Published : Jul 29, 2025, 06:19 AM ISTUpdated : Jul 29, 2025, 11:01 PM IST

Karnatata Latest News Live: ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಲವ್ ಸ್ಟೋರಿ ಇದು!

ಸಾರಾಂಶ

ಮುಂಬೈ : ಭಾನುವಾರ ಮೈಸೂರಿನ ಹೊರವಲಯದಲ್ಲಿ ಮುಂಬೈ ಪೊಲೀಸರು ನಡೆಸಿದ ದಾಳಿಯಲ್ಲಿ ಭಾರಿ ಪ್ರಮಾಣದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಸಂಪೂರ್ಣ ಚಿತ್ರಣವನ್ನು ದಾಳಿ ನಡೆಸಿದ್ದ ಮುಂಬೈ ಪೊಲೀಸರು ಸೋಮವಾರ ನೀಡಿದ್ದು ಒಟ್ಟು 390 ಕೋಟಿ ರು. ಮೌಲ್ಯದ 192 ಕೆ.ಜೆ. ಮೆಫೆಡ್ರೋನ್‌ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ. 8 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಮುಂಬೈ ಉಪ ಪೊಲೀಸ್ ಆಯುಕ್ತರ ದತ್ತಾ ನಲವಾಡೆ, ಮೈಸೂರು ದಾಳಿಗೂ ಮುಂಚೆ 8 ಕೋಟಿ ರು. ಮೌಲ್ಯದ 5 ಕೇಜಿ ಮಫೆಡ್ರೋನ್‌ ಡ್ರಗ್ಸ್‌ ಸಿಕ್ಕಿತ್ತು. ಮೈಸೂರು ದಾಳಿ ನಂತರ 187 ಕೇಜಿ ಮೆಥೆಡ್ರೋನ್‌ ಡ್ರಗ್ಸ್‌ ಸಿಕ್ಕಿದ್ದು, ಅದರ ಮೌಲ್ಯ 382 ಕೋಟಿ ರುಪಾಯಿ. ಒಟ್ಟಾರೆ 390 ಕೋಟಿ ರು. ಮೌಲ್ಯದ 192 ಕೇಜಿ ಡ್ರಗ್ಸ್‌ ಇಡೀ ಪ್ರಕರಣದಲ್ಲಿ ಈವರೆಗೆ ಸಿಕ್ಕಿದೆ ಎಂದಿದ್ದಾರೆ.

Saiyaara-Movie-Profit

11:01 PM (IST) Jul 29

ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಲವ್ ಸ್ಟೋರಿ ಇದು!

ಯಾವುದೇ ದೊಡ್ಡ ಪ್ರಚಾರವಿಲ್ಲದೆ ಬಿಡುಗಡೆಯಾದ 'ಸೈಯಾರಾ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದೆ. ಚಿತ್ರವು 404 ಕೋಟಿ ರೂಪಾಯಿಗಳ ಜಾಗತಿಕ ಗಳಿಕೆಯನ್ನು ಗಳಿಸಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಲವ್ ಸ್ಟೋರಿ ಸಿನಿಮಾ ಗಳಿಸಿದ ಅತಿ ಹೆಚ್ಚು ಹಣವಾಗಿದೆ.

Read Full Story

10:41 PM (IST) Jul 29

ಬಿಬಿಎಂಪಿ ವಾರ್ಡ್ ರದ್ದು - ಗ್ರೇಟರ್ ಬೆಂಗಳೂರು ಅನುಸಾರ ಆ.3ರಿಂದ ಹೊಸ ವಾರ್ಡ್‌ಗಳ ರಚನೆ!

ಬಿಬಿಎಂಪಿ ರದ್ದತಿಯ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದ್ದು, ಆಗಸ್ಟ್ 3 ರಿಂದ ವಾರ್ಡ್‌ಗಳ ಮರುರಚನೆ ಆರಂಭವಾಗಲಿದೆ. ಸೆಪ್ಟೆಂಬರ್ 1 ರೊಳಗೆ ತಾತ್ಕಾಲಿಕ ವಾರ್ಡ್‌ಗಳು, ಗಡಿ ಗುರುತಿಸುವಿಕೆ, ತಕರಾರು ಅರ್ಜಿ ಸ್ವೀಕಾರ ಮುಂತಾದ ಕೆಲಸಗಳು ಪೂರ್ಣಗೊಳ್ಳಲಿವೆ. ಬಳಿಕ ಮೀಸಲಾತಿ ಪ್ರಕ್ರಿಯೆ ಆರಂಭ.

Read Full Story

08:34 PM (IST) Jul 29

ಕೊಲೆ ಆರೋಪಿಗೆ ಶುರುವಾಯ್ತು ಜೈಲಿನ ಭಯ, ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಕಿಲ್ಲಿಂಗ್‌ ಸ್ಟಾರ್‌!

