ಬೆಂಗಳೂರು: ರಂಜಾನ್ ಮಾಸದ ಪ್ರಯುಕ್ತ ರಾಜ್ಯದ ಉರ್ದು ಮಾಧ್ಯಮದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತರಗತಿ ಬೋಧನಾ ಅವಧಿಯನ್ನು ಮಾರ್ಪಡಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಎಲ್ಲ ಮಾದರಿಯ ಶಾಲೆಗಳಿಗೂ ಬೆಳಗ್ಗೆ 10ರಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿಪಡಿಸಲಾಗಿತ್ತು. ಆದರೆ, ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಂಜಾನ್ ಮಾಸ ಆರಂಭವಾದ ದಿನದಿಂದ ಒಂದು ತಿಂಗಳ ಕಾಲ ಅಥವಾ ಮಾ.20ರವರೆಗೆ ಉರ್ದು ಶಾಲೆಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 12.45ರವರೆಗೆ ನಡೆಸಲು ಕ್ರಮ ವಹಿಸುವಂತೆ ಜಿಲ್ಲಾ ಡಿಡಿಪಿಐ, ಬಿಇಒಗಳಿಗೆ ಸೂಚಿಸಲಾಗಿದೆ.

10:23 PM (IST) Feb 03
Annayya Kannada Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಣ್ಣಯ್ಯ' ಈಗ ನಿಜಕ್ಕೂ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಈ ಧಾರಾವಾಹಿಯಲ್ಲಿ ಜಿಮ್ ಸೀನ, ರಶ್ಮಿಯ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿತ್ತು. ಈಗ ಜಿಮ್ ಸೀನ ಬದಲಾಗಿದ್ದಾನಾ ಎಂಬ ಪ್ರಶ್ನೆ ಮೂಡಿದೆ.
09:45 PM (IST) Feb 03
Karna Serial Update: ಸಂಸಾರ ಅಥವಾ ಒಂದು ಮನೆ ಎಂಬುದು ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ ಅನುಮಾನದಿಂದ ಅಥವಾ ದ್ವೇಷದಿಂದ ನೋಡಿದರೆ ಮನೆ ಹೇಗೆ ನರಕವಾಗುತ್ತದೆ ಎಂಬುದಕ್ಕೆ ರಮೇಶ್ ಸಾಕ್ಷಿ. ಹೌದು, ಕರ್ಣ ಧಾರಾವಾಹಿಯಲ್ಲಿ ಕರ್ಣನ ಮೇಲಿನ ದ್ವೇಷದಿಂದಾಗಿ ರಮೇಶ್ ಇಡೀ ಮನೆಯನ್ನು ನರಕ ಮಾಡಿದ್ದಾನೆ.
09:08 PM (IST) Feb 03
09:08 PM (IST) Feb 03
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ, ಜಾತಕ ದೋಷ ನಿವಾರಣೆ ಮಾಡುವ ನೆಪದಲ್ಲಿ ದೇವಸ್ಥಾನದ ಅರ್ಚಕನೊಬ್ಬ ಯುವತಿಯ ಮೇಲೆ ನಿರಂತರವಾಗಿ ಅತ್ಯಾ*ರ ಎಸಗಿದ್ದಾನೆ. ಸಂತ್ರಸ್ತೆಯ ದೂರಿನ ಮೇರೆಗೆ ಬಣಕಲ್ ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್ನನ್ನು ಬಂಧಿಸಿದ್ದಾರೆ.
08:54 PM (IST) Feb 03
08:46 PM (IST) Feb 03
08:37 PM (IST) Feb 03
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸ್ ಹಾಗೂ ಲಕ್ಷ್ಮೀ ದಂಪತಿಯ ದತ್ತು ಪುತ್ರ ವೆಂಕಿ ಪಾತ್ರದಲ್ಲಿ ನಟ ಚಂದ್ರಶೇಖರ್ ಶಾಸ್ತ್ರೀ ಅವರು ನಟಿಸುತ್ತಿದ್ದಾರೆ. ಈಗ ಇವರು ಗುಡ್ನ್ಯೂಸ್ ಕೊಟ್ದಿದ್ದಾರೆ.
