ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಯಾರೂ ಮಾತಾಡಬಾರದು ಎಂದು ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ಫರ್ಮಾನು ಹೊರಡಿಸಿತ್ತು. ಈಗ ಮತ್ತೆ ಸಿಎಂ ಬದಲಾವಣೆ ಕೂಗು ಎದ್ದಿದೆ. ಕೆಲವು ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಮುಖಂಡರು 'ಡಿಕೆಶಿ ಸಿಎಂ ಆಗುವುದು ನಿಶ್ಚಿತ' ಎಂದು ಹೇಳಿದ್ದಾರೆ. ಆದರೆ ಈ ಸಾಧ್ಯತೆಯನ್ನು ಖುದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ. ಇಂಥ ಹೇಳಿಕೆಯನ್ನು ಯಾರೂ ನೀಡಬಾರದು ಎಂದಿರುವ ಡಿಕೆಶಿ, ಈ ಹೇಳಿಕೆ ನೀಡಿದವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.

11:54 PM (IST) Oct 03
Natural Spices for a Healthy Heart Diet: ಸರಿಯಾದ ಆಹಾರ ಮತ್ತು ವ್ಯಾಯಾಮ ಇಲ್ಲದಿದ್ದಾಗ ಹೃದ್ರೋಗ ಉಂಟಾಗುತ್ತದೆ. ಅಡುಗೆಮನೆಯಲ್ಲಿ ಬಳಸುವ ಈ ಮಸಾಲೆ ಪದಾರ್ಥಗಳಿಂದ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
11:34 PM (IST) Oct 03
Tumakuru INOX technical glitch: ತುಮಕೂರಿನ ಎಸ್ ಮಾಲ್ ಐನಾಕ್ಸ್ನಲ್ಲಿ 'ಕಾಂತಾರ' ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪ್ರದರ್ಶನ ರದ್ದುಗೊಳಿಸಲು ಮುಂದಾದಾಗ ಪ್ರೇಕ್ಷಕರು ರೊಚ್ಚಿಗೆದ್ದರು. ಪ್ರೇಕ್ಷಕರ ಒತ್ತಾಯಕ್ಕೆ ಮಣಿದ ಸಿಬ್ಬಂದಿ, ಒಂದೂವರೆ ಗಂಟೆ ಬಳಿಕ ಸಿನಿಮಾ ಪ್ರದರ್ಶಿಸಿದರು.
10:59 PM (IST) Oct 03
10:57 PM (IST) Oct 03
10:30 PM (IST) Oct 03
Caste survey crime: ಶಿವಮೊಗ್ಗದ ಆಜಾದ್ ನಗರದಲ್ಲಿ, ಜಾತಿ ಸಮೀಕ್ಷೆಯ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ಬಂದ ದಂಪತಿಗಳು ದರೋಡೆಗೆ ಯತ್ನಿಸಿದ್ದಾರೆ. ಸ್ಥಳೀಯರಿಂದ ಹಿಡಿದು ಪೊಲೀಸರಿಗೆ ಒಪ್ಪಿಸಲ್ಪಟ್ಟ ಆರೋಪಿಗಳು, ಸಂತ್ರಸ್ತೆಯ ಸಂಬಂಧಿಕರೇ ಆಗಿದ್ದು, ಅವರ ಬ್ಯಾಗ್ನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.
09:57 PM (IST) Oct 03
Siroda beach Maharashtra tragedy :ದಸರಾ ರಜೆ ಕಳೆಯಲು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ತೆರಳಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿದ್ದಾರೆ. ನಾಲ್ವರು ಕಣ್ಮರೆಯಾಗಿದ್ದು, ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರ ಶೋಧಕಾರ್ಯ ಮುಂದುವರೆದಿದೆ.