ಸುಪ್ರೀಂ ಕೋರ್ಟ್ ತೀರ್ಪಿನ ಕಾರಣ ದರ್ಶನ್ ಗೆ ಜೈಲು ಭೀತಿ ಶುರುವಾಗಿದೆ. ಕಾಮಾಕ್ಯ ದೇವಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
Read Full Story

08:22 PM (IST) Jul 29

ದರ್ಶನ್ ಕೇಸಿನ ಬಗ್ಗೆ ಅನುಪಮಾ ಗೌಡ ಪ್ರಶ್ನೆ; ರೇಣುಕಾಸ್ವಾಮಿ ಸತ್ತು ವರ್ಷದ ಅಶ್ಲೀಲ ಮೆಸೇಜಿನ ಅಭಿಪ್ರಾಯ ಕೇಳಿದ ನಟಿ!

ನಟ ದರ್ಶನ್ ಪ್ರಕರಣದಲ್ಲಿ ಅನುಪಮಾ ಗೌಡ ಸಾರ್ವಜನಿಕರ ಅಭಿಪ್ರಾಯ ಕೇಳಿದ್ದಾರೆ. ರೇಣುಕಾಸ್ವಾಮಿ ರೀತಿಯಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿವವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಮೆಸೇಜ್‌ಗೂ ಮುನ್ನ ನಿಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಯೋಚಿಸುವಂತೆ ಕೇಳಿದ್ದಾರೆ.

Read Full Story

07:44 PM (IST) Jul 29

ಚೀನಾ ಹಿಂದಿಕ್ಕಿ ಅತೀ ದೊಡ್ಡ ಸ್ಮಾರ್ಟ್‌ಫೋನ್ ಪೂರೈಕೆದಾರನಾದ ಭಾರತ

ಅಮೆರಿಕಾಗೆ ಸ್ಮಾರ್ಟ್‌ಫೋನ್ ರಫ್ತು ಮಾಡುವ ಅತೀ ದೊಡ್ಡ ದೇಶ ಭಾರತ ಅನ್ನೋ ದಾಖಲೆ ಬರೆದಿದೆ. ಚೀನಾ ಹಿಂದಿಕ್ಕಿ ಭಾರತ ಮೊದಲ ಸ್ಥಾನ ಅಲಂಕರಿಸಿದೆ.

 

Read Full Story

07:25 PM (IST) Jul 29

ಕರ್ನಾಟಕ ಖಾಕಿ ಹಗಲು ದರೋಡೆ - ಉದ್ಯಮಿಯಿಂದ ₹4 ಲಕ್ಷ ಸುಲಿಗೆ ಮಾಡಿದ ಪಿಎಸ್‌ಐ ಸೇರಿ ನಾಲ್ವರು ನಾಪತ್ತೆ!

ಚಾಮರಾಜನಗರದಲ್ಲಿ ಪೊಲೀಸರೇ ಹಗಲು ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಉದ್ಯಮಿಯಿಂದ 3.70 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಪಿಎಸ್ಐ ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಪೊಲೀಸರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.
Read Full Story

07:00 PM (IST) Jul 29

ಅಡುಗೆ ಎಣ್ಣೆ ಇಲ್ಲದೆ ರುಚಿಯಾದ ಮೀನು ಫ್ರೈ ಮಾಡುವುದು ಹೇಗೆ? ಆರೋಗ್ಯಕ್ಕೂ ಉತ್ತಮ

ಮೀನು ಆರೋಗ್ಯಕ್ಕೆ ಉತ್ತಮ. ಆದರೆ ಮೀನು ಫ್ರೈ ಮಾಡಲು ಎಣ್ಣೆ ಬಳಸಲಾಗುತ್ತದೆ. ಆರೋಗ್ಯ ದೃಷ್ಟಿಯಿಂದ ಆಯಿಲ್ ಫ್ರೈ ಅಥವಾ ಆಯಿಲ್ ಬಳಸಿ ಮಾಡುವ ತವಾ ಫ್ರೈ ಉತ್ತಮವಲ್ಲ. ಆದರೆ ಅತ್ಯಂತ ರುಚಿರುಚಿಯಾದ, ಆರೋಗ್ಯಕ್ಕೂ ಉತ್ತಮವಾದ ಮೀನು ಫ್ರೈ ಅಡುಗೆ ಎಣ್ಣೆ ಹಾಕದೇ ಮಾಡುವುದು ಹೇಗೆ?

Read Full Story

06:59 PM (IST) Jul 29

ಭಾರತದಲ್ಲಿ ಅತಿ ಹೆಚ್ಚು ಹುಲಿಗಳಿರುವ ಎರಡನೇ ಜಿಲ್ಲೆ ನಮ್ಮ ಚಾಮರಾಜನಗರ! ಫಸ್ಟ್ ಯಾವುದು?

ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ಜಿಲ್ಲೆಯಾಗಿದೆ. ಬಂಡೀಪುರ ಮತ್ತು ಬಿಳಿಗಿರಿರಂಗನ ಬೆಟ್ಟ ವನ್ಯಧಾಮಗಳಲ್ಲಿ ಹುಲಿಗಳ ಸಂರಕ್ಷಣೆ ಯಶಸ್ವಿಯಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದೆ.
Read Full Story

06:26 PM (IST) Jul 29

ಧರ್ಮಸ್ಥಳ ಕೇಸ್, ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯ, 15 ಅಡಿ ಅಗೆದರೂ ಕಳೇಬರ ಇಲ್ಲ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ಗುರುತಿಸಿದ ಸಮಾಧಿ ಸ್ಥಳ ಅಗೆಯುವ ಕೆಲಸ ನಡೆಯುತ್ತಿದೆ. ಆದರೆ ಮೊದಲ ಜಾಗದಲ್ಲಿ 15 ಅಡಿ ಆಳ ಆಗದೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.

Read Full Story

06:13 PM (IST) Jul 29

ಬೆಳ್ತಂಗಡಿ - ಅನುಮತಿ ಇಲ್ಲದೆ ಟ್ರಕ್ಕಿಂಗ್ ಮಾಡುತ್ತಿದ್ದ 103 ಮಂದಿ ಟೆಕ್ಕಿಗಳು ಬಸ್‌ ಸಹಿತ ಅರೆಸ್ಟ್

ದಕ್ಷಿಣ ಕನ್ನಡ ಜಿಲ್ಲೆಯ ಮೂಡಿಗೆರೆ-ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶವಾದ ಬಿದಿರುತಳದಲ್ಲಿ ಅನುಮತಿಯಿಲ್ಲದೆ ಟ್ರಕ್ಕಿಂಗ್ ಮಾಡುತ್ತಿದ್ದ ೧೦೩ ಮಂದಿ ಪ್ರವಾಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಗಳು ಈ ಗುಂಪಿನಲ್ಲಿದ್ದರು.
Read Full Story

05:42 PM (IST) Jul 29

ದರ್ಶನ್ Vs ರಮ್ಯಾ ವಾರ್‌ನಲ್ಲಿ ಶಿವರಾಜ್‌ಕುಮಾರ್ ಕಾಲೆಳೆದ ಯುವ ಪತ್ನಿ; ದೊಡ್ಮನೆ ಸೊಸೆ ಶ್ರೀದೇವಿ ಬೈರಪ್ಪ ಆಕ್ರೋಶ!

ನಟಿ ರಮ್ಯಾ ಅವರನ್ನು ಬೆಂಬಲಿಸಿದ ಶಿವರಾಜ್‌ಕುಮಾರ್ ದಂಪತಿಗಳ ವಿರುದ್ಧ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬದಲ್ಲಿಯೇ ಮಹಿಳೆಗೆ ಅನ್ಯಾಯ ಆಗುತ್ತಿದ್ದರೂ ಯಾರೂ ಮಾತನಾಡಲಿಲ್ಲ. ರಮ್ಯಾ ವಿವಾದದ ಬೆನ್ನಲ್ಲೇ ದೊಡ್ಮನೆ ಕುಟುಂಬದಲ್ಲಿ ಮತ್ತೊಂದು ಸಂಘರ್ಷ.

Read Full Story

05:15 PM (IST) Jul 29

ಜಿಯೋಪಿಸಿ ಲಾಂಚ್, ತಿಂಗಳಿಗೆ 400 ರೂಪಾಯಿ ಸಾಕು ಮನೆ ಟಿವಿಯೇ ಹೈಎಂಡ್ ಕಂಪ್ಯೂಟರ್

ಕೇವಲ 400 ರೂಪಾಯಿ ತಿಂಗಳ ರೀಚಾರ್ಜ್ ಮಾಡಿದರೆ ಸಾಕು, ನಿಮ್ಮ ಮನೆ ಟಿವಿಯೇ ಹೈಎಂಡ್ ಕಂಪ್ಯೂಟರ್ ಆಗಿ ಬದಲಾಗಲಿದೆ. ವರ್ಚುವಲ್ ಡೆಸ್ಕ್‌ಟಾಪ್ ಜಿಯೋಪಿಸಿ ಬಿಡುಗಡೆಯಾಗಿದೆ.