08:31 PM (IST) Feb 03
ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ, ಶ್ರೀಗಂಧ ಸೇರಿದಂತೆ ಸಾವಿರಾರು ಮರಗಳನ್ನು ಅಕ್ರಮವಾಗಿ ಕಡಿದು ನಾಶಪಡಿಸಲಾಗಿದೆ. ಈ ಪರಿಸರ ನಾಶದ ವಿರುದ್ಧ ಸ್ಥಳೀಯರು ಮತ್ತು ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
08:29 PM (IST) Feb 03
Bengaluru-Chennai High-Speed Rail: Underground Stations in Bengaluru 306 ಕಿಮೀ ಚೆನ್ನೈ-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ನಲ್ಲಿ ಪ್ರಯಾಣದ ಸಮಯ ಸುಮಾರು 1 ಗಂಟೆ 13 ನಿಮಿಷಗಳು ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
08:10 PM (IST) Feb 03
ನನ್ನ ಮಗಳಿಗೆ ನನ್ನ ಈ ವಿರೂಪಗೊಂಡ ಮುಖ ತೋರಿಸಲು ಭಯ ಆಗ್ತಿದೆ. ಬೆಂಗಳೂರಿನಲ್ಲಿ ವಾಕಿಂಗ್ ವೇಳೆ ವ್ಯಕ್ತಿಯೊಬ್ಬರ ರಾಟ್ ವಿಲ್ಲರ್ ತಳಿಯ ನಾಯಿಯ ಭೀಕರ ದಾಳಿಗೆ ತುತ್ತಾಗಿ ತಮ್ಮ ಮುಖದ ರೂಪವನ್ನೇ ಕಳೆದುಕೊಂಡ ಶಾಲಿನಿ ದುಬೆ ಅವರ ನೋವಿನ ನುಡಿ ಇದು. ಅಪಾಯದಿಂದ ಚೇತರಿಸಿಕೊಂಡರು ಅವರು ಆಘಾತದಿಂದ ಹೊರಬಂದಿಲ್ಲ.
08:03 PM (IST) Feb 03
07:23 PM (IST) Feb 03
ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್, ವಿವಾಹಿತ ಮಹಿಳೆ ಸುಚಿತ್ರಾ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ವಿಚಾರವಾಗಿ ನಡೆದ ಜಗಳದಲ್ಲಿ, ಮಕ್ಕಳನ್ನು ರಕ್ಷಿಸಲು ಹೋದ ಮಹಿಳೆಯ ಗಂಡನ ಅಣ್ಣ ವಸಂತ್ ನಾಯ್ಕ್ ಕೊಲೆಯಾಗಿದ್ದಾರೆ. ಜ್ಯೋತಿಷಿ, ಮಹಿಳೆ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
07:01 PM (IST) Feb 03
'ಹಯಗ್ರೀವ' ಸಿನಿಮಾ ಕಾರ್ಯಕ್ರಮದಲ್ಲಿ ನಟ ಧನ್ವೀರ್, 'ಅಖಾಡಕ್ಕಿಳಿದು ಮಾತನಾಡಲು ಮೀಟರ್ ಬೇಕು' ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಿಚ್ಚ ಸುದೀಪ್ಗೆ ಟಾಂಗ್ ನೀಡಿದ್ದಾರೆ. ಈ ಹಿಂದೆ ಸುದೀಪ್ 'ಯುದ್ಧಕ್ಕೆ ಸಿದ್ಧ' ಎಂದಿದ್ದ ಹೇಳಿಕೆಗೆ ಪ್ರತಿಯಾಗಿ ದರ್ಶನ್ ಶಿಷ್ಯ ಧನ್ವೀರ್ ಕೌಂಟರ್ ಕೊಟ್ಟಿದ್ದಾರೆ.
