LIVE NOW
Published : Feb 03, 2026, 06:56 AM ISTUpdated : Feb 03, 2026, 10:23 PM IST

Karnataka News Live: Annayya Serial - ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?

ಸಾರಾಂಶ

ಬೆಂಗಳೂರು: ರಂಜಾನ್‌ ಮಾಸದ ಪ್ರಯುಕ್ತ ರಾಜ್ಯದ ಉರ್ದು ಮಾಧ್ಯಮದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತರಗತಿ ಬೋಧನಾ ಅವಧಿಯನ್ನು ಮಾರ್ಪಡಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಎಲ್ಲ ಮಾದರಿಯ ಶಾಲೆಗಳಿಗೂ ಬೆಳಗ್ಗೆ 10ರಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿಪಡಿಸಲಾಗಿತ್ತು. ಆದರೆ, ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಂಜಾನ್‌ ಮಾಸ ಆರಂಭವಾದ ದಿನದಿಂದ ಒಂದು ತಿಂಗಳ ಕಾಲ ಅಥವಾ ಮಾ.20ರವರೆಗೆ ಉರ್ದು ಶಾಲೆಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 12.45ರವರೆಗೆ ನಡೆಸಲು ಕ್ರಮ ವಹಿಸುವಂತೆ ಜಿಲ್ಲಾ ಡಿಡಿಪಿಐ, ಬಿಇಒಗಳಿಗೆ ಸೂಚಿಸಲಾಗಿದೆ.

10:23 PM (IST) Feb 03

Annayya Serial - ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?

Annayya Kannada Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಣ್ಣಯ್ಯ' ಈಗ ನಿಜಕ್ಕೂ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಈ ಧಾರಾವಾಹಿಯಲ್ಲಿ ಜಿಮ್ ಸೀನ, ರಶ್ಮಿಯ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿತ್ತು. ಈಗ ಜಿಮ್‌ ಸೀನ ಬದಲಾಗಿದ್ದಾನಾ ಎಂಬ ಪ್ರಶ್ನೆ ಮೂಡಿದೆ.

 

Read Full Story

09:45 PM (IST) Feb 03

Karna Serial - ಅನ್ನವನ್ನು ಅವಮಾನಿಸಿದ್ದ ರಮೇಶ್ ಅಹಂಕಾರವನ್ನೇ ತುಳಿದ ಕರ್ಣ; ಶಿಳ್ಳೆ ಹೊಡೆದ ವೀಕ್ಷಕರು!

Karna Serial Update: ಸಂಸಾರ ಅಥವಾ ಒಂದು ಮನೆ ಎಂಬುದು ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ ಅನುಮಾನದಿಂದ ಅಥವಾ ದ್ವೇಷದಿಂದ ನೋಡಿದರೆ ಮನೆ ಹೇಗೆ ನರಕವಾಗುತ್ತದೆ ಎಂಬುದಕ್ಕೆ ರಮೇಶ್ ಸಾಕ್ಷಿ. ಹೌದು, ಕರ್ಣ ಧಾರಾವಾಹಿಯಲ್ಲಿ ಕರ್ಣನ ಮೇಲಿನ ದ್ವೇಷದಿಂದಾಗಿ ರಮೇಶ್‌ ಇಡೀ ಮನೆಯನ್ನು ನರಕ ಮಾಡಿದ್ದಾನೆ.

 

Read Full Story

09:08 PM (IST) Feb 03

ಕರ್ಮದ ಕಲ್ಲನ್ನು ಎಡವಿದ ಮನುಜನು... ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ

ಗಾಜಿಯಾಬಾದ್‌ನಲ್ಲಿ, 44 ವರ್ಷದ ಮಗನೊಬ್ಬ ತನ್ನ 70 ವರ್ಷದ ಹಾಸಿಗೆ ಹಿಡಿದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಮೆರಿಕಾದಲ್ಲಿರುವ ಮಗಳು ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೀಡಿಯೋ ವೈರಲ್ ಆದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

09:08 PM (IST) Feb 03

'ಮದುವೆಯಾಗಲು ಜಾತಕ ಸರಿ ಇಲ್ಲ..' ಎಂದು ಬಂದ ಯುವತಿಯನ್ನ ಮಂಚದಲ್ಲಿ ಅನುಭವಿಸಿದ ಅರ್ಚಕ ಕೃಷ್ಣರಾವ್‌ ಅರೆಸ್ಟ್‌!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ, ಜಾತಕ ದೋಷ ನಿವಾರಣೆ ಮಾಡುವ ನೆಪದಲ್ಲಿ ದೇವಸ್ಥಾನದ ಅರ್ಚಕನೊಬ್ಬ ಯುವತಿಯ ಮೇಲೆ ನಿರಂತರವಾಗಿ ಅತ್ಯಾ*ರ ಎಸಗಿದ್ದಾನೆ. ಸಂತ್ರಸ್ತೆಯ ದೂರಿನ ಮೇರೆಗೆ ಬಣಕಲ್ ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್‌ನನ್ನು ಬಂಧಿಸಿದ್ದಾರೆ.