Read Full Story

05:13 PM (IST) Jul 29

ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಹೆಚ್ಚುವರಿ ಸೇವೆ

ಪ್ರಯಾಣಿಕರ ಬೇಡಿಕೆ ಪೂರೈಸಲು ಯಶವಂತಪುರ-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನ ಹೆಚ್ಚುವರಿ ಸೇವೆ ಆರಂಭ. ಆಗಸ್ಟ್ 1 ಮತ್ತು 8 ರಂದು ಯಶವಂತಪುರದಿಂದ ಹಾಗೂ ಆಗಸ್ಟ್ 2 ಮತ್ತು 9 ರಂದು ತಾಳಗುಪ್ಪದಿಂದ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.
Read Full Story

05:10 PM (IST) Jul 29

ಕೋಲಾರದಲ್ಲಿ ಪೊದ್ದಾರ್‌ ಪ್ಲಂಬಿಂಗ್‌ನಿಂದ ₹758 ಕೋಟಿ ಹೂಡಿಕೆ - 9000 ಉದ್ಯೋಗ ಸೃಷ್ಟಿ!

ಪೊದ್ದಾರ್‌ ಪ್ಲಂಬಿಂಗ್‌ ಸಿಸ್ಟಂ ಪ್ರೈವೇಟ್‌ ಲಿಮಿಟೆಡ್‌ ಕೋಲಾರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸಲಿದೆ. ಈ ಹೂಡಿಕೆಯಿಂದ 3,000 ನೇರ ಮತ್ತು 9,000 ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ವೇಮಗಲ್‌ನಲ್ಲಿ ಘಟಕ ಸ್ಥಾಪನೆಗೆ ಈಗಾಗಲೇ ಕಾರ್ಯ ಆರಂಭವಾಗಿದೆ.
Read Full Story

04:44 PM (IST) Jul 29

ವಿಪಕ್ಷದ ಮಾತು ಕೇಳುವ ಧೈರ್ಯವಿಲ್ಲದಿದ್ದರೆ ಸ್ಥಾನಕ್ಕೆ ಅರ್ಹರಲ್ಲ, ಮೋದಿ ಕುಟುಕಿದ ಖರ್ಗೆ

ಸೈನ್ಯಾಧಿಕಾರಿಗೆ ಅವಮಾನಿಸಿದ ಮಧ್ಯಪ್ರದೇಶ ಸಚಿವರು ಮಂತ್ರಿಯೋ,ಕಂತ್ರಿಯೋ. ನಮ್ಮ ಮಾತು ಕೇಳುವ ಧೈರ್ಯ ಮೋದಿಗಿಲ್ಲ ಎಂದರೆ ಸ್ಥಾನಕ್ಕೆ ಅರ್ಹರಲ್ಲ, ಪೆಹಲ್ಗಾಂ ದಾಳಿಗೆ ಹೊಣೆ ಯಾರು, ಯಾರೇ ಆದರೂ ರಾಜೀನಾಮೆ ನೀಡಿ ಎಂದು ಮಲ್ಲಿಕಾರ್ಜುನ ಖರ್ಗೆ ಸದನದಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

Read Full Story

04:33 PM (IST) Jul 29

ಕರ್ನಾಟಕದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಸಿಗುವ ನೇರ ನಗದು ಯೋಜನೆಗಳು!

ಕರ್ನಾಟಕದಲ್ಲಿ ಕುಟುಂಬಗಳ ಆರ್ಥಿಕ ಭದ್ರತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ರೈತ ವಿದ್ಯಾನಿಧಿ, PM-KISAN, MGNREGA, ಮತ್ತು NSAP ಯೋಜನೆಗಳ ವಿವರ, ಅರ್ಹತೆ ಮತ್ತು ಲಾಭಗಳನ್ನು ಒಳಗೊಂಡಿದೆ.

Read Full Story

04:21 PM (IST) Jul 29

ಮೂಡಿಗೆರೆಯಲ್ಲಿ ಭಗವಧ್ವಜಕ್ಕೆ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಗುದ್ದಲಿ ಪೂಜೆ

ಮೂಡಿಗೆರೆಯಲ್ಲಿ ನಡೆಯಲಿರುವ ಹಿಂದೂ ಸಂಗಮ ಮತ್ತು ಭಗವಧ್ವಜ ಕಟ್ಟೆಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಭಾಗವಹಿಸುವುದು ಅಚ್ಚರಿ ಮೂಡಿಸಿದೆ. ಹಿಂದೂ ಭಗವಧ್ವಜಗಳ ತೆರವು ವಿವಾದದ ಹಿನ್ನೆಲೆಯಲ್ಲಿ ಈ ಭಾಗವಹಿಸುವಿಕೆ ಕುತೂಹಲ ಕೆರಳಿಸಿದೆ.
Read Full Story