06:37 PM (IST) Feb 03
ಸಾಗರದಲ್ಲಿನ ಕಾನೂನು ಬಾಹಿರ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುವರ್ಣ ನ್ಯೂಸ್ನ ನಿರಂತರ ವರದಿಯ ಫಲವಾಗಿ ಸರ್ಕಾರಿ ವೈದ್ಯೆ ಡಾ. ಪ್ರತಿಮಾ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ತನಿಖೆಯ ಹಿತದೃಷ್ಟಿಯಿಂದ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಲಾಗಿದೆ.
06:28 PM (IST) Feb 03
'ಕನ್ನಡತಿ'ಯ ಹರ್ಷನಾಗಿ ನಂತರ 'ಕರ್ಣ' ಧಾರಾವಾಹಿಯಲ್ಲಿ ಕರ್ಣನಾಗಿ ಮಿಂಚುತ್ತಿರುವ ನಟ ಕಿರಣ್ ರಾಜ್ ಅವರ ಎರಡೂ ಸೀರಿಯಲ್ಗಳಲ್ಲಿ ಇಬ್ಬರು ನಾಯಕಿಯರಿರುವುದು ವಿಶೇಷ. ಇದೇ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ, ನಟನ ಕಾಲೆಯುತ್ತಿದ್ದಾರೆ. ಏನಿದು ಡಬಲ್ ನಾಯಕಿ ಸೀಕ್ರೆಟ್?
06:23 PM (IST) Feb 03
ಕಿಚ್ಚ ಸುದೀಪ್ ನಾಯಕತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಮೂರನೇ ಬಾರಿಗೆ ಸಿಸಿಎಲ್ ಕಪ್ ಗೆದ್ದು ಸಂಭ್ರಮಿಸುತ್ತಿದೆ. ಆದರೆ, ಹಿಂದೆ ತಂಡದ ಭಾಗವಾಗಿದ್ದ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.
06:14 PM (IST) Feb 03
ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಲಾಗುವ COMEDK UGET 2026 ಪರೀಕ್ಷೆಯ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ comedk.org ಮೂಲಕ ಮಾರ್ಚ್ 16, 2026 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
06:00 PM (IST) Feb 03
Actress Ashita Chandrappa News: ಜೊತೆ ಜೊತೆಯಲಿ, ನೀಲಿ, ಸುಂದರಿ, ರಾಧಾ ರಮಣ ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ ಅವರು ಈಗ ನಟನೆಯಿಂದ ದೂರ ಇದ್ದಾರೆ. ಇವರು ಈ ನಿರ್ಧಾರ ತಗೊಳ್ಳಲು ಕಾರಣ ಏನು? ಆ ವ್ಯಕ್ತಿ ಯಾರು?
05:33 PM (IST) Feb 03
ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ವೊಂದರೊಳಗೆ ಪ್ರವೇಶ ನಿರಾಕರಿಸಿದ್ದಕ್ಕೆ ಕುಡಿದ ಯುವಕನೊಬ್ಬ ಬೆತ್ತಲಾಗಿ ರಂಪಾಟ ಮಾಡಿದ್ದಾನೆ. 'ನನ್ನ ತಂದೆ ಕ್ಲಬ್ ಸದಸ್ಯ' ಎಂದು ಗಲಾಟೆ ಮಾಡಿದ ಆತನನ್ನು ಪೊಲೀಸರು ವಶಕ್ಕೆ ಪಡೆದು, ನಂತರ ತಂದೆಯ ಸಮ್ಮುಖದಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
05:24 PM (IST) Feb 03
ಸಿದ್ದಾಪುರದಲ್ಲಿ ನಡೆದ ಕೊಲೆ ಮತ್ತು ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಾಳು ಪತಿ ಮಹೇಶ್ ನಾಯ್ಕ್ ಆಸ್ಪತ್ರೆಯಿಂದಲೇ ಘಟನೆಯ ವಿವರ ನೀಡಿದ್ದಾರೆ. ಜ್ಯೋತಿಷಿಯೊಂದಿಗೆ ತನ್ನ ಪತ್ನಿಗಿದ್ದ ಸಂಬಂಧ ಹಾಗೂ ಮಗಳನ್ನು ಮನೆಗೆ ಕರೆತಂದಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
05:24 PM (IST) Feb 03
ರಾಜಸ್ಥಾನದ ಜೋಧ್ಪುರದ ಸಿಹಿ ತಿನಿಸಿನ ಅಂಗಡಿಯೊಂದರಲ್ಲಿ, ವ್ಯಕ್ತಿಯೊಬ್ಬ ಸಿಹಿತಿನಿಸು ತಯಾರಿಸುವ ಹಿಟ್ಟನ್ನು ಕಾಲಿನಿಂದ ತುಳಿದು ಹದಗೊಳಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.
