ದಾವಣಗೆರೆ: ಜಾತಿಗಣತಿ ಸಮೀಕ್ಷೆ ಮಾಡಿ, ವರದಿ ಜಾರಿಗೊಳಿಸಲು ಬಯಸಿದ್ದ ಸಿದ್ದರಾಮಯ್ಯ ಅವರು ಇನ್ನೂ 2 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದುಕೊಂಡಿದ್ದೆವು, ಆದರೆ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯಬೇಕಾಯಿತು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆ ಮಾಡಿ, ಅದನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಬಯಸಿದ್ದರು. ಆದರೆ, ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿಯಬೇಕಾಯಿತು. ಸಿಎಂ ಸ್ಥಾನದಿಂದ ಕೆಳಗಿಳಿದರೂ, ಅದಕ್ಕೆ ಮುಂಚೆ ಕೊನೆಯ ದಿನ ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಪಡೆದಿದ್ದರು. ಜಾತಿ ಜನಗಣತಿ ವರದಿಯನ್ನು ಜಾರಿಗೊಳಿಸುವ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಪ್ರಸ್ತಾಪ ಮಾಡಿದ್ದೆವು. ಅದನ್ನು ಈಡೇರಿಸಬೇಕಾಗಿರುವುದು ನಮ್ಮ ಪಕ್ಷದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
10:53 PM (IST) Jul 04
09:55 PM (IST) Jul 04
SIR ಪ್ರಕ್ರಿಯೆ ತೆರಳುತಿದ್ದ ಗ್ರಾಮ ಲೆಕ್ಕಾಧಿಕಾರಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಇದೀಗ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಅಧಿಕಾರಿಗಳ ಒತ್ತಡದಿಂದ ಘಟನೆ ನಡೆದಿದೆ ಅನ್ನೋ ಆರೋಪಗಳು ಕೇಳಿಬಂದಿದೆ.
09:44 PM (IST) Jul 04
ನಾವು ಸಾಮಾನ್ಯವಾಗಿ ನೋಡುವ ಭಾರತ ಮಾತೆ ಅಂದ್ರೆ ತ್ರಿವರ್ಣ ಸೀರೆಯುಟ್ಟು, ಕೈಯಲ್ಲಿ ಧ್ವಜ ಹಿಡಿದಿರುವ ಚಿತ್ರ. ಆದರೆ ಭಾರತ ಮಾತೆಯ ಮೊದಲ ಚಿತ್ರ ಹೇಗಿತ್ತು ಗೊತ್ತಾ? ಅದನ್ನು ಯಾರು, ಯಾವಾಗ ಚಿತ್ರಿಸಿದ್ದರು? ಇಲ್ಲಿದೆ ಮಾಹಿತಿ.
09:26 PM (IST) Jul 04
ತುಳಿಯೋರ ನಡುವೆ ಕ್ರಿಕೆಟ್ನಲ್ಲಿ ಕ್ಲಿಕ್ ಆಗಿರುವ ಹಿಂದಿನ ಅಸಲಿ ಸಿಕ್ರೇಟ್ ಅನ್ನು ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ದಾರೆ. ನನ್ನ ತಂದೆ ತೆಗೆದುಕೊಂಡು ಆ ಒಂದು ನಿರ್ಧಾರದಿಂದ ನನ್ನ ಬದುಕೇ ಬದಲಾಯ್ತು ಎಂದು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಅಂದು ದೆಹಲಿಯಲ್ಲಿ ಆಗಿದ್ದೇನು? ಕಂಪ್ಲೀಟ್ ಸ್ಟೋರಿ ಇಲ್ಲಿದೆ.
09:07 PM (IST) Jul 04
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಶಕುಂತಲಾ-ಗೌತಮ್ ಒಂದಾಗಿದ್ದಾರೆ. ಇನ್ನೊಂದು ಕಡೆ ಭೂಮಿಕಾ ಅಕ್ಷರವನ್ನು ಪುಸ್ತಕ ರೂಪಕ್ಕೆ ಇಳಿಸಲು ಗೌತಮ್ ಸಜ್ಜಾಗಿದ್ದಾನೆ. ಆದರೆ ವಿಧಿ ಆಟ ಬೇರೆ ಇದ್ದಂತಿದೆ.