04:15 PM (IST) Jul 29

100 ಹುಡುಗಿಯರಲ್ಲಿ ಕೇವಲ ಇಬ್ಬರು ಪ್ಯೂರ್, ಪ್ರೇಮಾನಂದ ಮಹಾರಾಜ್ ವಿವಾದಾತ್ಮಕ ಹೇಳಿಕೆ

ಪ್ರೇಮಾನಂದ್ ಮಹಾರಾಜ್ ಹೇಳಿಕೆಯೊಂದು ಈಗ ವೈರಲ್ ಆಗಿದೆ. ಯುವಕ – ಯುವತಿಯರ ಶುದ್ಧತೆ ಬಗ್ಗೆ ಮಾತನಾಡಿರುವ ಅವರು, ಲಿವ್ ಇನ್ ರಿಲೇಶನ್ ಶಿಪ್ ಖಂಡಿಸಿದ್ದಾರೆ.

 

Read Full Story

03:59 PM (IST) Jul 29

ಟೇಕ್ ಆಫ್ ಬೆನ್ನಲ್ಲೇ ಪೈಲೆಟ್‌ನಿಂದ ಮೇಡೇ ಸಂದೇಶ, ಯುನೈಟೆಡ್ ವಿಮಾನದಲ್ಲಿ ತುರ್ತು ಪರಿಸ್ಥಿತಿ

ಯುನೈಟೆಡ್ ಏರ್‌ಲೈನ್ಸ್ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ವಿಮಾನದ ಒಂದು ಎಂಜಿನ್ ಆಫ್ ಆಗಿದೆ. ತಕ್ಷಣವೇ ಪೈಲೆಟ್ ಮೇಡೇ ಕಾಲ್ ನೀಡಿದ್ದಾರೆ. ಕೇವಲ 5,000 ಅಡಿ ಎತ್ತರದಲ್ಲಿ ತುರ್ತು ಪರಿಸ್ಥಿತಿ ಎದುರಿಸಿದೆ.

Read Full Story

03:44 PM (IST) Jul 29

ಧರ್ಮಸ್ಥಳ ಕೇಸ್‌ ನಡುವೆ ನೀವು ನೋಡಲೇಬೇಕಾದ ಸಿನಿಮಾ 'ರೇಖಾಚಿತ್ರಂ'!

ಧರ್ಮಸ್ಥಳದಲ್ಲಿ ನಡೆದ ಶವಗಳ ಹೂಳುವಿಕೆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ, ಮಲಯಾಳಂ ಸಿನಿಮಾ 'ರೇಖಾಚಿತ್ರಂ' ನೈಜ ಘಟನೆಗಳನ್ನು ನೆನಪಿಸುತ್ತದೆ. ಈ ಚಿತ್ರವು ಹಳೆಯ ಕೊಲೆ ಪ್ರಕರಣವೊಂದರ ತನಿಖೆ, ಸಾಕ್ಷ್ಯ ಸಂಗ್ರಹಣೆ, ನ್ಯಾಯದಾನದ ಹೋರಾಟವನ್ನು ಒಳಗೊಂಡಿದೆ.
Read Full Story

03:04 PM (IST) Jul 29

ಧರ್ಮಸ್ಥಳದ ಮೊದಲ ಸಮಾಧಿ 4 ಅಡಿ ಅಗೆದರೂ ಕಳೇಬರ ಸುಳಿವಿಲ್ಲ, ಮತ್ತಷ್ಟು ಅಗೆತಕ್ಕೆ ನಿರ್ಧಾರ

ಧರ್ಮಸ್ಥಳದಲ್ಲಿ ಮುಸುಕುದಾರಿ ದೂರುದಾರ ಗುರುತಿಸಿದ ಸಮಾದಿ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಆದರೆ ಮೊದಲ ಸಮಾಧಿ ಸ್ಥಳದಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ. ಹೀಗಾಗಿ 2ನೇ ಸಮಾಧಿ ಅಗೆಯುವ ಕೆಲಸ ಆರಂಭಗೊಂಡಿದೆ.

 

Read Full Story

02:57 PM (IST) Jul 29

ಮರದ ಮೇಲೆ ಗೂಡು ಕಟ್ಟಿ ಧ್ಯಾನ, ಕೊಪ್ಪಳ ಸ್ವಾಮೀಜಿಯ 101 ದಿನಗಳ ಕಠಿಣ ವ್ರತ!

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಸ್ವಾಮೀಜಿಯೊಬ್ಬರು 101 ದಿನಗಳ ಕಾಲ ಮರದ ಮೇಲೆ ಕುಳಿತು ಕಠಿಣ ವ್ರತ ಆಚರಿಸುತ್ತಿದ್ದಾರೆ. ದಿನಕ್ಕೊಮ್ಮೆ ಹಾಲು ಮಾತ್ರ ಸೇವಿಸುವ ಇವರು, ಈ ಹಿಂದೆಯೂ ಇದೇ ರೀತಿಯ ವ್ರತ ಆಚರಿಸಿದ್ದರು.
Read Full Story

02:57 PM (IST) Jul 29

ಉಗ್ರರ ನಂಟು ಹೊಂದಿದ್ದ ಶಾಮಾ ಪರ್ವೀನ್ ಯಾರು? ಬೆಂಗಳೂರಿಗೆ ನುಸುಳಿದ್ದು ಹೇಗೆ?