Read Full Story

08:54 PM (IST) Feb 03

ಬ್ಯಾಡಗಿ ಖಾರದಲ್ಲಿ ಆತಂಕದ ಕಾರ್ಮೋಡ, ಮೆಣಸಿನಕಾಯಿ ಆವಕ ಇಳಿಕೆ ವ್ಯಾಪಾರಸ್ಥರಲ್ಲಿ ಆತಂಕ, ಬೆಲೆಯಲ್ಲಿ ಏರಿಳಿತ

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೆಣಸಿನಕಾಯಿ ಆವಕದಲ್ಲಿ ಗಣನೀಯ ಇಳಿಕೆಯಾಗಿದ್ದು, ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ. ಅನಾವೃಷ್ಟಿ ಮತ್ತು ಬೆಳೆ ಹಾನಿಯಿಂದಾಗಿ ಪೂರೈಕೆ ಕಡಿಮೆಯಾಗಿದ್ದು, ಡಬ್ಬಿ ತಳಿಗೆ ಉತ್ತಮ ದರ ಸಿಕ್ಕರೂ, ಒಟ್ಟಾರೆ ಮಾರುಕಟ್ಟೆಯಲ್ಲಿ ದರ ಏರಿಳಿತ ಮುಂದುವರೆದಿದೆ.
Read Full Story

08:46 PM (IST) Feb 03

ದಿನವೂ 700 ಜನರಿಗೆ ಉಚಿತ ಊಟ ಹಾಕುತ್ತಿದ್ದ ಕಮಲಾಕರ್ ಭಟ್; ಸುಚಿತ್ರಾ ಸಹವಾಸದಿಂದ ಜೈಲೂಟಕ್ಕೆ ತಟ್ಟೆ ಹಿಡಿಬೇಕಾಯ್ತು!

ಸಮಾಜ ಸೇವಕ ಹಾಗೂ ಜ್ಯೋತಿಷಿ ಎಂದು ಹೆಸರಾಗಿದ್ದ ಸಿದ್ದಾಪುರದ ಕಮಲಾಕರ್ ಭಟ್ ಅವರ ಕರಾಳ ಮುಖ ಬಯಲಾಗಿದೆ. ಕೌಟುಂಬಿಕ ಕಲಹದಲ್ಲಿ ಹಸ್ತಕ್ಷೇಪ ಮಾಡಿ, ಮಹಿಳೆಯೊಬ್ಬಳ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಅವರ ಮೇಲಿದೆ. 'ಸೇವ್ ಮೀ' ಎಂಬ ಮಗಳ ಸಂದೇಶವೇ ಈ ಘಟನೆಗೆ ತಿರುವು ನೀಡಿದೆ.
Read Full Story

08:37 PM (IST) Feb 03

ಗುಡ್‌ನ್ಯೂಸ್‌ ಕೊಟ್ಟ Lakshmi Nivasa Serial ವೆಂಕಿ; ಚಂದ್ರಶೇಖರ್‌ ಶಾಸ್ತ್ರೀ ಮನೆಗೆ ಹೊಸ ಸದಸ್ಯರ ಆಗಮನ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸ್‌ ಹಾಗೂ ಲಕ್ಷ್ಮೀ ದಂಪತಿಯ ದತ್ತು ಪುತ್ರ ವೆಂಕಿ ಪಾತ್ರದಲ್ಲಿ ನಟ ಚಂದ್ರಶೇಖರ್‌ ಶಾಸ್ತ್ರೀ ಅವರು ನಟಿಸುತ್ತಿದ್ದಾರೆ. ಈಗ ಇವರು ಗುಡ್‌ನ್ಯೂಸ್‌ ಕೊಟ್ದಿದ್ದಾರೆ.

 

Read Full Story

08:31 PM (IST) Feb 03

ಬೆಳಗಾವಿಯಲ್ಲಿ ಮರಗಳ ಮಾರಣ ಹೋಮ, ಸೌರ ಯೋಜನೆ ಹೆಸರಲ್ಲಿ ಅರಣ್ಯ ಇಲಾಖೆಗೆ ತಿಳಿಸದೆ ಬರೋಬ್ಬರಿ 40 ಎಕರೆ ಕಾಡು ನಾಶ!

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ, ಶ್ರೀಗಂಧ ಸೇರಿದಂತೆ ಸಾವಿರಾರು ಮರಗಳನ್ನು ಅಕ್ರಮವಾಗಿ ಕಡಿದು ನಾಶಪಡಿಸಲಾಗಿದೆ. ಈ ಪರಿಸರ ನಾಶದ ವಿರುದ್ಧ ಸ್ಥಳೀಯರು ಮತ್ತು ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Read Full Story

08:29 PM (IST) Feb 03

ಬೆಂಗಳೂರು-ಚೆನ್ನೈ ಹೈ ಸ್ಪೀಡ್‌ ರೈಲ್‌ ಕಾರಿಡಾರ್‌ - ರಾಜಧಾನಿಯ ಈ ಎರಡು ಪ್ರದೇಶಗಳಲ್ಲಿ ಅಂಡರ್‌ಗ್ರೌಂಡ್‌ ಸ್ಟೇಷನ್‌!