08:51 PM (IST) Jul 04
ಮಾಜಿ ಸಚಿವ ಎಚ್.ಕೆ.ಪಾಟೀಲರ ಹೆಸರಿನಲ್ಲೇ ಮೂರು ಮತಗಳಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಬಾಂಬ್ ಸಿಡಿಸಿದ್ರು. ಗದಗನಲ್ಲಿ ಮಾತನಾಡಿದ ಅವ್ರು, ಮ್ಯಾಪಿಂಗ್ ಆದಾಗಿಯೂ ಕೂಡ ಕೆಲ ಹೆಸರುಗಳು..
07:37 PM (IST) Jul 04
06:44 PM (IST) Jul 04
06:25 PM (IST) Jul 04
ಕಾರವಾರದಿಂದ ಉಡುಪಿಯತ್ತ ಸಾಗುತ್ತಿದ್ದ ಸಚಿವ ಯುಟಿ ಖಾದರ್ ಅವರಿಗೆ ಬೆಂಗಾವಲು ಪಡೆಯಾಗಿ ತೆರಳುತ್ತಿದ್ದ ಪೊಲೀಸ್ ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
06:20 PM (IST) Jul 04
ತಮ್ಮ ವಿಶಿಷ್ಟ ಕಾಮಿಡಿ ಟೈಮಿಂಗ್ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಕೋಮಲ್ ಕುಮಾರ್ ಇದೀಗ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
05:35 PM (IST) Jul 04
Prajwal Devaraj: ಪ್ರಜ್ವಲ್ ಮತ್ತು ರಾಗಿಣಿ ಅವರ ಪರಿಚಯ ಬಾಲ್ಯದಲ್ಲೇ ಶುರುವಾಯಿತು. ಇಬ್ಬರೂ ಬೆಂಗಳೂರಿನ ಬನಶಂಕರಿಯಲ್ಲಿರುವ ಡಿಂಕಿ ಸಂಗೀತ ಮತ್ತು ನೃತ್ಯ ಅಕಾಡೆಮಿಯಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದರು.
04:58 PM (IST) Jul 04
Mafia New Poster: ಇಂದು (ಜು.4) ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಈ ಪ್ರಯುಕ್ತ ಅವರು ನಟಿಸಿರುವ ‘ಮಾಫಿಯಾ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ತಂದೆ - ಮಗ ಇಬ್ಬರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.
04:54 PM (IST) Jul 04
SR Mahesh on Congress Government: ಮಾಜಿ ಸಚಿವ ಸಾರಾ ಮಹೇಶ್ ಅವರು ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೂಡಾ 50:50 ಸೈಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
04:38 PM (IST) Jul 04
Deadly Killer Review: ಕ್ರಿಮಿನಲ್ಗಳನ್ನು ಕರೆದುಕೊಂಡು ಪೊಲೀಸ್ ವ್ಯಾನ್ ಒಡಿಸ್ಸಾದ ಕಾಡಿನಿಂದ ಕರ್ನಾಟಕದೆಡೆಗೆ ಬರುತ್ತದೆ. ಆಂಧ್ರದ ಸರಹದ್ದಿಗೆ ಬರುವಾಗ ಇವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಾರೆ.
04:28 PM (IST) Jul 04
Love Seasons Movie Review: ಈ ಕತೆ ವಿಭಿನ್ನ ಹಾದಿ ಹಿಡಿಯುತ್ತದೆ. ಅವನ ಬದುಕನ್ನು ಸೀಸನ್ಗಳ ರೀತಿಯಲ್ಲಿ ತೆರೆದಿಡುತ್ತಾ ಹೋಗುತ್ತದೆ. ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ. ಹಲವು ಪ್ರೇಮಗಳ ಕಥನ ಹೇಳುತ್ತಾರೆ.