ಬೆಂಗಳೂರಿನಲ್ಲಿ ಉಲ್ಫಾ ಮತ್ತು ನಕ್ಸಲೈಟ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಶಾಮಾ ಪರ್ವೀನ್ ಎಂಬಾಕೆಯನ್ನು ಬಂಧಿಸಲಾಗಿದ್ದು, 

Read Full Story

02:22 PM (IST) Jul 29

ಕರ್ನಾಟಕ ದಲಿತ ಸಿಎಂ ಗದ್ದಲ, ಧರ್ಮಸ್ಥಳ ಕೇಸ್, ರಮ್ಯಾ ಡಿಬಾಸ್ ವಾರ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಏನು ಹೇಳಿದ್ರು?

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಧಾನಿ ಅಥವಾ ಮುಖ್ಯಮಂತ್ರಿ ಮಾಡುವ ಬಗ್ಗೆ ಹೇಳಿಕೆಗಳಿಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಖರ್ಗೆ ಸ್ವತಃ ಯಾವುದೇ ಆಸೆ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಧರ್ಮಸ್ಥಳದ ಶವ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
Read Full Story

02:06 PM (IST) Jul 29

ನಟಿ ರಮ್ಯಾ ಬೆಂಬಲಕ್ಕೆ ನಿಂತ ನಟ ಶಿವರಾಜ್ ಕುಮಾರ್ ದಂಪತಿ, ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಣೆ

ನಟಿ ರಮ್ಯಾ ಅವರಿಗೆ ಬೆಂಬಲವಾಗಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಅವಹೇಳನಕಾರಿ ಪದ ಬಳಕೆ ಖಂಡಿಸಿ, ಮಹಿಳೆಯರನ್ನು ಗೌರವಿಸುವಂತೆ ಕರೆ ನೀಡಿದ್ದಾರೆ. ಸೈಬರ್ ದಾಳಿ ವಿರುದ್ಧ ರಮ್ಯಾ ತೆಗೆದುಕೊಂಡ ನಿಲುವನ್ನು ಶ್ಲಾಘಿಸಿದ್ದಾರೆ.
Read Full Story

01:55 PM (IST) Jul 29

ಯೂರಿಯಾ ಗೊಬ್ಬರ ಕೊರತೆ - ತಡವಾಗಿ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ, ನಾಗಪಂಚಮಿ ಮರೆತ ರೈತರು!

ಕನಕಗಿರಿಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಹರಸಾಹಸಪಟ್ಟರು. ನಾಗರ ಪಂಚಮಿ ಹಬ್ಬವನ್ನೂ ಮರೆತು ರೈತರು ಗೊಬ್ಬರ ಖರೀದಿಗೆ ಮುಗಿಬಿದ್ದರು. ಪ್ರತಿ ಪಹಣಿಗೆ ಎರಡು ಚೀಲ ಯೂರಿಯಾ ವಿತರಿಸಲಾಗುತ್ತಿದೆ.
Read Full Story

01:37 PM (IST) Jul 29

ಧರ್ಮಸ್ಥಳ ಸ್ನಾನಘಟ್ಟ ಬಳಿ ಶವ ಹೊರತೆಗೆಯಲು ಉತ್ಖನನ ಆರಂಭ, ಮೊದಲ ಸಮಾಧಿ ಅಗೆತ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರನ ಜೊತೆ ಮಹಜರು ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇದೀಗ ಶವ ಹೊರತೆಗೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಸಮಾಧಿ ಅಗೆಯುವ ಕೆಲಸ ಆರಂಭಗೊಂಡಿದೆ.

 

Read Full Story

01:23 PM (IST) Jul 29

170 ಗಂಟೆ ನಿರಂತರ ಭರತನಾಟ್ಯ - ವಿಶ್ವದಾಖಲೆ ಬರೆದ ಮಂಗಳೂರಿನ ರೆಮೋನಾ ಪೆರೇರಾ

ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಪೆರೇರಾ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಈ ಹಿಂದಿನ 127  ಗಂಟೆಗಳ ದಾಖಲೆಯನ್ನು ಮುರಿದಿದ್ದಾರೆ.

Read Full Story

01:17 PM (IST) Jul 29

Big Breaking - ಉಗ್ರರ ಜೊತೆ ನಿರಂತರ ಸಂಪರ್ಕ, ಬೆಂಗಳೂರಲ್ಲಿ ಶಂಕಿತ ಮಹಿಳೆ ವಶಕ್ಕೆ!

ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಬಂಧಿಸಲಾಗಿದೆ. ಹೆಬ್ಬಾಳದಲ್ಲಿ ಬಂಧಿತಳಾದ ಪರ್ವಿನ್ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

Read Full Story

12:59 PM (IST) Jul 29

ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ, ಮೂವರು ಭಯೋತ್ಪಾದಕರ ಹತ್ಯೆ ದೃಢಪಡಿಸಿದ ಅಮಿತ್ ಶಾ

ಹಿಂದೂಗಳ ಟಾರ್ಗೆಟ್ ಮಾಡಿ ಉಗ್ರರು ನಡೆಸಿದ ಪೆಹಲ್ಗಾಂ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಕುರಿತು ಅಮಿತ್ ಶಾ ಸದನದಲ್ಲಿ ಪೆಹಲ್ಗಾಂ ಉಗ್ರರ ಹತ್ಯೆಯನ್ನು ಖಚಿತಪಡಿಸಿದ್ದಾರೆ.

Read Full Story

12:47 PM (IST) Jul 29

ಕಾಂಗ್ರೆಸ್‌ ಗೆಲುವಿಗೆ ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆ - ಸಲೀಂ ಅಹ್ಮದ್‌

ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ 15 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಸಲೀಂ ಅಹ್ಮದ್ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದು ಅವರು ಹೇಳಿದರು.
Read Full Story

12:32 PM (IST) Jul 29

ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳು ಇಂದು ಹೊರಕ್ಕೆ, ದೂರುದಾನ ಜೊತೆ ಪೊಲೀಸ್ ಮಹಜರು

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ಮಹಜರು 2ನೇ ದಿನ ಮುಂದುವರಿದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಕ ಮಹಜರು ಪ್ರಕ್ರಿಯ ಮುಂದುವರಿದಿದೆ. ಇತ್ತ ಗುರುತಿಸಿದ ಜಾಗದಿಂದ ಶವಗಳನ್ನು ಇಂದೇ ಹೊರತೆಗಯಲು ಎಸ್ಐಟಿ ಎಲ್ಲಾ ಸಿದ್ಧತೆ ನಡೆಸಿದೆ.

Read Full Story

12:24 PM (IST) Jul 29

₹200 ಕೋಟಿ ವಂಚನೆ ಪ್ರಕರಣ - ವಂಚಕ ರೋಶನ್ ಸಲ್ಮಾನ್‌ಗೆ ಹೈಕೋರ್ಟ್ ರಿಲೀಫ್

ಬಹುಕೋಟಿ ವಂಚಕ ರೋಶನ್ ಸಲ್ದಾನ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿಗೆ ರಿಲೀಫ್ ನೀಡಿದೆ. ಬಿಹಾರದ ಉದ್ಯಮಿಗೆ ಹತ್ತು ಕೋಟಿ ಹಾಗೂ ಮಂಗಳೂರಿನ ವ್ಯಕ್ತಿಗೆ ಒಂದೂವರೆ ಕೋಟಿ ವಂಚನೆ ಪ್ರಕರಣದಲ್ಲಿ ತನಿಖೆಗೆ ತಡೆ.
Read Full Story

12:19 PM (IST) Jul 29

ಎಂಪೈರ್ ಹೋಟೆಲ್‌ನಲ್ಲಿ ಚಿಕನ್ ಕಬಾಬ್ ಅಸುರಕ್ಷಿತ, ಬಣ್ಣ ಬಳಸಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟ ಗ್ರೂಪ್

ಎಫ್‌ಎಸ್‌ಎಸ್‌ಎಐ ಪರೀಕ್ಷೆಯಲ್ಲಿ ಎಂಪೈರ್ ಕಬಾಬ್‌ಗಳಲ್ಲಿ ಕೃತಕ ಬಣ್ಣ ಪತ್ತೆಯಾಗಿದ್ದು, ಸಂಸ್ಥೆ ಸ್ಪಷ್ಟನೆ ನೀಡಿದೆ. ಇನ್ನು ಮುಂದೆ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸುವುದಾಗಿ ಭರವಸೆ ನೀಡಿದೆ.
Read Full Story

11:53 AM (IST) Jul 29

ಪ್ರವಾಹದ ನಡುವೆ ಪ್ರವಾಸಿಗರ ಜೀವ ಜೊತೆ ಚಲ್ಲಾಟ; ಹಣದಾಸೆಗೆ ನಾಡದೋಣಿ ಚಾಲಕರ ಹುಚ್ಚಾಟ

ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಿಂದಾಗಿ ಗಂಗಾವತಿ ತಾಲೂಕಿನಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ನಾಡದೋಣಿ ಚಾಲಕರು ಪ್ರವಾಸಿಗರನ್ನು ಪ್ರವಾಹದ ನಡುವೆಯೂ ತೆಪ್ಪದಲ್ಲಿ ಕರೆದೊಯ್ಯುತ್ತಿದ್ದು, ಜಿಲ್ಲಾಡಳಿತದ ಎಚ್ಚರಿಕೆಯನ್ನು ಉಲ್ಲಂಘಿಸುತ್ತಿದ್ದಾರೆ. 