05:15 PM (IST) Feb 03
05:11 PM (IST) Feb 03
Bigg Boss Rakshita: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಈಗ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ವೀಕ್ಷಕರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
04:43 PM (IST) Feb 03
04:41 PM (IST) Feb 03
04:23 PM (IST) Feb 03
ನೀನಾದೆ ನಾ, ವಿದ್ಯಾ ವಿನಾಯಕ, ಕಸ್ತೂರಿ ನಿವಾಸ ಸೇರಿದಂತೆ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ದಿಲೀಪ್ ಶೆಟ್ಟಿ ಅವರು ನಟಿಸಿದ್ದಾರೆ. ಈಗ ಅವರು ಹೊಸ ಮನೆಯನ್ನು ಖರೀದಿ ಮಾಡಿದ್ದು, ಸುಂದರ ಫೋಟೋಗಳು ಇಲ್ಲಿವೆ.
04:22 PM (IST) Feb 03
03:52 PM (IST) Feb 03
BDA Nets Record ₹2,097 Crore from Konadasapura Land Auction ಇದು ಬಿಡಿಎ ಪಾಲಿಗೆ ಅಪರೂಪದ ನಿರ್ಧಾರವಾಗಿದೆ. ಇಲ್ಲಿಯವರೆಗೂ ವಸತಿ ನಿವೇಶನಗಳಲ್ಲಿ ಮಾತ್ರವೇ ವ್ಯವಹಾರ ಮಾಡುತ್ತಿದ್ದ ಪ್ರಾಧಿಕಾರ ಈಗ ತನ್ನ ಸಾಮಾನ್ಯ ಆದೇಶವನ್ನೂ ಮೀರಿ, ವಾಣಿಜ್ಯ ಭೂಮಿಯನ್ನು ಹರಾಜು ಮಾಡಿದೆ.
