Published : Oct 05, 2025, 06:46 AM ISTUpdated : Oct 05, 2025, 11:56 PM IST

Karnataka News Live: ಗಂಭೀರವಾದ ಸಮಸ್ಯೆಯಿಂದಲೇ BBK 12 ಮನೆಗೆ ಬಂದಿರೋ ಚಂದ್ರಪ್ರಭ, ಸತೀಶ್‌; ಬಟಾ ಬಯಲು ಮಾಡಿದ ಗಿಲ್ಲಿ ನಟ

ಸಾರಾಂಶ

ಬೆಂಗಳೂರು: ಅಕ್ಟೋಬರ್ ಬಿಜೆಪಿಯಲ್ಲಿ ಕ್ರಾಂತಿ ಆಗಲಿದ್ದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆ‌ರ್. ಅಶೋಕ್ ಅವರ ಕುರ್ಚಿ ಅಲುಗಾಡಲಿದೆ. ಅವರ ವಿಪಕ್ಷ ಸ್ಥಾನದ ಕುರ್ಚಿಗಾಗಿ ಮಾಜಿ ಸಚಿವ ಸುನಿಲ್ ಕುಮಾರ್ ಅವರು ಕಾಯುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಟೀಕೆ ಮಾಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಅಶೋಕ್ ಅವರು ಔಟ್ ಗೋಯಿಂಗ್ ವಿಪಕ್ಷ ನಾಯಕ ಆಗಿದ್ದು, ಸುನಿಲ್ ಕುಮಾರ್ ಅವರು ಇನ್ ಕಮಿಂಗ್ ವಿಪಕ್ಷ ನಾಯಕ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು. ವಿರೋಧ ಪಕ್ಷವಾಗಿರುವ ಬಿಜೆಪಿಯ ಮನೆ ಒಡೆದು ನೂರು ಬಾಗಿಲಾಗಿದೆ. ರಾಜ್ಯದಲ್ಲಿರುವ ಬಿಜೆಪಿಯ ನಾಯಕರಿಗೆ ಚೆಕ್‌ಮೇಟ್ ಇಟ್ಟು ಮುಖ್ಯಮಂತ್ರಿ ಅಭ್ಯರ್ಥಿ ಆಗಲೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಂಡರ್ ಕರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದರು.

bigg boss kannada season 12

11:56 PM (IST) Oct 05

ಗಂಭೀರವಾದ ಸಮಸ್ಯೆಯಿಂದಲೇ BBK 12 ಮನೆಗೆ ಬಂದಿರೋ ಚಂದ್ರಪ್ರಭ, ಸತೀಶ್‌; ಬಟಾ ಬಯಲು ಮಾಡಿದ ಗಿಲ್ಲಿ ನಟ

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಮಾತ್ರ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಹೀಗಿರುವಾಗ ಇಲ್ಲಿರುವ ಸ್ಪರ್ಧಿಗಳು ದೊಡ್ಮನೆಗೆ ಬರಲು ಅಸಲಿ ಕಾರಣ ಬೇರೆ ಇದೆ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ. ಹಾಗಾದರೆ ಏನದು? 

Read Full Story

11:33 PM (IST) Oct 05

BBK 12 - ಕಿಚ್ಚ ಸುದೀಪ್‌ ಹೇಳಿದಂತೆ ದೊಡ್ಡ ಸಂಖ್ಯೆಯಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ - ಯಾರು ಬರ್ತಾರೆ?

ಹಳೆಯ ಸೀಸನ್‌ಗಳಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ವಿಭಿನ್ನವಾಗಿರತ್ತೆ, ಇದೇ ಬೇರೆ ಲೆಕ್ಕ ಎಂದು ಕಿಚ್ಚ ಸುದೀಪ್‌ ಹೇಳಿದ್ದರು. ಎರಡು ಫಿನಾಲೆ, ಇಬ್ಬರು ವಿನ್ನರ್‌ ಕೂಡ ಇರಬಹುದು ಎಂದು ಅವರು ಹೇಳಿದ್ದರು. ಈಗ ಮತ್ತೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ.

 

Read Full Story

11:29 PM (IST) Oct 05

ಚಿನ್ನವನ್ನು ಅತಿ ಹೆಚ್ಚು ಗಣಿಗಾರಿಕೆ ಮಾಡುವ ದೇಶ ಯಾವುದು? ಬೆಚ್ಚಿಬೀಳಿಸುತ್ತೆ ಅಂಕಿಅಂಶ!

World's largest gold mines: ವಿಶ್ವದ ಚಿನ್ನದ ಪೂರೈಕೆಯ ಕೀಲಿಕೈಯನ್ನು ಹೊಂದಿರುವ ಹತ್ತು ದೇಶಗಳ ಬಗ್ಗೆ ತಿಳಿದುಕೊಳ್ಳೋಣ.

Read Full Story

11:09 PM (IST) Oct 05

'ಪಿಒಕೆಭಾರತದ ಮನೆಯ ಒಂದು ಕೋಣೆ, ಅದನ್ನ ವಾಪಸ್ ಪಡೆಯಲೇಬೇಕು - ಭಾಗವತ್ ಸ್ಫೋಟಕ ಹೇಳಿಕೆ!

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಮನೆಯ ಒಂದು ಕೋಣೆ ಎಂದು ಬಣ್ಣಿಸಿದ್ದಾರೆ. ಪಿಒಕೆಯಲ್ಲಿ ಪಾಕಿಸ್ತಾನಿ ಆಡಳಿತದ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದು ದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ.