Bengaluru-Chennai High-Speed Rail: Underground Stations in Bengaluru 306 ಕಿಮೀ ಚೆನ್ನೈ-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಪ್ರಯಾಣದ ಸಮಯ ಸುಮಾರು 1 ಗಂಟೆ 13 ನಿಮಿಷಗಳು ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

 

Read Full Story

08:10 PM (IST) Feb 03

17 ತಿಂಗಳ ಪುಟ್ಟ ಮಗುವಿಗೆ ಮುಖ ತೋರಿಸಲು ಭಯ ಆಗ್ತಿದೆ - ನಾಯಿ ದಾಳಿಯಿಂದಾಗಿ ವಿರೂಪಗೊಂಡ ತಾಯಿಯ ನೋವಿನ ನೋಡಿ

ನನ್ನ ಮಗಳಿಗೆ ನನ್ನ ಈ ವಿರೂಪಗೊಂಡ ಮುಖ ತೋರಿಸಲು ಭಯ ಆಗ್ತಿದೆ. ಬೆಂಗಳೂರಿನಲ್ಲಿ ವಾಕಿಂಗ್ ವೇಳೆ ವ್ಯಕ್ತಿಯೊಬ್ಬರ ರಾಟ್ ವಿಲ್ಲರ್ ತಳಿಯ ನಾಯಿಯ ಭೀಕರ ದಾಳಿಗೆ ತುತ್ತಾಗಿ ತಮ್ಮ ಮುಖದ ರೂಪವನ್ನೇ ಕಳೆದುಕೊಂಡ ಶಾಲಿನಿ ದುಬೆ ಅವರ ನೋವಿನ ನುಡಿ ಇದು. ಅಪಾಯದಿಂದ ಚೇತರಿಸಿಕೊಂಡರು ಅವರು ಆಘಾತದಿಂದ ಹೊರಬಂದಿಲ್ಲ.

Read Full Story

08:03 PM (IST) Feb 03

ಮಕ್ಕಳಿಲ್ಲದ ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದಿಂದ, ಹುಳು ಮಿಶ್ರಿತ ಬಿಸಿಯೂಟ; 58 ಮಕ್ಕಳು ಅಸ್ವಸ್ಥ!

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಹುಳು ಮಿಶ್ರಿತ ಬಿಸಿಯೂಟ ಸೇವಿಸಿದ 58 ಮಕ್ಕಳು ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಮಕ್ಕಳನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

07:23 PM (IST) Feb 03

ಕಲಾಕಾರ್ ಗುರೂಜಿ ಕಮಲಾಕರ್ ಭಟ್; ಗಂಡ ಡ್ಯೂಟಿಗೆ ಹೋದಾಗ, ಒಬ್ಬಂಟಿ ಆಂಟಿಯನ್ನ ಪಟಾಯಿಸಿದ್ದು ಹೇಗೆ?

ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್, ವಿವಾಹಿತ ಮಹಿಳೆ ಸುಚಿತ್ರಾ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ವಿಚಾರವಾಗಿ ನಡೆದ ಜಗಳದಲ್ಲಿ, ಮಕ್ಕಳನ್ನು ರಕ್ಷಿಸಲು ಹೋದ ಮಹಿಳೆಯ ಗಂಡನ ಅಣ್ಣ ವಸಂತ್ ನಾಯ್ಕ್ ಕೊಲೆಯಾಗಿದ್ದಾರೆ. ಜ್ಯೋತಿಷಿ, ಮಹಿಳೆ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Read Full Story

07:01 PM (IST) Feb 03

ಡಿ ಕಂಪನಿ ಅವಾಜ್ - ಕಿಚ್ಚನಿಗೆ ಕೌಂಟರ್ ಕೊಟ್ರಾ ದರ್ಶನ್ ಶಿಷ್ಯ? ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶುರುವಾಯ್ತಾ ಯುದ್ಧ?

'ಹಯಗ್ರೀವ' ಸಿನಿಮಾ ಕಾರ್ಯಕ್ರಮದಲ್ಲಿ ನಟ ಧನ್ವೀರ್, 'ಅಖಾಡಕ್ಕಿಳಿದು ಮಾತನಾಡಲು ಮೀಟರ್ ಬೇಕು' ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಿಚ್ಚ ಸುದೀಪ್‌ಗೆ ಟಾಂಗ್ ನೀಡಿದ್ದಾರೆ. ಈ ಹಿಂದೆ ಸುದೀಪ್ 'ಯುದ್ಧಕ್ಕೆ ಸಿದ್ಧ' ಎಂದಿದ್ದ ಹೇಳಿಕೆಗೆ ಪ್ರತಿಯಾಗಿ ದರ್ಶನ್ ಶಿಷ್ಯ ಧನ್ವೀರ್ ಕೌಂಟರ್ ಕೊಟ್ಟಿದ್ದಾರೆ.

Read Full Story

06:37 PM (IST) Feb 03

ಶಿವಮೊಗ್ಗ ಸರ್ಕಾರಿ ವೈದ್ಯೆ ಡಾ.ಪ್ರತಿಮಾ ಸಸ್ಪೆಂಡ್; ಭ್ರೂಣ ಹತ್ಯೆಯ ಆರೋಪಿಗೆ ಶಿಕ್ಷೆ ಯಾವಾಗ?