09:44 PM (IST) Oct 03
09:25 PM (IST) Oct 03
ಬಾಗಲಕೋಟೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯವನ್ನು ಮುಗಿಸಿ ಮಗನೊಂದಿಗೆ ಬೈಕ್ನಲ್ಲಿ ಹಿಂತಿರುಗುತ್ತಿದ್ದ ಶಿಕ್ಷಕಿ ದಾನಮ್ಮ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ಸರ್ಕಾರಿ ನೌಕರರಲ್ಲಿ ಆತಂಕ ಸೃಷ್ಟಿಸಿದೆ.
09:02 PM (IST) Oct 03
ಕಾಂತಾರ ಚಾಪ್ಟರ್-1 ಸಿನಿಮಾ ವಿಶ್ವದ 30 ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಈ ಬಗ್ಗೆ ದೇಶ-ವಿದೇಶಗಳಿಂದ ಮೆಚ್ಚುಗೆ ಮಹಾಪೂರ ಬರುತ್ತಿವೆ. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ನಟ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
08:49 PM (IST) Oct 03
Hiriyur road accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾದಗಿರಿ ಮೂಲದವರೆಂದು ಗುರುತಿಸಲಾದ ಮೃತರ ದುರ್ಘಟನೆಗೆ ಚಾಲಕನ ನಿಯಂತ್ರಣ ತಪ್ಪಿದ್ದೇ ಕಾರಣ ಎಂದು ಹೇಳಲಾಗಿದೆ. ಕಳವಳ ಮೂಡಿಸಿದೆ.
08:35 PM (IST) Oct 03
ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ತಮ್ಮ ಪಕ್ಷದ ಕಾರ್ಯಕರ್ತರಿಗಾಗಿ ಮೈಸೂರಿನ ಡಿಆರ್ಸಿ ಮಲ್ಟಿಪ್ಲೆಕ್ಸ್ನಲ್ಲಿ 'ಕಾಂತಾರ ಚಾಪ್ಟರ್-1' ಚಿತ್ರದ ಸಂಪೂರ್ಣ ಸ್ಕ್ರೀನ್ ಅನ್ನು ಬುಕ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ₹69,000 ಹಣ ಖರ್ಚು ಮಾಡಿದ್ದಾರೆ.
08:21 PM (IST) Oct 03
Madikeri Dasara 2025: ಮಡಿಕೇರಿ ದಸರಾ ಮಂಟಪ ಪ್ರಶಸ್ತಿ ವಿಚಾರವಾಗಿ ಗಲಾಟೆ ನಡೆದಿದೆ. ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಕರವಲೆ ಭಗವತಿ ದೇವಾಲಯ ಸಮಿತಿ ವೇದಿಕೆ ಏರಿ ದಾಂಧಲೆ ನಡೆಸಿದೆ. ಈ ವೇಳೆ ಗಲಾಟೆ ನಿಯಂತ್ರಿಸಲು ಹೋದ ಡಿವೈಎಸ್ಪಿ ಸೂರಜ್ ಅವರ ಮೇಲೆ ಹಲ್ಲೆ. ವೈಭವದ ದಸರಾಕ್ಕೆ ಕಪ್ಪುಚುಕ್ಕಿ ಇಟ್ಟಿದೆ.
07:58 PM (IST) Oct 03
Lokayukta raid Yadgir city council corruption: ಯಾದಗಿರಿ ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ, ಇ-ಖಾತಾ ಮಾಡಿಕೊಡಲು ₹8,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅರ್ಜಿದಾರರಿಂದ ₹5,000 ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
07:31 PM (IST) Oct 03
06:58 PM (IST) Oct 03
06:47 PM (IST) Oct 03
ಮಲ್ಟಿಪ್ಲೆಕ್ಸ್ಗಳಲ್ಲಿ ₹200 ಟಿಕೆಟ್ ದರ ನಿಗದಿಪಡಿಸುವ ಸರ್ಕಾರದ ಆದೇಶ ಕುರಿತು ಹೈಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಅಂತಿಮ ತೀರ್ಪು ಸರ್ಕಾರದ ಪರ ಬಂದರೆ, ಮಲ್ಟಿಪ್ಲೆಕ್ಸ್ಹಳು ಗ್ರಾಹಕರಿಂದ ಪಡೆದ ಹೆಚ್ಚುವರಿ ಹಣ ವಾಪಸ್ ಕೊಡಲಿವೆ. ಟಿಕೆಟ್ಗಳನ್ನು ಭದ್ರವಾಗಿರಿಸಿಕೊಳ್ಳಲು ಸರ್ಕಾರ ಸೂಚಿಸಿದೆ.