Read Full Story

11:01 PM (IST) Oct 05

BBK 12 - ಕಿಚ್ಚ ಸುದೀಪ್‌ಗೆ ಸುಸ್ತು ಮಾಡಿ‌ Bigg Boss ಮನೆಯಿಂದ ಹೊರಬಿದ್ದ ಕರಿಬಸಪ್ಪ-ಆರ್‌ಜೆ ಅಮಿತ್!

Bigg Boss Kannada 12 First Week Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮೊದಲ ವಾರ ಒಂದು ಜಂಟಿ ಜೋಡಿ ಎಲಿಮಿನೇಟ್‌ ಆಗಿದೆ. ಒಂದು ವಾರಕ್ಕೆ ಇಬ್ಬರು ಬಿಗ್‌ ಬಾಸ್‌ ಪ್ರಯಾಣವನ್ನು ಮುಗಿಸಿದ್ದಾರೆ.

 

Read Full Story

10:42 PM (IST) Oct 05

ಹಳ್ಳಿಯ ಈ ಪದ್ಧತಿ ವಿರುದ್ಧ ಸಿಡಿದೆದ್ದ Bigg Boss ಸ್ಪರ್ಧಿಗಳು; ಬದಲಾಯಿಸಿಕೊಳ್ರೀ ಎಂದ ಕಿಚ್ಚ ಸುದೀಪ್

Bigg Boss Kannada 12: ಹಳ್ಳಿ ಪದ್ಧತಿ ಬಗೆ ಚರ್ಚೆ ಆಗಿತ್ತು. ಈ ಹಿಂದೆ ಎಪಿಸೋಡ್‌ವೊಂದರಲ್ಲಿ ನಮ್ಮ ಹಳ್ಳಿಯಲ್ಲಿ ಪುರುಷರು ಅಡುಗೆ ಕೆಲಸ ಮಾಡೋದಿಲ್ಲ, ಅಡುಗೆ ಕೆಲಸ ಮಾಡಿದರೆ ಹೆಂಡ್ತಿ ಗುಲಾಮ ಅಂತ ಕರೆಯುತ್ತಾರೆ ಎಂದು ಹೇಳುತ್ತಾರೆ ಎಂದಿದ್ದರು. ಈಗ ಸಂಡೇ ವಿಥ್‌ ಸುದೀಪ ಶೋನಲ್ಲಿ ಚರ್ಚೆಯಾಗಿತ್ತು. 

 

Read Full Story

09:56 PM (IST) Oct 05

ದುರ್ಗಾ ವಿಗ್ರಹ ವಿಜರ್ಜನೆ ವೇಳೆ ಕಲ್ಲು ತೂರಾಟ, ಇಂಟರ್ನೆಟ್ ಸ್ಥಗಿತ, ವಿಎಚ್‌ಪಿ ಬಂದ್‌ಗೆ ಕರೆ!

Cuttack communal violence: ಒಡಿಶಾದ ಕಟಕ್‌ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ನಡೆದಿದೆ. ಈ ಘಟನೆಯಿಂದಾಗಿ ಉದ್ವಿಗ್ನತೆ ಹೆಚ್ಚಾಗಿದ್ದು, ಸರ್ಕಾರ ಇಂಟರ್ನೆಟ್ ಸ್ಥಗಿತಗೊಳಿಸಿದೆ. ವಿಶ್ವ ಹಿಂದೂ ಪರಿಷತ್ ಬಂದ್‌ಗೆ ಕರೆ ನೀಡಿದ್ದು, ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

Read Full Story

09:56 PM (IST) Oct 05

‌Photos - ಹರ್ಷಿಕಾ ಪೂಣಚ್ಚ, ಭುವನ್‌ ಪೊನ್ನಣ್ಣ ಮಗಳ ಜನ್ಮದಿನದಲ್ಲಿ ಗಣ್ಯಾತಿಗಣ್ಯರು; ಭರ್ಜರಿ ಉಡುಗೊರೆ, ಸರ್ಪ್ರೈಸ್

Tridevi Ponnakka Birthday: ನಟ ಭುವನ್‌ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರ ಮಗಳು ತ್ರಿದೇವಿ ಪೊನ್ನಕ್ಕ ಅವರ ಜನ್ಮದಿನವನ್ನು ಗ್ರ್ಯಾಂಡ್‌ ಆಗಿ ಆಚರಿಸಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ರಾಜಕೀಯ ವ್ಯಕ್ತಿಗಳು, ಸಿನಿಮಾ ತಾರೆಯರು, ಕ್ರಿಕೆಟ್‌ ಲೋಕದ ಸೆಲೆಬ್ರಿಟಿಗಳು ಕೂಡ ಭಾಗವಹಿಸಿದ್ದರು. 

Read Full Story

09:42 PM (IST) Oct 05

ಬೆಂಗಳೂರಲ್ಲಿ ಸ್ಯಾಂಡಲ್‌ವುಡ್ ಪಂದ್ಯ ನೋಡಿ ಮರಳ್ತಿದ್ದ ಯುವತಿ ಮೇಲೆ ಬಿದ್ದ ಮರ, ಸ್ಥಳದಲ್ಲೆ ಸಾವು

ಬೆಂಗಳೂರಲ್ಲಿ ಸ್ಯಾಂಡಲ್‌ವುಡ್ ಪಂದ್ಯ ನೋಡಿ ಮರಳ್ತಿದ್ದ ಯುವತಿ ಮೇಲೆ ಬಿದ್ದ ಮರ, ಸ್ಥಳದಲ್ಲೆ ಸಾವು, 24ರ ಹರೆಯದ ಕೀರ್ತನ ಸ್ಕೂಟರ್ ಮೂಲಕ ಮರಳುತ್ತಿದ್ದ ವೇಳೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಬೃಹತ್ ಮರ ಬಿದ್ದಿದೆ.