04:13 PM (IST) Jul 04
ಕೆಲವು ಕೇಳಿಸಿಕೊಂಡ ಕತೆಗಳು, ಇನ್ನೂ ಕೆಲವು ಓದಿದ ಕತೆಗಳು, ಇವುಗಳ ನಡುವೆ ತಿಳಿದ ಕತೆಗಳೂ ಇರುತ್ತವೆ. ಆದರೆ, ‘ಗ್ರಾಮಾಯಣ’ ನಮ್ಮತನವನ್ನು ಹೊತ್ತ ಅನುಭವದ ಕತೆಯಾಗಿ ಎಚ್ಚರಿಸುತ್ತದೆ, ಅಪ್ಪಿಕೊಳ್ಳುತ್ತದೆ.
03:44 PM (IST) Jul 04
ಅಮೆರಿಕಾದಲ್ಲಿ ಜುಲೈ 4ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರಿಯಾಂಕಾ ಹಂಚಿಕೊಂಡಿರುವ ವೀಡಿಯೋದಲ್ಲಿ, ದೊಡ್ಡ ಗಾಜಿನ ಕಿಟಕಿಯ ಮೂಲಕ ಆಕಾಶದಲ್ಲಿ ಸಿಡಿಯುತ್ತಿರುವ ವರ್ಣರಂಜಿತ ಪಟಾಕಿಗಳು ಕಾಣಿಸುತ್ತವೆ.
03:06 PM (IST) Jul 04
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ಜ್ಯುವೆಲರಿ ಅಂಗಡಿ ಮಾಲೀಕ ಪ್ರಕಾಶ್ ರಾಯ್ಕರ್, ಅವರ ಪತ್ನಿ ಮತ್ತು ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ದಾರುಣ ಘಟನೆಯು ಇಡೀ ನಗರವನ್ನು ಬೆಚ್ಚಿಬೀಳಿಸಿದ್ದು, ಸಾಲಬಾಧೆಯೇ ಸಾವಿಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
02:51 PM (IST) Jul 04
02:50 PM (IST) Jul 04
Shabari Movie: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರಾಣಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಾಲನಟಿ ಈಗ ಸಿನಿಮಾಕ್ಕೂ ಕಾಲಿಟ್ಟಿದ್ದಾರೆ. ಶಬರಿ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದು, ಟೀಸರ್ ರಿಲೀಸ್ ಆಗಿದೆ.
02:13 PM (IST) Jul 04
Zahra Mohammadi Golpayegani: ಖಮೇನಿ ಶವಪೆಟ್ಟಿಗೆ ಪಕ್ಕದಲ್ಲಿಯೇ ಒಂದು ಚಿಕ್ಕ ಶವಪೆಟ್ಟಿಗೆ ಇತ್ತು, ಅದು ಸುಮಾರು 10 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಶವಪೆಟ್ಟಿಗೆಯು ಸೈನಿಕ ಅಥವಾ ಪ್ರಮುಖ ನಾಯಕನದ್ದಲ್ಲ, ಬದಲಿಗೆ ಅವರ 14 ತಿಂಗಳ ಮಗುವಿನದ್ದು, ಆ ಮಗು ಯಾರು ಗೊತ್ತಾ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
02:11 PM (IST) Jul 04
01:40 PM (IST) Jul 04
Pavan Ravindra Arathi Subash engagement: ‘ನೀ ಇರಲು ಜೊತೆಯಲ್ಲಿ’, ‘ರಂಗನಾಯಕಿ’ ಧಾರಾವಾಹಿ ನಟ ಪವನ್ ರವೀಂದ್ರ ಅವರು ತಮಿಳು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದರು. ತಮಿಳು ಸೀರಿಯಲ್ನಲ್ಲಿ ನಟಿಸುವಾಗ ನಟಿ ಆರತಿ ಸುಭಾಷ್ ಜೊತೆಗೆ ಪ್ರೀತಿಯಲ್ಲಿ ಬಿದ್ದ ಇವರೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
01:25 PM (IST) Jul 04
Chikkamagaluru shocking incident ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಆಟದ ಮೈದಾನದಲ್ಲೇ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
01:07 PM (IST) Jul 04
carrying dead body in water karnataka: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡ ಹಿತ್ತಲ ಗ್ರಾಮದಲ್ಲಿ, ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ಉಕ್ಕಿ ಹರಿಯುವ ಹೊಳೆಯಲ್ಲಿಯೇ ಶವವನ್ನು ಹೊತ್ತು ಸಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಘಟನೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಂತರವೂ ಗ್ರಾಮೀಣ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯನ್ನು ಎತ್ತಿ ತೋರಿಸುತ್ತದೆ.
12:55 PM (IST) Jul 04
ಕನ್ನಡ ಕಿರುತೆರೆಯಲ್ಲಿ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಒಂದು ಸಾಹಸಪ್ರಧಾನ ಜನಪ್ರಿಯ ರಿಯಾಲಿಟಿ ಶೋ ಆಗಿತ್ತು. ಇದರ 2ನೇ ಸರಣಿಯಲ್ಲಿ ಪದ್ದು ಗೌಡ ಭಾಗವಹಿಸಿ ಮನೆಮಾತಾಗಿದ್ದರು. ಬಳಿಕ ಅವರು ಕಲಾವಿದರಾಗಿ, ನಿರೂಪಕರಾಗಿ ಗುರುತಿಸಿಕೊಂಡು ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.
11:31 AM (IST) Jul 04
15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಕುರಿತು ಹಿಂಟ್ ನೀಡಿದ್ದಾರೆ. ಅಲ್ಲದೇ ಅವರ ಇನಸ್ಟಾಗ್ರಾಂ ಸಂಚಲನ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
11:15 AM (IST) Jul 04
Chamarajanaagar wildlife ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
10:33 AM (IST) Jul 04
ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಲು ಕರ್ನಾಟಕ ಆರೋಗ್ಯ ಇಲಾಖೆಯು 'ಬೈಕ್ ಆಂಬುಲೆನ್ಸ್' ಸೇವೆಯನ್ನು ಮರುಪ್ರಾರಂಭಿಸುತ್ತಿದೆ. ಮೊದಲ ಹಂತದಲ್ಲಿ 100 ಹೈಟೆಕ್ ಬೈಕ್ಗಳು ರಸ್ತೆಗಿಳಿಯಲಿವೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
09:55 AM (IST) Jul 04
09:52 AM (IST) Jul 04
ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ರಾಜ್ಯದ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆ ಕರಾವಳಿಯ ಮೂರು ಮತ್ತು ಮಲೆನಾಡು ಹಾಗೂ ಉತ್ತರ ಒಳನಾಡಿನ ಆರು ಜಿಲ್ಲೆಗಳು ಸೇರಿ ಒಟ್ಟು 9 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ.
09:27 AM (IST) Jul 04
09:03 AM (IST) Jul 04
08:22 AM (IST) Jul 04
08:19 AM (IST) Jul 04
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಅಕ್ಷರ ದೋಷದಿಂದ ನಾಗರಿಕರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣ ಕನ್ನಡದಲ್ಲೇ ನಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಆಗ್ರಹಿಸಿದೆ.
08:07 AM (IST) Jul 04
ಕಕ್ಕೇರಾ ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮುದ್ದೇಬಿಹಾಳ–ರಾಯಚೂರು-ಮಂತ್ರಾಲಯ ನೂತನ ಬಸ್ ಸಂಚಾರ ಸೇವೆಗೆ ಚಾಲನೆ ದೊರೆತಿದೆ. ವಿದ್ಯಾರ್ಥಿಗಳು, ಕಾರ್ಮಿಕರು, ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
07:56 AM (IST) Jul 04
ಕಾರು ಚಲಾಯಿಸುವಾಗ ದಿಢೀರನೇ ಉಸಿರಾಟ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾಫ್ಟ್ವೇರ್ ಕಂಪನಿ ಮಹಿಳಾ ಉದ್ಯೋಗಿಯನ್ನು ಮಡಿವಾಳ ಸಂಚಾರ ಠಾಣೆ ಹೆಡ್ ಕಾನ್ಸ್ಟೇಬಲ್ವೊಬ್ಬರು ರಕ್ಷಿಸಿದ್ದಾರೆ. ಪೇದೆಯ ಸಮಯಪ್ರ
07:55 AM (IST) Jul 04
07:38 AM (IST) Jul 04
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಸಂಬಂಧ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲು ಸರ್ಕಾರಕ್ಕೆ ಅನುಮತಿ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
07:20 AM (IST) Jul 04