06:22 PM (IST) Oct 03
06:03 PM (IST) Oct 03
ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯದಿಂದ ಬಿದ್ದಿದ್ದ ಜಲ್ಲಿಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ, ಹಿಂಬದಿಯಿಂದ ಬಂದ ಕ್ಯಾಂಟರ್ ಅವರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.
05:39 PM (IST) Oct 03
ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿವೆ. ಮಂತ್ರಾಲಯದಿಂದ ಹಿಂದಿರುಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ತುಮಕೂರಿನ ಮಹಿಳೆಯೊಬ್ಬರು ಮೃತಪಟ್ಟರೆ, ಮತ್ತೊಂದೆಡೆ ಬೈಕ್ಗಳ ಡಿಕ್ಕಿಯಿಂದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.
05:13 PM (IST) Oct 03
04:28 PM (IST) Oct 03
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾದ ಕೆಲವೇ ದಿನಗಳಲ್ಲಿ ಮೊದಲ ಪ್ರೇಮ ನಿವೇದನೆ ನಡೆದಿದೆ. ಸ್ಪರ್ಧಿ ಡಾಗ್ ಸತೀಶ್ ಅವರು ನಟಿ ಕಾವ್ಯಾ ಶೈವ ಅವರಿಗೆ ಪ್ರಪೋಸ್ ಮಾಡಿದ್ದು, ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಇದರ ವಿಡಿಯೋ ನೋಡಿ…
04:10 PM (IST) Oct 03
ಶಿವಮೊಗ್ಗದಲ್ಲಿ, ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ 6ನೇ ತರಗತಿಯ ಮಗಳನ್ನು ಮಚ್ಚಿನಿಂದ ಕೊಲೆ ಮಾಡಿ, ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಪತ್ನಿ ಮತ್ತು ಮಗಳು ಮೃತಪಟ್ಟಿದ್ದಾರೆ.
03:48 PM (IST) Oct 03
03:25 PM (IST) Oct 03
ಬೆಂಗಳೂರಿನಲ್ಲಿ ಪೆಟ್ರೋಲ್ ಖಾಲಿಯಾಗಿ ಸಂಕಷ್ಟದಲ್ಲಿದ್ದ ಯುವಕನಿಗೆ ರಾಪಿಡೋ ಚಾಲಕನೊಬ್ಬ ನೆರವಾಗಿದ್ದಾನೆ. ತನ್ನ ಬೈಕ್ನಿಂದಲೇ ಪೆಟ್ರೋಲ್ ತೆಗೆದು ನೀಡಿ, ಹಣವನ್ನೂ ಪಡೆಯದೆ ಮಾನವೀಯತೆ ಮೆರೆದಿದ್ದಾನೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
02:33 PM (IST) Oct 03
Rukmini Vasanth Father Vasanth Venugopal ನಟಿ ರುಕ್ಷ್ಮಿಣಿ ವಸಂತ್ ಅವರ ತಂದೆ, ಭಾರತೀಯ ಸೇನೆಯ ವೀರ ಯೋಧ ಕರ್ನಲ್ ವಸಂತ್ ವೇಣುಗೋಪಾಲ್ ಅವರ ಬದುಕಿನ ಕಥೆ. 2007ರಲ್ಲಿ ಜಮ್ಮು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಅವರು ವೀರಮರಣವನ್ನಪ್ಪಿದರು.