 

Read Full Story

09:24 PM (IST) Oct 05

'ಟ್ರೆಡ್ ಮಿಲ್ ಮೇಲೆ ಬಿದ್ದು ಪಾಠ ಕಲಿತೆ..' ಜನರಿಗೆ ಸಲಹೆ ನೀಡಿದ ರಾಜೀವ್ ಚಂದ್ರಶೇಖರ್ ಪೋಸ್ಟ್ ವೈರಲ್

ಕೇರಳ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ ಜಾರಿ ಬಿದ್ದು ಗಾಯಗೊಂಡ ಬಗ್ಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ, ಶಬರಿಮಲೆ ವಿಚಾರದಲ್ಲಿ ಆಡಳಿತಾರೂಢ ಸಿಪಿಎಂ ಪಕ್ಷವು ಹಿಂದೂ ನಂಬಿಕೆಗಳಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ.

Read Full Story

09:12 PM (IST) Oct 05

ಕಾಂತಾರಾ 1 ಸಿನಿಮಾ ವೀಕ್ಷಣೆ ವೇಳೆ ಬಾಲಕಿ ಮೈಮೇಲೆ ಬಂದ ದೈವ, ಬೆಚ್ಚಿ ಬಿದ್ದ ಪೋಷಕರು

ಕಾಂತಾರಾ 1 ಸಿನಿಮಾ ವೀಕ್ಷಣೆ ವೇಳೆ ಬಾಲಕಿ ಮೈಮೇಲೆ ಬಂದ ದೈವ, ಬೆಚ್ಚಿ ಬಿದ್ದ ಪೋಷಕರು, ಬಾಲಕಿಯನ್ನು ಪೋಷಕರು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ, ಆವೇಶದ ವರ್ತನೆ ನೋಡಿ ಸಿನಿಮಾ ಪ್ರೇಕ್ಷಕರು ಗಾಬರಿಯಾದ ಘಟನೆ ನಡೆದಿದೆ.

Read Full Story

09:03 PM (IST) Oct 05

ತಿಂಡಿಪೋತ ಟ್ರಂಪ್ ಮಧ್ಯಾಹ್ನ, ರಾತ್ರಿ ಊಟಕ್ಕೆ ಏನು ತಿಂತಾರೆ? ವೈಟ್‌ಹೌಸ್ ಬಾಣಸಿಗರ ಸಂಬಳ ತಿಳಿದರೆ ತಲೆತಿರುಗುತ್ತೆ!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಫಾಸ್ಟ್‌ ಫುಡ್‌ ಪ್ರೀತಿ ಎಲ್ಲರಿಗೂ ತಿಳಿದಿದೆ. ಅವರ ಮೆಚ್ಚಿನ ಮೆಕ್‌ಡೊನಾಲ್ಡ್ಸ್ ಊಟ ಮತ್ತು ವೈಟ್‌ ಹೌಸ್‌ನಲ್ಲಿ ಅವರಿಗಾಗಿ ಅಡುಗೆ ಮಾಡುವ ಬಾಣסיಗರ ಅಂದಾಜು ಸಂಬಳದ ಕುತೂಹಲಕಾರಿ ವಿವರಗಳು ಇಲ್ಲಿವೆ.
Read Full Story

08:19 PM (IST) Oct 05

ಜಿಎಸ್‌ಟಿ ದರ ಕಡಿತದ ಬೆನ್ನಲ್ಲಿಯೇ ದಾಖಲೆ ಬರೆದ ನವರಾತ್ರಿ ಸೇಲ್; ಅತಿಹೆಚ್ಚು ಮಾರಾಟವಾದ ವಸ್ತುಗಳು ಇಲ್ಲಿವೆ!

ಕೇಂದ್ರ ಸರ್ಕಾರದ ಜಿಎಸ್‌ಟಿ 2.0 ಪರಿಷ್ಕರಣೆಯಿಂದಾಗಿ 375 ವಸ್ತುಗಳ ಬೆಲೆ ಇಳಿದಿದೆ. ಇದರ ಪರಿಣಾಮವಾಗಿ, 2025ರ ನವರಾತ್ರಿಯಲ್ಲಿ ಕಳೆದ ದಶಕದಲ್ಲೇ ಅತಿಹೆಚ್ಚು ಮಾರಾಟ ದಾಖಲಾಗಿದ್ದು, ವಿಶೇಷವಾಗಿ ವಾಹನ ಮತ್ತು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
Read Full Story

07:55 PM (IST) Oct 05

Myth or Truth - ಹಾವುಗಳು ನಿಜವಾಗಿಯೂ ಗರ್ಭಿಣಿಯರನ್ನು ಕಚ್ಚುವುದಿಲ್ಲವೇ?

ಹಾವುಗಳು ಗರ್ಭಿಣಿಯರನ್ನು ಕಚ್ಚುವುದಿಲ್ಲ ಮತ್ತು ಅವರನ್ನು ನೋಡಿದರೆ ಕುರುಡಾಗುತ್ತವೆ ಎಂಬುದು ಪುರಾಣದ ಕಥೆಯಿಂದ ಬಂದ ಜನಪ್ರಿಯ ನಂಬಿಕೆಯಾಗಿದೆ. ಆದರೆ, ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಆಧಾರವಿಲ್ಲ; ಹಾವುಗಳು ಯಾರನ್ನಾದರೂ ಕಚ್ಚಬಹುದು ಮತ್ತು ಗರ್ಭಿಣಿಯರಿಗೆ ಎಚ್ಚರಿಕೆಯಿಂದ ಇರಬೇಕು.