ಸಾಗರದಲ್ಲಿನ ಕಾನೂನು ಬಾಹಿರ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುವರ್ಣ ನ್ಯೂಸ್‌ನ ನಿರಂತರ ವರದಿಯ ಫಲವಾಗಿ ಸರ್ಕಾರಿ ವೈದ್ಯೆ ಡಾ. ಪ್ರತಿಮಾ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ತನಿಖೆಯ ಹಿತದೃಷ್ಟಿಯಿಂದ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಲಾಗಿದೆ.

Read Full Story

06:28 PM (IST) Feb 03

Karna Serial - ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​

'ಕನ್ನಡತಿ'ಯ ಹರ್ಷನಾಗಿ ನಂತರ 'ಕರ್ಣ' ಧಾರಾವಾಹಿಯಲ್ಲಿ ಕರ್ಣನಾಗಿ ಮಿಂಚುತ್ತಿರುವ ನಟ ಕಿರಣ್ ರಾಜ್ ಅವರ ಎರಡೂ ಸೀರಿಯಲ್‌ಗಳಲ್ಲಿ ಇಬ್ಬರು ನಾಯಕಿಯರಿರುವುದು ವಿಶೇಷ. ಇದೇ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ, ನಟನ ಕಾಲೆಯುತ್ತಿದ್ದಾರೆ. ಏನಿದು ಡಬಲ್​ ನಾಯಕಿ ಸೀಕ್ರೆಟ್​?

Read Full Story

06:23 PM (IST) Feb 03

ಅತ್ತ CCL ನಲ್ಲಿ ಕಿಚ್ಚನ ಬೊಂಬಾಟ್ ಆಟ, ಇತ್ತ ಜೈಲಲ್ಲಿ ದಾಸನ ಪರದಾಟ; ಹಿಂದೆ 2 ಬಾರಿ CCL ಗೆದ್ದಾಗ ತಂಡದ ಜೊತೆಗಿದ್ದ ದರ್ಶನ್!

ಕಿಚ್ಚ ಸುದೀಪ್ ನಾಯಕತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಮೂರನೇ ಬಾರಿಗೆ ಸಿಸಿಎಲ್ ಕಪ್ ಗೆದ್ದು ಸಂಭ್ರಮಿಸುತ್ತಿದೆ. ಆದರೆ, ಹಿಂದೆ ತಂಡದ ಭಾಗವಾಗಿದ್ದ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.  

Read Full Story

06:14 PM (IST) Feb 03

COMEDK UGET 2026 - ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆಯ ದಿನಾಂಕ ಪ್ರಕಟ

ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಲಾಗುವ COMEDK UGET 2026 ಪರೀಕ್ಷೆಯ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ comedk.org ಮೂಲಕ ಮಾರ್ಚ್ 16, 2026 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 

Read Full Story

06:00 PM (IST) Feb 03

ಆ ವ್ಯಕ್ತಿ ನನಗೆ ಸೀರಿಯಲ್‌ ಇಂಡಸ್ಟ್ರಿಯಲ್ಲಿ ತುಂಬ ಕಷ್ಟ ಕೊಟ್ಟರು - ಸತ್ಯ ಹೇಳಿದ Radha Ramana ನಟಿ ಆಶಿತಾ ಚಂದ್ರಪ್ಪ

Actress Ashita Chandrappa News: ಜೊತೆ ಜೊತೆಯಲಿ, ನೀಲಿ, ಸುಂದರಿ, ರಾಧಾ ರಮಣ ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ ಅವರು ಈಗ ನಟನೆಯಿಂದ ದೂರ ಇದ್ದಾರೆ. ಇವರು ಈ ನಿರ್ಧಾರ ತಗೊಳ್ಳಲು ಕಾರಣ ಏನು? ಆ ವ್ಯಕ್ತಿ ಯಾರು?

 

Read Full Story

05:33 PM (IST) Feb 03

'ನನ್ನಪ್ಪ ಕ್ಲಬ್ ಮೆಂಬರ್, ನನ್ನನ್ನ ಒಳಗೆ ಬಿಡಿ'; ಗೇಟಿನ ಮುಂದೆ ಬೆತ್ತಲೆ ಪ್ರತಿಭಟನೆ ಮಾಡಿದ ವ್ಯಕ್ತಿ!

ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ವೊಂದರೊಳಗೆ ಪ್ರವೇಶ ನಿರಾಕರಿಸಿದ್ದಕ್ಕೆ ಕುಡಿದ ಯುವಕನೊಬ್ಬ ಬೆತ್ತಲಾಗಿ ರಂಪಾಟ ಮಾಡಿದ್ದಾನೆ. 'ನನ್ನ ತಂದೆ ಕ್ಲಬ್ ಸದಸ್ಯ' ಎಂದು ಗಲಾಟೆ ಮಾಡಿದ ಆತನನ್ನು ಪೊಲೀಸರು ವಶಕ್ಕೆ ಪಡೆದು, ನಂತರ ತಂದೆಯ ಸಮ್ಮುಖದಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Read Full Story

05:24 PM (IST) Feb 03

Astrologer Kamalakar Bhat Case - ಫೇಸ್‌ಬುಕ್‌ನಲ್ಲಿ ಸಿಗೋ ಹುಡುಗರ ಜೊತೆ ತಿರುಗ್ತಾ ಇದ್ಲು, ಆಮೇಲೆ ಗುರೂಜಿ ಜೊತೆ ಹೋದಳು!