02:30 PM (IST) Oct 03
02:06 PM (IST) Oct 03
ವಿಶ್ವವಿಖ್ಯಾತ ಮಂಗಳೂರು ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಶಾರದೆಯ ಸನ್ನಿಧಿಯಲ್ಲಿ ಡಿಕೆಶಿಗೆ ಪ್ರಸಾದ ನೀಡಿ, ದೇವಳದ ವತಿಯಿಂದ ಗೌರವಿಸಲಾಯಿತು.
01:39 PM (IST) Oct 03
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೊಸ ಮನೆಯ ಗೃಹ ಪ್ರವೇಶ ಡಿಸೆಂಬರ್ನಲ್ಲಿ ನಡೆಯಲಿದ್ದು, ಇದು ಕೇವಲ ಕೌಟುಂಬಿಕ ಸಮಾರಂಭವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿ (ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ) ಕುರಿತು ಮಾಹಿತಿ ನೀಡಿದರು.
01:37 PM (IST) Oct 03
28ನೇ ವಯಸ್ಸಿಗೆ 1000 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಯುವ ನಟಿಯೊಬ್ಬರು, ವಾರಸುದಾರಿಕೆಯೊಂದಿಗೆ ಚಿತ್ರರಂಗಕ್ಕೆ ಬಂದು, ನಟಿಯಾಗಿ ತನ್ನನ್ನು ತಾನು ಸಾಬೀತುಪಡಿಸಿಕೊಂಡಿದ್ದಾರೆ. ಸದ್ಯ ಸಿನಿರಂಗದಲ್ಲಿ ಮಿಂಚುತ್ತಿರುವ ಈ ಸುಂದರಿ ಯಾರು ಗೊತ್ತಾ?
01:27 PM (IST) Oct 03
ಹಿತಾ ಮತ್ತು ದುರ್ಗಾರನ್ನು ಬೇರೆ ಮಾಡಲು ಮಾಯಾ ಮಾಡಿದ ಪ್ಲ್ಯಾನ್ ವಿಫಲವಾಗುತ್ತದೆ. ದುರ್ಗಾ ತನ್ನ ಬುದ್ಧಿವಂತಿಕೆಯಿಂದ ಅಪ್ಪ-ಮಗಳಾದ ಶರತ್ ಮತ್ತು ಹಿತಾಳನ್ನು ಒಂದು ಮಾಡುತ್ತಾಳೆ. ಆದರೆ, ಹಿತಾಳ 7ನೇ ಹುಟ್ಟುಹಬ್ಬದಂದೇ ಆಕೆಯನ್ನು ಬ*ಲಿ ಕೊಡಲು ಮಾಳವಿಕಾ ಸಿದ್ಧತೆ. ಮುಂದೇನು?
01:11 PM (IST) Oct 03
ನೂರು ವರ್ಷಗಳ ಹಿಂದೆ, ವಿಜಯದಶಮಿಯ ಶುಭ ಸಂದರ್ಭದಂದು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಲಾಯಿತು. ಇದು ಸಂಪೂರ್ಣವಾಗಿ ಹೊಸ ಸೃಷ್ಟಿಯೇನೂ ಆಗಿರಲಿಲ್ಲ. ಇದು ಪ್ರಾಚೀನ ಪರಂಪರೆಯ ಹೊಸ ಅಭಿವ್ಯಕ್ತಿಯಾಗಿತ್ತು.
12:28 PM (IST) Oct 03
12:27 PM (IST) Oct 03
Mystery Boy in CM-DCM Dasara Parade Jeep Reaches Congress High Command ಮೈಸೂರು ದಸರಾ ಜಂಬೂ ಸವಾರಿ ವೇಳೆ ಸಿಎಂ ಹಾಗೂ ಡಿಸಿಎಂ ಜೊತೆ ತೆರೆದ ಜೀಪಿನಲ್ಲಿ ಕಾಣಿಸಿಕೊಂಡ ಬಾಲಕನೊಬ್ಬನಿಂದ ವಿವಾದ ಭುಗಿಲೆದ್ದಿದೆ.