Read Full Story

07:42 PM (IST) Oct 05

ತಂಗಿಯ ಸಂಸಾರದ ಬಗ್ಗೆ ಪ್ರಶ್ನೆ ಮಾಡಿದ ಅಣ್ಣಂದಿರಿಗೆ ಚಾಕು ಇರಿದು ರಕ್ತದೋಕುಳಿ ಆಡಿದ ಭಾವ!

ಶಿವಮೊಗ್ಗದಲ್ಲಿ, ತನ್ನ ತಂಗಿಯನ್ನು ಮದುವೆಯಾದ ಒಂದು ವರ್ಷದೊಳಗೆ ತೊರೆದಿದ್ದನ್ನು ಪ್ರಶ್ನಿಸಿದ್ದಕ್ಕೆ, ವ್ಯಕ್ತಿಯೊಬ್ಬ ತನ್ನ ಇಬ್ಬರು ಭಾವಮೈದುನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಕೌಟುಂಬಿಕ ದ್ವೇಷವೇ ಈ ಕೃತ್ಯಕ್ಕೆ ಕಾರಣವೆಂದು ತಿಳಿದುಬಂದಿದೆ.

Read Full Story

07:04 PM (IST) Oct 05

ಇತ್ತ ಸುದೀಪ್​, ಅತ್ತ Bigg Boss ಮಲ್ಲಮ್ಮ! ಈ ಪುಟಾಣಿಯ ಡಬಲ್​ ರೋಲ್​ಗೆ ನಕ್ಕೂ ನಕ್ಕೂ ಸುಸ್ತಾಗುವಿರಿ!

ಬಿಗ್​ಬಾಸ್​ 12ರ ಸ್ಪರ್ಧಿ, ಉತ್ತರ ಕರ್ನಾಟಕದ ಮಲ್ಲಮ್ಮ ತಮ್ಮ ಮುಗ್ಧತೆಯಿಂದ ಜನಪ್ರಿಯರಾಗಿದ್ದಾರೆ. ಇದೀಗ ಪುಟಾಣಿ ಸುದರ್ಶನ್ ಜೆ.ಕೆ., ಮಲ್ಲಮ್ಮ ಮತ್ತು ಸುದೀಪ್ ಅವರ ನಡುವಿನ ಸಂಭಾಷಣೆಯನ್ನು ಡಬಲ್ ರೋಲ್‌ನಲ್ಲಿ ನಟಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ. 

Read Full Story

06:43 PM (IST) Oct 05

ನಾಳೆ ಚಿಕ್ಕಬಳ್ಳಾಪುರಕ್ಕೆ ಪವನ್ ಕಲ್ಯಾಣ್; ಕಾಲ್ತುಳಿತ ದುರಂತ ತಪ್ಪಿಸಲು ಭಾರೀ ಭದ್ರತೆ!

Pawan Kalyan Chikkaballapur visit: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರ ಹುಟ್ಟುಹಬ್ಬದ ಕಾರ್ಯಕ್ರಮಕ್ಕಾಗಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ,  ಅಹಿತಕರ ಘಟನೆ ತಡೆಯಲು ಜಿಲ್ಲಾ ಪೊಲೀಸರು 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಿ ಭಾರೀ ಭದ್ರತೆ

Read Full Story

06:34 PM (IST) Oct 05

ಬೆಂಗಳೂರು ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ಮರುನಾಮಕರಣ - ಕೇಂದ್ರಕ್ಕೆ ಶಿಫಾರಸ್ಸು - ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದ ಯೋಜನೆಯಾಗಿರುವುದರಿಂದ, ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದರು.

Read Full Story

06:17 PM (IST) Oct 05

ತುಮಕೂರು - ದನ ಮೇಯಿಸಲು ಹೋಗಿದ್ದ ಅಕ್ಕ-ತಂಗಿಯರು ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ!

sisters drown in farm pond: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ದನ ಮೇಯಿಸಲು ಹೋಗಿದ್ದ ಗಂಗಮ್ಮ ಮತ್ತು ಶಕುಂತಲಾ ಎಂಬ ಅಕ್ಕ-ತಂಗಿಯರು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇಬ್ಬರ ಶವಗಳು ಪತ್ತೆಯಾಗಿದ್ದು, ಫೆನ್ಸಿಂಗ್ ಇಲ್ಲದ ಹೊಂಡದ ಬಳಿ ನಡೆದ ಈ ಘಟನೆ ಅನುಮಾನಕ್ಕೆ ಕಾರಣವಾಗಿದೆ.

Read Full Story

06:14 PM (IST) Oct 05

ಅಕ್ಟೋಬರ್ 11ರ ವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ, ಬೆಂಗಳೂರಿಗಿದೆಯಾ ರಿಲೀಫ್?

ಅಕ್ಟೋಬರ್ 11ರ ವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ, ಬೆಂಗಳೂರಿಗಿದೆಯಾ ರಿಲೀಫ್? ಹವಾಮಾನ ಇಲಾಖೆ ಮಹತ್ವದ ಮೂನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿನ ಪ್ರವಾಹ ಬೆನ್ನಲ್ಲೇ ಐಎಂಡಿ ಮುನ್ಸೂಚನೆ ನೀಡಿದೆ.

Read Full Story

06:14 PM (IST) Oct 05

413 ಎಪಿಸೋಡ್‌ಗೆ Ninagagi Serial ಅಂತ್ಯ; ಕಟ್ಟ ಕಡೆಯ ಎಪಿಸೋಡ್‌ನಲ್ಲಿ ಏನಾಗಲಿದೆ?

Ninagagi Serial Climax Episode: ನಿನಗಾಗಿ ಧಾರಾವಾಹಿ ಮುಕ್ತಾಯ ಆಗಲಿದ್ದು, ಕೊನೆಯ ಎಪಿಸೋಡ್‌ನಲ್ಲಿ ಏನಾಗಲಿದೆ ಎಂಬ ಪ್ರಶ್ನೆ ಎದುರಾಗಬಹುದು. ಜೀವ ಹಾಗೂ ರಚನಾ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಸಿಗಲಿದೆಯಾ?

 

Read Full Story

05:55 PM (IST) Oct 05

ಅಂಗನವಾಡಿ ಕಾರ್ಯಕರ್ತೆ ತೀನೈಘಾಟ್‌ನಲ್ಲಿ ನಿಗೂಢ ಸಾವು; ರಹಸ್ಯ ಬಿಚ್ಚಿಟ್ಟ ಗಾಯದ ಗುರುತುಗಳು

ಬೆಳಗಾವಿ-ಗೋವಾ ಹೆದ್ದಾರಿಯ ತೀನೈಘಾಟ್ ಸೇತುವೆ ಕೆಳಗೆ ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ ಪಾಟೀಲ ಮೃತದೇಹ ಪತ್ತೆಯಾಗಿದೆ. ತಲೆಗೆ ಗಂಭೀರ ಗಾಯಗಳಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಆದರೆ, ಮೃತರ ಮೊಬೈಲ್‌ನಲ್ಲಿ ಸಿಕ್ಕ ಆತ್ಮಹ*ತ್ಯೆ ಹಾಗೂ ಬೆಂಗಳೂರಿಗೆ ಹೋಗುವ ಸಂದೇಶಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ.

Read Full Story

05:47 PM (IST) Oct 05

ಸಮೀಕ್ಷೆಗೆ ವಿರೋಧ ಮಾಡಿದ್ರೆ ಅದು ಸಂವಿಧಾನಕ್ಕೆ ವಿರೋಧ - ಸಚಿವ ಕೃಷ್ಣಬೈರೇಗೌಡ

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಗೆ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಸಚಿವ ಕೃಷ್ಣಬೈರೇಗೌಡರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಈ ಸಮೀಕ್ಷೆ ಅತ್ಯಗತ್ಯ. ವಿರೋಧಿಸುವುದು ಸಂವಿಧಾನ ವಿರೋಧಿ ನಡೆ ಎಂದರು.

Read Full Story

05:33 PM (IST) Oct 05

ಬೆಂಗಳೂರಿನ ಶ್ರೀಮಂತ ಯಾರು? 113 ಬಿಲೇನಿಯರ್ಸ್ ಪೈಕಿ ಮೊದಲ ಸ್ಥಾನದಲ್ಲಿ ಯಾರಿದ್ದಾರೆ?

ಬೆಂಗಳೂರಿನ ಶ್ರೀಮಂತ ಯಾರು? 113 ಬಿಲೇನಿಯರ್ಸ್ ಪೈಕಿ ಮೊದಲ ಸ್ಥಾನದಲ್ಲಿ ಯಾರಿದ್ದಾರೆ? ಸಿಲಿಕಾನ್ ಸಿಟಿಯಲ್ಲಿ ಸಾವಿರ ಕೋಟಿ ಆಸ್ತಿ ಹೊಂದಿದರ ಸಂಖ್ಯೆ ಏರಿಕೆಯಾಗಿದೆ. ಅತೀ ಹೆಚ್ಚು ಶ್ರೀಮಂತ ಯಾರು, ಇವರ ಆಸ್ತಿ ಎಷ್ಟಿದೆ?

Read Full Story

05:19 PM (IST) Oct 05

ರಾಯಚೂರು - ಕಾಂತಾರ ಶೋಗೆ ಟಿಕೆಟ್ ಸಿಗದೇ ಕಾಲುವೆ ಈಜಾಡಲು ಹೋಗಿ ಯುವಕರಿಬ್ಬರೂ ದಾರುಣ ಸಾವು

ರಾಯಚೂರು ಜಿಲ್ಲೆಯ ಮಸ್ಕಿ ಬಳಿ 'ಕಾಂತಾರ' ಸಿನಿಮಾ ನೋಡಲು ಬಂದಿದ್ದ ಇಬ್ಬರು ಯುವಕರು ಕಾಲುವೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟಿಕೆಟ್ ಸಿಗದ ಕಾರಣ ಸಮಯ ಕಳೆಯಲು ಈಜಲು ಹೋಗಿದ್ದಾಗ, ಈಜು ಬಾರದ ಸ್ನೇಹಿತನನ್ನು ರಕ್ಷಿಸಲು ಹೋಗಿ ಮತ್ತೊಬ್ಬನೂ ಪ್ರಾಣ ಕಳೆದುಕೊಂಡಿದ್ದಾನೆ.
Read Full Story

05:09 PM (IST) Oct 05

BBK ಮಲ್ಲಮ್ಮಳನ್ನು ಬಳಸ್ಕೊಂಡು ದುಡ್ಡು ಮಾಡ್ತಿದೀಯಾ ಅಂತ ಕನ್ನಡದ ಈ ಧಾರಾವಾಹಿ ನಟನ ಮೇಲೆ ಆರೋಪ ಬಂದಿತ್ತು!