ಸಿದ್ದಾಪುರದಲ್ಲಿ ನಡೆದ ಕೊಲೆ ಮತ್ತು ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಾಳು ಪತಿ ಮಹೇಶ್ ನಾಯ್ಕ್ ಆಸ್ಪತ್ರೆಯಿಂದಲೇ ಘಟನೆಯ ವಿವರ ನೀಡಿದ್ದಾರೆ. ಜ್ಯೋತಿಷಿಯೊಂದಿಗೆ ತನ್ನ ಪತ್ನಿಗಿದ್ದ ಸಂಬಂಧ ಹಾಗೂ ಮಗಳನ್ನು ಮನೆಗೆ ಕರೆತಂದಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. 

Read Full Story

05:24 PM (IST) Feb 03

ಸಿಹಿತಿನಿಸಿ ಹಿಟ್ಟನ್ನು ಕಾಲಿನಲ್ಲಿ ತುಳಿದು ಹದಗೊಳಿಸಿದ ವ್ಯಕ್ತಿ - ತಿಂಡಿ ಅಂಗಡಿ ವೀಡಿಯೋಗೆ ನೆಟ್ಟಿಗರ ಸಮರ್ಥನೆ

ರಾಜಸ್ಥಾನದ ಜೋಧ್‌ಪುರದ ಸಿಹಿ ತಿನಿಸಿನ ಅಂಗಡಿಯೊಂದರಲ್ಲಿ, ವ್ಯಕ್ತಿಯೊಬ್ಬ ಸಿಹಿತಿನಿಸು ತಯಾರಿಸುವ ಹಿಟ್ಟನ್ನು ಕಾಲಿನಿಂದ ತುಳಿದು ಹದಗೊಳಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.

Read Full Story

05:15 PM (IST) Feb 03

ಶಿವಮೊಗ್ಗ ಜೈಲಿನ ಗೋಡೆ ದಾಟಿದ ಕಪ್ಪು ಬಣ್ಣದ ಪೊಟ್ಟಣ! ಇಬ್ಬರು ಕೈದಿಗಳು, ಜೈಲೊಳಗೆ ಡ್ರಗ್ ಎಸೆದ ಹೊರಗಿನ ಮೂವರು ಬಂಧನ

ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹಕ್ಕೆ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಸಾಗಿಸುವ ಯತ್ನ ವಿಫಲವಾಗಿದೆ. ಜೈಲಿನ ಗೋಡೆಯ ಮೇಲಿಂದ ಎಸೆದ ಗಾಂಜಾ, ಮೊಬೈಲ್ ಫೋನ್‌ಗಳಿದ್ದ ಪೊಟ್ಟಣಗಳನ್ನು ಪಡೆಯಲು ಯತ್ನಿಸಿದ ಇಬ್ಬರು ಕೈದಿಗಳನ್ನು ಹಾಗೂ ಹೊರಗಿನಿಂದ ವಸ್ತುಗಳನ್ನು ಎಸೆದ ಮೂವರು ಯುವಕರನ್ನು ಬಂಧಿಸಲಾಗಿದೆ.
Read Full Story

05:11 PM (IST) Feb 03

ನನಗೆ ಮೀಟರ್‌ ಇದೆ, ಅನುಮತಿ ಕೇಳದೆ ಗಿಲ್ಲಿ ನಟ ಇದ್ದಲ್ಲಿಗೆ ಹೋಗ್ತೀನಿ - Rakshita Shetty Open Talk

Bigg Boss Rakshita: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ರನ್ನರ್‌ ಅಪ್‌ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಈಗ ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಕರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

 

Read Full Story

04:43 PM (IST) Feb 03

ಗುರೂಜಿ ಕಮಲಾಕರ್‌ ಭಟ್‌ ಜೊತೆ ಮಹಿಳೆಯ ಚಕ್ಕಂದ; ತಂದೆಗೆ ಮೆಸೇಜ್‌ ಕಳಿಸಿದ್ದ ಮಗಳು, ಮುಂದಾಗಿದ್ದು ಅನಾಹುತ!

ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣದ ಹಿಂದೆ ಶಿವಮೊಗ್ಗದ ಗುರೂಜಿ ಕಮಲಾಕರ ಭಟ್ ಮತ್ತು ವಿವಾಹಿತೆ ಸುಚಿತ್ರಾ ನಡುವಿನ ಅಕ್ರಮ ಸಂಬಂಧದ ಕಥೆಯಿದೆ. ಈ ರಹಸ್ಯವನ್ನು ಮಗಳು ತನ್ನ ತಂದೆಗೆ ಸಂದೇಶದ ಮೂಲಕ ತಿಳಿಸಿದ್ದರಿಂದ, ನಂತರ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
Read Full Story

04:41 PM (IST) Feb 03

ತಲೆ ತುಂಬಾ ಕೂದಲಿದ್ದರೆ ಸುಂದರ ಹೆಂಡ್ತಿ ಹಿಂದೆ ಹುಡುಗರು ಬೀಳ್ತಾರೆ; ಸಂಶಯದ ಭೂತಕ್ಕೆ ಪತ್ನಿ ತಲೆ ಬೋಳಿಸಿದ ಪತಿ!