03:49 PM (IST) Feb 03
03:31 PM (IST) Feb 03
03:28 PM (IST) Feb 03
2018ರ ಸುಳ್ವಾಡಿ ವಿಷ ಪ್ರಸಾದ ದುರಂತ ನಡೆದು ಏಳು ವರ್ಷಗಳಾದರೂ, ಸಂತ್ರಸ್ತರು ಇಂದಿಗೂ ಅನಾರೋಗ್ಯ ಮತ್ತು ಸರ್ಕಾರದ ಈಡೇರದ ಭರವಸೆಗಳಿಂದ ನರಳುತ್ತಿದ್ದಾರೆ. 17 ಮಂದಿಯನ್ನು ಬಲಿಪಡೆದ ಈ ಘಟನೆಯ ಪ್ರಮುಖ ಆರೋಪಿಗೆ ಜಾಮೀನು ಸಿಕ್ಕಿರುವುದು ಅವರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
02:58 PM (IST) Feb 03
ಬೆಂಗಳೂರಿನ ಐತಿಹಾಸಿಕ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ ಎನ್ನಲಾದ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಜರಾಯಿ ಇಲಾಖೆಯು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ. ನಾಗರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
02:58 PM (IST) Feb 03
ವಿಧಾನಪರಿಷತ್ತಿನಲ್ಲಿ ನಜೀರ್ ಅಹ್ಮದ್ ಅವರ ಹೇಳಿಕೆ ಮತ್ತು ಸಿ.ಟಿ. ರವಿ ಅವರ 'ಪಾಕಿಸ್ತಾನದ ನಾಲಿಗೆ' ಎಂಬ ತಿರುಗೇಟಿನಿಂದಾಗಿ ತೀವ್ರ ಜಟಾಪಟಿ ನಡೆದಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಸಂಧಾನ ವಿಫಲವಾಗಿದ್ದು, ಕ್ಷಮೆಯಾಚನೆಗೆ ಬಿಜೆಪಿ ಪಟ್ಟು ಹಿಡಿದಿರುವುದರಿಂದ ವಿವಾದ ಇದೀಗ ಸಿಎಂ ಅಂಗಳ ತಲುಪಿದೆ.
02:41 PM (IST) Feb 03
Bed Broke In Kannada Serial: ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕೆಲವು ದೃಶ್ಯಗಳು ನೈಜತೆಯಿಂದ ಕಾಣಿಸಿದರೂ ಕೂಡ, ಅದರ ಹಿಂದೆ ತಂತ್ರವಿರುತ್ತದೆ, ಸಾಮಾನ್ಯ ಜನರಿಗೆ ಇದು ಹೇಗೆ ಎಂಬ ಡೌಟ್ ಬರುವುದು. ಫಸ್ಟ್ ನೈಟ್ ಸಮಯದಲ್ಲೋ, ಇನ್ಯಾವುದೋ ಸಮಯದಲ್ಲಿ ಮಂಚ ಮುರಿಯುವ ಹಾಗೆ ತೋರಿಸುತ್ತಾರೆ. ಇದು ಹೇಗೆ?
02:30 PM (IST) Feb 03
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೈತರೊಬ್ಬರು, ಉತ್ತಮ ಇಳುವರಿ ಹಾಗೂ ಬೆಲೆ ಬಂದಿರುವ ತಮ್ಮ ಮೆಣಸಿನಕಾಯಿ ಬೆಳೆಯನ್ನು ಕಳ್ಳರಿಂದ ರಕ್ಷಿಸಲು ಹೊಲದಲ್ಲಿ ಸೋಲಾರ್ ಚಾಲಿತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
01:48 PM (IST) Feb 03
01:41 PM (IST) Feb 03
01:39 PM (IST) Feb 03
SP Venkatesh death: ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ (70) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತವೇ ಸಾವಿಗೆ ಕಾರಣ. 'ರಾಜಾವಿಂಟೆ ಮಕನ್' ಚಿತ್ರದ ಮೂಲಕ ಮಲಯಾಳಂನಲ್ಲಿ ಫೇಮಸ್ ಆದ ಇವರು, 'ಕಿಲುಕ್ಕಂ', 'ಸ್ಫಟಿಕಂ' ನಂತಹ ಸಿನಿಮಾಗಳ ಮೂಲಕ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ.
01:35 PM (IST) Feb 03
ಮಲಯಾಳಂನ ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವ ನಾಯರ್ ಅವರ ಕಾದಂಬರಿ ಆಧರಿತ ‘ರಂಡಮೂಳಂ’ ಸಿನಿಮಾಕ್ಕೆ ಮರುಜೀವ ನೀಡಲು ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಮುಂದಾಗಿದ್ದಾರೆ ಎನ್ನಲಾಗಿದೆ. ಅವರು ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ನಾಯಕನಾಗಿ ನಟನೆಯನ್ನೂ ಮಾಡಲಿದ್ದಾರಂತೆ.
01:35 PM (IST) Feb 03