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಲ್ಲಮ್ಮ ಸ್ಪರ್ಧಿ. ಇದಕ್ಕೂ ಮೊದಲು ಅವರು ಫೇಮಸ್‌ ಆಗುವಂತೆ ಮಾಡಿದ್ದು ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಹೀರೋ ಮನೋಜ್‌ ಕುಮಾರ್‌.

 

Read Full Story

04:50 PM (IST) Oct 05

BBK 12 - ಜಾಹ್ನವಿ ₹60 ಸಾವಿರ ಸಂಬಳದಲ್ಲಿ ₹1.5 ಕೋಟಿ ಫ್ಲ್ಯಾಟ್ ತಗೊಂಡಿದ್ಹೇಗೆ? ಸೀಕ್ರೆಟ್ ಬಿಚ್ಚಿಟ್ಟ ಮಾಜಿ ಗಂಡ!

ನಿರೂಪಕಿ ಜಾಹ್ನವಿ ಮಾಜಿ ಪತಿ ಕಾರ್ತಿಕ್ ಮಹಡಿ, ತಮ್ಮ ವೈವಾಹಿಕ ಜೀವನದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಜಾಹ್ನವಿ ಅವರ ಒತ್ತಾಯದ ಮೇರೆಗೆ ₹1.5 ಕೋಟಿಯ ಫ್ಲ್ಯಾಟ್ ಖರೀದಿಸಿದ್ದರು. ಆದರೆ ಫ್ಲ್ಯಾಟ್‌ಗೆ ಶೇ.90ರಷ್ಟು ಹಣ ತಾನೇ ಕಟ್ಟಿದ್ದೇನೆ ಎಂಬ ಆಕೆಯ ಹೇಳಿಕೆಯನ್ನು ಕಾರ್ತಿಕ್ ಪ್ರಶ್ನೆ ಮಾಡಿದ್ದಾರೆ.

Read Full Story

04:50 PM (IST) Oct 05

Bigg Bossನಲ್ಲಿ ಟ್ವಿಸ್ಟೋ ಟ್ವಿಸ್ಟ್​ - ವೈಲ್ಡ್​ ಕಾರ್ಡ್​ ಸುದ್ದಿಯ ನಡುವೆಯೇ ಸೀರಿಯಲ್​ ತಾರೆಯರ ಎಂಟ್ರಿ!

ಕಲರ್ಸ್ ಕನ್ನಡದಲ್ಲಿ 'ಗಂಧದ ಗುಡಿ' ಎಂಬ ಹೊಸ ಧಾರಾವಾಹಿ ಆರಂಭವಾಗಲಿದ್ದು,  ಅದರ ತಾರೆಯರು ಬಿಗ್ ಬಾಸ್ ವೇದಿಕೆಗೆ ಆಗಮಿಸಿದ್ದಾರೆ. ಭವಿಷ್ ಗೌಡ ಮತ್ತು ಸಂಜನಾ ಬುರ್ಲಿ ನಟನೆಯದ್ದಯ ಈ ಸೀರಿಯಲ್. ಇವರು ಬಿಗ್​ಬಾಸ್​​ ಮನೆಯಲ್ಲಿ ಕಾಣಿಸಿಕೊಂಡಿದ್ದು ಏಕೆ? ಇಲ್ಲಿದೆ ವಿವರ… 

Read Full Story

04:09 PM (IST) Oct 05

ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಖಡಕ್ ಎಂಟ್ರಿ - ಕಂಟೆಸ್ಟೆಂಟ್‌ಗಳಿಗೆ ಖಡಕ್ ಕ್ಲಾಸ್, ಸುದೀಪ್‌ ಕೂಡ ಶಾಕ್!

ಬಿಗ್ ಬಾಸ್ ಮನೆಯಿಂದ ಮೊದಲ ದಿನವೇ ಹೊರಬಿದ್ದಿದ್ದ ರಕ್ಷಿತಾ ಶೆಟ್ಟಿ, ಮನೆಯೊಳಗೆ ಮರು ಪ್ರವೇಶ ಪಡೆದಿದ್ದಾರೆ. ತಮ್ಮನ್ನು ಹೊರಹಾಕಿದ 18 ಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಿರೂಪಕ ಸುದೀಪ್ ಕೇಳಿದ ಪ್ರಶ್ನೆಗೆ ರಕ್ಷಿತಾ ಕೊಟ್ಟ ಉತ್ತರ ಕೇಳಿ ಸುದೀಪ್ ಸೇರಿ 18 ಕಂಟೆಸ್ಟೆಂಟ್ ಶಾಕ್ ಆಗಿದ್ದಾರೆ.

Read Full Story

04:00 PM (IST) Oct 05

Amruthadhaare - ಕಳೆದು ಹೋದಾಕೆ ಒಬ್ಬಳೇ ಮಗಳು- ಇಲ್ಲಿರೋದು ಇಬ್ಬರು ಮಕ್ಕಳು! ಅಸಲಿ ಪುತ್ರಿ ಯಾರು?

ಅಮೃತಧಾರೆ ಧಾರಾವಾಹಿಯು ರೋಚಕ ತಿರುವು ಪಡೆದುಕೊಂಡಿದ್ದು, ಮಗಳು ಕಿಡ್ನಾಪ್ ಆದ ಸತ್ಯ ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ಮನೆ ಬಿಟ್ಟು ಹೋಗಿದ್ದಾಳೆ. ಇದರ ನಡುವೆ ಗೌತಮ್‌ಗೆ ಅನಿರೀಕ್ಷಿತವಾಗಿ ಮತ್ತೊಂದು ಹೆಣ್ಣು ಮಗು ಸಿಕ್ಕಿದ್ದು, ಸ್ನೇಹಿತೆಯ ಬಳಿ ಇರುವ ಮಗು ಮತ್ತು ಈಗ ಸಿಕ್ಕ ಮಗುವಿನ ಪೈಕಿ ಅಸಲಿ ಮಗಳು ಯಾರು? 

Read Full Story

02:48 PM (IST) Oct 05

ಬೆಳಗಾವಿ ₹49 ಕೋಟಿ ವೆಚ್ಚದ ಹೊಸ ಬಸ್ ನಿಲ್ದಾಣ - ವಾಯುವ್ಯಕ್ಕೆ ಬರಲಿವೆ 700 ಎಲೆಕ್ಟ್ರಿಕ್ ಬಸ್ - ಸಿದ್ದರಾಮಯ್ಯ

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ₹49.20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ನಗರ ಸಾರಿಗೆ ಬಸ್ ನಿಲ್ದಾಣವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ನಿಲ್ದಾಣವು ಅತ್ಯಾಧುನಿಕ ಸೌಕರ್ಯಗಳೊಂದಿಗೆ ಪ್ರತಿದಿನ ಸುಮಾರು 96 ಸಾವಿರ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ.

Read Full Story

01:53 PM (IST) Oct 05

ಸ್ಟಾರ್ ಹೀರೋಗೆ 'ಜಾಗ್ಸ್' ಅಂತ ಪ್ರೀತಿಯಿಂದ ಕರೆಯೋ ನಟಿ ಯಾರು... ಸೌಂದರ್ಯ ನಂತರ ಆತನ ಜೊತೆ ಅಫೇರ್?

ಪ್ರಿಯಾಮಣಿ ಸ್ಟಾರ್ ಹೀರೋವೊಬ್ಬರ ಜೊತೆಗಿನ ಲವ್ ಅಫೇರ್ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಹೀರೋಗೆ ಪ್ರಿಯಾಮಣಿ ಅಡ್ಡಹೆಸರನ್ನೂ ಇಟ್ಟಿದ್ದಾರೆ. ಅಷ್ಟಕ್ಕೂ ಆತ ಯಾರು ಅಂತ ಈ ಲೇಖನದಲ್ಲಿ ತಿಳಿಯೋಣ.

Read Full Story

01:36 PM (IST) Oct 05

ಕಾಂತಾರ ಚಾಪ್ಟರ್-1 ಕಣ್ಣು, ಕಿವಿ ಮಾತ್ರವಲ್ಲ, ಇಡೀ ಅಂತರಾತ್ಮವೇ ಅನುಭವಿಸುಂತಹ ಸಿನಿಮಾ - ಕರವೇ ನಾರಾಯಣ ಗೌಡ!

'ಕಾಂತಾರ ಚಾಪ್ಟರ್ 1' ಚಿತ್ರವನ್ನು ವೀಕ್ಷಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ, ಇದೊಂದು ಸಿನಿಮಾವಲ್ಲ, ಅಲೌಕಿಕ ಅನುಭವ ಎಂದು ಬಣ್ಣಿಸಿದ್ದಾರೆ. ರಿಷಬ್ ಶೆಟ್ಟಿಯವರ ನಿರ್ದೇಶನ, ನಟನೆ ಸಾಹಸವನ್ನು ಶ್ಲಾಘಿಸಿ, ಈ ಚಿತ್ರ ಕನ್ನಡ ಚಿತ್ರರಂಗವನ್ನು ಭಾರತದ ಮುಂಚೂಣಿಗೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

01:31 PM (IST) Oct 05

ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ - ಸಿದ್ದರಾಮಯ್ಯ ಭರವಸೆ

ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸುವುದು ಸರ್ಕಾರದ ಯೋಜನೆಯಾಗಿದೆ. ಈಗಾಗಲೇ 22 ಜಿಲ್ಲೆಗಳಲ್ಲಿ ವೈದ್ಯಕೀಯ‌ ಕಾಲೇಜುಗಳನ್ನು ಆರಂಭಿಸಲಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

Read Full Story

01:19 PM (IST) Oct 05

ಇನ್ಮುಂದೆ ಇವರೇ ಲೇಡಿ ಸೂಪರ್‌ಸ್ಟಾರ್... ನಯನತಾರಾ ಬಿಟ್ಟ ಬಿರುದನ್ನು ಪಡೆದ ಕನ್ನಡದ ಸ್ಟಾರ್ ನಟಿ!

ಲೇಡಿ ಸೂಪರ್‌ಸ್ಟಾರ್ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ನಯನತಾರಾ. ಕಳೆದ ಕೆಲವು ವರ್ಷಗಳಿಂದ ಅವರು ಈ ಬಿರುದನ್ನು ಬಳಸುತ್ತಿದ್ದರು, ಆದರೆ ಕೆಲವು ತಿಂಗಳ ಹಿಂದೆ ದಿಢೀರ್ ಅಂತಾ ತನ್ನನ್ನು ಲೇಡಿ ಸೂಪರ್‌ಸ್ಟಾರ್ ಎಂದು ಕರೆಯಬೇಡಿ ಎಂದು ಘೋಷಿಸಿದರು.