Read Full Story

11:32 AM (IST) Jul 29

ಯೂರಿಯಾ ಕಾಳಸಂತೆಯಲ್ಲಿ ಮಾರಾಟ, ಸಕಾಲಕ್ಕೆ ಗೊಬ್ಬರ ಸಿಗದೇ ರೈತರು ಪರದಾಟ

ಬಳ್ಳಾರಿ ಜಿಲ್ಲೆಯಲ್ಲಿ ಯೂರಿಯಾ ಕೊರತೆಯ ನಡುವೆಯೂ ಕಾಳಸಂತೆ ಮಾರಾಟ ಜೋರಾಗಿದೆ. ಅಂಗಡಿ ಮಾಲೀಕರು ದುಪ್ಪಟ್ಟು ಬೆಲೆಗೆ ಯೂರಿಯಾ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. 

Read Full Story

11:16 AM (IST) Jul 29

ಕಲಬುರಗಿ ESI ಆಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಘಟನೆ; ಶಸ್ತ್ರಚಿಕಿತ್ಸೆಗೊಳಗಾದ ತಂದೆಯ ಆರೈಕೆಗೆ ಬಂದಿದ್ದ ಅಪ್ರಾಪ್ತ ಮಗಳ ಮೇಲೆ ಬಲತ್ಕಾರ!

ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆಸ್ಪತ್ರೆಯ ಸ್ವಚ್ಛತಾ ವಿಭಾಗದ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

10:25 AM (IST) Jul 29

'ಯಾರ ಬೇಕಾದ್ರೂ ಸಿಎಂ ಆಗಬಹುದು ಆದ್ರೆ..' ಖರ್ಗೆ, ದಲಿತ ಸಿಎಂ ಕೂಗು ವಿಚಾರಕ್ಕೆ ಬಸವರಾಜ್ ರಾಯರೆಡ್ಡಿ ಹೇಳಿದ್ದೇನು?

ದಲಿತ ಸಿಎಂ ಕುರಿತ ಚರ್ಚೆ ಬೇಡ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಂಡರೆ ಮಾತ್ರ ಸಿಎಂ ಬದಲಾವಣೆ ಚರ್ಚೆ ಸಾಧ್ಯ ಎಂದಿದ್ದಾರೆ.
Read Full Story

09:56 AM (IST) Jul 29

ಷೇರು ಮಾರುಕಟ್ಟೆ ಕುಸಿದಾಗ ಪಾಲಿಸಬೇಕಾದ 7 ಸ್ಮಾರ್ಟ್ ತಂತ್ರಗಳು ಇಲ್ಲಿವೆ

ಷೇರು ಮಾರುಕಟ್ಟೆ ಕುಸಿತದ ಸಮಯದಲ್ಲಿ ಆತಂಕ ನಿರ್ವಹಣೆ ಮತ್ತು ಸ್ಮಾರ್ಟ್ ಹೂಡಿಕೆ ತಂತ್ರಗಳನ್ನು ಈ ಲೇಖನ ಒಳಗೊಂಡಿದೆ. ರಿಸ್ಕ್ ಅಂಶಗಳನ್ನು ಅರ್ಥಮಾಡಿಕೊಳ್ಳುವುದು, ವೈವಿಧ್ಯಮಯ ಹೂಡಿಕೆ, ಮತ್ತು ದೀರ್ಘಾವಧಿಯ ಹೂಡಿಕೆಯ ಮಹತ್ವದ ಬಗ್ಗೆ ಒಳನೋಟಗಳನ್ನು ನೀಡುತ್ತದೆ.
Read Full Story

09:26 AM (IST) Jul 29

Dr Sharanabasappa appa - ಡಾ.ಶರಣಬಸಪ್ಪ ಅಪ್ಪ ಆರೋಗ್ಯದಲ್ಲಿ ಚೇತರಿಕೆ

ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶ್ವಾಸಕೋಶದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಪುತ್ರ ಚಿ. ದೊಡ್ಡಪ್ಪ ಅಪ್ಪ ಅವರು ಹಾಡಿದ ಜನಪದ ಗೀತೆಗೆ ಅಪ್ಪಾಜಿ ಭಾವುಕರಾದರು.
Read Full Story

More Trending News