ಬಳಸಿ ಹಂಪಿಯ ಸ್ಮಾರಕಗಳ ಚಿತ್ತಾರವನ್ನು ಬಾನಂಗಳದಲ್ಲಿ ಮೂಡಿಸುವ ಅದ್ಭುತ ಡ್ರೋನ್ ಶೋ ಆಯೋಜಿಸಲಾಗಿದೆ. 

Read Full Story

07:43 AM (IST) Feb 09

ತನ್ನ ಡಿಎನ್‌ಎ ಬಳಸಿ ಸೂಪರ್‌ ರೇಸ್ ಸೃಷ್ಟಿಗೆ ಎಪ್ಸ್ಟೀನ್ ಪ್ಲಾನ್! 20 ಮಹಿಳೆಯರ ಗರ್ಭಿಣಿ ಮಾಡಲು ಬಯಸಿದ್ದ!

ಲೈಂಗಿಕ ಶೋಷಣೆಗ ಬಳಸುವ ಉದ್ದೇಶದಿಂದ ಅಪ್ರಾಪ್ತ ಮಕ್ಕಳ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಮೆರಿಕದ ಜೆಫ್ರೀ ಎಫ್‌ಸ್ಟೀನ್‌ ತನ್ನ ಡಿಎನ್‌ಎ ಬಳಸಿಕೊಂಡು ಸೂಪರ್‌ ರೇಸ್‌ (ಶ್ರೇಷ್ಠ ಮಾನವ ಕುಲ) ಸೃಷ್ಟಿಸುವ ಭಯಾನಕ ಯೋಜನೆಯೊಂದನ್ನು ಹಾಕಿಕೊಂಡಿದ್ದ!

Read Full Story

07:38 AM (IST) Feb 09

‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’

ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಮೌಲ್ಯಗಳ ಹತ್ಯೆಯಾಗಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೇಸರ ವ್ಯಕ್ತಪಡಿಸಿದೆ.

Read Full Story

07:07 AM (IST) Feb 09

ಮಂಡ್ಯದಲ್ಲಿ ಅರೈ ಘಟಕ ಸ್ಥಾಪನೆಗೆ 100 ಎಕರೆ ಜಾಗ ನೀಡುವಂತೆ ಕೇಂದ್ರ ಸಚಿವ ಹೆಚ್‌ಡಿಕೆ ಪತ್ರ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಅರೈ) ಘಟಕ ಸ್ಥಾಪನೆಗೆ 100 ಎಕರೆ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

Read Full Story

07:01 AM (IST) Feb 09

ಕೃಷಿ ಯೋಜನೆಯಲ್ಲಿ ರಾಜ್ಯ ಮಾದರಿ - ಚಲುವರಾಯಸ್ವಾಮಿ

ಕೇಂದ್ರ ಸರ್ಕಾರದ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿ ಹೊಮ್ಮಿದೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ರಫ್ತು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಹೆಚ್ಚಿನ ಬೆಂಬಲ ನೀಡುವ ಅಗತ್ಯವಿದೆ ಎಂದು ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Read Full Story

More Trending News