Read Full Story

01:00 PM (IST) Oct 05

ಕನ್ನಡ ಕಥಾ ಸಾಹಿತ್ಯದ 'ಬುಗುರಿ ಸ್ತಬ್ದ' - ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಮೊಗಳ್ಳಿ ಗಣೇಶ್ ಇನ್ನಿಲ್ಲ!

ಕನ್ನಡದ ಖ್ಯಾತ ಕಥೆಗಾರ, ಚಿಂತಕ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. 'ಬುಗರಿ' ಕಥಾಸಂಕಲನದಿಂದ ಪ್ರಸಿದ್ಧರಾಗಿದ್ದ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು.

Read Full Story

12:56 PM (IST) Oct 05

ಮತ್ತೊಮ್ಮೆ ಅಮ್ಮ ಆಗ್ತಿರೋ Malaika Arora - 58 ವರ್ಷದ ಅರ್ಬಾಜ್ ಖಾನ್​​ಗೆ ಒಂದೆರಡು ದಿನದಲ್ಲಿ ಮಗು!

58 ವರ್ಷದ ನಟ ಅರ್ಬಾಜ್ ಖಾನ್ ಮತ್ತು ಅವರ ಪತ್ನಿ ಶುರಾ ಖಾನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ 2023 ರಲ್ಲಿ ವಿವಾಹವಾದ ಈ ಜೋಡಿ ಶೀಘ್ರದಲ್ಲೇ ಪೋಷಕರಾಗಲಿದ್ದು,   ವಯಸ್ಸಿನ ಅಂತರ ಮತ್ತು ಮಲೈಕಾ ಅರೋರಾ ಅವರ ಮಗ ಅರ್ಹಾನ್ ಜೊತೆಗಿನ ಕೌಟುಂಬಿಕ ಲೆಕ್ಕಾಚಾರ ಶುರುವಾಗಿದೆ. 

Read Full Story

12:42 PM (IST) Oct 05

ಮಿಲೇನಿಯಲ್ ಕಣ್ಣಲ್ಲಿ ಜೆನ್ ಜಿ - ಪೋಷಕರಿಗೆ ಜೆನ್‌ಜಿ ಮಕ್ಕಳು ಹೇಗೆ ಸವಾಲು ನೀಡುತ್ತಾರೆ?

ಲೋಕಾಂತದಲ್ಲಿ ನಾಟಕವಾಡಿ ಬದುಕು ಹೇಗೋ ಬದುಕುತ್ತಾ ಬದುಕುತ್ತಾ ಕಲಿಸುತ್ತಿತ್ತು. ಆದರೆ ನಿಮಗೆ ಹಣ, ಜನ, ಕೆಲಸ, ಮದುವೆ ಅಂತ ಎಲ್ಲದರ ಬಗ್ಗೆಯೂ ಒಂದು ಕ್ಲಾರಿಟಿ ಇದೆ, ಧೈರ್ಯ ಇದೆ, ಜೊತೆಗೆ ಹುಂಬ ಆತ್ಮವಿಶ್ವಾಸ.

Read Full Story

12:30 PM (IST) Oct 05

Naa Ninna Bidalaare ಅಮ್ಮ-ಮಗಳ ಭಾವುಕ ನೃತ್ಯ - ಅವಾರ್ಡ್​ ಫಂಕ್ಷನ್​ನಲ್ಲಿ ಕಣ್ಣೀರಿಟ್ಟ ನಟಿಯರು

ಜೀ ಕನ್ನಡದ 'ನಾನಿನ್ನ ಬಿಡಲಾರೆ' ಧಾರಾವಾಹಿಯ ಅಮ್ಮ-ಮಗಳಾದ ಅಂಬಿಕಾ ಮತ್ತು ಹಿತಾ, ಜೀ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ಭಾವುಕ ಪ್ರದರ್ಶನ ನೀಡಿದ್ದಾರೆ. ಈ ಅಮ್ಮ-ಮಗಳ ಬಾಂಧವ್ಯದ ಹಾಡಿಗೆ ವೇದಿಕೆಯಲ್ಲಿದ್ದ ಇತರೆ ನಟಿಯರೆಲ್ಲರೂ ಕಣ್ಣೀರು ಹಾಕಿದ್ದಾರೆ.
Read Full Story

12:29 PM (IST) Oct 05

ಟ್ರೆಂಡ್‌ನಲ್ಲಿರುವ ವಾಕಿಂಗ್‌ ಸ್ಟೈಲ್‌ ಜಪಾನೀಸ್‌ ವಾಕಿಂಗ್‌... ಈಗ ಭಾರತದಲ್ಲೂ ಜನಪ್ರಿಯ!

ಹಲವು ಸಮಯದಿಂದ ವಾಕರ್‌ಗಳಲ್ಲಿ 10 ಸಾವಿರ ಸ್ಟೆಪ್‌ ನಡೆಯಬೇಕು ಅನ್ನುವ ನಿಯಮ ಬಹಳ ಜನಪ್ರಿಯವಾಗಿದೆ. ದಿನಾಂತ್ಯಕ್ಕೆ ನಿಮ್ಮ ನಿಮ್ಮ ಸ್ಮಾರ್ಟ್‌ವಾಚ್‌ಗಳಲ್ಲಿ 10 ಸಾವಿರ ಸ್ಟೆಪ್‌ ಕಂಪ್ಲೀಟ್‌ ಆಗಿರಬೇಕು ಅನ್ನುವುದು ನಿಯಮ.

Read Full Story

More Trending News