ಬಾಗಲಕೋಟೆ ಜಿಲ್ಲೆಯ ತೊದಲಬಾಗಿ ಗ್ರಾಮದಲ್ಲಿ, ಪತ್ನಿಯ ನಡತೆಯ ಮೇಲೆ ಸಂಶಯಗೊಂಡ ಪತಿ ಉಮೇಶ್, ಕುಡಿದ ಮತ್ತಿನಲ್ಲಿ ಆಕೆಯ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾನೆ. ಈ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

04:23 PM (IST) Feb 03

ಇದ್ದ ಜಾಗವನ್ನು ಸದುಪಯೋಗ ಮಾಡ್ಕೊಂಡ Neenadhe Naa Serial ನಟ ದಿಲೀಪ್‌ ಶೆಟ್ಟಿಯ ಸುಂದರ Home Tour

ನೀನಾದೆ ನಾ, ವಿದ್ಯಾ ವಿನಾಯಕ, ಕಸ್ತೂರಿ ನಿವಾಸ ಸೇರಿದಂತೆ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ದಿಲೀಪ್‌ ಶೆಟ್ಟಿ ಅವರು ನಟಿಸಿದ್ದಾರೆ. ಈಗ ಅವರು ಹೊಸ ಮನೆಯನ್ನು ಖರೀದಿ ಮಾಡಿದ್ದು, ಸುಂದರ ಫೋಟೋಗಳು ಇಲ್ಲಿವೆ. 

Read Full Story

04:22 PM (IST) Feb 03

ಬೆಳಗಾವಿ - ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ, ನಾಳೆ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಪ್ರಕರಣದಲ್ಲಿ, 12 ಆರೋಪಿಗಳು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇಂದು ಪ್ರಕಟವಾಗಬೇಕಿದ್ದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆಗೆ ಮುಂದೂಡಿದ್ದು, ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.
Read Full Story

03:52 PM (IST) Feb 03

ಪ್ರತಿ ಚದರ ಮೀಟರ್‌ಗೆ 98,466 ರೂಪಾಯಿ, ಕೋನದಾಸಪುರದ 52 ಎಕರೆ ಜಾಗ ಹರಾಜು ಮಾಡಿ ಭರ್ಜರಿ ಲಾಭ ಮಾಡಿದ ಬಿಡಿಎ!

BDA Nets Record ₹2,097 Crore from Konadasapura Land Auction ಇದು ಬಿಡಿಎ ಪಾಲಿಗೆ ಅಪರೂಪದ ನಿರ್ಧಾರವಾಗಿದೆ. ಇಲ್ಲಿಯವರೆಗೂ ವಸತಿ ನಿವೇಶನಗಳಲ್ಲಿ ಮಾತ್ರವೇ ವ್ಯವಹಾರ ಮಾಡುತ್ತಿದ್ದ ಪ್ರಾಧಿಕಾರ ಈಗ ತನ್ನ ಸಾಮಾನ್ಯ ಆದೇಶವನ್ನೂ ಮೀರಿ, ವಾಣಿಜ್ಯ ಭೂಮಿಯನ್ನು ಹರಾಜು ಮಾಡಿದೆ.

 

Read Full Story

03:49 PM (IST) Feb 03

ಮುಸ್ಲಿಂ ಯುವತಿ ಜೊತೆಗಿದ್ದ ಹಿಂದೂ ಯುವಕನಿಗೆ ಚಾಕು ತೋರಿಸಿ 'ನೈತಿಕ ಪೊಲೀಸ್'ಗಿರಿ ತೋರಿಸಿದ ಪುಂಡರು!

ಚಿಕ್ಕಬಳ್ಳಾಪುರದಲ್ಲಿ ಒಂದೇ ಕಾಲೇಜಿನ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಒಟ್ಟಿಗೆ ಹೋಗುತ್ತಿದ್ದಾಗ, ಅನ್ಯ ಕೋಮಿನ ಅಪ್ರಾಪ್ತರು ಅವರನ್ನು ತಡೆದು ಪ್ರಶ್ನಿಸಿದ್ದಾರೆ. ವಿಡಿಯೋ ಮಾಡಿ, ಚಾಕು ತೋರಿಸಿ ಬೆದರಿಕೆ ಹಾಕಿದ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read Full Story

03:31 PM (IST) Feb 03

Tragedy - ಮದ್ಯಸೇವನೆ ಮಾಡಿದ 10ನೇ ತರಗತಿ ವಿದ್ಯಾರ್ಥಿ, ಮನೆಗೆ ಹೋಗಲು ಹೆದರಿ ದುರಂತ ಅಂತ್ಯ

ಬೆಂಗಳೂರಿನಲ್ಲಿ ಶಾಲಾ ಬೀಳ್ಕೊಡುಗೆ ಸಮಾರಂಭದ ನಂತರ ಪಬ್‌ನಲ್ಲಿ ಮದ್ಯ ಸೇವಿಸಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ, ಮನೆಗೆ ಹೋಗಲು ಹೆದರಿ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಹಾರಿ ಮೃತಪಟ್ಟಿದ್ದಾನೆ. ಈ ಸಂಬಂಧ, ಅಪ್ರಾಪ್ತನಿಗೆ ಮದ್ಯ ನೀಡಿದ ಪಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

03:28 PM (IST) Feb 03

ಸುಳ್ವಾಡಿ ವಿಷಪ್ರಾಶನ ದುರಂತ - 7ವರ್ಷವಾದರೂ ನಿಲ್ಲದ ಕಣ್ಣೀರು, ಸಿಗದ ಪರಿಹಾರ, ಬದುಕುಳಿದವರಿಗೆ ಅನಾರೋಗ್ಯ!

2018ರ ಸುಳ್ವಾಡಿ ವಿಷ ಪ್ರಸಾದ ದುರಂತ ನಡೆದು ಏಳು ವರ್ಷಗಳಾದರೂ, ಸಂತ್ರಸ್ತರು ಇಂದಿಗೂ ಅನಾರೋಗ್ಯ ಮತ್ತು ಸರ್ಕಾರದ ಈಡೇರದ ಭರವಸೆಗಳಿಂದ ನರಳುತ್ತಿದ್ದಾರೆ. 17 ಮಂದಿಯನ್ನು ಬಲಿಪಡೆದ ಈ ಘಟನೆಯ ಪ್ರಮುಖ ಆರೋಪಿಗೆ ಜಾಮೀನು ಸಿಕ್ಕಿರುವುದು ಅವರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story

02:58 PM (IST) Feb 03

ಧರ್ಮರಾಯಸ್ವಾಮಿ ದೇವಾಲಯ ಚಿನ್ನದ ನೆಕ್ಲೆಸ್ ಕದ್ದ ಅಧಿಕಾರಿಯನ್ನ ಸಸ್ಪೆಂಡ್ ಮಾಡಿದ ಮುಜರಾಯಿ ಇಲಾಖೆ!

ಬೆಂಗಳೂರಿನ ಐತಿಹಾಸಿಕ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ ಎನ್ನಲಾದ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಜರಾಯಿ ಇಲಾಖೆಯು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ. ನಾಗರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.

Read Full Story

02:58 PM (IST) Feb 03

ಪರಿಷತ್ತಿನಲ್ಲಿ ಗದ್ದಲ - ಸಿಟಿ ರವಿ 'ಪಾಕಿಸ್ತಾನದ ನಾಲಿಗೆ' ಮಾತಿಗೆ ಕಾಂಗ್ರೆಸ್ ಗರಂ, ಕ್ಷಮೆಯಾಚಿಸದ ನಜೀರ್, ಸಭಾಪತಿ ಸಂಧಾನಕ್ಕೆ ಬಗ್ಗದ ಬಿಜೆಪಿ!

ವಿಧಾನಪರಿಷತ್ತಿನಲ್ಲಿ ನಜೀರ್ ಅಹ್ಮದ್ ಅವರ ಹೇಳಿಕೆ ಮತ್ತು ಸಿ.ಟಿ. ರವಿ ಅವರ 'ಪಾಕಿಸ್ತಾನದ ನಾಲಿಗೆ' ಎಂಬ ತಿರುಗೇಟಿನಿಂದಾಗಿ ತೀವ್ರ ಜಟಾಪಟಿ ನಡೆದಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಸಂಧಾನ ವಿಫಲವಾಗಿದ್ದು, ಕ್ಷಮೆಯಾಚನೆಗೆ ಬಿಜೆಪಿ ಪಟ್ಟು ಹಿಡಿದಿರುವುದರಿಂದ ವಿವಾದ ಇದೀಗ ಸಿಎಂ ಅಂಗಳ ತಲುಪಿದೆ.

Read Full Story

02:41 PM (IST) Feb 03

ಧಾರಾವಾಹಿಗಳಲ್ಲಿ ಮಂಚ ಮುರಿಯೋ ಸೀನ್‌ ಹೇಗೆ ಶೂಟ್‌ ಆಗತ್ತೆ? ನೀವು ಅಂದುಕೊಂಡತೆ ಏನೂ ಆಗಲ್ಲ! BTS Video

Bed Broke In Kannada Serial: ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕೆಲವು ದೃಶ್ಯಗಳು ನೈಜತೆಯಿಂದ ಕಾಣಿಸಿದರೂ ಕೂಡ, ಅದರ ಹಿಂದೆ ತಂತ್ರವಿರುತ್ತದೆ, ಸಾಮಾನ್ಯ ಜನರಿಗೆ ಇದು ಹೇಗೆ ಎಂಬ ಡೌಟ್‌ ಬರುವುದು. ಫಸ್ಟ್‌ ನೈಟ್‌ ಸಮಯದಲ್ಲೋ, ಇನ್ಯಾವುದೋ ಸಮಯದಲ್ಲಿ ಮಂಚ ಮುರಿಯುವ ಹಾಗೆ ತೋರಿಸುತ್ತಾರೆ. ಇದು ಹೇಗೆ?

 

Read Full Story

02:30 PM (IST) Feb 03

ಹೊಲದಲ್ಲಿನ ಮೆಣಸಿನಕಾಯಿ ಬೆಳೆ ರಕ್ಷಣೆಗೆ ಹೈಟೆಕ್ ಭದ್ರತಾ ಕ್ರಮ ತೆಗೆದುಕೊಂಡ ಧಾರವಾಡದ ರೈತ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೈತರೊಬ್ಬರು, ಉತ್ತಮ ಇಳುವರಿ ಹಾಗೂ ಬೆಲೆ ಬಂದಿರುವ ತಮ್ಮ ಮೆಣಸಿನಕಾಯಿ ಬೆಳೆಯನ್ನು ಕಳ್ಳರಿಂದ ರಕ್ಷಿಸಲು ಹೊಲದಲ್ಲಿ ಸೋಲಾರ್ ಚಾಲಿತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. 