12:02 PM (IST) Oct 03
ನಟಿ ರಚಿತಾ ರಾಮ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ತಮ್ಮ ಮದುವೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪೋಷಕರಿಗೆ ವಹಿಸಿದ್ದು, ಅವರು ಯಾರನ್ನು ತೋರಿಸಿದರೂ ಮದುವೆಯಾಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
11:59 AM (IST) Oct 03
ದರ್ಶನ್ ಆದಷ್ಟು ಬೇಗ ಹೊರಗಡೆ ಬರಲಿ. ದರ್ಶನ್ ನನ್ನ ಮನಸ್ಸಲ್ಲಿ ಯಾವತ್ತು ಇರ್ತಾರೆ. ನೀವೆಲ್ಲಾ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ. ನೀವು ದೇವರಿಗೆ ಬೇಡಿಕೊಳ್ಳುವಾಗ ಅವರಿಗೋಸ್ಕರನು ಬೇಡಿಕೊಳ್ಳಿ ಎಂದು ನಟ ಝೈದ್ ಖಾನ್ ತಿಳಿಸಿದರು.
11:54 AM (IST) Oct 03
Priyank Kharge and Nara Lokesh Trade Barbs Over Bengaluru Potholes IT Shift ಬೆಂಗಳೂರಿನ ರಸ್ತೆ ಗುಂಡಿ ಮತ್ತು ಟ್ರಾಫಿಕ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಆಂಧ್ರ ಸಚಿವ ನಾರಾ ಲೋಕೇಶ್ ಐಟಿ ಕಂಪನಿಗಳಿಗೆ ತಮ್ಮ ರಾಜ್ಯಕ್ಕೆ ಆಹ್ವಾನ ನೀಡಿದ್ದಾರೆ.
11:32 AM (IST) Oct 03
ಸ್ಕರ್ಟ್ ಶರ್ಟ್ಗಿಂತಲೂ ಗಿಡ್ಡವಿದ್ದ ಕಾರಣ ಇದನ್ನು ಯಾವ ಆ್ಯಂಗಲ್ನಿಂದ ನೋಡಬೇಕು ಎಂದು ಕೆಲಮಂದಿ ಕಕ್ಕಾಬಿಕ್ಕಿಯಾದರು. ಈ ಮಿಯು ಮಿಯು ಡ್ರೆಸ್ ಕೊರಿಯಾದಲ್ಲೋ, ಜಪಾನ್ನಲ್ಲೋ ಹುಟ್ಟಿದ್ದಲ್ಲ. ಇಟಲಿಯ ಶ್ರೀಮಂತ ಸ್ಟೈಲ್ ಇದು.
11:31 AM (IST) Oct 03
11:13 AM (IST) Oct 03
Bengaluru Husband Booked for Recording and Sharing Wifes Private Videos ಬೆಂಗಳೂರಿನಲ್ಲಿ ಪತಿಯೊಬ್ಬ ತನ್ನ ಖಾಸಗಿ ಕ್ಷಣಗಳನ್ನು ಬೆಡ್ರೂಂನಲ್ಲಿ ರಹಸ್ಯವಾಗಿ ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಿ, ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ ಎಂದು ಪತ್ನಿ ದೂರು ನೀಡಿದ್ದಾರೆ.
10:56 AM (IST) Oct 03
ಇದೊಂದು ಹಾರರ್ ಥ್ರಿಲ್ಲರ್ ಫ್ಯಾಂಟಸಿ ಡ್ರಾಮಾ. ಇದರ ವ್ಯಾಪ್ತಿ ರಾಷ್ಟ್ರಮಟ್ಟದ್ದು. ಯೂನಿವರ್ಸಲ್ ಎಮೋಶನ್ ಇರುವ ಕಥೆ. ಆದರೂ ನನ್ನ ಈ ಹಿಂದಿನ ‘777 ಚಾರ್ಲಿ’ ಸಿನಿಮಾಕ್ಕಿಂತ ಇದರ ಕಥೆ, ಬಜೆಟ್ ಎಲ್ಲಾ ಅಗಾಧವಾದುದು ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ.