LIVE NOW
Published : Feb 04, 2026, 06:44 AM ISTUpdated : Feb 04, 2026, 09:26 AM IST

Karnataka News Live: WPL 2026 - ಸತತ 4ನೇ ಬಾರಿಯೂ ಡೆಲ್ಲಿ ಕ್ಯಾಪಿಟಲ್ಸ್‌ ಫೈನಲ್‌ಗೆ! ಚೊಚ್ಚಲ ಕಪ್‌ಗಾಗಿ ಆರ್‌ಸಿಬಿ ಜತೆ ಫೈಟ್

ಸಾರಾಂಶ

ಬೆಂಗಳೂರು: ಪ್ರಸಕ್ತ ಸಾಲಿನ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 3 ಮತ್ತು 4 ನೇ ಕಂತಿನ 443.25 ಕೋಟಿ ರು. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲ ಜಿಪಂ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಮುಖ್ಯ ಲೆಕ್ಕಾಧಿಕಾರಿಗಳಿಗೆ ಜಿಲ್ಲಾವಾರು ಅನುದಾನ ಬಿಡುಗಡೆ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ (ಯೋಜನೆ) ಆದೇಶ ಹೊರಡಿಸಿದ್ದಾರೆ. ಯೋಜನೆಗಳಿಗೆ ಸಂಬಂಧಿಸಿ ಪ್ರತಿ ಜಿಲ್ಲಾವಾರು ಅವಲೋಕನ ಮಾಡಿ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿದೆ.

Delhi Capitals into the Final

09:26 AM (IST) Feb 04

WPL 2026 - ಸತತ 4ನೇ ಬಾರಿಯೂ ಡೆಲ್ಲಿ ಕ್ಯಾಪಿಟಲ್ಸ್‌ ಫೈನಲ್‌ಗೆ! ಚೊಚ್ಚಲ ಕಪ್‌ಗಾಗಿ ಆರ್‌ಸಿಬಿ ಜತೆ ಫೈಟ್

ವಡೋದರಾ: ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ನಾಲ್ಕನೇ ಆವೃತ್ತಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯಾದರೂ ಡೆಲ್ಲಿ ಟ್ರೋಫಿ ಬರ ನೀಗಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.

 

Read Full Story

09:14 AM (IST) Feb 04

ನಂದಗೋಕುಲ - ಮಾಧವ-ಪ್ರಿಯಾ ಫಸ್ಟ್‌ನೈಟ್ ರೂಮ್‌ನಲ್ಲಿ ವಲ್ಲಭ-ಅಮ್ಮು ತುಂಟಾಟದ ರೊಮ್ಯಾನ್ಸ್

ನಂದಗೋಕುಲ ಧಾರಾವಾಹಿಯಲ್ಲಿ ಮಾಧವ-ಪ್ರಿಯಾ ಮದುವೆ ಸಂಭ್ರಮ ಮನೆಮಾಡಿದೆ. ನವಜೋಡಿಯ ಮೊದಲರಾತ್ರಿಗಾಗಿ ಕೋಣೆ ಸಿಂಗರಿಸುವಾಗ ವಲ್ಲಭ ಮತ್ತು ಅಮ್ಮು ನಡುವೆ ಜಗಳವಾಗಿ, ಆಕಸ್ಮಿಕವಾಗಿ ಹೂವಿನ ಹಾಸಿಗೆಯ ಮೇಲೆ ಬಿದ್ದು ರೊಮ್ಯಾಂಟಿಕ್ ಕ್ಷಣ ಸೃಷ್ಟಿಯಾಗಿದೆ.
Read Full Story

09:06 AM (IST) Feb 04

ಫ್ರೀ ಬಸ್ ಗ್ಯಾರಂಟಿ ಎಫೆಕ್ಟ್ - ಅಮ್ಮ ಬೈದಿದ್ದಕ್ಕೆ ಆಧಾರ್ ಕಾರ್ಡ್ ಹಿಡಿದು ರಾಜ್ಯ ಪರ್ಯಟನೆ ಮಾಡಿದ ಅಕ್ಕ-ತಮ್ಮ!

ಟ್ಯೂಷನ್‌ಗೆ ಹೋಗದ್ದಕ್ಕೆ ಪೋಷಕರು ಬೈದಿದ್ದಕ್ಕೆ ಮನನೊಂದ 13 ವರ್ಷದ ಬಾಲಕಿ ಮತ್ತು 9 ವರ್ಷದ ತಮ್ಮ ಬೆಂಗಳೂರಿನಿಂದ ಮನೆಬಿಟ್ಟು ಹೋಗಿದ್ದಾರೆ. ಸರ್ಕಾರದ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣವನ್ನು ಬಳಸಿಕೊಂಡು ಶಿವಮೊಗ್ಗ, ಚಿತ್ರದುರ್ಗ ಸುತ್ತಾಡಿದ ಮಕ್ಕಳನ್ನು ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ.

Read Full Story

09:05 AM (IST) Feb 04

ಕ್ಯಾನ್ಸರ್‌ ಬಗ್ಗೆ ಇರಲಿ ಜಾಗೃತಿ - ರೋಗದ ಚಿಹ್ನೆಗಳು - ಕಾರಣಗಳು ? ಗುಣಪಡಿಸುವುದು ಹೇಗೆ?

ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಹೆಚ್ಚು ಹೆಚ್ಚು ಜನರು ಅರ್ಬುದ ರೋಗಕ್ಕೆ ಬಲಿಯಾಗುತ್ತಿರುವುದು ತುಂಬಾ ಆತಂಕಕಾರಿಯಾದ ಬೆಳವಣಿಗೆಯಾಗಿದೆ.

Read Full Story

08:51 AM (IST) Feb 04

ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ

ಜನಾಂಗೀಯ ಸಂಘರ್ಷದ ಕಾರಣ ಕಳೆದ ಒಂದು ವರ್ಷದಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬಿಜೆಪಿ ನಾಯಕ ಖೇಮಚಂದ್‌ ಸಿಂಗ್‌ ಶಾಸಕಾಂಗ ಪಕ್ಷದ ನಾಯಕರಾಗಿ ಮಂಗಳವಾರ ಆಯ್ಕೆ

Read Full Story

08:44 AM (IST) Feb 04

ರಾಯಚೂರು ಮರಳು ಮಾಫಿಯಾಕ್ಕೆ ಮಸ್ಕಿ ನಾಲೆಯ ಮಾರ್ಗವೇ ಚೇಂಜ್! ಒಂದು ವಾರದಲ್ಲಿ ವರದಿ ನೀಡಲು ಡಿಸಿ ನಿತೀಶ್ ಕೆ ಆದೇಶ

ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ಮಸ್ಕಿ ನಾಲಾದ ದಿಕ್ಕು ಬದಲಾಗುವ ಆತಂಕ ಎದುರಾಗಿದೆ. ದೂರಿನನ್ವಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

Read Full Story

08:35 AM (IST) Feb 04

ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೊಟ್ಟಿತ್ತಲೇ ಪರಾಕ್ - ರಾಜಕೀಯ ಭವಿಷ್ಯ ನುಡಿದ ಹಾವನೂರು ಕಾರ್ಣಿಕ

ಹಾವನೂರಿನ ಚಿಕ್ಕ ಮೈಲಾರದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ, 'ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೊಟ್ಟಿತ್ತಲೇ ಪರಾಕ್' ಎಂದು ಗೊರವಪ್ಪ ಭವಿಷ್ಯ ನುಡಿದಿದ್ದಾರೆ. ಈ ವರ್ಷ ರೈತರಿಗೆ ಉತ್ತಮ ಲಾಭವಾಗಲಿದ್ದು, ರಾಜಕೀಯದಲ್ಲಿ ಕಷ್ಟಪಟ್ಟವರಿಗೆ ಅಧಿಕಾರ ಸಿಗಲಿದೆ ಎಂದು ಈ ಕಾರ್ಣಿಕವನ್ನು ವಿಶ್ಲೇಷಿಸಲಾಗಿದೆ.
Read Full Story

08:30 AM (IST) Feb 04

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ತಿಗಳರ ಪೇಟೆ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕರಣ ವರದಿಯಾಗಿದೆ. ‘ಮುಜರಾಯಿ ಇಲಾಖೆಯಿಂದ ಹುಂಡಿ ಎಣಿಕೆ ವೇಳೆ ಬ್ಯಾಂಕ್‌ನಲ್ಲಿ ದೃಢೀಕರಣ ಮಾಡುವ ನೆಪದಲ್ಲಿ ಚಿನ್ನದ ನೆಕ್ಲೆಸ್‌ ಕಳವು ಮಾಡಲಾಗಿತ್ತು.

Read Full Story

08:08 AM (IST) Feb 04

4 ರಾಶಿಯವರ ಮಾತಿನ ಮೇಲೆ ನಿಗಾ ಇರಲಿ - ಇಂದು ಮಧ್ಯಾಹ್ನ 12 - 35ರಿಂದ ಅತಿಗಂಡ ಯೋಗ ಆರಂಭ

ಇಂದಿನ ಪಂಚಾಂಗದ ಪ್ರಕಾರ, ಅತಿಗಂಡ ಯೋಗ ಮತ್ತು ಸಿಂಹ ರಾಶಿಯಲ್ಲಿ ಚಂದ್ರನ ಸಂಚಾರವು ಕೆಲವು ರಾಶಿಗಳ ಮೇಲೆ ನೇರ ಪ್ರಭಾವ ಬೀರಲಿದೆ. ವಿಶೇಷವಾಗಿ 4 ಸಮಯದಲ್ಲಿ ತಮ್ಮ ನಿರ್ಧಾರಗಳು, ಮಾತುಗಳು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಎಚ್ಚರಿಸಿದೆ.

Read Full Story

07:57 AM (IST) Feb 04

ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ

ಪ್ರತಿಪಕ್ಷಗಳ ಬಿಗಿಪಟ್ಟು ಹಾಗೂ ಸಭಾಪತಿಗಳ ಆದೇಶಕ್ಕೆ ಮಣಿದ ಕಾಂಗ್ರೆಸ್‌ ಸದಸ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಸೋಮವಾರ ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಆಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದರು.

Read Full Story

07:52 AM (IST) Feb 04

ಬೈರಪ್ಪ ಹರೀಶ್ ಕುಮಾರ್‌ಗೆ ಪ್ರಾಣ ಬೆದರಿಕೆ ಆರೋಪ - ಗಿಳಿಯಾರ್‌ ಸೇರಿ ಮೂವರ ವಿರುದ್ಧ FIR

ಕನ್ನಡಪರ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ನೀಡಿದ ದೂರಿನ ಮೇರೆಗೆ ವಸಂತ ಗಿಳಿಯಾರ್, ಪುನೀತ್ ಕೆರೆಹಳ್ಳಿ ಮತ್ತು ಕಿರಿಕ್ ಕೀರ್ತಿ ವಿರುದ್ಧ ಹಲ್ಲೆ ಹಾಗೂ ಪ್ರಾಣ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಖಾಸಗಿ ವಾಹಿನಿಯ ಚರ್ಚಾ ಕಾರ್ಯಕ್ರಮದ ಬಳಿಕ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Read Full Story

07:32 AM (IST) Feb 04

ಗುತ್ತಿಗೆದಾರರಿಂದಲೇ ಕಮಿಷನ್‌ ಕೇಳಿದ ಗುತ್ತಿಗೆದಾರರು! - ಇಬ್ಬರು ಅಮಾನತು

ಸಚಿವರು, ಅಧಿಕಾರಿಗಳ ವಿರುದ್ಧ ಆಗಾಗ ಕಮಿಷನ್ ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ವಿರುದ್ಧವೇ ಈಗ ಕಮಿಷನ್‌ಗೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಕಮಿಷನ್‌ ವಸೂಲಿಗೆ ಯತ್ನಿಸಿದ ಆರೋಪದಲ್ಲಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಹಾಗೂ ಸಂಘಟನಾ ಕಾರ್ಯದರ್ಶಿ ಹನುಮಂತು ಅಮಾನತು

Read Full Story

07:23 AM (IST) Feb 04

ಪಿಎಂಎಫ್ಎಂಇ ಯೋಜನೆ ಅನುಷ್ಠಾನ - ಕರ್ನಾಟಕ ನಂ.1

ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ನಿಯಮಬದ್ಧಗೊಳಿಸುವ ಯೋಜನೆ (ಪಿಎಂಎಫ್ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಕೆಪೆಕ್ ಎಂದೇ ಹೆಸರಾದ ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮ ಈ ಗಣನೀಯ ಸಾಧನೆ ಮಾಡಿದೆ.

Read Full Story

07:17 AM (IST) Feb 04

16ನೇ ದಿನದ ಲಕ್ಕುಂಡಿ ಉತ್ಖನನ ವರದಿ - ವೀರಭದ್ರೇಶ್ವರ ದೇವಸ್ಥಾನದ ಐತಿಹಾಸಿಕ ರಹಸ್ಯ!

ಗದಗ ಜಿಲ್ಲೆಯ ಲಕ್ಕುಂಡಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪುರಾತತ್ವ ಇಲಾಖೆಯು ಉತ್ಖನನ ನಡೆಸುತ್ತಿದೆ. ಈ ಹಿಂದೆ ಶಿವಲಿಂಗದ ಪೀಠ, ಪಚ್ಚೆ ಹರಳು ಸೇರಿದಂತೆ ಹಲವು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಈ ಪ್ರದೇಶದ ಐತಿಹಾಸಿಕ ರಹಸ್ಯಗಳನ್ನು ಶೋಧಿಸುವ ಕಾರ್ಯ ಮುಂದುವರೆದಿದೆ.
Read Full Story

07:12 AM (IST) Feb 04

ಸಿಎಂ ಪ್ರತಿ ಮಾತಿಗೂ ಮೂದಲಿಕೆ ಬಿಜೆಪಿ ಸದಸ್ಯರಿಗೆ ಸ್ಪೀಕರ್‌ ಎಚ್ಚರಿಕೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಯವೊಂದರ ಮೇಲೆ ಮಾತನಾಡುತ್ತಿದ್ದಾಗ, ಬಿಜೆಪಿ ಸದಸ್ಯರು 'ಹೂಂ...ಆ...' ಎಂದು ಮೂದಲಿಸಿ ಗದ್ದಲ ಸೃಷ್ಟಿಸಿದರು. ಇದರಿಂದ ತೀವ್ರ ವಾಗ್ವಾದ ಉಂಟಾಗಿ, ಸ್ಪೀಕರ್ ಯು.ಟಿ. ಖಾದರ್ ಅವರು ಅಶಿಸ್ತಿನಿಂದ ವರ್ತಿಸಿದ ಸದಸ್ಯರನ್ನು ಸದನದಿಂದ ಹೊರಹಾಕುವುದಾಗಿ ಖಡಕ್ ಎಚ್ಚರಿಕೆ 

Read Full Story

07:03 AM (IST) Feb 04

ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಮತ್ತೊಂದು 800 ಮೀ. ಉದ್ದದ ಮೇಲ್ಸೇತುವೆ - ತ್ವರಿತವಾಗಿ ಭೂಸ್ವಾಧೀನಕ್ಕೆ ಸೂಚನೆ

Bengaluru Flyover: ಬೆಂಗಳೂರಿನ ಹೊರ ವರ್ತುಲ ರಸ್ತೆಯ ಇಬ್ಬಲೂರು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ. 

Read Full Story

More Trending News