Read Full Story

01:48 PM (IST) Feb 03

ಇಂದಿನಿಂದ ಇತಿಹಾಸ ಪ್ರಸಿದ್ದ ಸಾಗರ ಶ್ರೀ ಮಾರಿಕಾಂಬಾ ದೇವಿ ಜಾತ್ರೆ; ಈ ಬಾರಿಯ ವಿಶೇಷತೆ ಏನು?

ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಫೆಬ್ರವರಿ 3 ರಿಂದ 11 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆಯ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ನಟ ಡಾ. ಶಿವರಾಜಕುಮಾರ್ ಭಾಗವಹಿಸಲಿದ್ದಾರೆ.
Read Full Story

01:41 PM (IST) Feb 03

ಗದಗದ ಈ ಗುಡ್ಡದಿಂದಲೇ ಚಿನ್ನ ತೆಗೆಯಲಾಗುತ್ತಿತ್ತು, ಈಗಲೂ ಇಲ್ಲಿದೆ ಹಲವು ನಿಕ್ಷೇಪ, ಬಂಡೆಕಲ್ಲುಗಳಲ್ಲೂ ಬಂಗಾರ!

ಗದಗ ಜಿಲ್ಲೆಯು ಕೇವಲ ಸಾಂಸ್ಕೃತಿಕ ಕೇಂದ್ರವಲ್ಲ, ಬ್ರಿಟಿಷರ ಕಾಲದಲ್ಲಿ ಚಿನ್ನದ ಗಣಿಗಾರಿಕೆಯ ಪ್ರಮುಖ ತಾಣವಾಗಿತ್ತು. ಕಪ್ಪತಗುಡ್ಡದಲ್ಲಿ ಇಂದಿಗೂ ಚಿನ್ನದ ನಿಕ್ಷೇಪಗಳ ಕುರುಹುಗಳಿದ್ದು, ವಿಜಯನಗರ ಮತ್ತು ಚಾಲುಕ್ಯರ ಕಾಲದ ಐತಿಹಾಸಿಕ ದಾಖಲೆಗಳು ಈ ಸುವರ್ಣ ಇತಿಹಾಸವನ್ನು ದೃಢಪಡಿಸುತ್ತವೆ.
Read Full Story

01:39 PM (IST) Feb 03

SP Venkatesh - ಪಂಚಮವೇದ, ಸುಂದರಕಾಂಡ, ಅಶ್ವಮೇಧ ಸಿನಿಮಾಗಳ ಸಂಗೀತ ಮಾಂತ್ರಿಕ ಇನ್ನಿಲ್ಲ!

SP Venkatesh death: ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ (70) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತವೇ ಸಾವಿಗೆ ಕಾರಣ. 'ರಾಜಾವಿಂಟೆ ಮಕನ್' ಚಿತ್ರದ ಮೂಲಕ ಮಲಯಾಳಂನಲ್ಲಿ ಫೇಮಸ್ ಆದ ಇವರು, 'ಕಿಲುಕ್ಕಂ', 'ಸ್ಫಟಿಕಂ' ನಂತಹ ಸಿನಿಮಾಗಳ ಮೂಲಕ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ.

Read Full Story

01:35 PM (IST) Feb 03

ಮಲಯಾಳಂನ ಸಿನಿಮಾ ನಿರ್ದೇಶಿಸುತ್ತಾರಾ ರಿಷಬ್‌? ಬಿಗ್‌ ಬಜೆಟ್‌ ಪ್ರಾಜೆಕ್ಟ್‌ಗೆ ಮರುಜೀವ

ಮಲಯಾಳಂನ ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವ ನಾಯರ್‌ ಅವರ ಕಾದಂಬರಿ ಆಧರಿತ ‘ರಂಡಮೂಳಂ’ ಸಿನಿಮಾಕ್ಕೆ ಮರುಜೀವ ನೀಡಲು ‘ಕಾಂತಾರ’ ಖ್ಯಾತಿಯ ರಿಷಬ್‌ ಶೆಟ್ಟಿ ಮುಂದಾಗಿದ್ದಾರೆ ಎನ್ನಲಾಗಿದೆ. ಅವರು ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ನಾಯಕನಾಗಿ ನಟನೆಯನ್ನೂ ಮಾಡಲಿದ್ದಾರಂತೆ.

Read Full Story

01:35 PM (IST) Feb 03

ಅಮ್ಮನನ್ನು ಓಡಿಸಿಕೊಂಡು ಹೋಗಿದ್ದ ವ್ಯಕ್ತಿಯನ್ನ 10 ವರ್ಷದ ಬಳಿಕ ನಡುರಸ್ತೆಯಲ್ಲೇ ಕೊಚ್ಚಿಕೊಂದ ಮಗ!

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ, ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ 10 ವರ್ಷಗಳ ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದ ಆರೋಪಿ, ಶವದ ಮೇಲೆ ನಿಂತು ವಿಕೃತಿ ಮೆರೆದಿದ್ದು, ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.
Read Full Story

More Trending News